Latest

ಮೂರನೇ ಮದುವೆ; ಗ್ರಾಮ ಆಡಳಿತ ಅಧಿಕಾರಿಯಿಂದ 5 ಲಕ್ಷ ವರದಕ್ಷಿಣೆ ಬೇಡಿಕೆ: ಪ್ರಕರಣ ದಾಖಲು

ಕೊಟ್ಟೂರು:- ನನಗೆ ನಿನ್ನ ಜೊತೆ ಜೀವನ ನಡೆಸಲು ತುಂಬಾ ಕಷ್ಟ ಆಗುತ್ತಿದೆ ನೀನು ನನ್ನ ಜೊತೆ ಇರಬೇಕೆಂದರೆ 5 ಲಕ್ಷ ಹಣ ತೆಗೆದುಕೊಂಡು ಬಂದರೆ ಮಾತ್ರ ಜೀವನ ಮುಂದುವರೆಯುತ್ತದೆ ಇಲ್ಲವಾದರೆ ವಿಚ್ಛೇದನ ನೀಡಬೇಕೆಂದು ಪ್ರತಿ ದಿನ ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾನೆಂದು ಪತ್ನಿ ಜ್ಯೋತಿ ತನ್ನ ಆರೋಪಿ ಪತಿ ಸಣ್ಣ ಮಾರೆಣ್ಣ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ವಿವರ :
ಸಣ್ಣ ಮಾರೆಣ್ಣ ಎಂಬುವ ವ್ಯಕ್ತಿ ಮೂಲ ಹೊಸಪೇಟೆ ನಿವಾಸಿ ಈತನು ಕೂಡ್ಲಿಗಿ ತಾಲೂಕಿನ ಗುಂಡ ಮುಣುಗು ಗ್ರಾಮದಲ್ಲಿ ಗ್ರಾಮ ಆಡಳಿತಾಧಿಕಾರಿ(VA)ಯಾಗಿ ಕೆಲಸ ನಿರ್ವಸುತ್ತಿದ್ದಾನೆ ಈತನು 13 ವರ್ಷಗಳ ಹಿಂದೆ ಕೊಟ್ಟೂರು ಪಟ್ಟಣದ ನಿವಾಸಿ ಜ್ಯೋತಿ ಎಂಬ ಮಹಿಳೆ ಜೊತೆ ವಿವಾಹ ಆಗಿದ್ದನು ಈ ವಿವಾಹ ಆಗಿ ಮೂರೇ ವರ್ಷಕ್ಕೆ ಗುಟ್ಟಾಗಿ ಮತ್ತೊಂದು ವಿವಾಹ ಆಗಿದ್ದಾನೆ ಎಂದು ತಿಳಿದ ಪತ್ನಿಯು ವಿಚಾರಿಸಿದಾಗ ಹೌದು ಇದು ನನ್ನ ಜೀವನ ನನ್ನ ಇಷ್ಟ ನಾನು ಎಷ್ಟು ಮದುವೆ ಬೇಕಾದರು ಆಗುತ್ತೇನೆ ನನ್ನ ವೈಯುಕ್ತಿಕ ವಿಚಾರಕ್ಕೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಾನೆ ಹಾಗೂ ನನಗೆ ಮದುವೆಗೆ ನೀಡಿದ ವರದಕ್ಷಿಣೆ ಸಾಲದು ಇನ್ನು 5 ಲಕ್ಷ ನೀಡಿದರೆ ಮಾತ್ರ ನಿನ್ನ ಜೊತೆ ಇರುತ್ತೇನೆ ಇಲ್ಲವಾದರೆ ಗುಟ್ಟಾಗಿ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಹಲವಾರು ಬಾರಿ ಕೊಲೆ ಪ್ರಯತ್ನ ಮಾಡಿದ್ದಾನೆ ಇದರಿಂದಾಗಿ ನಾನು ಕಿರುಕುಳಕ್ಕೆ ಒಳಗಾಗಿ ಪತ್ನಿ ಜ್ಯೋತಿ ಈತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನನ್ನ ವಿವಾಹ ಆಗುವ ಮೊದಲೇ ಈತನಿಗೆ ಬೇರೆ ವಿವಾಹವಾಗಿತ್ತು ಆ ಹುಡಿಗಿಯ ಜೊತೆ ಹೊಂದಾಣಿಕೆ ಇಲ್ಲದ ಕಾರಣ ಮೊದಲನೇ ಹೆಂಡತಿಯನ್ನು ಕೊಲೆ ಮಾಡಿ ಜೈಲು ಸೇರಿದ್ದನು. ನಂತರ ಈ ಘಟನೆಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ನನ್ನ ತಾಯಿಯ ಹತ್ತಿರ ಬಂದು ಕಣ್ಣೀರು ಹಾಕಿ ರಕ್ತ ಸಂಬಂಧದ ನಾಟಕ ಮಾಡಿ ನನ್ನನು ವಿವಾಹ ಆಗಿ ನನಗೆ ಸಹ ಮೋಸ ಮಾಡುತ್ತಿದ್ದಾನೆ. ನನ್ನ ಕೊಲೆ ಮಾಡುವ ಉದ್ದೇಶದಿಂದ ಊಟದಲ್ಲಿ ವಿಷ ಹಾಕುವುದು, ಮಜ್ಜಿಗೆಯಲ್ಲಿ ವಿಷದ ಪೌಡರ್ ಹಾಕುವುದು, ನೀರಿನ ಟ್ಯಾಂಕರ್ ನಲ್ಲಿ ವಿಷ ಸೇರಿಸುವುದು ಹೀಗೆ ಹಲವಾರು ಬಾರಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆಂದು ಪತ್ನಿ ಜ್ಯೋತಿ ತಿಳಿಸಿದ್ದಾರೆ.

ವರದಿ: ಮಣಿಕಂಠ. ಬಿ

ಭ್ರಷ್ಟರ ಬೇಟೆ

Recent Posts

ಮುಖ್ಯಮಂತ್ರಿಗಳ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಿ: ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ

ಕಾರವಾರ: ಜಿಲ್ಲೆಯಲ್ಲಿ ಪಾರದರ್ಶಕ, ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಎಲ್ಲಾ ಸರ್ಕಾರಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಗಳು…

7 hours ago

ಬಸ್‌ನಲ್ಲಿ ಅಸಭ್ಯವಾಗಿ ಯುತಿಯ ಮೈ ಮುಟ್ಟಿ ಕಿರುಕುಳ; ಧೈರ್ಯವಾಗಿ ವಿಡಿಯೋ ಮಾಡಿದ ಯುವತಿ, ಆರೋಪಿಯನ್ನು ಕೆಳಗಿಳಿಸಿದ ಕಂಡಕ್ಟರ್!

ಮಾರುಕಟ್ಟೆಯಿಂದ ಮನೆಗೆ ತೆರಳಲು ಖಾಸಗಿ ಬಸ್ ಹತ್ತಿದ್ದ ಯುವತಿಗೆ ಮಾರ್ಗಮಧ್ಯೆ ಕಿರುಕುಳ ನೀಡಿದ ಘಟನೆ ನಡೆದಿದೆ. ಬಸ್ ಚಲಿಸಲು ಆರಂಭಿಸಿದ…

7 hours ago

₹65 ಸಾವಿರ ಸಂಬಳದ ಮುಖ್ಯೋಪಾಧ್ಯಾಯರಿಗೆ ಶಾಲೆಗೆ ಬರಲು ಸಮಯವಿಲ್ಲ; ₹4,500ಕ್ಕೆ ಯುವತಿಯನ್ನು ನೇಮಿಸಿ ಪಾಠ ಮಾಡಿಸಿದ ‘ಸರ್ಕಾರಿ ಶಾಲೆ’ ವಂಚನೆ!

ಮಧ್ಯಪ್ರದೇಶ: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಹ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಿಂಗಳಿಗೆ ₹65…

7 hours ago

ಇನ್‌ಸ್ಟಾಗ್ರಾಮ್ ಕ್ಯೂಟ್ ಕಪಲ್ ಕಥೆಗೆ ಬಿಗ್ ಟ್ವಿಸ್ಟ್: ಕೋಟ್ಯಾಧಿಪತಿ ಪತ್ನಿ ಕಂಡಕ್ಟರ್ ಜೊತೆ ಪರಾರಿ ಆರೋಪ!

ಸೋಷಿಯಲ್ ಮೀಡಿಯಾದಲ್ಲಿ ಸದಾ ನಗುನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಕೇರಳದ ಜನಪ್ರಿಯ ಜೋಡಿ ಅಖಿಲ್ (Akhil NRD) ಮತ್ತು ಮೇಘಾ ಅವರ ದಾಂಪತ್ಯ…

7 hours ago

ಟೊರೊಂಟೊದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ: 7 ತಿಂಗಳ ಬಳಿಕ ಆಪ್ತ ವ್ಯಕ್ತಿ ಅರೆಸ್ಟ್‌!

ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…

1 day ago

ಇನ್‌ಸ್ಟಾಗ್ರಾಂ ಪ್ರೇಮಿಗಾಗಿ 6 ತಿಂಗಳ ಕಂದಮ್ಮನನ್ನೇ ಕೊಲ್ಲಿಸಿದ ತಾಯಿ! ಮೀರಾಟ್‌ನಲ್ಲಿ ಬೆಚ್ಚಿಬೀಳಿಸಿದ ಘಟನೆ

ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…

1 day ago