ಮಾಜಿ ಸಂಸದ ಡಿ.ಕೆ. ಸುರೆಶ್ ಅವರ ಸಹೋದರಿ ಎಂದು ದುಷ್ಕೃತ್ಯ ಮಾಡುತ್ತಿದ್ದ ಐಶ್ವರ್ಯ ಗೌಡ ಇದೀಗ ಮತ್ತೊಂದು ದೊಡ್ಡ ವಂಚನೆ ಪ್ರಕರಣದಲ್ಲಿ ಬಂಧಿತಳಾಗಿದ್ದಾಳೆ. ಆರ್.ಆರ್.ನಗರ ಠಾಣೆಯಲ್ಲಿ ಸಲ್ಲಿಸಿರುವ ದೂರುನಂತರ, ಈ ಬಾರಿ ಐಶ್ವರ್ಯ ಗೌಡ ಮತ್ತು ಅವಳ ಪತಿ ಹರೀಶ್ ಕೆ.ಎನ್. ಎಂಬವರ ವಿರುದ್ಧ 5.3 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬರುತ್ತಿದೆ.
ಐಶ್ವರ್ಯ ಗೌಡ, ಪ್ರತಿ ಸಮಯದಲ್ಲಿಯೂ ಶ್ರೀಮಂತರನ್ನು ಟಾರ್ಗೆಟ್ ಮಾಡಿ ವಂಚನೆ ಮಾಡುತ್ತಿದ್ದಳು. ಇದೀಗ, ವೈದ್ಯೆ ಡಾ. ಮಂಜುಳಾ ಪಾಟೀಲ್ ಅವರ ಮೇಲೆ ಆಕೆಯು ಬಲವಂತವಾಗಿ ಹಣ ವಶಪಡಿಸಿಕೊಂಡಿರುವುದಾಗಿ ದೂರು ನೀಡಿದ್ದಾರೆ.
2022ರಿಂದ 2024 ರವರೆಗೆ ಐಶ್ವರ್ಯ ಗೌಡ ಮತ್ತು ಅವಳ ಪತಿ, ಇಬ್ಬರೂ ಸೇರಿ ವೈದ್ಯೆ ಡಾ. ಮಂಜುಳಾ ಪಾಟೀಲ್ ಅವರನ್ನು ನಂಬಿಸಿದ್ದರೆಂದು ತಿಳಿದು ಬಂದಿದೆ. ಐಶ್ವರ್ಯವು ತನ್ನನ್ನು ಡಿ.ಕೆ. ಸುರೆಶ್ ಅವರ ತಂಗಿ ಎಂದು ಪರಿಚಯಿಸಿಕೊಂಡು, ರಿಯಲ್ ಎಸ್ಟೇಟ್, ಗೋಲ್ಡ್ ಬ್ಯುಸಿನೆಸ್ ಮತ್ತು ಕೆಸಿನೋ ವ್ಯಾಪಾರದ ಬಗ್ಗೆ ಅನೇಕ ಭರವಸೆಗಳನ್ನು ನೀಡಿದ್ದಾಳೆ.
ಹಾಗೆ ಹೂಡಿಕೆಗಳು ಮತ್ತು ಇನ್ನಿತರ ಕಾರಣಗಳನ್ನು ತಂದು, 2.52 ಕೋಟಿ ರೂ. ಹಣ ಮತ್ತು 2.50 ಕೋಟಿ ರೂಪಾಯಿ ಮೌಲ್ಯದ 2 ಕೆ.ಜಿ 350 ಗ್ರಾಂ ಚಿನ್ನಾಭರಣಗಳನ್ನು ಪಡೆದಿದ್ದಳು. ಆದರೆ, ನಂತರ ಆಕೆಯು ಹಣವನ್ನು ಹಿಂದಿರುಗಿಸದೆ “ಹಣದ ಬಗ್ಗೆ ದೂರು ಅಥವಾ ಸಾಕ್ಷಿ ಏನಾದರೂ ಹೇಳಿದ್ರೆ ಅಷ್ಟೆ ಗೊತ್ತಲ್ಲಾ? ನಾನು ಡಿಕೆ ಸುರೇಶ್ ತಂಗಿ ನಿನ್ನ ಹಣ ವಾಪಸ್ ಕೊಡುವುದಿಲ್ಲ” ಎಂದು ಬೆದರಿಕೆ ಹಾಕಿದಳು.
ಈ ಪ್ರಕರಣ ಬೆಳಕಿಗೆ ಬರುವುದರೊಂದಿಗೆ, ವೈದ್ಯೆ ಡಾ. ಮಂಜುಳಾ ಪಾಟೀಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಐಶ್ವರ್ಯ ಗೌಡ, ಅವಳ ಪತಿ ಹಾಗೂ ಮತ್ತಿತರರು ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…
ಬೆಳ್ತಂಗಡಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ…
ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು,…
ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ…
ಸೋಶಿಯಲ್ ಮೀಡಿಯಾದಲ್ಲಿ ಆರಂಭವಾದ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ಲಿವ್-ಇನ್…
ಬೆಂಗಳೂರು: ಶಸ್ತ್ರಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಚಿನ್ನಾಭರಣ ಕಳವು ಮಾಡಿದ್ದ ಆರೋಪದ ಮೇಲೆ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯನ್ನು ಹೆಣ್ಣೂರು…