Latest

ಶ್ರೀಗಂಧ ಮರಗಳ್ಳನ ಬಂಧನ; ಮರದ ತುಂಡುಗಳು ವಶಕ್ಕೆ ಪಡೆದ ಕೋಲಾರ ಪೊಲೀಸರು.

ಕೋಲಾರ ಗ್ರಾಮಾಂತರ ಠಾಣಾ ಪೊಲೀಸರಿಂದ ಗುಪ್ತ ಮಾಹಿತಿಯೊಂದಿಗೆ ಮಿಂಚಿನ ಕಾರ್ಯಚರಣೆ ನಡೆಸಿ, ಶ್ರೀಗಂಧ ಮರಗಳನ್ನು ಕದಿಯುತ್ತಿದ್ದ ಆರೋಪಿ ಬಂಧಿಸಿ ಅವನಿಂದ 15 ಕೆ.ಜಿ ತೂಕದ ಶ್ರೀಗಂಧ ಮರದ ತುಂಡುಗಳು ವಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಸಾದ್.ವಿ ಸುಗಟೂರು ಹೋಬಳಿಯ ತಮ್ಮ ತೋಟದ ಸುತ್ತಲೂ ಸುಮಾರು 200 ಶ್ರೀಗಂಧದ ಮರಗಳನ್ನು ಬೆಳೆಸಿದ್ದರು, ಮರಗಳು ಸುಮಾರು 26 ಅಡಿಗಳ ಉದ್ದ, ದಪ್ಪ 1.4 ಅಡಿಗಳಿದ್ದು ದಿನಾಂಕ 23-07-2024 ರಂದು ಮಧ್ಯರಾತ್ರಿಯ ಸಮಯದಲ್ಲಿ ನಾಯಿಗಳು ಸದ್ದು ಮಾಡುತ್ತಿದ್ದನ್ನು ಕಂಡು, ಮನೆಯಿಂದ ಹೊರಗಡೆ ಬಂದು ನೋಡಿದಾಗ ಮನೆಯ ಪಕ್ಕದಲ್ಲಿ ತಮ್ಮ ತೋಟದಲ್ಲಿರುವಂತಹ ಶ್ರೀಗಂಧದ ಮರಗಳ ಪೈಕಿ 5 ಮರಗಳು ಕಡಿದು ಕಳ್ಳರು ಕಳವು ಮಾಡಿದ್ದು, ಉಳಿದ ಸುಮಾರು 6 ಮರಗಳಿಗೆ ರಂಪದಲ್ಲಿ ಸ್ವಲ್ಪಮಟ್ಟಿಗೆ ಕೊಯ್ದು ಪರಾರಿಯಾಗಿದ್ದಾರೆ. ಕೊಡಲೇ ಶ್ರೀಗಂಧ ಮರಗಳ ಕಳ್ಳತನದ ದೂರನ್ನು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ .ಬಿ ಐ.ಪಿ.ಎಸ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರವಿಶಂಕರ್ ಮತ್ತು ಜಗದೀಶ್ ರವರ ಮಾರ್ಗದರ್ಶನದಲ್ಲಿ ಕೋಲಾರ ಉಪವಿಭಾಗದ ಪೋಲಿಸ್ ಉಪಾಧೀಕ್ಷಕರಾದ ಎಂ.ಹೆಚ್.ನಾಗ್ಲೆ ರವರ
ಮುಂದಾಳತ್ವದಲ್ಲಿ ಕಾಂತರಾಜ.ಕೆ ಪೊಲೀಸ್ ಇನ್ಸಪೆಕ್ಟ‌ರ್ ಮತ್ತು ಅವರ ತಂಡದ ಸಾಧಿಕ್ ಪಾಷ, ರಾಜೇಶ್, ಹಾಗೂ ಜಿಲ್ಲಾ ಅಪರಾಧ ಪತ್ತೆದಳ ಸಿಬ್ಬಂದಿಯಾದ ರಾಘವೇಂದ್ರ, ಆಂಜಿನಪ್ಪ, ನವೀನ್, ಸತೀಶ್ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ಮುರಳಿ ರವರು ಹಲವಾರು ಗುಪ್ತ ಮಾಹಿತಿಯೊಂದಿಗೆ ಮಾಹಿತಿ ಕಲೆಹಾಕಿ ಆರೋಪಿಯಾದ ವೆಂಕಟರಮಣಪ್ಪ 50 ವರ್ಷ, ಉಪ್ಪಾರಪಲ್ಲಿ ಗ್ರಾಮ, ಲಕ್ಷ್ಮೀಪುರ ಪಂಚಾಯ್ತಿ, ಶ್ರೀನಿವಾಸಪುರ ತಾಲ್ಲೂಕು, ಎಂಬ ಆರೋಪಿಯಿಂದ ಮಾಲು ಸಮೇತ ಕೋಲಾರ-ಶ್ರೀನಿವಾಸಪುರ ರಸ್ತೆಯ ಮೂರಾಂಡಹಳ್ಳಿ ಕ್ರಾಸ್ ಬಳಿ ಬಂಧಿಸಿ ಇತನಿಂದ ಸುಮಾರು 50,000 ರೂ. ಬೆಲೆ ಬಾಳುವ 15 ಕೆ.ಜಿ ತೂಕದ ಶ್ರೀಗಂಧ ಮರದ ತುಂಡುಗಳನ್ನು ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಕಾರ್ಯಚರಣೆಯಲ್ಲಿ ಪಲ್ಗೊಂಡಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ. ವರದಿ: ರೋಶನ್ ಜಮೀರ್

nazeer ahamad

Recent Posts

ಖಾತೆಗಾಗಿ ಲಂಚ ಬೇಡಿಕೆ: ನೆಲಮಂಗಲದ ಕಳಲುಘಟ್ಟ ಪಿಡಿಓ ಲೋಕಾಯುಕ್ತ ಬಲೆಗೆ

ನಿವೇಶನದ ಖಾತೆ ಮಾಡಿಕೊಡಲು ಲಂಚ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯಿತಿ ಪಿಡಿಓ ಲೋಕಾಯುಕ್ತ…

11 minutes ago

ವಿಷು ಪೋಸ್ಟರ್ ವಿವಾದ: ಶ್ರೀಕೃಷ್ಣನ ಪಕ್ಕದಲ್ಲಿ ಚಿಕನ್ ಚಿತ್ರ – ರೆಸ್ಟೋರೆಂಟ್ ಮಾಲೀಕ ಆರೆಸ್ಟ್.!!!

ಕೇರಳದ ಅಲೆಪ್ಪಿ ಜಿಲ್ಲೆಯ ಚೆರ್ತಲಾದಲ್ಲಿ ವಿಷು ಹಬ್ಬದ ಶುಭಾಶಯ ಪೋಸ್ಟರ್ ಒಂದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಪೋಸ್ಟರ್‌ನಲ್ಲಿ ಶ್ರೀಕೃಷ್ಣನ…

2 hours ago

ಹಾರ್ಮುಝ್ ಜಲಸಂಧಿ ಮತ್ತೆ ತೆರೆಯಿತು: ಯುದ್ಧ ವಿರಾಮದ ಬಳಿಕ ಜಾಗತಿಕ ತೈಲ ಮಾರುಕಟ್ಟೆಗೆ ನೆಮ್ಮದಿ

ಇರಾನ್ ಮತ್ತು ಲೆಬನಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಶಮನವಾಗುತ್ತಿರುವ ಹಿನ್ನೆಲೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹಾರ್ಮುಝ್ ಜಲಸಂಧಿಯನ್ನು ಮತ್ತೆ ಎಲ್ಲಾ…

2 hours ago

ಇನ್‌ಸ್ಟಾಗ್ರಾಮ್ ಹನಿಟ್ರ್ಯಾಪ್: 14 ವರ್ಷದ ಬಾಲಕ ಅಪಹರಣ – 1 ಕೋಟಿ ಸುಲಿಗೆ ಯತ್ನ, ಸಂಬಂಧಿಯೇ ಮಾಸ್ಟರ್ ಮೈಂಡ್!

ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕನನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮೂಲಕ ನಡೆದ ಅಪಹರಣ ಪ್ರಕರಣ ಭಾರೀ ಸಂಚಲನ ಮೂಡಿಸಿದೆ. 14…

2 hours ago

“ಕಾಲೇಜಿಗೆ ಹೋಗ್ತೀನಿ ಅಂತ ಹೇಳಿ OYOಗೆ!” — ಮಗಳ ಮೇಲೆ ತಾಯಿ ದಾಳಿ ವಿಡಿಯೋ ವೈರಲ್.

ಇಂಟರ್‌ನೆಟ್ ಕ್ರಾಂತಿಯ ನಂತರ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಕೈಗೆ ತಲುಪಿದ ಪರಿಣಾಮ, ಸಾಮಾನ್ಯ ಜನರೂ ಈಗ ಕಂಟೆಂಟ್ ಕ್ರಿಯೇಟರ್‌ಗಳಾಗಿ ಪರಿಣಮಿಸಿದ್ದಾರೆ. ಈ…

6 hours ago

ಯಾದಗಿರಿಯಲ್ಲಿ ಭೀಕರ ರಸ್ತೆ ದುರಂತ: ಕಾರು–ಬಸ್ ಡಿಕ್ಕಿ, 6 ಮಂದಿ ಸಜೀವ ದಹನ—ಹೃದಯ ಕಲುಕುವ ದೃಶ್ಯ

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ ಆರು ಮಂದಿ ಸಜೀವ…

7 hours ago