Latest

ತಂದೆಯನ್ನೇ ಕೊಲೆಗೈದು ತುಂಡುತುಂಡಾಗಿ ಕತ್ತರಿಸಿದ ಪಾಪಿ ಮಗ.

ತಂದೆಯನ್ನೇ ಮಗ ಕೊಲೆ ಮಾಡಿ ದೇಹವನ್ನು ಕತ್ತರಿಸಿ ಬಿಸಾಡಿರುವ ಅಮಾನವೀಯ ಘಟನೆ ಪಶ್ಚಿಮ ಬಂಗಾಳದ ಬರುಯಿಪುರದಲ್ಲಿ ನಡೆದಿದೆ.
ಮೃತ ವ್ಯಕ್ತಿ ಮಾಜಿ ನೌಕಾಪಡೆಯ ಉಜ್ವಲ್ ಚಕ್ರವರ್ತಿ (55) ಎಂದು ಗುರುತಿಸಲಾಗಿದೆ. ಅನುಮಾನದ ಆಧಾರದ ಮೇಲೆ ಪೊಲೀಸ​ರು ತಾಯಿ-ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
ಮೃತನ ಪುತ್ರ ಜಾಯ್​ ಪಾಲಿಟೆಕ್ನಿಕ್‌ ಓದುತ್ತಿದ್ದಾನೆ. ಪರೀಕ್ಷಾ ಶುಲ್ಕ್​ ತುಂಬಲು 3,000 ರೂಪಾಯಿ ತಂದೆ ಬಳಿ ಕೇಳಿದ್ದಾನೆ. ಉಜ್ವಲ್ ಚಕ್ರವರ್ತಿ ಹಣ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಜಾನ್​ ತಂದೆ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಶ್ಯಾಮಲಿ ಮತ್ತು ಮಗ ಜಾಯ್ ನನ್ನು ಪೊಲೀಸರು ಬಂಧಿಸಿದ್ದಾರೆ.
12 ವರ್ಷಗಳ ಹಿಂದೆ ಉಜ್ವಲ್ ಚಕ್ರವರ್ತಿ ಅವರು ನೌಕಪಡೆಯಿಂದ ನಿವೃತ್ತಿಯಾಗಿದ್ದರು. ತಂದೆಯನ್ನು ಕೊಲೆಗೈದ ಬಳಿಕ ತಾಯಿಯ ನೆರವಿನೊಂದಿಗೆ ಮೃತದೇಹವನ್ನು ಮಗ ಬಾತ್​​ ರೂಮ್​​ ಗೆ ಎಳೆದುಕೊಂಡು ಹೋಗಿದ್ದನು. ಅಲ್ಲಿಯೇ ಆರೋಪಿ ತನ್ನ ಕಾರ್ಪೆಂಟ್ರಿ ಕ್ಲಾಸ್ ಕಿಟ್ ಬ್ಯಾಗ್‌ ನಿಂದ ಹ್ಯಾಕ್ಸಾ ಬ್ಲೆಡ್​​ ಅನ್ನು ಬಳಸಿ ದೇಹವನ್ನು ಆರು ತುಂಡುಗಳಾಗಿ ಕತ್ತರಿಸಿದ್ದ. ನಂತರ ಅವುಗಳನ್ನು ತನ್ನ ಮನೆಯ 500 ಮೀಟರ್​ ದೂರದ ಪ್ರದೇಶದಲ್ಲಿ ಎಸೆದಿದ್ದನು. ಸದ್ಯ ಮೃತದೇಹದ ಭಾಗಗಳಿಗಾಗಿ ಹುಡುಕಾಟ ನಡೆಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಭ್ರಷ್ಟರ ಬೇಟೆ

Recent Posts

ಧಾರವಾಡ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪೊಲೀಸರಿಂದ ‘ಹಣದ ಬೇಡಿಕೆ, ಕಿರುಕುಳ’ ಆರೋಪ..!

ಧಾರವಾಡ: 20 ವರ್ಷದ ಆದಿತ್ಯ ಮ್ಯಾಗೇರಿ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಪೊಲೀಸರ ವಿರುದ್ಧ…

32 minutes ago

ಶೇಕ್‌ಪೇಟ್‌ನಲ್ಲಿ ಪಶು ಆಸ್ಪತ್ರೆಯ ಹೆಸರಿನಲ್ಲಿ ಕ್ರೂರ ದಂಧೆ: ಬೀದಿ ನಾಯಿಗಳ ರಕ್ತ ಮಾರಾಟ, ಭಾರೀ ಹಣ ವಸೂಲಿ!

ಶೇಕ್‌ಪೇಟ್: ಪಶುಗಳ ಚಿಕಿತ್ಸೆಯ ಹೆಸರಿನಲ್ಲಿ ನಡೆದಿದ್ದ ಅಮಾನವೀಯ ದಂಧೆಯೊಂದು ಬೆಳಕಿಗೆ ಬಂದು ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟಿಸಿದೆ. ಖಾಸಗಿ ಪಶು ವೈದ್ಯಕೀಯ…

35 minutes ago

ಧಾರವಾಡದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ: ‘ಕೇಸ್ ಹಾಕುತ್ತೇವೆ’ ಎನ್ನುವ ಭಯದಿಂದ ಜೀವತ್ಯಾಗ? ಪೊಲೀಸರ ವಿರುದ್ಧ ಆರೋಪ

ಧಾರವಾಡ: ಗಾಂಜಾ ಪ್ರಕರಣದಲ್ಲಿ ಹೆಸರು ಸೇರಿಸಲಾಗುತ್ತದೆ ಎಂಬ ಭಯದಿಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ…

56 minutes ago

ಕೋರಮಂಗಲದಲ್ಲಿ ಸಿಸಿಬಿ ದಾಳಿ: ಸಾರ್ವಜನಿಕವಾಗಿ ವೇಶ್ಯಾವಾಟಿಕೆ, ರಸ್ತೆಯಲ್ಲಿ ನಿಂತ ಪುರುಷರನ್ನು ಕರೆಯುತ್ತಿದ್ದ ಆರು ವಿದೇಶಿ ಮಹಿಳೆಯರು ವಶಕ್ಕೆ

ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದ ಮೇರೆಗೆ ಆರು ವಿದೇಶಿ ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ…

2 hours ago

ಕಾಂಗ್ರೆಸ್ಗೆ ಅಹಿಂದ ಎಚ್ಚರಿಕೆ: ‘2028ಕ್ಕೆ ಹೊಸ ಪಕ್ಷ’ ಬೆದರಿಕೆ, ದಲಿತ ಸಿಎಂ ಆಗ್ರಹ

ಬೆಂಗಳೂರು: ರಾಜ್ಯ ಕಾಂಗ್ರೆಸ್ನೊಳಗಿನ ನಾಯಕತ್ವದ ಗೊಂದಲ ಮತ್ತು ಅಸಮಾಧಾನದ ನಡುವೆಯೇ ಅಹಿಂದ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪಕ್ಷವು ಅಹಿಂದ…

2 hours ago

₹19,300ಗಾಗಿ ಸಮಾಧಿಯಿಂದ ಸಹೋದರಿಯ ಶವ ಬ್ಯಾಂಕ್‌ಗೆ ತಂದ: ಒಡಿಶಾದಲ್ಲಿ ಬೆಚ್ಚಿಬೀಳಿಸುವ ಘಟನೆ

ಒಡಿಶಾ: ರಾಜ್ಯದ ಗ್ರಾಮೀಣ ಬ್ಯಾಂಕ್‌ನಲ್ಲಿ ನಡೆದ ವಿಚಿತ್ರ ಹಾಗೂ ಹೃದಯವಿದ್ರಾವಕ ಘಟನೆ ದೇಶದ ಬಡತನದ ವಾಸ್ತವಿಕತೆಯನ್ನು ಮತ್ತೆ ಬೆಳಕಿಗೆ ತಂದಿದೆ.…

2 hours ago