Latest

ನಟ ಪ್ರಭಾಸ್ ಫೇಸ್‌ಬುಕ್ ಖಾತೆ ಹ್ಯಾಕ್!

ಟಾಲಿವುಡ್​​ ನಟ ಪ್ರಭಾಸ್ ಅವರ ಅಧಿಕೃತ ಫೇಸ್‌ಬುಕ್ ಖಾತೆಯನ್ನು ಕಿಡಿಗೇಡಿಗಳು ಗುರುವಾರ ತಡರಾತ್ರಿ ಹ್ಯಾಕ್ ಮಾಡಿದ್ದಾರೆ. ಈ ಕುರಿತಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಾಕಿಕೊಂಡು ಪ್ರಭಾಸ್ ಅಪ್​ಡೇಟ್ ನೀಡಿದ್ದಾರೆ. ಕಿಡಿಗೇಡಿಗಳು ಪ್ರಭಾಸ್ ಫೇಸ್‌ಬುಕ್ ಅನ್ನು ಹ್ಯಾಕ್ ಮಾಡಿ ಎರಡು ವಿಡಿಯೋಗಳನ್ನು ಶೇರ್ ಮಾಡಿದ್ದಾರೆ.
ಅದರಲ್ಲಿ ಒಂದು ವಿಡಿಯೋಗೆ ‘ ನತದೃಷ್ಟ ಮನುಷ್ಯರು’ ಹಾಗೂ ಇನ್ನೊಂದು ವಿಡಿಯೋಗೆ ‘ವಿಶ್ವದಾದ್ಯಂತ ಚೆಂಡು ವಿಫಲಗೊಳ್ಳುತ್ತೆ’ ಎಂದು ಕ್ಯಾಪ್ಷನ್ ಕೊಡಲಾಗಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಪ್ರಭಾಸ್ ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿ ‘ಎಲ್ಲರಿಗೂ ನಮಸ್ಕಾರ, ನನ್ನ ಫೇಸ್‌ಬುಕ್ ಖಾತೆಯನ್ನು ಹ್ಯಾಕ್​​ ಮಾಡಲಾಗಿದೆ. ನಮ್ಮ ತಂಡವು ಇದನ್ನು ಪರಿಹರಿಸುತ್ತಿದೆ’ ಎಂದು ಬರೆದಿದ್ದಾರೆ.

ಕೆಲವು ಇಂಟರ್ನೆಟ್ ಬಳಕೆದಾರರು ಪೋಸ್ಟ್‌ಗಳಿಗೆ ಕಾಮೆಂಟ್ ಮಾಡುವ ಮೂಲಕವಾಗಿ ಆತಂಕ ವ್ಯಕ್ತ ಪಡಿಸಿದ್ದರು. ನಂತರ ತಂಡ ಈ ಖಾತೆಯನ್ನು ಮರುಸ್ಥಾಪಿಸುವುದರ ಜೆತೆಗೆ ಕಾಮೆಂಟ್‌ ಹಾಗೂ ಕಿಡಿಗೇಡಿಗಳು ಹಾಕಿರುವ ಪೋಸ್ಟ್‌ಗಳನ್ನು ತೆಗೆದುಹಾಕಿದ್ದಾರೆ. ಈಗ ಅವರ ಖಾತೆಯನ್ನು ಹ್ಯಾಕರ್ಸ್​​ಗಳ ಕೈನಿಂದ ಮರಳಿ ಪಡೆಯಲಾಗಿದೆ.

ಭ್ರಷ್ಟರ ಬೇಟೆ

Recent Posts

ಬೆಂಗಳೂರು ಡ್ರಗ್ಸ್ ಜಾಲದ ಮೇಲೆ ಭಾರೀ ದಾಳಿ: ₹36 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ, 16 ಮಂದಿ ಬಂಧನ

ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸರು ಭರ್ಜರಿ ಕಾರ್ಯಾಚರಣೆ ಮುಂದುವರೆಸಿದ್ದು, ನಾಲ್ವರು ವಿದೇಶಿಯರು ಸೇರಿದಂತೆ ಒಟ್ಟು 16 ಮಂದಿಯನ್ನು…

2 hours ago

ಕೊಡಗು ಜೈಲಿನಲ್ಲಿ ವಿಚಾರಣಾಧೀನ ಕೈದಿಯ ಸಾವು: ‘ಹನಿಟ್ರ್ಯಾಪ್‌, ಸುಳ್ಳು ಪ್ರಕರಣ’ ಆರೋಪಗಳಿಂದ ಪ್ರಕರಣಕ್ಕೆ ಹೊಸ ತಿರುವು

ಕೊಡಗು ಜಿಲ್ಲಾ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ 68 ವರ್ಷದ ಚೆಂಗಪ್ಪ ಅವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸುಮಾರು 20…

2 hours ago

ಶಿವಾಜಿನಗರ ಬೌರಿಂಗ್ ಆಸ್ಪತ್ರೆ ದುರಂತ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಿಎಂ ಸಿದ್ದರಾಮಯ್ಯ ಕಿಡಿ, ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ

ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆ ಆವರಣದ ಗೋಡೆ ಕುಸಿತದಿಂದ ಸಂಭವಿಸಿದ ಭೀಕರ ದುರಂತದ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,…

2 hours ago

ಭ್ರೂಣಲಿಂಗ ಪತ್ತೆ–ಅಕ್ರಮ ಸ್ಕ್ಯಾನಿಂಗ್ ದಂಧೆ ಭಂಡಾಫೋಡ: ಕೆ.ಆರ್.ಪೇಟೆಯಲ್ಲಿ ಮೂವರು ವೈದ್ಯರು ಬಂಧನ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಅಕ್ರಮ ಸ್ಕ್ಯಾನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರನ್ನು ಬಂಧಿಸಿರುವ ಘಟನೆ…

17 hours ago

₹15 ಲಕ್ಷ ಲಂಚ ಸ್ವೀಕರಿಸುವ ವೇಳೆ ಕೆಎಎಸ್ ಅಧಿಕಾರಿ ಬಲೆಗೆ; ಚಾಲಕನೊಂದಿಗೆ ಬಂಧನ

ಭೂಸ್ವಾಧೀನ ಸಂಬಂಧಿತ ಬಾಕಿ ಕಂದಾಯ ಪ್ರಕರಣವನ್ನು ಪರಿಹರಿಸಲು ಲಂಚ ಪಡೆಯುತ್ತಿದ್ದ ವೇಳೆ ಕೆಎಎಸ್ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಘಟನೆ…

17 hours ago

ಪತ್ನಿಯ ದ್ರೋಹ ಗೊತ್ತಿದ್ದರೂ ಮಕ್ಕಳಿಗಾಗಿ ಸಹನೆ; ವಿಚ್ಛೇದನವೇ? ಹೊಸ ಬದುಕೇ? ಪತಿಯ ಪ್ರಶ್ನೆ ವೈರಲ್

ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಜೀವನ ಸಣ್ಣಪುಟ್ಟ ವಿಚಾರಗಳಿಗೂ ಕುಸಿಯುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಹೊಂದಾಣಿಕೆಯ ಕೊರತೆ, ಅಕ್ರಮ ಸಂಬಂಧಗಳು ಸೇರಿದಂತೆ ಹಲವು…

19 hours ago