ಲುಧಿಯಾನಾ (ಜುಲೈ 10): ಪಂಜಾಬ್ನ ಲುಧಿಯಾನಾದಲ್ಲಿ ಮಹಿಳೆಯ ಶವವನ್ನು ಬೈಕ್ನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸಾಗಿಸುತ್ತಿದ್ದ ಶಂಕಿತರಿಬ್ಬರು ಸಾರ್ವಜನಿಕರ ಗಮನಕ್ಕೆ ಬಿದ್ದು, ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ.
ಫಿರೋಜ್ಪುರ ರಸ್ತೆಯ ಫ್ಲೈಓವರ್ ಹತ್ತಿರ ಬೈಕ್ನಲ್ಲಿ ಹೊರಡಿದ್ದ ಇಬ್ಬರು ಯುವಕರು ದೊಡ್ಡ ಪ್ಲಾಸ್ಟಿಕ್ ಚೀಲವೊಂದನ್ನು ಇಟ್ಟುಕೊಂಡು ಸಾಗುತ್ತಿದ್ದರು. ಜನರಿಗೆ ಅನುಮಾನ ಉಂಟಾಗಿ ಚೀಲದ ಬಗ್ಗೆ ಪ್ರಶ್ನಿಸಿದಾಗ, “ಇದು ಮಾವಿನ ಹಣ್ಣುಗಳ ಚೀಲ” ಎಂದು ಉತ್ತರಿಸಿದರು. ಆದರೆ ಶಂಕಿತ ಮಾತಿಗೆ ತೃಪ್ತಿಯಾಗದ ಜನರು ಚೀಲ ತೆರೆದು ನೋಡಿದಾಗ, ಅದರೊಳಗೆ ಪ್ಯಾಕ್ ಮಾಡಲಾದ ಮಹಿಳೆಯ ಶವವೊಂದು ಕಂಡುಬಂದಿತು!
ಆಘಾತಕ್ಕೆ ಒಳಗಾದ ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಬೈಕ್ ವಶಕ್ಕೆ ಪಡೆದರು. ಆದರೆ ಈ ನಡುವೆಯೇ ಇಬ್ಬರು ಶಂಕಿತರು ಸ್ಥಳದಿಂದ ಪಲಾಯನ ಮಾಡಿದರು.
ಮೃತದೇಹವನ್ನು ಎರಡು ಪ್ಲಾಸ್ಟಿಕ್ ಕವರ್ಗಳೊಳಗೆ ತುಂಬಿ, ಫ್ಲೈಓವರ್ ಕೆಳಗೆ ಎಸೆದಿದ್ದನ್ನು ಶಂಕಿತರು ಯೋಜಿಸಿದ್ದಂತೆ ತೋರುತ್ತಿದೆ. ಈ ಬಗ್ಗೆ ಸ್ಥಳಕ್ಕೆ ಬಂದಿರುವ ಫಾರೆನ್ಸಿಕ್ ತಂಡ ಈಗ ಪರಿಶೀಲನೆ ನಡೆಸುತ್ತಿದೆ. ಮಹಿಳೆಯ ಸಾವಿಗೆ ನಿಖರ ಕಾರಣ ಹಾಗೂ ಪತ್ತೆಹಚ್ಚಲಾಗದ ಆರೋಪಿಗಳ ಹಿಂದಿರುವ ನಿಖರ ಹಿನ್ನೆಲೆ ಬಗ್ಗೆ ತನಿಖೆ ನಡೆಯುತ್ತಿದೆ.
ಈ ಘಟನೆ ಲುಧಿಯಾನಾ ನಗರದ ಜನರಲ್ಲಿ ಭೀತಿಯನ್ನು ಹುಟ್ಟಿಸಿದೆ. ಇದೀಗ ಆರೋಪಿಗಳನ್ನು ಬಂಧಿಸಲು ಪೊಲೀಸ್ ತೀವ್ರ ಶೋಧ ಕಾರ್ಯ ಆರಂಭಿಸಿದೆ.
ಗುಜರಾತಿನ ರಾಜ್ಕೋಟ್ನಲ್ಲಿ ಯುವತಿ ನಂದಿನಿ ಬೋಸ್ಮಿಯಾ ಸಾವಿನ ಪ್ರಕರಣವು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆಮ್ ಆದ್ಮಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ನಂದಿನಿ,…
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದ್ದು, ಪತ್ನಿಯ ಶೀಲವನ್ನು ಅನುಮಾನಿಸುತ್ತಿದ್ದ ಪತಿಯೊಬ್ಬ ಕೊನೆಗೆ ಆಕೆಯನ್ನು…
ದೇಶದ ಗಡಿಯಲ್ಲಿ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕರೊಬ್ಬರು, ಸ್ವಂತ ಮಕ್ಕಳ ನಿರ್ಲಕ್ಷ್ಯದಿಂದ ಮನನೊಂದು ತಮ್ಮ ಸುಮಾರು ₹4…
ಹಸಿದ ಕಂದಮ್ಮನ ಅಳುವನ್ನು ಸಮಾಧಾನಪಡಿಸಲಾಗದೆ ಅಸಹಾಯಕನಾಗಿ ನಿಂತ ತಂದೆಯೊಬ್ಬನ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರ ಮನಕಲಕಿದೆ. ಪತ್ನಿ ಮನೆಯನ್ನು ತೊರೆದು…
ತಂದೆ, ತಾಯಿ ಮತ್ತು ತಂಗಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತಳಾಗಿರುವ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಪ್ರಕರಣದಲ್ಲಿ ದಿನದಿಂದ…
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ್ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದ್ದು, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬರು ತಮ್ಮ ಒಂದೂವರೆ…