Crime

ಐಶ್ವರ್ಯ ಗೌಡ ಮತ್ತೊಂದು ಪ್ರಕರಣ ಬೆಳಕಿಗೆ: ವೈದ್ಯನಿಗೆ 5 ಕೋಟಿ ದೋಖಾ

ಮಾಜಿ ಸಂಸದ ಡಿ.ಕೆ. ಸುರೆಶ್ ಅವರ ಸಹೋದರಿ ಎಂದು ದುಷ್ಕೃತ್ಯ ಮಾಡುತ್ತಿದ್ದ ಐಶ್ವರ್ಯ ಗೌಡ ಇದೀಗ ಮತ್ತೊಂದು ದೊಡ್ಡ ವಂಚನೆ ಪ್ರಕರಣದಲ್ಲಿ ಬಂಧಿತಳಾಗಿದ್ದಾಳೆ. ಆರ್.ಆರ್.ನಗರ ಠಾಣೆಯಲ್ಲಿ ಸಲ್ಲಿಸಿರುವ ದೂರುನಂತರ, ಈ ಬಾರಿ ಐಶ್ವರ್ಯ ಗೌಡ ಮತ್ತು ಅವಳ ಪತಿ ಹರೀಶ್ ಕೆ.ಎನ್. ಎಂಬವರ ವಿರುದ್ಧ 5.3 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬರುತ್ತಿದೆ.
ಐಶ್ವರ್ಯ ಗೌಡ, ಪ್ರತಿ ಸಮಯದಲ್ಲಿಯೂ ಶ್ರೀಮಂತರನ್ನು ಟಾರ್ಗೆಟ್ ಮಾಡಿ ವಂಚನೆ ಮಾಡುತ್ತಿದ್ದಳು. ಇದೀಗ, ವೈದ್ಯೆ ಡಾ. ಮಂಜುಳಾ ಪಾಟೀಲ್ ಅವರ ಮೇಲೆ ಆಕೆಯು ಬಲವಂತವಾಗಿ ಹಣ ವಶಪಡಿಸಿಕೊಂಡಿರುವುದಾಗಿ ದೂರು ನೀಡಿದ್ದಾರೆ.
2022ರಿಂದ 2024 ರವರೆಗೆ ಐಶ್ವರ್ಯ ಗೌಡ ಮತ್ತು ಅವಳ ಪತಿ, ಇಬ್ಬರೂ ಸೇರಿ ವೈದ್ಯೆ ಡಾ. ಮಂಜುಳಾ ಪಾಟೀಲ್ ಅವರನ್ನು ನಂಬಿಸಿದ್ದರೆಂದು ತಿಳಿದು ಬಂದಿದೆ. ಐಶ್ವರ್ಯವು ತನ್ನನ್ನು ಡಿ.ಕೆ. ಸುರೆಶ್ ಅವರ ತಂಗಿ ಎಂದು ಪರಿಚಯಿಸಿಕೊಂಡು, ರಿಯಲ್ ಎಸ್ಟೇಟ್, ಗೋಲ್ಡ್ ಬ್ಯುಸಿನೆಸ್ ಮತ್ತು ಕೆಸಿನೋ ವ್ಯಾಪಾರದ ಬಗ್ಗೆ ಅನೇಕ ಭರವಸೆಗಳನ್ನು ನೀಡಿದ್ದಾಳೆ.
ಹಾಗೆ ಹೂಡಿಕೆಗಳು ಮತ್ತು ಇನ್ನಿತರ ಕಾರಣಗಳನ್ನು ತಂದು, 2.52 ಕೋಟಿ ರೂ. ಹಣ ಮತ್ತು 2.50 ಕೋಟಿ ರೂಪಾಯಿ ಮೌಲ್ಯದ 2 ಕೆ.ಜಿ 350 ಗ್ರಾಂ ಚಿನ್ನಾಭರಣಗಳನ್ನು ಪಡೆದಿದ್ದಳು. ಆದರೆ, ನಂತರ ಆಕೆಯು ಹಣವನ್ನು ಹಿಂದಿರುಗಿಸದೆ “ಹಣದ ಬಗ್ಗೆ ದೂರು ಅಥವಾ ಸಾಕ್ಷಿ ಏನಾದರೂ ಹೇಳಿದ್ರೆ ಅಷ್ಟೆ ಗೊತ್ತಲ್ಲಾ? ನಾನು ಡಿಕೆ ಸುರೇಶ್ ತಂಗಿ ನಿನ್ನ ಹಣ ವಾಪಸ್ ಕೊಡುವುದಿಲ್ಲ” ಎಂದು ಬೆದರಿಕೆ ಹಾಕಿದಳು.
ಈ ಪ್ರಕರಣ ಬೆಳಕಿಗೆ ಬರುವುದರೊಂದಿಗೆ, ವೈದ್ಯೆ ಡಾ. ಮಂಜುಳಾ ಪಾಟೀಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಐಶ್ವರ್ಯ ಗೌಡ, ಅವಳ ಪತಿ ಹಾಗೂ ಮತ್ತಿತರರು ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.

nazeer ahamad

Recent Posts

‍ರೀಲ್ಸ್ ಮಾಡುವ ಹುಚ್ಚು, ಕರೆದಾಗ ಬಂದು ಜೊತೆಗೆ ಮಲಗುತ್ತಿರಲಿಲ್ಲ ಎಂದು ಪತ್ನಿಯನ್ನು ಕೊಂದ ಪತಿ

ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…

2 days ago

ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27ರ ಯುವತಿ ಸಾವು; ಉಡುಪಿಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ, ತನಿಖೆ ಚುರುಕು

ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…

2 days ago

‘ಅಂದು ನನ್ನೊಂದಿಗೆ ಮಲಗಲು ಕೇಳಿದ್ದು ನೀವೇ ತಾನೇ?’ ನಿರ್ಮಾಪಕನಿಗೆ ನಟಿ ಚಾಂದಿನಿ ಚೌಧರಿ ಶಾಕ್!

ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…

2 days ago

ಮದುವೆಯಾಗಿ 4 ದಿನಕ್ಕೆ ಮಾಜಿ ಪ್ರೇಮಿಯೊಂದಿಗೆ ಹೋಟೆಲ್ ನಲ್ಲಿ ಪತ್ನಿ; ಪತಿಯ ಕೈಗೆ ವಿಡಿಯೋ…!

ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…

2 days ago

ಪತ್ನಿಯನ್ನು ಕೊಂದು ಶವ ವಿಲೇವಾರಿಗೆ ಸ್ನೇಹಿತನ ನೆರವು ಕೇಳಿದ ಪತಿ; ಜಾಣತನದಿಂದ ಪೊಲೀಸರಿಗೆ ಒಪ್ಪಿಸಿದ ಗೆಳೆಯ!

ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…

2 days ago

ಹಂಪಿಯಲ್ಲಿ ಅಕ್ರಮ ಹೋಂಸ್ಟೇ, ವಾಣಿಜ್ಯ ಚಟುವಟಿಕೆ ಆರೋಪ: 54 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸ್ವಯಂಪ್ರೇರಿತ ದೂರು

ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…

2 days ago