Latest

ಅಂದ ಚಂದದ ಹುಡುಗಿಯರೇ ಹುಷಾರ್!: ಕಿಂಗ್ ಪಿನ್ ಆಂಟಿಯರ ವೇಶ್ಯಾವಾಟಿಕೆ ದಂದೆಗೆ ಬ್ರೇಕ್ ಹಾಕಿದ ಸಿಸಿಬಿ ಪೊಲೀಸರು.

ಬೆಂಗಳೂರು: ಉದ್ಯೋಗದ ಆಮಿಷವೊಡ್ಡಿ ಯುವತಿಯರನ್ನು ವೇಶ್ಯಾವಾಟಿಕೆಗೆ ದಬ್ಬಾಳಿಕೆ ಮಾಡುತ್ತಿದ್ದ ಮಾಫಿಯಾ ತಂಡವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿ, ಇಬ್ಬರು ಪ್ರಮುಖ ಮಹಿಳಾ ಸಂಘಟಕರನ್ನು ಬಂಧಿಸಿದ್ದಾರೆ. ಬ್ಯಾಡರಹಳ್ಳಿ ಬಳಿಯ ಬಿಇಎಲ್ ಬಡಾವಣೆಯಲ್ಲಿ ಮನೆ ಬಾಡಿಗೆಗೆ ಪಡೆದು ಈ ದಂಧೆ ನಡೆಸುತ್ತಿದ್ದ ಉಮಾ ಮತ್ತು ಪುಷ್ಪಲತಾ ಎಂಬ ಮಹಿಳೆಯರು ಈಗ ಕಾನೂನು ಬಲೆಗೆ ಬಿದ್ದಿದ್ದಾರೆ.

ಉದ್ಯೋಗದ ಹೆಸರಿನಲ್ಲಿ ಷಡ್ಯಂತ್ರ

ಹೊರ ರಾಜ್ಯಗಳಿಂದ ಬರುವ ಯುವತಿಯರಿಗೆ ಉತ್ತಮ ಉದ್ಯೋಗ ನೀಡುವ ನಂಬಿಕೆ ಮೂಡಿಸಿ, ಅವುಗಳನ್ನು ದಂಧೆಗೆ ಬಳಸಲಾಗುತ್ತಿತ್ತು. ಈ ಮಹಿಳೆಯರು ಮನೆ ಬಾಡಿಗೆಗೆ ಪಡೆದು, ಕಾನೂನು ಎದ್ರಿಸದಂತೆ ಬಾಡಿಗೆವನ್ನು ನಿಯಮಿತವಾಗಿ ಮನಮಾಲೀಕರಿಗೆ ಪಾವತಿಸುತ್ತಿದ್ದರು. ಗಿರಾಕಿಗಳನ್ನು ಮೊದಲು ಫೋನ್ ಮೂಲಕ ಸಂಪರ್ಕಿಸಿ, ಹುಡುಗಿಯರ ಫೋಟೋಗಳನ್ನು ಕಳುಹಿಸಿ, ಒಂದೊ ಬ್ಬರಿಗೂ ₹10,000 ರಿಂದ ₹12,000 ದರ ನಿಗದಿಪಡಿಸುತ್ತಿದ್ದರು. ಒಪ್ಪಂದ ಕಾರಿದಿಸಿದ ನಂತರ, ಹುಡುಗಿಯರನ್ನು ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿತ್ತು.

ಸಿಸಿಬಿಯ ದಾಳಿ: ಓರ್ವ ಯುವತಿಯ ರಕ್ಷಣೆ

ಪೊಲೀಸರು ಗುಪ್ತ ಮಾಹಿತಿ ಆಧಾರದ ಮೇಲೆ ಈ ಅಕ್ರಮ ಚಟುವಟಿಕೆಯನ್ನು ಪತ್ತೆ ಮಾಡಿದ್ದು, ಬ್ಯಾಡರಹಳ್ಳಿ ಪ್ರದೇಶದಲ್ಲಿ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆ ಓರ್ವ ಯುವತಿಯನ್ನು ರಕ್ಷಣೆ ಮಾಡಿದ್ದು, ಪ್ರಮುಖ ಆರೋಪಿಗಳಾದ ಉಮಾ ಮತ್ತು ಪುಷ್ಪಲತಾರನ್ನು ಬಂಧಿಸಲಾಗಿದೆ.

ಸದ್ಯ, ಪೊಲೀಸರು ಈ ಜಾಲದ ಹಿಂದಿನ ಹೆಚ್ಚಿನ ಕುಟಿಲತನವನ್ನು ಬಯಲು ಮಾಡುವ ದిశೆಯಲ್ಲಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ದಂಧೆಯಲ್ಲಿ ಇನ್ನೂ ಯಾರು ಕೈಜೋಡಿಸಿದ್ದರು, ಯುವತಿಯರನ್ನು ಹೇಗೆ ತರಲಾಗುತ್ತಿತ್ತು, ಹಾಗೂ ದೊಡ್ಡ ಮಟ್ಟದ ಮಾಫಿಯಾ ಜಾಲವಿದೆಯೇ ಎಂಬ ಬಗ್ಗೆ ಗಂಭೀರ ತನಿಖೆ ಮುಂದುವರೆದಿದೆ.

nazeer ahamad

Recent Posts

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

1 week ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

2 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

3 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

4 weeks ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

1 month ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

2 months ago