Crime

ಪರಪುರುಷನ ಪ್ರೇಮಕ್ಕಾಗಿ ಪತಿಯನ್ನೇ ಕೊಂದ ಪತ್ನಿ – ಹುಣಸಗಿಯಲ್ಲಿ ಸಂಚಲನ

ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಪತ್ನಿಯೇ ಪತಿಯನ್ನೇ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. 34 ವರ್ಷದ ಮಾನಪ್ಪ ಬಂಕಲದೊಡ್ಡಿ, 11 ವರ್ಷಗಳ ಹಿಂದೆ ಲಕ್ಷ್ಮಿಯನ್ನು ಮದುವೆಯಾಗಿದ್ದ. ಅವರ ದಾಂಪತ್ಯ ಜೀವನ ಶುರುದಲ್ಲಿ ಸದೃಢವಾಗಿದ್ದರೂ, ಕಳೆದ ಕೆಲವು ದಿನಗಳಿಂದ ಲಕ್ಷ್ಮೀ ಪರಪುರುಷರೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು.

ಪತಿ-ಪತ್ನಿ ನಡುವೆ ಉದ್ಭವಿಸಿದ ಸಂಶಯ

ಲಕ್ಷ್ಮಿಯ ಅಕ್ರಮ ಸಂಬಂಧದ ಬಗ್ಗೆ ಗಂಡನಿಗೆ ತಿಳಿದಂತೆ, ದಂಪತಿಯ ನಡುವೆ ಗಲಾಟೆ ನಡೆಯುತ್ತಿತ್ತು. ಅಂತೆಯೇ ಕೊಲೆಯ ಹಿಂದಿನ ರಾತ್ರಿ, ಮನೆಲ್ಲೇ ಜಗಳ ತೀವ್ರಗೊಂಡಿತ್ತು. ಈ ಸಂದರ್ಭ, ಲಕ್ಷ್ಮೀ ತನ್ನ ಪ್ರಿಯಕರನನ್ನು ಮನೆಗೆ ಕರೆಯಿಸಿಕೊಂಡು, ಪತಿಯ ಜೀವ ಕೊನೆಗಾಣಿಸುವ ಯತ್ನ ಮಾಡಿದ್ದಾಳೆ.

ಹೃದಯಾಘಾತದ ನಾಟಕ, ಆದರೆ ಸುಳ್ಳು ಬಯಲಿಗೆ!

ಗಂಡನನ್ನು ಕೊಂದ ಬಳಿಕ, ಲಕ್ಷ್ಮೀ ಇದನ್ನು ಹೃದಯಾಘಾತವೆಂದು ಬಿಂಬಿಸಲು ತೀರ್ಮಾನಿಸಿದ್ದಳು. ಪತಿಯ ಮೃತದೇಹದ ಮುಂದೆ ಕುಳಿತು ಕಣ್ಣೀರೋಳಗಿಸುತ್ತಾ ದುಃಖ ವ್ಯಕ್ತಪಡಿಸಿದಳು. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಊರಿನ ಜನರ ಗಮನ ತಪ್ಪಿಸಲು ಯತ್ನಿಸಿದಳು. ಆದರೆ, ಶವದ ಮೇಲೆ ಕಂಡುಬಂದ ರಕ್ತದ ಕಲೆಗಳು, ಮುಖದ ಮೇಲೆ ಪತ್ತೆಯಾದ ಗಾಯಗಳು ಈಕೆ ಹೇಳಿದ ಕಥೆಗೆ ತದ್ವಿರುದ್ಧವಾಗಿದ್ದವು.

ಗ್ರಾಮಸ್ಥರ ಅನುಮಾನ ಮತ್ತು ಪೊಲೀಸರ ಹಸ್ತಕ್ಷೇಪ

ಸ್ಥಳೀಯರು ಮೃತದೇಹವನ್ನು ಗಮನಿಸಿದಾಗ, ಇದು ಸಹಜ ಸಾವಲ್ಲ ಎಂಬ ಅನುಮಾನ ಹುಟ್ಟಿತು. ಗ್ರಾಮಸ್ಥರು ಕೂಗಾಡಿ ಪ್ರತಿರೋಧ ತೋರಿದಾಗ, ಲಕ್ಷ್ಮೀ ತೀವ್ರವಾಗಿ ಪ್ರತಿಕ್ರಿಯಿಸಿದಳು. ಆದರೆ, ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ತಲುಪುತ್ತಿದ್ದಂತೆ, ಸಿಪಿಐ ಆನಂದ ವಾಗ್ಮೋಡೆ ಮತ್ತು ಡಿವೈಎಸ್ಪಿ ಜಾವೀದ್ ಇನಾಮದಾರ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಪ್ರಾರಂಭಿಸಿದರು.

ಗಂಡನ ಪ್ರೀತಿಯನ್ನು ತಿರಸ್ಕರಿಸಿ ಪರಪುರುಷನ ಪ್ರೀತಿಯ ಬಂಧನದಲ್ಲಿ ಸಿಲುಕಿದ ಪತ್ನಿಯು, ತನ್ನ ಜೀವನ ಸಂಗಾತಿಯನ್ನೇ ಕ್ರೂರವಾಗಿ ಹತ್ಯೆ ಮಾಡಿದ್ದಾಳೆ. ಪೊಲೀಸ್ ತನಿಖೆಯು ಮುಂದುವರಿದಿದ್ದು, ಲಕ್ಷ್ಮಿಯನ್ನು ಬಂಧಿಸಲಾಗಿದೆ. ಈ ಕ್ರೂರ ಕೃತ್ಯದಲ್ಲಿ ಆಕೆಗೆ ಸಹಕರಿಸಿದ ಪ್ರಿಯಕರನಿಗಾಗಿ ಬಲೆ ಬೀಸಲಾಗುತ್ತಿದೆ.

ಈ ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಮನುಷ್ಯ ಸಂಬಂಧಗಳ ದೌರ್ಬಲ್ಯ ಮತ್ತು ಅಹಿತಕರ ಪ್ರಭಾವಗಳ ಕುರಿತು ನಿಜಕ್ಕೂ ಆಳವಾಗಿ ಚಿಂತನೆಗೆ ನಿಲುಕಿದ್ದಾರೆ.

nazeer ahamad

Recent Posts

ಲೋಕಾಯುಕ್ತ ಅಧಿಕಾರಿ ಎಂದು ಎಂಜಿನಿಯರ್‌ಗೆ ಹಣ ಬೇಡಿಕೆ ಇಟ್ಟ ಆರೋಪಿ ಬಂಧನ

ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿ ಎಂದು ಸುಳ್ಳು ಪರಿಚಯ ನೀಡಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ನಿಂದ ಹಣ ವಸೂಲಿ ಮಾಡಲು ಯತ್ನಿಸಿದ…

16 hours ago

ಉತಾರ ನೀಡಲು ₹1.5 ಲಕ್ಷ ಲಂಚ: ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಬಲೆಗೆ

ಜಮೀನಿನ ಖಾತಾ ಉತಾರ ನೀಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಿಜನಗೇರಾ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಅಧಿಕಾರಿಗಳ…

20 hours ago

‘ಉಗ್ರ ಎಂದು ಗೊತ್ತಿದ್ದರೆ ಮನೆ ಕೊಡುತ್ತಿರಲಿಲ್ಲ’; ಶಂಕಿತ ಸುಹೇಲ್ ಬಂಧನದಿಂದ ಬೆಚ್ಚಿಬಿದ್ದ ಮನೆ ಮಾಲೀಕರು

ಅಯೋಧ್ಯೆಯ ರಾಮಮಂದಿರವನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದಾನೆ ಎಂಬ ಆರೋಪದ ಮೇಲೆ ಬಂಧಿತನಾಗಿರುವ ಶಂಕಿತ ಉಗ್ರ ಸುಹೇಲ್ ಪ್ರಕರಣಕ್ಕೆ ಹೊಸ ತಿರುವು…

20 hours ago

17 ವರ್ಷದ ಸೋದರಳಿಯನ ಬ್ಲಾಕ್ ಮೇಲ್ ಮಾಡಿ ಸೆಕ್ಸ್ ಮಾಡುತ್ತಿದ್ದ 40 ವರ್ಷದ ಅತ್ತೆ..! ಪೋಕ್ಸೋ ಪ್ರಕರಣ ದಾಖಲು.

ಉತ್ತರ ಪ್ರದೇಶದ ಅಲಿಗಢ್‌ನಲ್ಲಿ ಅಪ್ರಾಪ್ತ ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನದೇ 17…

20 hours ago

ನಟಿ ಕೃಷಿ ತಾಪಾಂಡ ನಿವಾಸದಲ್ಲಿ ಉದ್ಯಮಿ ವೈಶಾಕ್ ಮೃತದೇಹ ಪತ್ತೆ; ಸಾವಿನ ಸುತ್ತ ಹಲವು ಪ್ರಶ್ನೆಗಳು

ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಉದ್ಯಮಿ ವೈಶಾಕ್ (45) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹಲವು ಅನುಮಾನಗಳಿಗೆ…

20 hours ago

ಇಡಿ ದಾಳಿ: ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿ ಮನೆಯಿಂದ ಯಮುನಾ ವಶಕ್ಕೆ

ಮೈಸೂರು ನಗರದ ದಟ್ಟಗಳ್ಳಿ ಪ್ರದೇಶದಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿ ವೈ. ಮಂಜುನಾಥ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ…

1 day ago