Latest

ಆಂಟಿಯ ಹನಿ ಟ್ರಾಪ್‌ಗೆ ಸಿಲುಕಿ 2.90 ಲಕ್ಷ ರೂ. ಸಂಬಳದ ಕೆಲಸದ ಜೊತೆ 20 ಲಕ್ಷ ಕಳೆದುಕೊಂಡ!

ರವಿ ಜಯರಾಮ್‌ ಎಂಬುವರೇ ಹನಿ ಟ್ರ್ಯಾಪ್‌ನಲ್ಲಿ ಸಿಲುಕಿ ಉದ್ಯೋಗ ಕಳೆದುಕೊಂಡಿರುವ ವ್ಯಕ್ತಿ. ಪಾರ್ಟಿಯಲ್ಲಿ ಭವಾನಿ ಅವರನ್ನು ರವಿ ಜಯರಾಮ್ ಭೇಟಿಯಾಗಿದ್ದರು. ಪರಿಚಯ ಸ್ನೇಹಕ್ಕೆ ತಿರುಗಿತ್ತು. ಮಹಿಳೆಗೆ ಹಣ ಸಹಾಯವನ್ನು ರವಿ ಮಾಡಿದ್ದರು. ಭವಾನಿ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದರು. ಒಟ್ಟಿಗೆ ಹತ್ತಾರು ಬಾರಿ ಸೆಲ್ಪಿ ತೆಗೆದುಕೊಳ್ಳುತ್ತಿದ್ದರು. ಬಳಿಕ ಖಾಸಗಿ ವಿಡಿಯೋಗಳನ್ನು ಸೆರೆಹಿಡಿಯಲಾಗಿತು.
ನಂತರದ ದಿನಗಳಲ್ಲಿ ಭವಾನಿಯ ಅಸಲಿ ಮುಖವಾಡ ಬೆಳಕಿಗೆ ಬಂದಿದೆ. ಬ್ಲಾಕ್ ಮೇಲ್ ಮಾಡಲು ಭವಾನಿ ಗ್ಯಾಂಗ್‌ ಶುರು ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡೋದಾಗಿ ಬೆದರಿಕೆ ಹಾಕಲಾಗಿತು.
ನಿರಾಕರಿಸಿದಾಗ ದೂರುದಾರನ ಪತ್ನಿಗೂ ತಾವಿಬ್ಬರೇ ಇರುವ ಖಾಸಗಿ ವಿಡಿಯೋ ಫೊಟೋಗಳನ್ನು ಭವಾನಿ ಸೆಂಡ್ ಮಾಡಿದ್ದಳು. ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡೋದಾಗಿ ಬೆದರಿಕೆ ಹಾಕಿದ್ದಳು. ಈ ಹಿನ್ನಲೆಯಲ್ಲಿ ಹಂತ ಹಂತವಾಗಿ 20 ಲಕ್ಷ ರೂ.ಗಳನ್ನು ರವಿ ಜಯರಾಮ್ ನೀಡಿದ್ದ. ಭವಾನಿಗೆ ಸ್ವತಃ ಆಕೆಯ ತಾಯಿ, ತಮ್ಮ, ತಂಗಿ ಸೇರಿ ಇಡೀ ಕುಟುಂಬ ಸಾಥ್‌ ನೀಡಿತ್ತು.
ದೂರಿನಲ್ಲಿ ಇಡಿ ಕುಟುಂಬದ ಹೆಸರನ್ನ ರವಿ ಜಯರಾಮ್ ದಾಖಲಿಸಿದ್ದಾರೆ. ನಂತರ ಆಕೆಗೆ ಈಗಾಗಲೆ ಎರಡು ಮದುವೆ ಆಗಿರುವ ವಿಚಾರ ಗೊತ್ತಾಗಿದೆ. ಒಂದು ಡಿವೋರ್ಸ್ ಆಗಿದ್ದು ಮತ್ತೊಂದು ಡಿವೋರ್ಸ್ ಪ್ರಕರಣ ನ್ಯಾಯಾಲಯದಲ್ಲಿದೆ.
ರವಿ ಜಯರಾಮ್‌ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿ ಬಳಿ ಕೂಡ ಭವಾನಿ ಬಂದು ಗಲಾಟೆ ಮಾಡಿದ್ದರಿಂದ, ಕಂಪನಿ ಆತನನ್ನು ಉದ್ಯೋಗದಿಂದ ವಜಾಗೊಳಿಸಿತ್ತು. ಕೊನೆಗೆ ಈಕೆ ವಿರುದ್ಧ ಜಯರಾಮ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದ. ಈಕೆಯನ್ನು ಕರೆಸಿದಾಗ
ದೂರು ದಾಖಲಾದರೆ ಡಿಸಿಪಿ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಆರೋಪಿ ಭವಾನಿ ಬೆದರಿಸಿದ್ದಾರೆ. ಡಿಸಿಪಿ, ಎಸಿಪಿ ಕಚೇರಿ ಮುಂದೆಯೇ ಮಹಿಳೆ ಹೈಡ್ರಾಮಾ ಮಾಡಿದ್ದಳು.
ಇತ್ತ ಕೈತುಂಬ ಕೆಲಸವೂ ಇಲ್ಲದೆ , ಹೆಂಡತಿಯನ್ನೂ ಕಳೆದುಕೊಂಡು ರವಿ ಜಯರಾಮ್ ಅಲೆದಾಡುವ ಪರಿಸ್ಥಿತಿ ಬಂದಿದೆ. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಭ್ರಷ್ಟರ ಬೇಟೆ

Recent Posts

ಟೊರೊಂಟೊದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ: 7 ತಿಂಗಳ ಬಳಿಕ ಆಪ್ತ ವ್ಯಕ್ತಿ ಅರೆಸ್ಟ್‌!

ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…

3 hours ago

ಇನ್‌ಸ್ಟಾಗ್ರಾಂ ಪ್ರೇಮಿಗಾಗಿ 6 ತಿಂಗಳ ಕಂದಮ್ಮನನ್ನೇ ಕೊಲ್ಲಿಸಿದ ತಾಯಿ! ಮೀರಾಟ್‌ನಲ್ಲಿ ಬೆಚ್ಚಿಬೀಳಿಸಿದ ಘಟನೆ

ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…

3 hours ago

ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆಗೆ ಭೂಸ್ವಾಧೀನ ಅಧಿಕೃತ ಚಾಲನೆ

163 ಕಿ.ಮೀ. ಉದ್ದದ ಯೋಜನೆ; ಉತ್ತರ ಕನ್ನಡದ 40 ಗ್ರಾಮಗಳು ಭೂಸ್ವಾಧೀನ ವ್ಯಾಪ್ತಿಗೆ ಉತ್ತರ ಕನ್ನಡ: ಹಲವು ವರ್ಷಗಳಿಂದ ನನೆಗುದಿಗೆ…

3 hours ago

ಪಾಂಡೆಗಾಂವ–ಕಂಗೋಳಿ ರಸ್ತೆ ಕೆಸರಿನ ಹೊಂಡ: ಜನರ ಆಕ್ರೋಶ, ಕಾಮಗಾರಿ ವಿಳಂಬವಾದರೆ ರಸ್ತೆ ತಡೆ ಎಚ್ಚರಿಕೆ

ಮಳೆ ಬಂದರೆ ಕೆಸರುಗದ್ದೆ; ವಿದ್ಯಾರ್ಥಿಗಳು, ವೃದ್ಧರು, ರೋಗಿಗಳ ಸಂಚಾರಕ್ಕೆ ಸಂಕಷ್ಟ — ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ಕಾಗವಾಡ: ಬೆಳಗಾವಿ…

3 hours ago

ಜಾತ್ರೆಯಲ್ಲಿ ಮಹಿಳೆಯ ಮಂಗಳಸೂತ್ರ ಕಳವು: ಮೂವರು ಆರೋಪಿಗಳ ಬಂಧನ

₹4.50 ಲಕ್ಷ ಮೌಲ್ಯದ ಚಿನ್ನ, ಕೃತ್ಯಕ್ಕೆ ಬಳಸಿದ್ದ ಬೈಕ್ ವಶ ಹಳಿಯಾಳ: ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಹಿಳೆಯೊಬ್ಬರ ಕೊರಳಲ್ಲಿದ್ದ ಚಿನ್ನದ…

19 hours ago

ಬೈಕ್‌ನಲ್ಲಿ ಕರೆದೊಯ್ದು ಹಣ ಕಸಿದು ಜೀವ ಬೆದರಿಕೆ: 24 ಗಂಟೆಯಲ್ಲೇ ಆರೋಪಿ ಬಂಧನ

ಸಿಸಿಟಿವಿ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯ ಪತ್ತೆ; ಬೈಕ್, ಹಣ ವಶ ಹೊನ್ನಾವರ: ಬ್ಯಾಂಕ್‌ನಿಂದ ಹಣ ಪಡೆದು ಹೊರಬಂದ…

19 hours ago