ಕುಂದಗೋಳ; ತಾಲೂಕಿನ ಯರೇನಾರಾಯಣಪೂರ ಗ್ರಾಮದದಿಂದ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಮುಗಿದು ಕೆಲವು ತಿಂಗಳ ಕಳೆಯುವಷ್ಟರಲ್ಲಿ ಡಾಂಬರು ಕಿತ್ತು ಹೋಗಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಸುಮಾರು 75 ಲಕ್ಷ ರೂಪಾಯಿ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಗುತ್ತಿಗೆದಾರನ ಕಳಪೆ ಕಾಮಗಾರಿಯಿಂದ ಕೆಲವು ತಿಂಗಳು ಕಳೆಯುವಷ್ಟರಲ್ಲಿ ಕೆಲವಡೆ ರಸ್ತೆ ಕಿತ್ತೂ ಹೋಗಿದೆ. ಹಾಗಾದರೆ ಕಮಿಶನ್ ದಂದೇನಾ? ಅಥವಾ ಹಣ ಕೊಳ್ಳೆ ಹೊಡೆಯಲೂ ದಾರೀನಾ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನೇಮ್ ಆಫ್ ವರ್ಕ್ ನಲ್ಲಿ ಯರೇನಾರಾಯಣಪೂರ ಗ್ರಾಮದಿಂದ ರಾಜ್ಯ ಹೆದ್ದಾರಿ-137 ಕೂಡು ರಸ್ತೆಗೆ ಅಲ್ಲಿವರಿಗೊ ಡಾಂಬರೀಕರಣ ಮಾಡಬೇಕು ಆದರೆ ಹನುಮಂತಗೌಡ್ರ ಟೋಪನಗೌಡ್ರ ಎಂಬಾತರ ಮನೆಯವರಿಗೆ ಮಾತ್ರ ಡಾಂಬರೀಕರಣ ಮಾಡಲಾಗಿದೆ. ಅಂದಹಾಗೆ ಹಣ ಕೊಳ್ಳಿಹೊಡೆಯಲು ಪ್ರಯತ್ನಕ್ಕೆ ಮುಂದಾದ್ರಾ ಅನ್ನುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಇದಲ್ಲದೆ ಕಳಪೆ ಮಟ್ಟದ ರಸ್ತೆ ಅಭಿವೃದ್ಧಿ ಪಡಿಸಿ ಕೆಲವು ದಿನಗಳ ಬಳಿಕ ಮತ್ತೆ ಪ್ಯಾಚ್ ವರ್ಕ ಸಹ ಮಾಡಿದ್ದಾರೆ. ಆದರೂ ರಸ್ತೆ ಅಭಿವೃದ್ಧಿ ಹೇಳಿ ಕೊಳ್ಳುವ ಅಂತ ಕೆಲಸ ಮಾಡಿಲ್ಲ ಎಂದು ಇಲ್ಲಿನ ಗ್ರಾಮಸ್ಥರು ದೂರಿದರು.
ಸರಕಾರಗಳು ಗ್ರಾಮೀಣ ಜನರಿಗೆ ಸುಗಮ ಸಂಚಾರಕ್ಕೆ ಗ್ರಾಮೀಣ ಪಥಗಳನ್ನು ನಿರ್ಮಾಣ ಮಾಡಲು ಲಕ್ಷ ಲಕ್ಷ ಹಣ ಬಿಡುಗಡೆಗೊಳಿಸುತ್ತೆ. ಆದರೆ ಲೂಟಿ ಹೊಡೆಯುವ ಖದೀಮರು ಮಾತ್ರ ಹಣ ಕಬಳಿಸಲು ಮುಂದಾಗುತ್ತಾರೆ. ”ಹಣವನ್ನು ಕಂಡರೆ ಹೆಣವು ಬಾಯಿ ಬಿಡುತ್ತದೆ” ಗಾದೆಗೆ ಸಮಾನವಾಗಿ ನಡೆದುಕೊಳ್ಳುತ್ತಾರೆ ಅಂದರೆ ಇವರುಗಳು ಎಂತ ನಾಲಾಯಕ್ ಇರಬೇಕು ಅಂತ ನೋಡಿ.
ಒಟ್ಟಾರೆ ಅಭಿವೃದ್ಧಿ ಹೊಂದಿದ ರಸ್ತೆ ಡಾಂಬರು ಕಿತ್ತು ತೆಗ್ಗು ಬಿಳ್ಳಲು ಪ್ರಾರಂಭಿಸಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇದಲ್ಲದೆ ನೆಮ್ ಆಪ್ ವರ್ಕ್ ನಲ್ಲಿ ರಾಜ್ಯ ಹೆದ್ದಾರಿವರಿಗೊ ರಸ್ತೆ ಅಭಿವೃದ್ಧಿ ಪಡಿಸಿಬೇಕು ಆದರೆ ಇವರುಗಳು ಈ ಕಾರ್ಯಕ್ಕೆ ಮುಂದಾಗಿಲ್ಲ ಹಾಗಾಗಿ ಅಧಿಕಾರಿಗಳು ಸ್ಥಳೀಯ ಶಾಸಕರು ಸ್ಥಳಕ್ಕೆ ಬೇಟೆ ನೀಡಿ ಪರಿಶೀಲಿಸಿ ಗುತ್ತಿಗೆದಾರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಬೇಕು ಎಂದು ಸ್ಥಳೀಯ ಗ್ರಾಮಸ್ಥರು ಆಗ್ರಹವಾಗಿದೆ.
ವರದಿ; ಶಾನು ಯಲಿಗಾರ
ಬೆಂಗಳೂರು ನಗರದ ಕೆಂಗೇರಿ ಠಾಣಾ ವ್ಯಾಪ್ತಿಯ ಸುಭಾಷ್ ನಗರದಲ್ಲಿ ನಡೆದ ಭೀಕರ ಘಟನೆ ಒಂದು ಕುಟುಂಬದ ದುಸ್ಥಿತಿಯನ್ನು ಬಯಲಿಗೆಳೆದಿದೆ. ಮದ್ಯಪಾನದ…
ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಮೇಲೆ ಪ್ರೌಢಶಾಲಾ ಶಿಕ್ಷಕಿಯೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ…
ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸುತ್ತಿರುವ ವಿರೋಧ ರಾಜಕೀಯ ಪ್ರೇರಿತವಾಗಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…
ಬಳ್ಳಾರಿ: ಆದಾಯಕ್ಕಿಂತ ಅಧಿಕ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್ಡಿಪಿಆರ್) ಇಲಾಖೆಯ ಸಹಾಯಕ…
ಬೆಳಗಾವಿ: ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸ ಸೇರಿದಂತೆ ರಾಜ್ಯದ ವಿವಿಧ ಆರು ಸ್ಥಳಗಳಲ್ಲಿ ಜಾರಿ…
ಪುಣೆಯಲ್ಲಿ ನಡೆದ ಭೀಕರ ಘಟನೆ ಒಂದು ದೇಶವನ್ನೇ ಬೆಚ್ಚಿಬೀಳಿಸಿದೆ. ಮದುವೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ, ತನ್ನನ್ನು ಮದುವೆಯಾಗಬೇಕಿದ್ದ ಯುವಕನನ್ನೇ…