ಜೀವನದಲ್ಲಿ ವಿಧಿ ಕೆಲವೊಮ್ಮೆ ಯೂ-ಟರ್ನ್ ಹೊಡೆದಾಗ ಎಂತಹವರೂ ಒಮ್ಮೆಗಂತೂ ಕಂಗಾಲಾಗುವುದು ಸಹಜ. ಅಂತಹದೇ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದ್ದು, ಹೈದರಾಬಾದ್ನಿಂದ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಿದ್ದ ಯುವತಿ ಹಸಿವಿನಿಂದ ಕಂಗೆಟ್ಟು ರಸ್ತೆ ಬದಿಯಲ್ಲಿ ಭಿಕ್ಷೆ ಎತ್ತುವ ಕಥೆ ಬೆಳಕಿಗೆ ಬಂದಿದೆ. ಈ ಯುವತಿ, ಡೆಟ್ರಾಯಿಟ್ನ ಟ್ರೈನ್ ವಿಶ್ವವಿದ್ಯಾಲಯದಿಂದ ತನ್ನ ಎಂಎಸ್ ಅನ್ನು ಮುಂದುವರಿಸಲು ಹೋದ ಹೈದರಾಬಾದ್ ನ ಮಹಿಳೆ ಚಿಕಾಗೋದಲ್ಲಿ ಹಸಿವಿನಿಂದ ಬಳಲುತ್ತಾ ರಸ್ತೆ ಬದಿಯಲ್ಲಿ ಕುಳಿತಿರುವುದು ಕಂಡು ಬಂದಿದೆ.
ಮಜ್ಲಿಸ್ ಬಚಾವೊ ತೆಹ್ರೀಕ್ ( MBT ) ಟ್ವಿಟರ್ ನಲ್ಲಿ ಅಮ್ಜದುಲ್ಲಾ ಖಾನ್ ಅವರ ವಕ್ತಾರರು ಹಂಚಿಕೊಂಡ ವೀಡಿಯೊ ಮಹಿಳೆಯನ್ನು ಸಂಪೂರ್ಣವಾಗಿ ದುರಂತ ಸ್ಥಿತಿಯಲ್ಲಿ ತೋರಿಸುತ್ತಿದೆ. ಆಕೆ ಅಮೆರಿಕದ ಪ್ರಸಿದ್ಧ ನಗರವಾದ ಚಿಕಾಗೋದ ಬೀದಿಯ ಒಂದು ಮೂಲೆಯಲ್ಲಿ ಕುಳಿತಿರುವುದು ಕಂಡುಬಂದಿದೆ.
ಈ ವಿಡಿಯೋದಲ್ಲಿ ಆ ಮಹಿಳೆ, ತನ್ನ ಹೆಸರನ್ನು ಸೈದಾ ಲುಲು ಮಿನ್ಹಾಜ್ ಜೈಡಿ ಎಂದು ಹೇಳಿದ್ದು, ತಾನು ಹೈದರಾಬಾದ್ಗೆ ಸೇರಿದವಳು ಎಂದು ಹೇಳಿಕೊಂಡಿದ್ದಾರೆ. ಮಹಿಳೆಯ ಸ್ಥಿತಿಯ ಬಗ್ಗೆ ತಿಳಿದಾಗ, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಕೆಯ ದೇಹದಿಂದ ಪರೀಕ್ಷೆಗೆಂದು ರಕ್ತದ ಮಾದರಿಗಳನ್ನು ಹೊರತೆಗೆದಾಗ ಆ ಮಹಿಳೆ ಇನ್ನಷ್ಟು ದುರ್ಬಲರಾದರು.
ವೀಡಿಯೊದಲ್ಲಿರುವ ವ್ಯಕ್ತಿಯು ಮಹಿಳೆಗೆ ದಾಲ್-ರೋಟಿಯನ್ನು ರಾತ್ರಿಯ ಊಟಕ್ಕೆ ನೀಡುತ್ತಾನೆ. ಜತೆಗೆ ಆಕೆಗೆ ಸಹಾಯ ಮಾಡುವ ಭರವಸೆಯನ್ನೂ ನೀಡುತ್ತಾನೆ. ಅವನು ಆಕೆಯಲ್ಲಿ ಭಾರತಕ್ಕೆ ಹಿಂತಿರುಗಲು ಕೇಳಿಕೊಳ್ಳುತ್ತಾನೆ. ಈ ನಡುವೆ, ಟ್ವಿಟರ್ನಲ್ಲಿ ಮಹಿಳೆಯ ಫೋಟೊ ಹಾಗೂ ದಾಖಲೆಗಳು ವೈರಲ್ ಆಗಿದ್ದು, ಸುದ್ದಿ ಶರವೇಗದೊಂದಿಗೆ ಹೈದರಾಬಾದ್ ತಲುಪಿದೆ. ಮಹಿಳೆಯ ತಾಯಿ ತನ್ನ ಮಗಳನ್ನು ಭಾರತಕ್ಕೆ ಮರಳಿ ಕರೆತರಲು ಸಹಾಯ ಕೋರಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಭಾರತೀಯ ರಾಯಭಾರ ಕಚೇರಿಗೆ ಮನವಿ ಮಾಡಿದ್ದಾರೆ.
ಈ ವೀಡಿಯೊದಿಂದ ದಿಗ್ಭ್ರಮೆಗೊಂಡ ನೆಟ್ಟಿಗರು, ಆಕೆಯನ್ನು ಮತ್ತೆ ಹೈದರಾಬಾದ್ ಗೆ ತರಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಟ್ವಿಟರ್ ಬಳಕೆದಾರರಲ್ಲಿ ಒಬ್ಬರು, ‘ಅವರ ಸ್ಥಿತಿಯನ್ನು ನೋಡಿ ನನಗೆ ಆಘಾತವಾಗಿದೆ. ನನಗೆ ಅವರು ಬಾಲ್ಯದಿಂದಲೂ ಪರಿಚಿತರು. ಅವರು ಸ್ಟೂಡಿಯಸ್ ವಿದ್ಯಾರ್ಥಿಯಾಗಿದ್ದರು’ ಎಂದು ಕಾಮೆಂಟ್ ಮಾಡಿದ್ದಾರೆ.
ಅಮೃತಸರ: ಉನ್ನತ ಶಿಕ್ಷಣಕ್ಕಾಗಿ ದೂರದ ನಗರಕ್ಕೆ ಮಕ್ಕಳನ್ನು ಕಳುಹಿಸುವ ಪೋಷಕರು ಅವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ…
ಹೆತ್ತ ಮಕ್ಕಳ ಸುಖ-ಸಂತೋಷಕ್ಕಾಗಿ ತಮ್ಮ ಇಡೀ ಜೀವನವನ್ನೇ ತ್ಯಾಗ ಮಾಡುವ ತಂದೆ-ತಾಯಿಯರಿಗೆ ವೃದ್ಧಾಪ್ಯದಲ್ಲಿ ಸಿಗುವ ಪ್ರತಿಫಲ ಕೆಲವೊಮ್ಮೆ ಎಷ್ಟು ನೋವಿನದ್ದಾಗಿರುತ್ತದೆ…
ಮಂಡ್ಯದಲ್ಲಿ ರಸ್ತೆ ಅಪಘಾತವೆಂದು ಆರಂಭದಲ್ಲಿ ದಾಖಲಾಗಿದ್ದ ಯುವತಿಯ ಸಾವಿನ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಆರಂಭದಲ್ಲಿ ಸಾಮಾನ್ಯ ಅಪಘಾತ…
ಕನ್ನೌಜ್ (ಉತ್ತರ ಪ್ರದೇಶ): ಶಿಕ್ಷಣ ಕ್ಷೇತ್ರದ ಗೌರವಕ್ಕೆ ಧಕ್ಕೆ ತರುವಂತಹ ಘಟನೆಯೊಂದು ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.…
ಬೆಂಗಳೂರು: ನಗರದ ಅಪಾರ್ಟ್ಮೆಂಟ್ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಯುವತಿಗೆ ಪಾರ್ಸಲ್ ಡೆಲಿವರಿ ವೇಳೆ ಆತಂಕಕಾರಿ ಅನುಭವ ಎದುರಾಗಿರುವ ಘಟನೆ ಬೆಳಕಿಗೆ ಬಂದಿದೆ.…
ಬೆಂಗಳೂರು: ಮನೆದಲ್ಲೇ ಕುಳಿತು ಬೂದುಬತ್ತಿ, ಮೆಣದಬತ್ತಿ ಹಾಗೂ ಪೇಪರ್ ಪ್ಲೇಟ್ ಪ್ಯಾಕಿಂಗ್ ಕೆಲಸ ನೀಡಿ ಹೆಚ್ಚಿನ ಆದಾಯ ಗಳಿಸಬಹುದು ಎಂದು…