Crime

ಚಿಕನ್ ಪೀಸ್ ಜಗಳಕ್ಕೆ ಯುವಕನ ಹತ್ಯೆ: ಯರಗಟ್ಟಿ ಬಳಿ ಭೀಕರ ಘಟನೆ

ಬೆಳಗಾವಿ, ಜುಲೈ 14: ಬಡವಳೊಬ್ಬನ ಸಂಸಾರವೂ ಕತ್ತಲಾಯಿತು, ಸ್ನೇಹಿತನ ಎಣ್ಣೆ ಪಾರ್ಟಿಯ ಜಗಳ ಜೀವ ಕಿತ್ತುಕೊಂಡ ಘಟನೆ ಯರಗಟ್ಟಿಯ ಸೊಪಡ್ಲ ಗ್ರಾಮದಲ್ಲಿ ರವಿವಾರ (ಜು.13) ರಾತ್ರಿ ನಡೆದಿದೆ. ಚಿಕ್ಕ ವಿಷಯದಲ್ಲಿ ಹುಟ್ಟಿದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಗ್ರಾಮದವರೆಗೂ ಹೃದಯವಿದ್ರಾವಕವಾಗಿದಂತಾಗಿದೆ.

ಹತ್ಯೆಗೀಡಾದ ವ್ಯಕ್ತಿಯನ್ನು ವಿನೋದ್ ಮಲಶಟ್ಟಿ (30) ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ನೆರವೇರಿಸುತ್ತಿದ್ದ ಅವನು, ಆತನ ಸ್ನೇಹಿತ ಅಭಿಷೇಕ ಕೊಪ್ಪದ ರವಿವಾರ ತನ್ನ ವಿವಾಹದ ಸಂಭ್ರಮದಲ್ಲಿ ಆತ್ಮೀಯ ಸ್ನೇಹಿತರಿಗಾಗಿ ಎಣ್ಣೆ ಪಾರ್ಟಿಯನ್ನು ಗ್ರಾಮದ ಹೊರವಲಯದಲ್ಲಿ ಆಯೋಜಿಸಿದ್ದ.

ಪಾರ್ಟಿಯಲ್ಲಿ ವಿನೋದ್ ಮತ್ತು ವಿಠ್ಠಲ್ ಹಾರಗೊಪ್ಪ ನಡುವೆ ಚಿಕನ್ ಪೀಸ್ಗೆ ಸಂಬಂಧಿಸಿದಂತೆ ಮಾತಿನ ಚಕಮಕಿ ಶುರುವಾಯಿತು. ಈ ಚಿಕ್ಕ ಜಗಳ ಕ್ಷಣಾರ್ಧದಲ್ಲಿ ತೀವ್ರ ರೂಪ ಪಡೆದು, ಕ್ರೋಧಕ್ಕೆ ಒಳಗಾದ ವಿಠ್ಠಲ್ ಅಡುಗೆಗೆ ಬಳಸುತ್ತಿದ್ದ ಚಾಕುವಿನಿಂದ ವಿನೋದ್ ಎದೆಗೆ ಇರಿದು ತೀವ್ರವಾಗಿ ಗಾಯಗೊಳಿಸಿದನು. ಗಾಯದಿಂದ ಸ್ಥಳದಲ್ಲಿಯೇ ವಿನೋದ್ ಮೃತಪಟ್ಟನು.

ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಮುರಗೋಡ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಹೆಚ್ಚುವರಿ ಎಸ್ಪಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಚುರುಕುಗೊಳಿಸಿದರು. ವಿಠ್ಠಲ್ ಹಾರಗೊಪ್ಪನನ್ನು ಬಂಧಿಸಿ, ಪೋಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ಘಟನೆ ಮುಗಿದ ಮೇಲೆ ಹಲವಾರು ಪ್ರಶ್ನೆಗಳು ಮೂಡಿವೆ. ಪಾರ್ಟಿಯಲ್ಲಿ 30ಕ್ಕೂ ಹೆಚ್ಚು ಮಂದಿ ಇದ್ದಾಗ ಹತ್ಯೆಯನ್ನು ತಡೆಯಲಾಗಲಿಲ್ಲವೇ? ಜಗಳಕ್ಕೆ ನಿಜವಾಗಿಯೂ ಚಿಕನ್ ಪೀಸ್ ಕಾರಣವೇ? ಅಥವಾ ಇನ್ನುಳಿದ ದ್ವೇಷಗಳ ಸ್ಪೋಟವಿತೇ? ಎಂಬುದರ ಬಗ್ಗೆ ಪೋಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸ್ನೇಹ ಮತ್ತು ಸಂಭ್ರಮದ ನಡುವೆ ಈ ಬುದ್ಧಿವಿಲ್ಲದ ಕ್ರೂರತೆ ಈಗ ಸ್ಥಳೀಯರಲ್ಲಿ ಭಯ ಮತ್ತು ಬೇಸರ ಮೂಡಿಸಿದೆ.

nazeer ahamad

Recent Posts

‍ರೀಲ್ಸ್ ಮಾಡುವ ಹುಚ್ಚು, ಕರೆದಾಗ ಬಂದು ಜೊತೆಗೆ ಮಲಗುತ್ತಿರಲಿಲ್ಲ ಎಂದು ಪತ್ನಿಯನ್ನು ಕೊಂದ ಪತಿ

ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…

2 days ago

ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27ರ ಯುವತಿ ಸಾವು; ಉಡುಪಿಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ, ತನಿಖೆ ಚುರುಕು

ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…

2 days ago

‘ಅಂದು ನನ್ನೊಂದಿಗೆ ಮಲಗಲು ಕೇಳಿದ್ದು ನೀವೇ ತಾನೇ?’ ನಿರ್ಮಾಪಕನಿಗೆ ನಟಿ ಚಾಂದಿನಿ ಚೌಧರಿ ಶಾಕ್!

ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…

2 days ago

ಮದುವೆಯಾಗಿ 4 ದಿನಕ್ಕೆ ಮಾಜಿ ಪ್ರೇಮಿಯೊಂದಿಗೆ ಹೋಟೆಲ್ ನಲ್ಲಿ ಪತ್ನಿ; ಪತಿಯ ಕೈಗೆ ವಿಡಿಯೋ…!

ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…

2 days ago

ಪತ್ನಿಯನ್ನು ಕೊಂದು ಶವ ವಿಲೇವಾರಿಗೆ ಸ್ನೇಹಿತನ ನೆರವು ಕೇಳಿದ ಪತಿ; ಜಾಣತನದಿಂದ ಪೊಲೀಸರಿಗೆ ಒಪ್ಪಿಸಿದ ಗೆಳೆಯ!

ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…

2 days ago

ಹಂಪಿಯಲ್ಲಿ ಅಕ್ರಮ ಹೋಂಸ್ಟೇ, ವಾಣಿಜ್ಯ ಚಟುವಟಿಕೆ ಆರೋಪ: 54 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸ್ವಯಂಪ್ರೇರಿತ ದೂರು

ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…

2 days ago