Latest

ಅಕ್ರಮ ಮೀಟ‌ರ್ ಬಡ್ಡಿ ವ್ಯವಹಾರ ಮಾಡುವವರ ಮೇಲೆ ದಾಳಿ; ದಾಂಡೇಲಿ ಪೊಲೀಸರ ಕಾರ್ಯಾಚರಣೆ

ಉತ್ತರ ಕನ್ನಡ/ದಾಂಡೇಲಿ: ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿರುವ ಪೋಲಿಸ್ ಇಲಾಖೆ ಮೀಟರ್ ಬಡ್ಡಿ ದಂಧೆಕೋರರನ್ನು ಹೆಡೆಮುರಿ ಕಟ್ಟಲು ವಿಶೇಷ ತಂಡಗಳನ್ನು ರಚಿಸಿ
ಕಾರ್ಯಾಚರಣೆ ಮಾಡುತ್ತಿದ್ದಾರೆ.
ದಾಂಡೇಲಿ ಶಹರ ಪೊಲೀಸ್ ವ್ಯಾಪ್ತಿಯಲ್ಲಿ ಜೂಜಾಟ ಆಡುತ್ತಿರುವ ಬಗ್ಗೆ ಗುಪ್ತ ಮಾಹಿತಿ ಬಂದ ಮೇರೆಗೆ ಮನೆಯನ್ನು ಸರ್ಚ ಮಾಡಲು ಸರ್ಚ ವಾರೆಂಟ್ ಅನುಮತಿ ಆದೇಶವನ್ನು ಪಡೆದು. ದಿನಾಂಕ:-05-02-2025 ರಂದು ಬೆಳಗ್ಗೆ 10-00 ಗಂಟೆಗೆ ಕಿಶನ ತಂದೆ ಸುಭಾಸ ಕಂಜರಬಾಟ, ಗಾಂಧಿನಗರ. ದಾಂಡೇಲಿ ಈತನ ಮನೆಯನ್ನು ಶೋಧನೆ ಮಾಡಿದಾಗ ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂದಿಸಿದ ಒಟ್ಟು 02 ಖಾಲಿ ಇ-ಸ್ಟಾಂಪ್ ಪೇಪರ್ ಇದ್ದು. ಇ-ಸ್ಟಾಂಪ್ ಪೇಪರ್ಗಳು ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಂಡು ಬಂದಿದ್ದು, ಆಪಾದಿತನು ಮೀಟರ್ ಬಡ್ಡಿ ವ್ಯವಹಾರವನ್ನೆ ಉದ್ಯೋಗವನ್ನಾಗಿ ಮಾಡಿಕೊಂಡು, ಯಾವದೇ ರೀತಿಯ ಲೈಸೆನ್ಸ್ ಪಡೆಯದೇ, ಮಿತಿಗಿಂತ ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಿರುವ ಬಗ್ಗೆ ಕಂಡು ಬಂದ ಹಿನ್ನೆಲೆಯಲ್ಲಿ ಶ್ರೀ ಶ್ರೀನಿವಾಸ ತಂದೆ ಬಾಲಾಸಾಹೇಬ ಸಜ್ಜನ, ಸಹಕಾರ ಸಂಘಗಳ ಸಹಾಯಕ ನಿಭಂದಕರು, ಕಾರವಾರ ಉಪ ವಿಭಾಗ ಕಾರವಾರ ರವರು ನೀಡಿದ ನೀಡಿದ ದೂರಿನಂತೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ವಿನೋದ ತಂದೆ ಸುರೇಶ ಕಂಜರಬಾಟ  ಮೀನೇಕರ ಸಾ॥ ಕಂಜರಬಾಟ, ಗಾಂಧಿನಗರ, ದಾಂಡೇಲಿ ದಿನಾಂಕ:-05-02-2025 ರಂದು ಬೆಳಿಗ್ಗೆ 12-30 ಗಂಟೆಗೆ ಈತನ ಮನೆಯನ್ನು ಶೋಧನೆ ಮಾಡಿದಾಗ. ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂದಿಸಿದ 1) ಕರ್ನಾಟಕ ಬ್ಯಾಂಕಿನ ಅಕೌಂಟ್ ನಂಬರ 1812500101420501 ನೇದರ ಖಾಲಿ ಚೆಕ್-01 2) ಯೂನಿಯನ್ ಬ್ಯಾಂಕ ಆಫ್ ಇಂಡಿಯಾ ಅಕೌಂಟ ನಂಬರ 012522010001033 ನೇದರ ಖಾಲಿ ಚೆಕ್-01 3) ದಿ ಕೆನರಾ ಡಿಸ್ಟಿಕ್ ಸೆಂಟ್ರಲ್ ಕೊ ಆಪರೇಟಿವ್ ಬ್ಯಾಂಕ್ ಅಕೌಂಟ್ ನಂಬರ -122000084692 ನೇದರ ಬ್ಯಾಂಕಿನ ಖಾಲಿ ಚೆಕ್-01 4) ಕರ್ನಾಟಕ ಬ್ಯಾಂಕ್ ಅ ಅಕೌಂಟ್ ನಂಬರ 1812500101914401 40,000/- ರೂಪಾಯಿ ಅಂತಾ ನಮೂದಿಸಿರುವ ಚೆಕ್-01 5) ಕೆನರಾ ಬ್ಯಾಂಕ್ ಅಕೌಂಟ್ ನಂಬರ 0879108055673 ನೇದರ ಖಾಲಿ ಚೆಕ್-01 ಹೀಗೆ ಒಟ್ಟು 5 ಚೆಕ್ ಗಳು 6) ಸಹಿ ಇರುವ ಖಾಲಿ ಇಂಡಿಮಿನಿಟಿ ಬಾಂಡ -02 7) ಸಹಿ ಇರದ ಇಂಡಿಮಿನಿಟಿ ಬಾಂಡ -01 8) ಹಾಂಡ್ ಲೋನ್ ಅಗ್ರಿಮೆಂಟ್ ಅಂತಾ ಬರೆದಿರುವ ಇಂಡಿಮಿನಿಟಿ ಬಾಂಡ -01 9) ಅಗ್ರಿಮೆಂಟ್ ಅಂತಾ ಬರೆದಿರುವ ಇಂಡಿಮಿನಿಟಿ ಬಾಂಡ -01 ಹೀಗೆ ಒಟ್ಟು 05 ಬಾಂಡುಗಳು 10) ಆರ್.ಸಿ ಕಾರ್ಡಗಳು-04 ಇವುಗಳು ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂದಿಸಿದಂತೆ ಕಂಡು ಬಂದಿದ್ದು ಆಪಾದಿತನು ಮೀಟರ್ ಬಡ್ಡಿ ವ್ಯವಹಾರವನ್ನೆ ಉದ್ಯೋಗವನ್ನಾಗಿ ಮಾಡಿಕೊಂಡು, ಯಾವುದೇ ರೀತಿಯ ಲೈಸೆನ್ಸ್ ಪಡೆಯದೇ, ಮಿತಿಗಿಂತ ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಿರುವ ಬಗ್ಗೆ ಕಂಡುಬಂದ ಹಿನ್ನೆಲೆಯಲ್ಲಿ ಶ್ರೀ ಶ್ರೀನಿವಾಸ ತಂದೆ ಬಾಲಾಸಾಹೇಬ ಸಜ್ಜನ. ಸಹಕಾರ ಸಂಘಗಳ ಸಹಾಯಕ ನಿಬಂದಕರು, ಕಾರವಾರ ಉಪ ವಿಭಾಗ ಕಾರವಾರ ರವರು ನೀಡಿದ ನೀಡಿದ ದೂರಿನಂತೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ದಾಂಡೇಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಡ ಜನರಿಗೆ ಬಡ್ಡಿ ಆಧಾರದ ಮೇಲೆ ಹಣವನ್ನು ನೀಡಿ ಜನರಿಂದ ಬಡ್ಡಿ ಹಣವನ್ನು ವಸೂಲಿ ಮಾಡುತ್ತಾ ಬಂದಿರುವ ಬಗ್ಗೆ ಸಾರ್ವಜನಿಕರು ಮೌಖಿಕವಾಗಿ ತಿಳಿಸಿದ ಮೇರೆಗೆ.
ವಿಜಯ ತಂದೆ ಸಾಯಣ್ಣ ವೆರುಮಲ ಸಾ॥ ಅಂಬೇಡ್ಕರ ಶಾಲೆ ಹತ್ತಿರ. ಮಾರುತಿ ನಗರ, ದಾಂಡೇಲಿ,
ಮೌಲಾ ಕಲಾಲ  ರಿಕ್ಷಾವಾಲಾ. ಸಾ|| ಆಶ್ರಯ ಕಾಲೋನಿ ಗಾಂಧಿ ನಗರ ದಾಂಡೇಲಿ ದೂರು ದಾಖಲಿಸಿ ಕ್ರಮಕೈಗೊಳ್ಳಲಾಗಿದೆ. ವರದಿ: ಮಂಜುನಾಥ್ ಎಫ್ ಹೆಚ್

nazeer ahamad

Recent Posts

ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ತಕ್ಷಣ ಶಾಸಕ ಸ್ಥಾನ ರದ್ದು, ಮುಂದೇನು?

ಧಾರವಾಡ ಜಿಪಂ ಮಾಜಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್…

6 hours ago

ಪೆಟ್ರೋಲ್ ಬಂಕ್ ನಕಾಶೆ ಅಪ್ಲೋಡ್‌ಗೆ ಹಣ ಬೇಡಿಕೆ – ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ವಿಜಯಪುರ ಜಿಲ್ಲೆಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಸಿಲುಕಿರುವ ಘಟನೆ ನಡೆದಿದೆ. ಪೆಟ್ರೋಲ್ ಬಂಕ್ ಜಾಗದ…

6 hours ago

ಖಾತೆಗಾಗಿ ಲಂಚ ಬೇಡಿಕೆ: ನೆಲಮಂಗಲದ ಕಳಲುಘಟ್ಟ ಪಿಡಿಓ ಲೋಕಾಯುಕ್ತ ಬಲೆಗೆ

ನಿವೇಶನದ ಖಾತೆ ಮಾಡಿಕೊಡಲು ಲಂಚ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯಿತಿ ಪಿಡಿಓ ಲೋಕಾಯುಕ್ತ…

9 hours ago

ವಿಷು ಪೋಸ್ಟರ್ ವಿವಾದ: ಶ್ರೀಕೃಷ್ಣನ ಪಕ್ಕದಲ್ಲಿ ಚಿಕನ್ ಚಿತ್ರ – ರೆಸ್ಟೋರೆಂಟ್ ಮಾಲೀಕ ಆರೆಸ್ಟ್.!!!

ಕೇರಳದ ಅಲೆಪ್ಪಿ ಜಿಲ್ಲೆಯ ಚೆರ್ತಲಾದಲ್ಲಿ ವಿಷು ಹಬ್ಬದ ಶುಭಾಶಯ ಪೋಸ್ಟರ್ ಒಂದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಪೋಸ್ಟರ್‌ನಲ್ಲಿ ಶ್ರೀಕೃಷ್ಣನ…

11 hours ago

ಹಾರ್ಮುಝ್ ಜಲಸಂಧಿ ಮತ್ತೆ ತೆರೆಯಿತು: ಯುದ್ಧ ವಿರಾಮದ ಬಳಿಕ ಜಾಗತಿಕ ತೈಲ ಮಾರುಕಟ್ಟೆಗೆ ನೆಮ್ಮದಿ

ಇರಾನ್ ಮತ್ತು ಲೆಬನಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಶಮನವಾಗುತ್ತಿರುವ ಹಿನ್ನೆಲೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹಾರ್ಮುಝ್ ಜಲಸಂಧಿಯನ್ನು ಮತ್ತೆ ಎಲ್ಲಾ…

11 hours ago

ಇನ್‌ಸ್ಟಾಗ್ರಾಮ್ ಹನಿಟ್ರ್ಯಾಪ್: 14 ವರ್ಷದ ಬಾಲಕ ಅಪಹರಣ – 1 ಕೋಟಿ ಸುಲಿಗೆ ಯತ್ನ, ಸಂಬಂಧಿಯೇ ಮಾಸ್ಟರ್ ಮೈಂಡ್!

ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕನನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮೂಲಕ ನಡೆದ ಅಪಹರಣ ಪ್ರಕರಣ ಭಾರೀ ಸಂಚಲನ ಮೂಡಿಸಿದೆ. 14…

11 hours ago