Crime

ಬೈಕ್ ಕಳ್ಳತನ: ಆರೋಪಿಯನ್ನು ಬಂಧಿಸಿದ ಕೊಟ್ಟೂರು ಪೊಲೀಸರು

ಕೊಟ್ಟೂರು:- ಪಟ್ಟಣದಲ್ಲಿ ಬೈಕ್ ನ ಹ್ಯಾಂಡ್ ಲಾಕ್ ಮುರಿದು ಸರಣಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಆರೋಪಿತನಿಂದ 1,00,000 ರೂ ಬೆಲೆ ಬಾಳುವ ಒಟ್ಟು ಮೂರು ಬೈಕ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ದಿನಾಂಕ 07-05-2025 ರಂದು ರಾತ್ರಿ 8-15 ಘಂಟೆಗೆ ಕೊಟ್ಟೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಕೈಗೆತ್ತಿಕೊಂಡ ಕೊಟ್ಟೂರು ಪೊಲೀಸರು ಆರೋಪಿತನ ಪತ್ತೆಗಾಗಿ ಶ್ರೀ ಮಲ್ಲೇಶ್ ದೊಡ್ಡಮನಿ ಡಿವೈಎಸ್ಪಿ ಕೂಡ್ಲಿಗಿ ರವರ ಮಾರ್ಗದರ್ಶನದಲ್ಲಿ ಶ್ರೀ ವೆಂಕಟಸ್ವಾಮಿ.ಟಿ,ಸಿಪಿಐ ಕೊಟ್ಟೂರು ರವರ ನೇತೃತ್ವದಲ್ಲಿ ಶ್ರೀ ಮತಿ ಗೀತಾಂಜಲಿ ಶಿಂಧೆ ಪಿಎಸ್ಐ,ಸಿಬ್ಬಂದಿಗಳಾದ ಶ್ರೀ ಬಸವರಾಜ್ ಹೆಚ್,ಶ್ರೀ ವೀರೇಶ್,ಶ್ರೀ ಶಶಿಧರ,ಶ್ರೀ ನಾಗಪ್ಪ,ಶ್ರೀ ಯರಿಸ್ವಾಮಿ,ಇವರುಗಳ ನೇತೃತ್ವದಲ್ಲಿ ತಂಡ ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ನಡೆಸಿ ಪ್ರಕರಣದ ಆರೋಪಿ ಪತ್ತೆ ಕಾರ್ಯದಲ್ಲಿ ಕಾರ್ಯನಿರತರಾಗಿ ಆರೋಪಿ ಕೆ.ಹನುಮಂತ@ಟಿಂಗು ತಂದೆ ತಿಂದಪ್ಪ 23 ವರ್ಷ ವಾಸ ಉಜ್ಜಿನಿ ಹೊಸ ಪ್ಲಾಟ್ ಉಜ್ಜಿನಿ,ಕೊರವ ಜನಾಂಗಕ್ಕೆ ಸೇರಿದ್ದು ಗಾರೆ ಕೆಲಸ ಮಾಡಿಕೊಂಡಿರುತ್ತಾನೆ.

ಈತನನ್ನು ದಿನಾಂಕ 09-05-2025 ರಂದು ಬೆಳಿಗ್ಗೆ 11-45 ಘಂಟೆಗೆ ಕೊಟ್ಟೂರು ಪಟ್ಟಣದ ಶ್ರೀ ಮರುಳ ಸಿದ್ದೇಶ್ವರ ಕಲ್ಯಾಣ ಮಂಟಪದ ಹತ್ತಿರ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಆರೋಪಿತನಿಂದ ಅಂದಾಜು 1,00,000 ರೂ ಬೆಲೆ ಬಾಳುವ ಹೀರೋ ಸ್ಪ್ಲೆಂಡರ್ ಪ್ಲಸ್ ಮೂರು ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಈ ಪತ್ತೆ ಕಾರ್ಯಾಚರಣೆಗೆ ಮಾನ್ಯ ಶ್ರೀ ಹರಿಬಾಬು ಪೋಲಿಸ್ ಅಧೀಕ್ಷಕರು ವಿಜಯನಗರ ಜಿಲ್ಲೆ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

ವರದಿ:- ಮಣಿಕಂಠ. ಬಿ

ಭ್ರಷ್ಟರ ಬೇಟೆ

Recent Posts

ಚಿಕ್ಕಬಳ್ಳಾಪುರದಲ್ಲಿ ಭೀಕರ ಹತ್ಯೆ: ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ದುಷ್ಕರ್ಮಿಗಳು

ಚಿಕ್ಕಬಳ್ಳಾಪುರದ ಬಿಬಿ ರಸ್ತೆಯ ಎಸ್‌ಬಿಐ ಬ್ಯಾಂಕ್ ಬಳಿಯಲ್ಲಿಂದು ಮುಂಜಾನೆ ಹೃದಯವಿದ್ರಾವಕ ಘಟನೆ ನಡೆಯಿದ್ದು, ದುಷ್ಕರ್ಮಿಗಳು ಕಲ್ಲಿನಿಂದ ಹೊಡೆದು ಯುವಕನನ್ನು ಹತ್ಯೆಗೈದಿದ್ದಾರೆ.…

15 minutes ago

ಹೋಂ ಗಾರ್ಡ್ ನೇಮಕಾತಿಗೆ ಲಂಚ: ರಾಯಚೂರಲ್ಲಿ ಕಮಾಂಡೆಂಟ್ ಲೋಕಾಯುಕ್ತ ಬಲೆಗೆ”

ರಾಯಚೂರು: ಹೋಂ ಗಾರ್ಡ್ ನೇಮಕಾತಿಗೆ ಲಂಚ ಪಡೆಯುತ್ತಿದ್ದ ರಾಯಚೂರಿನ ಹೋಂ ಗಾರ್ಡ್ ಕಮಾಂಡೆಂಟ್ ಜಂಬಣ್ಣ ರಾಮಸ್ವಾಮಿ ಅವರು ಲೋಕಾಯುಕ್ತದ ಜಾಲಕ್ಕೆ…

2 hours ago

ಸುಹಾಸ್ ಶೆಟ್ಟಿಯ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಅಬ್ದುಲ್ ರಜಾಕ್ ಬಂಧನ

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಮತ್ತೊಬ್ಬರನ್ನು ಬಂಧಿಸಿದ್ದಾರೆ. ಬಂಧಿತನನ್ನು ಬಜ್ಪೆ…

15 hours ago

ಮಧುಗಿರಿಯಲ್ಲಿ ಬಾಲಕನ ಆತ್ಮಹತ್ಯೆ: ಅನಾರೋಗ್ಯ, ಪರೀಕ್ಷಾ ಫಲಿತಾಂಶದಿಂದ ಖಿನ್ನತೆ ಹಿನ್ನೆಲೆಯಲ್ಲಿ ದಾರುಣ ಘಟನೆ

ತುಮಕೂರು: ಅನಾರೋಗ್ಯ ಹಾಗೂ ಪರೀಕ್ಷಾ ಫಲಿತಾಂಶದಿಂದ ಖಿನ್ನತೆಗೆ ಒಳಗಾಗಿದ್ದ 19 ವರ್ಷದ ಬಾಲಕನು ಆತ್ಮಹತ್ಯೆಗೆ ಶರಣಾದ ಮರುಮನಸ್ಸು ಮಾಡಬಲ್ಲ ದುರ್ಘಟನೆ…

17 hours ago

ಲಂಚ ಪಡೆಯುವಾಗ ಜೆಸ್ಕಾಂ ಎಂಜಿನಿಯರ್ ಶೇಖರ್ ಅರೆಸ್ಟ್ : ಲೋಕಾಯುಕ್ತ ಪೊಲೀಸರ ದಾಳಿ

ಕಲಬುರಗಿಯಲ್ಲಿ ಮಂಗಳವಾರ ದಿನದ ಬೆಳಗ್ಗೆ ಮಹತ್ವದ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿಯ (ಜೆಸ್ಕಾಂ) ಗ್ರಾಮೀಣ…

18 hours ago

“ಐಟಿಐ ಕಾಲೇಜಿನಲ್ಲಿ ನಿರ್ಲಕ್ಷ್ಯದ ಛಾಯೆ: ವಿದ್ಯಾರ್ಥಿಗಳಿಗೆ ತಲುಪದೆ ಗೋದಾಮಿನಲ್ಲಿ ಹಾಳಾಗುತ್ತಿರುವ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳು”

ಗೌರಿಬಿದನೂರು: ಸರ್ಕಾರ ಎಸ್‌ಸಿ, ಎಸ್‌ಟಿ ಹಾಗೂ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸಮವಸ್ತ್ರ, ಶೂ, ಬ್ಯಾಗ್,…

20 hours ago