ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಹಿರೇನರ್ತಿ ಗ್ರಾಮದಲ್ಲಿ ಸಂಭವಿಸಿದ ಭಾರೀ ದುರ್ಘಟನೆಯೊಂದರಲ್ಲಿ 18 ವರ್ಷದ ಯುವಕ ಮೈಲಾರಪ್ಪ ಬಸವರಾಜ್ ಉಣಕಲ್ ಸಿಡಿಲು ಬಡಿತದಿಂದ ಸಾವಿಗೀಡಾದ ಘಟನೆ ಗ್ರಾಮದವರನ್ನು ನೊಂದಿಸಿದೆ.
ಘಟನೆ ವಿಚಾರ ತಿಳಿದ ತಕ್ಷಣ ಕ್ಷೇತ್ರದ ಶಾಸಕರಾದ ಎಂ.ಆರ್. ಪಾಟೀಲ್ ಅವರು ಮೃತ ಯುವಕನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮೃತನ ತಾಯಿಗೆ ಸರ್ಕಾರದಿಂದ ಬಿಡುಗಡೆಯಾಗಿರುವ ರೂ. 5 ಲಕ್ಷ ಪರಿಹಾರ ಧನದ ಪಾವತಿ ಪತ್ರವನ್ನು ಅವರು ಸ್ವತಃ ಹಸ್ತಾಂತರಿಸಿದರು. ಈ ಮೊತ್ತವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (NDRF) ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒದಗಿಸಲಾಗಿದೆ.
“ಮೈಲಾರಪ್ಪನ ಸಾವಿನ ಸುದ್ದಿಯಿಂದ ನನಗೆ ತುಂಬಾ ವಿಷಾದವಾಗಿದೆ. ಇಂತಹ ದುರ್ಘಟನೆಗಳು ಸಂಭವಿಸಬಾರದು,” ಎಂದು ಶಾಸಕರು ಭಾವೋದ್ರೇಕದಿಂದ ಹೇಳಿದರು.
ಶಾಸಕರ ಭೇಟಿಯ ವೇಳೆ ಕುಂದಗೋಳ ತಹಸಿಲ್ದಾರ್ ಮಾವರಕರ್ ಹಾಗೂ ಸ್ಥಳೀಯ ಗಣ್ಯರಾದ ದಾನಪ್ಪ ಗಂಗಾಯಿ, ಡಿ. ವೈ. ಲಕ್ಕನಗೌಡ್ರ, ರಂಗನಗೌಡ ಪಾಟೀಲ್, ಮಾಲತೇಶ್ ಶ್ಯಾಗೋಟಿ, ರುದ್ರಪ್ಪ ಮಡ್ಲಿ, ಬಸವರಾಜ್ ಚಿಕ್ಕಹರಕುಣಿ, ಕೆಂಚಪ್ಪ ಸಾದಾರ್, ಅಶೋಕ್ ಹಸಬಿ, ರಾಘವೇಂದ್ರಗೌಡ ಪಾಟೀಲ್, ಬಸಯ್ಯ ಹಿರೇಮಠ, ಚನ್ನವೀರಗೌಡ ಪಾಟೀಲ್, ಮಂಜುನಾಥ್ ಹಳ್ಳೂರ್, ಕಲ್ಲಪ್ಪ ಹರಕುಣಿ ಸೇರಿದಂತೆ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಕೂಡ ಮೃತನ ಕುಟುಂಬಕ್ಕೆ ಸಹಾನುಭೂತಿ ಸೂಚಿಸಿ, ಅಗತ್ಯ ನೆರವು ನೀಡುವ ಭರವಸೆ ನೀಡಿದರು.
ಗುಜರಾತಿನ ರಾಜ್ಕೋಟ್ನಲ್ಲಿ ಯುವತಿ ನಂದಿನಿ ಬೋಸ್ಮಿಯಾ ಸಾವಿನ ಪ್ರಕರಣವು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆಮ್ ಆದ್ಮಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ನಂದಿನಿ,…
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದ್ದು, ಪತ್ನಿಯ ಶೀಲವನ್ನು ಅನುಮಾನಿಸುತ್ತಿದ್ದ ಪತಿಯೊಬ್ಬ ಕೊನೆಗೆ ಆಕೆಯನ್ನು…
ದೇಶದ ಗಡಿಯಲ್ಲಿ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕರೊಬ್ಬರು, ಸ್ವಂತ ಮಕ್ಕಳ ನಿರ್ಲಕ್ಷ್ಯದಿಂದ ಮನನೊಂದು ತಮ್ಮ ಸುಮಾರು ₹4…
ಹಸಿದ ಕಂದಮ್ಮನ ಅಳುವನ್ನು ಸಮಾಧಾನಪಡಿಸಲಾಗದೆ ಅಸಹಾಯಕನಾಗಿ ನಿಂತ ತಂದೆಯೊಬ್ಬನ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರ ಮನಕಲಕಿದೆ. ಪತ್ನಿ ಮನೆಯನ್ನು ತೊರೆದು…
ತಂದೆ, ತಾಯಿ ಮತ್ತು ತಂಗಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತಳಾಗಿರುವ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಪ್ರಕರಣದಲ್ಲಿ ದಿನದಿಂದ…
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ್ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದ್ದು, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬರು ತಮ್ಮ ಒಂದೂವರೆ…