ಕೊಟ್ಟೂರು:- ನನಗೆ ನಿನ್ನ ಜೊತೆ ಜೀವನ ನಡೆಸಲು ತುಂಬಾ ಕಷ್ಟ ಆಗುತ್ತಿದೆ ನೀನು ನನ್ನ ಜೊತೆ ಇರಬೇಕೆಂದರೆ 5 ಲಕ್ಷ ಹಣ ತೆಗೆದುಕೊಂಡು ಬಂದರೆ ಮಾತ್ರ ಜೀವನ ಮುಂದುವರೆಯುತ್ತದೆ ಇಲ್ಲವಾದರೆ ವಿಚ್ಛೇದನ ನೀಡಬೇಕೆಂದು ಪ್ರತಿ ದಿನ ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾನೆಂದು ಪತ್ನಿ ಜ್ಯೋತಿ ತನ್ನ ಆರೋಪಿ ಪತಿ ಸಣ್ಣ ಮಾರೆಣ್ಣ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ವಿವರ :
ಸಣ್ಣ ಮಾರೆಣ್ಣ ಎಂಬುವ ವ್ಯಕ್ತಿ ಮೂಲ ಹೊಸಪೇಟೆ ನಿವಾಸಿ ಈತನು ಕೂಡ್ಲಿಗಿ ತಾಲೂಕಿನ ಗುಂಡ ಮುಣುಗು ಗ್ರಾಮದಲ್ಲಿ ಗ್ರಾಮ ಆಡಳಿತಾಧಿಕಾರಿ(VA)ಯಾಗಿ ಕೆಲಸ ನಿರ್ವಸುತ್ತಿದ್ದಾನೆ ಈತನು 13 ವರ್ಷಗಳ ಹಿಂದೆ ಕೊಟ್ಟೂರು ಪಟ್ಟಣದ ನಿವಾಸಿ ಜ್ಯೋತಿ ಎಂಬ ಮಹಿಳೆ ಜೊತೆ ವಿವಾಹ ಆಗಿದ್ದನು ಈ ವಿವಾಹ ಆಗಿ ಮೂರೇ ವರ್ಷಕ್ಕೆ ಗುಟ್ಟಾಗಿ ಮತ್ತೊಂದು ವಿವಾಹ ಆಗಿದ್ದಾನೆ ಎಂದು ತಿಳಿದ ಪತ್ನಿಯು ವಿಚಾರಿಸಿದಾಗ ಹೌದು ಇದು ನನ್ನ ಜೀವನ ನನ್ನ ಇಷ್ಟ ನಾನು ಎಷ್ಟು ಮದುವೆ ಬೇಕಾದರು ಆಗುತ್ತೇನೆ ನನ್ನ ವೈಯುಕ್ತಿಕ ವಿಚಾರಕ್ಕೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಾನೆ ಹಾಗೂ ನನಗೆ ಮದುವೆಗೆ ನೀಡಿದ ವರದಕ್ಷಿಣೆ ಸಾಲದು ಇನ್ನು 5 ಲಕ್ಷ ನೀಡಿದರೆ ಮಾತ್ರ ನಿನ್ನ ಜೊತೆ ಇರುತ್ತೇನೆ ಇಲ್ಲವಾದರೆ ಗುಟ್ಟಾಗಿ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಹಲವಾರು ಬಾರಿ ಕೊಲೆ ಪ್ರಯತ್ನ ಮಾಡಿದ್ದಾನೆ ಇದರಿಂದಾಗಿ ನಾನು ಕಿರುಕುಳಕ್ಕೆ ಒಳಗಾಗಿ ಪತ್ನಿ ಜ್ಯೋತಿ ಈತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನನ್ನ ವಿವಾಹ ಆಗುವ ಮೊದಲೇ ಈತನಿಗೆ ಬೇರೆ ವಿವಾಹವಾಗಿತ್ತು ಆ ಹುಡಿಗಿಯ ಜೊತೆ ಹೊಂದಾಣಿಕೆ ಇಲ್ಲದ ಕಾರಣ ಮೊದಲನೇ ಹೆಂಡತಿಯನ್ನು ಕೊಲೆ ಮಾಡಿ ಜೈಲು ಸೇರಿದ್ದನು. ನಂತರ ಈ ಘಟನೆಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ನನ್ನ ತಾಯಿಯ ಹತ್ತಿರ ಬಂದು ಕಣ್ಣೀರು ಹಾಕಿ ರಕ್ತ ಸಂಬಂಧದ ನಾಟಕ ಮಾಡಿ ನನ್ನನು ವಿವಾಹ ಆಗಿ ನನಗೆ ಸಹ ಮೋಸ ಮಾಡುತ್ತಿದ್ದಾನೆ. ನನ್ನ ಕೊಲೆ ಮಾಡುವ ಉದ್ದೇಶದಿಂದ ಊಟದಲ್ಲಿ ವಿಷ ಹಾಕುವುದು, ಮಜ್ಜಿಗೆಯಲ್ಲಿ ವಿಷದ ಪೌಡರ್ ಹಾಕುವುದು, ನೀರಿನ ಟ್ಯಾಂಕರ್ ನಲ್ಲಿ ವಿಷ ಸೇರಿಸುವುದು ಹೀಗೆ ಹಲವಾರು ಬಾರಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆಂದು ಪತ್ನಿ ಜ್ಯೋತಿ ತಿಳಿಸಿದ್ದಾರೆ.
ವರದಿ: ಮಣಿಕಂಠ. ಬಿ
ಅಟ್ರಾಸಿಟಿ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯ ಸಿಪಿಐ ವೀರಣ್ಣ…
ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…
ಬೆಳ್ತಂಗಡಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ…
ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು,…
ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ…
ಸೋಶಿಯಲ್ ಮೀಡಿಯಾದಲ್ಲಿ ಆರಂಭವಾದ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ಲಿವ್-ಇನ್…