Latest

ಅಕ್ರಮ ಮೀಟ‌ರ್ ಬಡ್ಡಿ ವ್ಯವಹಾರ ಮಾಡುವವರ ಮೇಲೆ ದಾಳಿ; ದಾಂಡೇಲಿ ಪೊಲೀಸರ ಕಾರ್ಯಾಚರಣೆ

ಉತ್ತರ ಕನ್ನಡ/ದಾಂಡೇಲಿ: ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿರುವ ಪೋಲಿಸ್ ಇಲಾಖೆ ಮೀಟರ್ ಬಡ್ಡಿ ದಂಧೆಕೋರರನ್ನು ಹೆಡೆಮುರಿ ಕಟ್ಟಲು ವಿಶೇಷ ತಂಡಗಳನ್ನು ರಚಿಸಿ
ಕಾರ್ಯಾಚರಣೆ ಮಾಡುತ್ತಿದ್ದಾರೆ.
ದಾಂಡೇಲಿ ಶಹರ ಪೊಲೀಸ್ ವ್ಯಾಪ್ತಿಯಲ್ಲಿ ಜೂಜಾಟ ಆಡುತ್ತಿರುವ ಬಗ್ಗೆ ಗುಪ್ತ ಮಾಹಿತಿ ಬಂದ ಮೇರೆಗೆ ಮನೆಯನ್ನು ಸರ್ಚ ಮಾಡಲು ಸರ್ಚ ವಾರೆಂಟ್ ಅನುಮತಿ ಆದೇಶವನ್ನು ಪಡೆದು. ದಿನಾಂಕ:-05-02-2025 ರಂದು ಬೆಳಗ್ಗೆ 10-00 ಗಂಟೆಗೆ ಕಿಶನ ತಂದೆ ಸುಭಾಸ ಕಂಜರಬಾಟ, ಗಾಂಧಿನಗರ. ದಾಂಡೇಲಿ ಈತನ ಮನೆಯನ್ನು ಶೋಧನೆ ಮಾಡಿದಾಗ ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂದಿಸಿದ ಒಟ್ಟು 02 ಖಾಲಿ ಇ-ಸ್ಟಾಂಪ್ ಪೇಪರ್ ಇದ್ದು. ಇ-ಸ್ಟಾಂಪ್ ಪೇಪರ್ಗಳು ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಂಡು ಬಂದಿದ್ದು, ಆಪಾದಿತನು ಮೀಟರ್ ಬಡ್ಡಿ ವ್ಯವಹಾರವನ್ನೆ ಉದ್ಯೋಗವನ್ನಾಗಿ ಮಾಡಿಕೊಂಡು, ಯಾವದೇ ರೀತಿಯ ಲೈಸೆನ್ಸ್ ಪಡೆಯದೇ, ಮಿತಿಗಿಂತ ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಿರುವ ಬಗ್ಗೆ ಕಂಡು ಬಂದ ಹಿನ್ನೆಲೆಯಲ್ಲಿ ಶ್ರೀ ಶ್ರೀನಿವಾಸ ತಂದೆ ಬಾಲಾಸಾಹೇಬ ಸಜ್ಜನ, ಸಹಕಾರ ಸಂಘಗಳ ಸಹಾಯಕ ನಿಭಂದಕರು, ಕಾರವಾರ ಉಪ ವಿಭಾಗ ಕಾರವಾರ ರವರು ನೀಡಿದ ನೀಡಿದ ದೂರಿನಂತೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ವಿನೋದ ತಂದೆ ಸುರೇಶ ಕಂಜರಬಾಟ  ಮೀನೇಕರ ಸಾ॥ ಕಂಜರಬಾಟ, ಗಾಂಧಿನಗರ, ದಾಂಡೇಲಿ ದಿನಾಂಕ:-05-02-2025 ರಂದು ಬೆಳಿಗ್ಗೆ 12-30 ಗಂಟೆಗೆ ಈತನ ಮನೆಯನ್ನು ಶೋಧನೆ ಮಾಡಿದಾಗ. ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂದಿಸಿದ 1) ಕರ್ನಾಟಕ ಬ್ಯಾಂಕಿನ ಅಕೌಂಟ್ ನಂಬರ 1812500101420501 ನೇದರ ಖಾಲಿ ಚೆಕ್-01 2) ಯೂನಿಯನ್ ಬ್ಯಾಂಕ ಆಫ್ ಇಂಡಿಯಾ ಅಕೌಂಟ ನಂಬರ 012522010001033 ನೇದರ ಖಾಲಿ ಚೆಕ್-01 3) ದಿ ಕೆನರಾ ಡಿಸ್ಟಿಕ್ ಸೆಂಟ್ರಲ್ ಕೊ ಆಪರೇಟಿವ್ ಬ್ಯಾಂಕ್ ಅಕೌಂಟ್ ನಂಬರ -122000084692 ನೇದರ ಬ್ಯಾಂಕಿನ ಖಾಲಿ ಚೆಕ್-01 4) ಕರ್ನಾಟಕ ಬ್ಯಾಂಕ್ ಅ ಅಕೌಂಟ್ ನಂಬರ 1812500101914401 40,000/- ರೂಪಾಯಿ ಅಂತಾ ನಮೂದಿಸಿರುವ ಚೆಕ್-01 5) ಕೆನರಾ ಬ್ಯಾಂಕ್ ಅಕೌಂಟ್ ನಂಬರ 0879108055673 ನೇದರ ಖಾಲಿ ಚೆಕ್-01 ಹೀಗೆ ಒಟ್ಟು 5 ಚೆಕ್ ಗಳು 6) ಸಹಿ ಇರುವ ಖಾಲಿ ಇಂಡಿಮಿನಿಟಿ ಬಾಂಡ -02 7) ಸಹಿ ಇರದ ಇಂಡಿಮಿನಿಟಿ ಬಾಂಡ -01 8) ಹಾಂಡ್ ಲೋನ್ ಅಗ್ರಿಮೆಂಟ್ ಅಂತಾ ಬರೆದಿರುವ ಇಂಡಿಮಿನಿಟಿ ಬಾಂಡ -01 9) ಅಗ್ರಿಮೆಂಟ್ ಅಂತಾ ಬರೆದಿರುವ ಇಂಡಿಮಿನಿಟಿ ಬಾಂಡ -01 ಹೀಗೆ ಒಟ್ಟು 05 ಬಾಂಡುಗಳು 10) ಆರ್.ಸಿ ಕಾರ್ಡಗಳು-04 ಇವುಗಳು ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂದಿಸಿದಂತೆ ಕಂಡು ಬಂದಿದ್ದು ಆಪಾದಿತನು ಮೀಟರ್ ಬಡ್ಡಿ ವ್ಯವಹಾರವನ್ನೆ ಉದ್ಯೋಗವನ್ನಾಗಿ ಮಾಡಿಕೊಂಡು, ಯಾವುದೇ ರೀತಿಯ ಲೈಸೆನ್ಸ್ ಪಡೆಯದೇ, ಮಿತಿಗಿಂತ ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಿರುವ ಬಗ್ಗೆ ಕಂಡುಬಂದ ಹಿನ್ನೆಲೆಯಲ್ಲಿ ಶ್ರೀ ಶ್ರೀನಿವಾಸ ತಂದೆ ಬಾಲಾಸಾಹೇಬ ಸಜ್ಜನ. ಸಹಕಾರ ಸಂಘಗಳ ಸಹಾಯಕ ನಿಬಂದಕರು, ಕಾರವಾರ ಉಪ ವಿಭಾಗ ಕಾರವಾರ ರವರು ನೀಡಿದ ನೀಡಿದ ದೂರಿನಂತೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ದಾಂಡೇಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಡ ಜನರಿಗೆ ಬಡ್ಡಿ ಆಧಾರದ ಮೇಲೆ ಹಣವನ್ನು ನೀಡಿ ಜನರಿಂದ ಬಡ್ಡಿ ಹಣವನ್ನು ವಸೂಲಿ ಮಾಡುತ್ತಾ ಬಂದಿರುವ ಬಗ್ಗೆ ಸಾರ್ವಜನಿಕರು ಮೌಖಿಕವಾಗಿ ತಿಳಿಸಿದ ಮೇರೆಗೆ.
ವಿಜಯ ತಂದೆ ಸಾಯಣ್ಣ ವೆರುಮಲ ಸಾ॥ ಅಂಬೇಡ್ಕರ ಶಾಲೆ ಹತ್ತಿರ. ಮಾರುತಿ ನಗರ, ದಾಂಡೇಲಿ,
ಮೌಲಾ ಕಲಾಲ  ರಿಕ್ಷಾವಾಲಾ. ಸಾ|| ಆಶ್ರಯ ಕಾಲೋನಿ ಗಾಂಧಿ ನಗರ ದಾಂಡೇಲಿ ದೂರು ದಾಖಲಿಸಿ ಕ್ರಮಕೈಗೊಳ್ಳಲಾಗಿದೆ. ವರದಿ: ಮಂಜುನಾಥ್ ಎಫ್ ಹೆಚ್

nazeer ahamad

Recent Posts

ಜಾತ್ರೆಯಲ್ಲಿ ಮಹಿಳೆಯ ಮಂಗಳಸೂತ್ರ ಕಳವು: ಮೂವರು ಆರೋಪಿಗಳ ಬಂಧನ

₹4.50 ಲಕ್ಷ ಮೌಲ್ಯದ ಚಿನ್ನ, ಕೃತ್ಯಕ್ಕೆ ಬಳಸಿದ್ದ ಬೈಕ್ ವಶ ಹಳಿಯಾಳ: ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಹಿಳೆಯೊಬ್ಬರ ಕೊರಳಲ್ಲಿದ್ದ ಚಿನ್ನದ…

11 hours ago

ಬೈಕ್‌ನಲ್ಲಿ ಕರೆದೊಯ್ದು ಹಣ ಕಸಿದು ಜೀವ ಬೆದರಿಕೆ: 24 ಗಂಟೆಯಲ್ಲೇ ಆರೋಪಿ ಬಂಧನ

ಸಿಸಿಟಿವಿ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯ ಪತ್ತೆ; ಬೈಕ್, ಹಣ ವಶ ಹೊನ್ನಾವರ: ಬ್ಯಾಂಕ್‌ನಿಂದ ಹಣ ಪಡೆದು ಹೊರಬಂದ…

11 hours ago

ಕಳ್ಳತನ ತಡೆಗೆ ಮುಂಡಗೋಡ ಪೊಲೀಸರ ಕಟ್ಟೆಚ್ಚರ; ರಾತ್ರಿ ಗಸ್ತು, ವಾಹನ ತಪಾಸಣೆ ಚುರುಕು

ಮುಂಡಗೋಡ ಪಟ್ಟಣ ಸೇರಿ ಬಾಚಣಕಿ, ಪಾಳಾ ಗ್ರಾಮಗಳಲ್ಲಿ ನಿಗಾ; ಸಾರ್ವಜನಿಕರ ಸಹಕಾರಕ್ಕೆ ಮನವಿ ಮುಂಡಗೋಡ: ತಾಲೂಕಿನಲ್ಲಿ ಕಳ್ಳತನ ಸೇರಿದಂತೆ ಅಹಿತಕರ…

11 hours ago

ಹೆದ್ದಾರಿ ಬದಿಯಲ್ಲಿ ಪತಿಯ ಶವ… ರಸ್ತೆ ಅಪಘಾತವೆಂದು ನಂಬಿಸಿದ್ದರು! ತನಿಖೆಯಲ್ಲಿ ಬಯಲಾಯ್ತು ಹೆಂಡತಿಯೇ ಹೆಣೆದ ಭೀಕರ ಕೊಲೆ ಸಂಚು

ತಿರುಪತಿ: ಬೆಳಗ್ಗೆ ಹೆದ್ದಾರಿ ಪಕ್ಕದಲ್ಲಿ ವ್ಯಕ್ತಿಯೊಬ್ಬ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾದಾಗ, ಸ್ಥಳೀಯರು ಹಾಗೂ ಪೊಲೀಸರು ಇದೊಂದು ಭೀಕರ ರಸ್ತೆ…

12 hours ago

ಡೇಟಿಂಗ್ ಆ್ಯಪ್‌ ಮೂಲಕ ‘ಹನಿ ಟ್ರ್ಯಾಪ್’! ಶ್ರೀಮಂತ ಪುರುಷರನ್ನು ಬಲೆಗೆ ಬೀಳಿಸಿ ₹6 ಕೋಟಿಗೂ ಅಧಿಕ ಲೂಟಿ

ಪ್ರಯಾಗ್‌ರಾಜ್: ಡೇಟಿಂಗ್ ಆ್ಯಪ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಶ್ರೀಮಂತ ಪುರುಷರನ್ನು ಹನಿ ಟ್ರ್ಯಾಪ್ ಬಲೆಗೆ ಬೀಳಿಸಿ, ಬಳಿಕ ಬೆದರಿಕೆ…

12 hours ago

ರೇಣುಕಾಸ್ವಾಮಿ ಮೇಲೆ ದರ್ಶನ್‌ ಹಲ್ಲೆ ಆರೋಪ: ಜನನಾಂಗಕ್ಕೆ ಒದ್ದು, ಎದೆ ಮೇಲೆ ಕಾಲಿಟ್ಟು ತುಳಿದಿದ್ದರೆಂದು ಮಾಫಿ ಸಾಕ್ಷಿ ಹೇಳಿಕೆ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು…

12 hours ago