ಹುನಗುಂದ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಮತಗಿ ಕ್ರಾಸ್ ಬಳಿ ಕೆಲವು ವಾರಗಳ ಹಿಂದೆ ಅಪಘಾತವಾಗಿದ್ದು ಅಪಘಾತದಲ್ಲಿ ಪ್ರವೀಣ್ ಸಾಬಣ್ಣನವರ್ ಎಂಬುವವರು ಮೃತಪಟ್ಟಿದ್ದರು. ಮೇಲ್ನೋಟಕ್ಕೆ ಇದು ಅಪಘಾತದ ರೀತಿಯಲ್ಲಿ ಕಂಡುಬಂದರೂ ಪೊಲೀಸರ ವಿಚಾರಣೆಯ ಬಳಿಕ ಕೊಲೆ ಎಂದು ಸಾಬೀತಾಗುವುದಲ್ಲದೆ ಅಚ್ಚರಿಯ ವಿಚಾರವೊಂದು ಹೊರಬಿದ್ದಿದೆ.
ಸಾವನ್ನಪ್ಪಿರುವ ಪ್ರವೀಣ್ ಹಾಗೂ ನಿತ್ಯ ಎಂಬಾಕೆಯು ಪ್ರೀತಿಸಿ ವಿವಾಹವಾಗಿರುತ್ತಾರೆ. ಆದರೆ ನಿತ್ಯ ಮದುವೆಯ ಬಳಿಕ ರಾಘವೇಂದ್ರ ಎಂಬಾತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುತ್ತಾಳೆ. ಇವಳ ಅನೈತಿಕ ಸಂಬಂಧಕ್ಕೆ ಈಕೆಯ ಗಂಡ ಮುಳುವಾಗಬಾರದು ಎಂದು ಆಲೋಚಿಸಿ ಪ್ರಿಯಕರನೊಂದಿಗೆ ಸೇರಿ ಉಪಾಯ ಮಾಡಿ ಬೈಕ್ ನಲ್ಲಿ ಚಲಿಸುತ್ತಿದ್ದಂತಹ ಪ್ರವೀಣನಿಗೆ ನಿತ್ಯ ಹಾಗೂ ರಾಘವೇಂದ್ರ ಕಾರಿನಲ್ಲಿ ಬಂದು ಗುದ್ದಿದ್ದಾರೆ. ಪ್ರವೀಣನ ಬೈಕಿಗೆ ಗುದ್ದಿದ ನಂತರ ಸ್ಥಳದಿಂದ ಪರಾರಿಯಾಗುತ್ತಿದ್ದ ನಿತ್ಯಾಗೆ ಪ್ರವೀಣನೇ ಕರೆ ಮಾಡಿ ನನಗೆ ಆಘಾತವಾಗಿದೆ ನನ್ನನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಕಾಪಾಡು ಎಂದು ಕೇಳಿಕೊಂಡಿದ್ದಾನೆ. ಆದರೆ ಈ ಐನಾತಿ ಹೆಂಡ್ತಿ ನಿತ್ಯ ಪುನಃ ಕಾರಿನಲ್ಲಿ ಹಿಂದೆ ಬಂದು ಪ್ರವೀಣನ ಮೇಲೆ ಕಾರು ಹತ್ತಿಸಿ ಮೃತ ಪಡುವಂತೆ ಮಾಡಿದ್ದಾಳೆ. ಈ ಎಲ್ಲಾ ವಿಚಾರವೂ ಪೋಲಿಸರ ತನಿಖೆಯ ಬಳಿಕ ಬೆಳಕಿಗೆ ಬಂದಿದು ಅನೈತಿಕ ಸಂಬಂಧಕ್ಕಾಗಿ ಗಂಡನನ್ನು ಬಲಿತೆಗೆದುಕೊಂಡ ನಿತ್ಯ ಹಾಗೂ ಆಕೆಯ ಪ್ರಿಯಕರ ರಾಘವೇಂದ್ರ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…
ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…
ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…
ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…
ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…
ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…