Categories: CrimeLatest

ಚಿಪ್ಪಿಕಲ್ಲು ದುರಂತದ ನೋವು ತಾಳಲಾರದೆ ಯುವಕ ಸಾವು; ತಾಯಿಯನ್ನು ಕಳೆದುಕೊಂಡ ಕುಟುಂಬಕ್ಕೆ ಮತ್ತೊಂದು ಆಘಾತ

ಭಟ್ಕಳ: ವೆಂಕಟಾಪುರ ನದಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಚಿಪ್ಪಿಕಲ್ಲು ದುರಂತದಲ್ಲಿ ತಾಯಿಯನ್ನು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕುಟುಂಬದವರನ್ನು ಹಾಗೂ ಸ್ಥಳೀಯರನ್ನು ಮತ್ತಷ್ಟು ಶೋಕದಲ್ಲಿ ಮುಳುಗಿಸಿದೆ.

ಬೆಂಗ್ರೆ ಸಮೀಪದ ಮೋಳಿನಮನೆಯ ನಿವಾಸಿ ಆನಂದ ಅಣ್ಣಪ್ಪ ನಾಯ್ಕ (36) ಮೃತರು. ಇತ್ತೀಚೆಗೆ ತಟ್ಟಿಹಕ್ಕಲ ಹೊಳೆಯ ಬಳಿ ಚಿಪ್ಪಿಕಲ್ಲು ಆರಿಸುವ ವೇಳೆ ಸಂಭವಿಸಿದ್ದ ದುರಂತದಲ್ಲಿ 14 ಮಂದಿ ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದು, ಅವರಲ್ಲಿ ಆನಂದ ಅವರ ತಾಯಿ ಲಕ್ಷಿ ನಾಯ್ಕ ಕೂಡ ಸೇರಿದ್ದರು.

ಕುಟುಂಬದವರ ಮಾಹಿತಿ ಪ್ರಕಾರ, ತಾಯಿಯ ಸಾವಿನ ಬಳಿಕ ಆನಂದ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು. ಅವರ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದಿದ್ದು, ಮದ್ಯಪಾನದ ಚಟವೂ ಹೆಚ್ಚಾಗಿತ್ತು ಎಂದು ತಿಳಿದುಬಂದಿದೆ.

ಬುಧವಾರ ಮಧ್ಯಾಹ್ನ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಅವರು ಕಾಣೆಯಾಗಿದ್ದರು. ಬಳಿಕ ಮನೆಯ ಮೇಲ್ಚಾವಣಿ ಮೂಲಕ ಹೊರಗೆ ತೆರಳಿದ್ದ ಅವರು ಬಾವಿಗೆ ಬಿದ್ದಿರುವುದು ಪತ್ತೆಯಾಯಿತು. ಸ್ಥಳೀಯರ ನೆರವಿನಿಂದ ಮೃತದೇಹವನ್ನು ಹೊರತೆಗೆದು ಅಗತ್ಯ ಕ್ರಮ ಕೈಗೊಳ್ಳಲಾಯಿತು.

ಎಂ.ಕಾಂ ಪದವೀಧರರಾಗಿದ್ದ ಆನಂದ ಅವರಿಗೆ ಸೂಕ್ತ ಉದ್ಯೋಗ ದೊರೆಯದಿರುವುದೂ ಅವರ ಮಾನಸಿಕ ಒತ್ತಡಕ್ಕೆ ಕಾರಣವಾಗಿರಬಹುದು ಎಂದು ಕುಟುಂಬದವರು ತಿಳಿಸಿದ್ದಾರೆ.

ಈ ಕುರಿತು ಮೃತರ ತಂದೆ ಅಣ್ಣಪ್ಪ ನಾಯ್ಕ ಅವರು ಮುರುಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸಾವಿನ ನಿಖರ ಕಾರಣ ತನಿಖೆ ಪೂರ್ಣಗೊಂಡ ಬಳಿಕವೇ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭ್ರಷ್ಟರ ಬೇಟೆ

Recent Posts

ಮುಂಡಗೋಡಿನಲ್ಲಿ ಬಾಲ್ಯ ವಿವಾಹಕ್ಕೆ ಬ್ರೇಕ್: ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತ್ವರಿತ ಕಾರ್ಯಾಚರಣೆ, ಅಪ್ರಾಪ್ತೆಯ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನಲ್ಲಿ ನಡೆಯಲಿದ್ದ ಬಾಲ್ಯ ವಿವಾಹವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸಮಯೋಚಿತವಾಗಿ ತಡೆಗಟ್ಟುವಲ್ಲಿ…

3 hours ago

ಕೆಬಿಜೆಎನ್ಎಲ್ ಶಾಖಾ ಕಾಲುವೆ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಆರೋಪ; ರೈತರ ಆಕ್ರೋಶ, ಹೋರಾಟದ ಎಚ್ಚರಿಕೆ

ವಿಜಯಪುರ: ರೈತರಿಗೆ ನೀರಾವರಿ ಸೌಲಭ್ಯವನ್ನು ಸಮರ್ಪಕವಾಗಿ ಒದಗಿಸುವ ಉದ್ದೇಶದಿಂದ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಅದರ ಭಾಗವಾಗಿ ಬಸವನ ಬಾಗೇವಾಡಿ…

9 hours ago

₹79.36 ಲಕ್ಷ ವೆಚ್ಚದ ಲಿಂಗಣ್ಣ ಕಾಲೋನಿ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

ಮೊದಲ ಹಂತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಉದ್ದೇಶದಿಂದ ಬಳ್ಳಾರಿ ನಗರದ ಗಾಂಧಿನಗರ 22ನೇ ವಾರ್ಡ್‌ನ ಸೊಂತ ಲಿಂಗಣ್ಣ ಕಾಲೋನಿಯ…

9 hours ago

ಅನಾಥ ಬಾಲಕಿಯ ಬದುಕು ಸೂಟ್‌ಕೇಸ್‌ನಲ್ಲಿ ಅಂತ್ಯ: ವರ್ಷದ ಬಳಿಕ ಅರಣ್ಯದಲ್ಲಿ ಬಯಲಾಯ್ತು ಭೀಕರ ರಹಸ್ಯ!

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತರಲಘಟ್ಟದಲ್ಲಿ ನಡೆದಿರುವ 14 ವರ್ಷದ ಅನಾಥ ಬಾಲಕಿ ಸಂಗೀತಾ ಸಾವಿನ ಪ್ರಕರಣವು ವರ್ಷ ಕಳೆದ…

10 hours ago

ಅನುಕಂಪದ ಸರ್ಕಾರಿ ಉದ್ಯೋಗದ ಆಸೆಗೆ ಹೆತ್ತ ತಾಯಿಯನ್ನೇ ಕೊಲ್ಲಿಸಿದ ಮಗಳು; ರಸ್ತೆ ಅಪಘಾತದ ಹಿಂದಿನ ಸಂಚು ಬಯಲು!

ರಾಜಸ್ಥಾನದ ಜೈಪುರದಲ್ಲಿ ಮನಸ್ಸು ಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ. ಅನುಕಂಪದ ಆಧಾರದ ಸರ್ಕಾರಿ ಉದ್ಯೋಗ ಮತ್ತು ಆಸ್ತಿಯ ಆಸೆಯಿಂದ 23…

10 hours ago

13 ವರ್ಷದ ಬಾಲಕಿಯ ಮೇಲಿನ ಅಮಾನವೀಯ ದೌರ್ಜನ್ಯ: ಐದು ದಿನಗಳ ಹೋರಾಟದ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಮಗು

ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಮಾನವೀಯತೆಯನ್ನೇ ತಲೆತಗ್ಗಿಸುವ ಘಟನೆ ಬೆಳಕಿಗೆ ಬಂದಿದೆ. 13 ವರ್ಷದ ಬಾಲಕಿಯೊಬ್ಬಳನ್ನು ಆಟೋ ಚಾಲಕ ಅಪಹರಿಸಿ ಹೋಟೆಲ್…

10 hours ago