ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದಲ್ಲಿ ವೈದ್ಯನ ಅಜಾಗರೂಕತೆಯಿಂದ ಆರು ತಿಂಗಳ ಹಸುಗೂಸು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. ಕೇವಲ ಕಿವಿ ಚುಚ್ಚಿಸೋಕೆ ಆಸ್ಪತ್ರೆಗೆ ಬಂದಿದ್ದ ಪುಟ್ಟ ಕಂದ ತನ್ನ ಪ್ರಾಣ ಕಳೆದುಕೊಳ್ಳಬೇಕಾದ ಅನಿರೀಕ್ಷಿತ ದುರಂತ ಪೋಷಕರನ್ನು ಆಘಾತಕ್ಕೀಡು ಮಾಡಿದೆ.
ಅನಾಸ್ಥೇಷಿಯಾ ಸ್ಪಂದನೆ: ಕ್ಷಣಾರ್ಧದಲ್ಲಿ ಆಘಾತ
ಹಂಗಳ ಗ್ರಾಮದ ನಿವಾಸಿಗಳಾದ ಆನಂದ್ ಮತ್ತು ಶುಭಮಾನಸ ದಂಪತಿಯ ಮಗುವಾದ ಪ್ರಖ್ಯಾತ್ಗೆ ಕಿವಿ ಚುಚ್ಚಿಸೋ ಕಾರ್ಯ ಮಾಡಿಸಬೇಕೆಂಬ ಉದ್ದೇಶದೊಂದಿಗೆ ಪೋಷಕರು ಬೊಮ್ಮಲಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಮಗು ತುಂಬಾ ಚಿಕ್ಕದಾದ ಕಾರಣ ನೋವಿನಿಂದ ತೊಂದರೆ ಆಗಬಾರದು ಎಂಬ ಕಾರಣಕ್ಕೆ ವೈದ್ಯನು ಬೆಂಟ್ ಇಂಜೆಕ್ಷನ್ (ಅನಾಸ್ಥೇಷಿಯಾ) ನೀಡಿದನು. ಆದರೆ ಇಂಜೆಕ್ಷನ್ ನೀಡಿದ ಕೆಲವೇ ನಿಮಿಷಗಳಲ್ಲಿ ಮಗುವಿಗೆ ತೀವ್ರ ಪ್ರತಿಕ್ರಿಯೆ (ಆಲರ್ಜಿಕ್ ರಿಯಾಕ್ಷನ್) ಆಗಿದ್ದು, ತಕ್ಷಣವೇ ಕೈಕಾಲು ಜಡವಾಗುವ ಲಕ್ಷಣಗಳು ಗೋಚರಿಸಿವೆ.
ತಕ್ಷಣದ ಚಿಕಿತ್ಸೆಯ ಯತ್ನ ವಿಫಲ
ಸ್ಥಳದಲ್ಲೇ ಮಗುವಿನ ಆರೋಗ್ಯ ಹದಗೆಡುತ್ತಿದಂತೆಯೇ ವೈದ್ಯರು ತಕ್ಷಣವೇ ಅದನ್ನು ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಗೆ ರವಾನಿಸಿದರು. ಆದರೆ ದುರದೃಷ್ಟವಶಾತ್, ಆಸ್ಪತ್ರೆ ತಲುಪುವ ಮುನ್ನವೇ ಮಗು ಉಸಿರು ನಿಲ್ಲಿಸಿತು. ಈ ಘಟನೆಯಿಂದ ಪೋಷಕರು ಮತ್ತು ಸಂಬಂಧಿಕರು ಆಕ್ರೋಶಗೊಂಡಿದ್ದು, ವೈದ್ಯನ ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿದೆ ಎಂದು ಆರೋಪಿಸಿದರು.
ಆಕ್ರೋಶ ಹಾಗೂ ಆಸ್ಪತ್ರೆಯಲ್ಲಿ ಗಲಾಟೆ
ಮಗುವಿನ ಸಾವಿನಿಂದ ಪೋಷಕರು ಮತ್ತು ಗ್ರಾಮಸ್ಥರು ಕೋಪಗೊಂಡು ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಅಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳನ್ನು ಒಳಗೆ ಪ್ರವೇಶಿಸಲು ನಿರ್ಬಂಧಿಸಿ, ಬಾಗಿಲು ಹಾಕಿ ಸಭೆ ನಡೆಸಿದ ಘಟನೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು. ಪ್ರತಿಭಟನಾಕಾರರು ಮಾಧ್ಯಮವನ್ನು ಒಳಬಿಡಬೇಕು ಎಂದು ಒತ್ತಾಯಿಸಿದ ನಂತರವೇ ಪೊಲೀಸರ ಹಸ್ತಕ್ಷೇಪದಿಂದ ಮಾಧ್ಯಮ ಪ್ರತಿನಿಧಿಗಳನ್ನು ಒಳಗೆ ಬಿಡಲಾಯಿತು.
ಪೊಲೀಸರ ತನಿಖೆ ಮತ್ತು ವೈದ್ಯಕೀಯ ವರದಿ ನಿರೀಕ್ಷೆ
ಈ ಘಟನೆಗೆ ಸಂಬಂಧಿಸಿದಂತೆ ಕುಟುಂಬಸ್ಥರು ವೈದ್ಯರ ವಿರುದ್ಧ ದೂರು ನೀಡಿದ್ದು, ಗುಂಡ್ಲುಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ಅಲಂಪಾಷಾ, “ಘಟನೆಯ ಕುರಿತು ತನಿಖೆ ನಡೆಸಲಾಗುತ್ತದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.
ಕೇವಲ ಕಿವಿ ಚುಚ್ಚಿಸೋಕೆ ಹೋಗಿದ್ದ ಮಗುವಿನ ಕರಾಳ ಅಂತ್ಯ
ನೋವು ತಪ್ಪಿಸಲು ನೀಡಿದ ಎಂಜೆಕ್ಷನ್ ಬದುಕನ್ನೇ ಕಿತ್ತುಕೊಂಡ ದುರ್ಘಟನೆ ಪೋಷಕರಿಗೆ ತಾಳಲಾರಾದ ಆಘಾತ ತಂದಿದೆ. ಈ ಪ್ರಕರಣದ ತನಿಖೆಯಿಂದ ನಿಜನಿಜಾಂತರ ಬೆಳಕಿಗೆ ಬರಬೇಕಾದ್ದು ಮಾತ್ರವಲ್ಲ, ಇಂತಹ ದುರಂತಗಳು ಪುನರಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ನಾಸಿಕ್ನ ಟಿಸಿಎಸ್ ಸಂಬಂಧಿತ ಮತಾಂತರ ಮತ್ತು ಕಿರುಕುಳ ಪ್ರಕರಣದ ತನಿಖೆಯಲ್ಲಿ ಹೊಸದಾಗಿ ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿವೆ. ಬಿಪಿಒ ಘಟಕದಲ್ಲಿ ಎಚ್ಆರ್…
ವಿಜಯನಗರ:- ಗೃಹಲಕ್ಷ್ಮಿ ಯೋಜನೆ ಹಣವನ್ನು ಕೂಡಿಟ್ಟು ಮಹಿಳೆಯೊಬ್ಬರು ಸಣ್ಣದಾಗಿ ಐಸ್ ಕ್ರೀಮ್ ಅಂಗಡಿ ತೆರೆದು ಬದುಕು ಕಟ್ಟಿಕೊಂಡಿದ್ದಾರೆ.ಕೊಟ್ಟೂರು ತಾಲ್ಲೂಕಿನ ಹರಾಳು…
ಧಾರವಾಡ ಜಿಪಂ ಮಾಜಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್…
ವಿಜಯಪುರ ಜಿಲ್ಲೆಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಸಿಲುಕಿರುವ ಘಟನೆ ನಡೆದಿದೆ. ಪೆಟ್ರೋಲ್ ಬಂಕ್ ಜಾಗದ…
ನಿವೇಶನದ ಖಾತೆ ಮಾಡಿಕೊಡಲು ಲಂಚ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯಿತಿ ಪಿಡಿಓ ಲೋಕಾಯುಕ್ತ…
ಕೇರಳದ ಅಲೆಪ್ಪಿ ಜಿಲ್ಲೆಯ ಚೆರ್ತಲಾದಲ್ಲಿ ವಿಷು ಹಬ್ಬದ ಶುಭಾಶಯ ಪೋಸ್ಟರ್ ಒಂದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಪೋಸ್ಟರ್ನಲ್ಲಿ ಶ್ರೀಕೃಷ್ಣನ…