Categories: CrimeLatest

2.5 ವರ್ಷದ ಕಂದಮ್ಮನನ್ನು ಜೀವಂತವಾಗಿಯೇ ಹೂತ ರಾಕ್ಷಸಿ! ಗಲ್ಲು ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಆರೋಪಿ

ಇಡೀ ಕುಟುಂಬದ ಮುದ್ದಿನ ಕಂದಮ್ಮನಾಗಿದ್ದ ಕೇವಲ ಎರಡೂವರೆ ವರ್ಷದ ದಿಲ್ ರೋಜ್‌ನ ದಾರುಣ ಹತ್ಯೆ ಪ್ರಕರಣ ಇಂದಿಗೂ ಮನಕಲಕುವ ಘಟನೆಯಾಗಿ ಉಳಿದಿದೆ. ನೆರೆಮನೆಯ ಮಹಿಳೆಯೊಬ್ಬಳು ಅಸೂಯೆ ಮತ್ತು ದ್ವೇಷದ ಕಾರಣದಿಂದ ಈ ಮುಗ್ಧ ಮಗುವಿನ ಜೀವ ತೆಗೆದಿದ್ದಳು. ಇದೀಗ ಆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಆರೋಪಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿರುವುದು ಮತ್ತೆ ಪ್ರಕರಣವನ್ನು ಸುದ್ದಿಯಲ್ಲಿರಿಸಿದೆ.

ಮಾಹಿತಿಯ ಪ್ರಕಾರ, ದಿಲ್ ರೋಜ್ ಕುಟುಂಬದ ಎಲ್ಲರ ಪ್ರೀತಿಯ ಕಂದಮ್ಮಳಾಗಿದ್ದಳು. ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ವಿಚ್ಛೇದಿತ ಮಹಿಳೆ ನೀಲಂಗೆ ಕುಟುಂಬದ ಮೇಲಿದ್ದ ವೈಯಕ್ತಿಕ ದ್ವೇಷ ಮತ್ತು ಅಸೂಯೆ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಒಂದು ದಿನ ಮಗುವನ್ನು ಸ್ಕೂಟರ್‌ನಲ್ಲಿ ಸುತ್ತಾಡಿಸಿ ಕರೆತರುತ್ತೇನೆ ಎಂದು ನಂಬಿಸಿ ಕರೆದುಕೊಂಡು ಹೋದ ನೀಲಂ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಮಾನುಷವಾಗಿ ಹಲ್ಲೆ ನಡೆಸಿದ್ದಾಳೆ.

ಹಲ್ಲೆಯಿಂದ ಮಗು ಕಿರುಚದಂತೆ ಅದರ ಬಾಯಿಗೆ ಮಣ್ಣು ತುರುಕಿ, ಜೀವಂತವಾಗಿದ್ದಾಗಲೇ ಸಣ್ಣ ಗುಂಡಿಯಲ್ಲಿ ಹೂತು ಹಾಕಿದ್ದಾಳೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಗು ಕಾಣೆಯಾಗುತ್ತಿದ್ದಂತೆಯೇ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ವೇಳೆ ನೀಲಂ ಮಗುವನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ ಸಿಕ್ಕಿತ್ತು. ಬಳಿಕ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದರೂ, ಅಷ್ಟರಲ್ಲಾಗಲೇ ಮಗು ಉಸಿರುಗಟ್ಟಿ ಮೃತಪಟ್ಟಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಇದು ಅತ್ಯಂತ ಕ್ರೂರ ಹಾಗೂ ‘ವಿರಳಾತಿ ವಿರಳ’ ಪ್ರಕರಣ ಎಂದು ಪರಿಗಣಿಸಿ ನೀಲಂಗೆ ಮರಣದಂಡನೆ ವಿಧಿಸಿತ್ತು. ಆದರೆ ಇದೀಗ ಆ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಪ್ರಕರಣ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ಭ್ರಷ್ಟರ ಬೇಟೆ

Recent Posts

5 ವರ್ಷದ ಪ್ರೀತಿ ಮದುವೆಯಾಗಿ ಒಂದಾದ ಜೋಡಿ; ಈಗ ಹೆತ್ತವರಿಂದಲೇ ಜೀವಭಯ! ಬೆಳಗಾವಿ ಎಸ್‌ಪಿ ಮೊರೆ ಹೋದ ನವದಂಪತಿ

ಗೋವಾ ಮತ್ತು ಬೆಳಗಾವಿಯನ್ನು ಸಂಪರ್ಕಿಸಿದ ಐದು ವರ್ಷದ ಪ್ರೇಮಕಥೆ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕಾಲೇಜು ದಿನಗಳಲ್ಲಿ ಆರಂಭವಾದ ಪ್ರೀತಿ…

12 hours ago

ದೆಹಲಿ ಪ್ರತಿಭಟನೆಯಲ್ಲಿ ದುರಂತ: ಗರ್ಭಿಣಿ ಮಹಿಳಾ ಪೊಲೀಸ್ ಅಧಿಕಾರಿಯ ಗರ್ಭದಲ್ಲಿದ್ದ ಮಗು ಸಾವು, ಅಭಿಜೀತ್ ದೀಪ್ಕೆ ವಿರುದ್ಧ ಆಕ್ರೋಶ ತೀವ್ರ

ದೆಹಲಿ ನಗರದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಹಾಗೂ ಅವರ…

12 hours ago

ಮಹಿಳೆಯರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟು ವಿಡಿಯೋ ಚಿತ್ರಸಿದ ವೈದ್ಯ! 6 ತಿಂಗಳ ಜೈಲು ಶಿಕ್ಷೆ

ಅಮೆರಿಕದ ಓಹಿಯೋ ರಾಜ್ಯದಲ್ಲಿ ಮಹಿಳೆಯರ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿ ವಿಡಿಯೋ ಚಿತ್ರೀಕರಿಸಿದ ಪ್ರಕರಣದಲ್ಲಿ ಭಾರತೀಯ ಮೂಲದ ಅಮೆರಿಕನ್ ವೈದ್ಯನಿಗೆ…

13 hours ago

ಬೆತ್ತಲಾಗಿ ನಟಿಸಲ್ಲ, ಅನುರಾಗ್ ಕಶ್ಯಪ್ ಚಿತ್ರದ ಆಫರ್ ತಿರಸ್ಕರಿಸಿದ್ದೇಕೆ? ದಶಕಗಳ ಬಳಿಕ ಮೌನ ಮುರಿದ ನಟಿ ತೇಜಸ್ವಿನಿ ಕೊಲ್ಹಾಪುರೆ

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಬಹುಚರ್ಚಿತ 'ಗುಲಾಲ್' ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ತಾವು ಏಕೆ ಕೈಬಿಟ್ಟೆ ಎಂಬುದನ್ನು ನಟಿ…

13 hours ago

ಆನ್‌ಲೈನ್ ಬೆಟ್ಟಿಂಗ್ ಸಾಲ ತೀರಿಸಲು ನೆರೆಮನೆಯ ವೃದ್ಧೆಯ ಹತ್ಯೆ: ಸೂಟ್‌ಕೇಸ್‌ನಲ್ಲಿ ಶವ ಎಸೆದು ಹುಡುಕಾಟದಲ್ಲೂ ನಟಿಸಿದ ಆರೋಪಿ!

ಬೆಂಗಳೂರು: ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ರಾಮೋಹಳ್ಳಿ ಕೆರೆಯಲ್ಲಿ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದ್ದ 65 ವರ್ಷದ ಜಯಮ್ಮ ಅವರ ಕೊಲೆ ಪ್ರಕರಣವನ್ನು…

13 hours ago

ಜಂತರ್ ಮಂತರ್ ಪ್ರತಿಭಟನೆಯಲ್ಲಿ ಸಮವಸ್ತ್ರಧಾರಿಗಳ ನಡೆ ವಿವಾದ: ಹೆಸರಿನ ಫಲಕವಿಲ್ಲದ ಸಿಬ್ಬಂದಿ ಯಾರು ಎಂಬ ಪ್ರಶ್ನೆ

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಇತ್ತೀಚಿನ ಪ್ರತಿಭಟನೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಕೆಲವು ವೀಡಿಯೊಗಳು ಭದ್ರತಾ…

13 hours ago