Latest

ಹೋಗಿದ್ದು ಪೊಲೀಸರ ಜೊತೆ; ಸಿಕ್ಕಿದ್ದು ಫುಟ್ಪಾತ್ ನಲ್ಲಿ ಹೆಣವಾಗಿ!

ಮಕ್ಕಳ ಕಳ್ಳರ ಬಗ್ಗೆ ಸಾಕಷ್ಟು ಜಿಲ್ಲೆಗಳಲ್ಲಿ ವದಂತಿ ಎದ್ದಿದ್ದು ಬೆಂಗಳೂರಿನಲ್ಲೂ ಸಹ ಇದು ಹಬ್ಬಿದೆ. ಕಳೆದ ತಿಂಗಳು ರಾಮ್ ಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಹೊತ್ತು ಓಡಾಡುತ್ತಿದ್ದ ಕುಡುಕನೋರವನಿಗೆ ಸ್ಥಳೀಯರೆಲ್ಲ ಸೇರಿ ಮಕ್ಕಳ ಕಳ್ಳನೆಂದು ಹಿಗ್ಗ ಮುಗ್ಗ ತಳಿಸಿರುತ್ತಾರೆ. ನಂತರ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿರುತ್ತಾರೆ.

ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ ಇದರ ಮುಂದುವರಿದ ಭಾಗವೇನೆಂದರೆ ಪೊಲೀಸರ ವಶಕ್ಕೆ ಒಪ್ಪಿಸಿದ ಮುಂದಿನ ದಿನ ಆತ ಫುಟ್ಬಾತ್ ನಲ್ಲಿ ಹೆಣವಾಗಿ ಪತ್ತೆಯಾಗಿದ್ದಾನೆ. ಸ್ಥಳೀಯರು ಆತನಿಗೆ ಹಿಗ್ಗ ಮುಗ್ಗ ತಳಿಸಿದ ನಂತರ ರಾಮ್ ಮೂರ್ತಿ ನಗರ ಪೊಲೀಸರ ಹೊಯ್ಸಳ ವಾಹನದೊಳಕ್ಕೆ ಹತ್ತಿಸಿರುವ ವಿಡಿಯೋ ಸ್ಥಳೀಯರು ಚಿತ್ರಿಸಿಕೊಂಡಿರುತ್ತಾರೆ. ಅಂದರೆ ಇಲ್ಲಿ ಸ್ಪಷ್ಟವಾಗುವುದೇನೆಂದರೆ ಆತನನ್ನು ಪೊಲೀಸರು ಕರೆದುಕೊಂಡು ಹೋಗಿರುತ್ತಾರೆ. ಪೊಲೀಸರ ವಾಹನದೊಳಕ್ಕೆ ಅವನೇ ನಡೆದುಕೊಂಡು ಹೋಗಿ ಹತ್ತಿರುತ್ತಾನೆ.

ಆಚಾರ್ಯ ವಿಚಾರವೇನೆಂದರೆ ಅವರು ಕರೆದುಕೊಂಡು ಹೋದ ಮುಂದಿನ ದಿನ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫುಟ್ ಬಾತ್ ಒಂದರ ಮೇಲೆ ಅನಾಮ ದೇಹ ವ್ಯಕ್ತಿಯ ಹೆಣ ಸಿಕ್ಕಿರುತ್ತದೆ ಎಂದು ಪ್ರಕಟಣೆ ನೀಡಿರುತ್ತಾರೆ. ಅ ಹೆಣವು ರಾಮಮೂರ್ತಿ ನಗರ ಪೊಲೀಸರು ಕರೆದುಕೊಂಡು ಹೋಗಿದ್ದಂತವನದ್ದೇ ಆಗಿರುತ್ತದೆ. ಪೊಲೀಸರು ಹೇಳುವ ಪ್ರಕಾರ ಅವನು ಮಕ್ಕಳ ಕಳ್ಳನಲ್ಲ ಕುಡಿದು ಓಡಾಡುತ್ತಿದ್ದ, ಸ್ಥಳೀಯರು ತಪ್ಪಾಗಿ ತಿಳಿದು ಹೊಡೆದಿದ್ದರೂ ಅದಕ್ಕಾಗಿ ಅವನನ್ನು ಬಿಟ್ಟು ಕಳುಹಿಸಿದ್ದೇವೆ ಎಂದು ಹೇಳಿರುತ್ತಾರೆ. ಯಾವುದಾದರೂ ಅನಾಮದೇಯ ಹೆಣ ಸಿಕ್ಕ ಬಳಿಕ ಪೊಲೀಸರು ಎಲ್ಲ ಪೊಲೀಸ್ ಠಾಣೆಗಳಿಗೂ ಮಾಹಿತಿ ನೀಡುತ್ತಾರೆ ಹಾಗೂ ಪ್ರಕಟಣೆಗಳನ್ನು ನೀಡುತ್ತಾರೆ.

ಹೀಗೆ ಮಾಹಿತಿ ನೀಡಿದ ನಂತರವೂ ಸಹ ಬೆಂಗಳೂರಿನಲ್ಲೇ ಇರುವಂತಹ ಮತ್ತೊಂದು ಠಾಣೆಯ ಪೊಲೀಸರಿಗೆ ತಲುಪಲಿಲ್ಲವ? ಅಥವಾ ಪೊಲೀಸರೇ ಈತನನ್ನು ಅನಾಮದೇಯ ವ್ಯಕ್ತಿಯ ಹೆಣವೆಂದು ಬಿಂಬಿಸಲು ಮುಂದಾದಾರ? ಈ ಎಲ್ಲಾ ಪ್ರಶ್ನೆಗಳು ಮೂಡಲು ಕಾರಣ ಒಂದಿದೆ ಅದೇನೆಂದರೆ ಇ ಘಟನೆ ನಡೆದು ಸುಮಾರು 14 ರಿಂದ 15 ದಿನಗಳು ಕಳೆದಿವೆ ಆದರೂ ಸಹ ಅಂದಿನ ದಿನ ಆತನನ್ನು ತಳಿಸಿದ ಸಾರ್ವಜನಿಕರನ್ನು ಸಹ ಪ್ರಶ್ನಿಸಿರುವುದಿಲ್ಲ ಹಾಗೂ ಕರೆದುಕೊಂಡ ಹೋದ ಪೊಲೀಸರ ವಿರುದ್ಧವು ಯಾವುದೇ ರೀತಿಯ ತನಿಖೆ ನಡೆದಿರುವುದಿಲ್ಲ. ಅಂದರೆ ಇಲ್ಲಿ ಪೊಲೀಸರು ಆತನದ್ದು ಅನಾಥ ಶವವೆಂದು ಬಿಂಬಿಸಲು ಮುಂದಾಗಿದ್ದಾರೆ ಎಂಬುದು ತಿಳಿಯುತ್ತದೆ.
ಕೆಲವು ದಿನಗಳ ಹಿಂದೆ ಸಾಮಾಜಿಕ ಹೋರಾಟಗಾರರು ಹಾಗೂ ಕೆಲವು ಸಂಘಟನೆಗಳು ಇದರ ವಿರುದ್ಧ ಧ್ವನಿ ಎತ್ತಿ ನ್ಯಾಯಕ್ಕಾಗಿ ಕೋರ್ಟಿನ ಮೊರೆ ಹೋದಂತಹ ಸಂದರ್ಭದಲ್ಲಿ ಪೊಲೀಸರು ಅಂದಿನ ದಿನ ಆತನಿಗೆ ತಳಿಸಿರುವಂತಹ ವ್ಯಕ್ತಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಇಷ್ಟು ದಿನ ಪೊಲೀಸರು ಸುಮ್ಮನಿದ್ದು ಈ ರೀತಿ ದಿಡೀರನೆ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು. ಆ ದಿನ ಪೊಲೀಸರು ಆತನನ್ನು ಕರೆದುಕೊಂಡ ಹೋದ ಮೇಲೆ ಮಾಡಿದ್ದಾದರೂ ಏನು? ನಿಜಕ್ಕೂ ಆ ದಿನ ಸಾಯುವ ಹಾಗೆ ಒದೆ ತಿಂದವನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದರಾ? ಸಾಯುವ ಸ್ಥಿತಿಯಲ್ಲಿ ಇದ್ದವನನ್ನು ಪೊಲೀಸರು ಆಸ್ಪತ್ರೆಗೆ ಏಕೆ ಸೇರಿಸಿರುವುದಿಲ್ಲ? ಪೊಲೀಸರಿಗೆ ಮನುಷ್ಯತ್ವ ಇಲ್ಲವಾ? ಅಥವಾ ಹಿಂದೆ ನಡೆದಿರುವ ಕಥೆಯೇ ಬೇರೆನಾ?
ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕರು ಸಿಗದಿದ್ದರೂ ಹೋದ ಅಮಾಯಕನ ಜೀವ ಹಿಂತಿರುಗಿ ಬರುವುದಿಲ್ಲ. ಸ್ಥಳೀಯ ಜನರ ಮುಂದೆ ತಮ್ಮ ಪೌರುಷವನ್ನು ತೋರಿಸಲು ಹೋಗಿ ಅಮಾಯಕನೋರವನಿಗೆ ತಳಿಸಿದ ಮೂವರು ಈಗ ಕೊಲೆಯ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದಾರೆ.
ನ್ಯಾಯಾಲಯದಲ್ಲಾದರೂ ಈ ಪ್ರಕರಣದ ಅಸಲಿ ಸತ್ಯ ಹೊರಬರುತ್ತದೆಯೋ ಅಥವಾ ಸಾಕಷ್ಟು ಪ್ರಕರಣಗಳಂತೆ ಇದು ಸಹ ಮೂಲೆಗುಂಪಾಗುತ್ತದೆಯೋ ಕಾದು ನೋಡಬೇಕು.

ಭ್ರಷ್ಟರ ಬೇಟೆ

Recent Posts

‍ರೀಲ್ಸ್ ಮಾಡುವ ಹುಚ್ಚು, ಕರೆದಾಗ ಬಂದು ಜೊತೆಗೆ ಮಲಗುತ್ತಿರಲಿಲ್ಲ ಎಂದು ಪತ್ನಿಯನ್ನು ಕೊಂದ ಪತಿ

ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…

2 days ago

ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27ರ ಯುವತಿ ಸಾವು; ಉಡುಪಿಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ, ತನಿಖೆ ಚುರುಕು

ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…

2 days ago

‘ಅಂದು ನನ್ನೊಂದಿಗೆ ಮಲಗಲು ಕೇಳಿದ್ದು ನೀವೇ ತಾನೇ?’ ನಿರ್ಮಾಪಕನಿಗೆ ನಟಿ ಚಾಂದಿನಿ ಚೌಧರಿ ಶಾಕ್!

ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…

2 days ago

ಮದುವೆಯಾಗಿ 4 ದಿನಕ್ಕೆ ಮಾಜಿ ಪ್ರೇಮಿಯೊಂದಿಗೆ ಹೋಟೆಲ್ ನಲ್ಲಿ ಪತ್ನಿ; ಪತಿಯ ಕೈಗೆ ವಿಡಿಯೋ…!

ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…

2 days ago

ಪತ್ನಿಯನ್ನು ಕೊಂದು ಶವ ವಿಲೇವಾರಿಗೆ ಸ್ನೇಹಿತನ ನೆರವು ಕೇಳಿದ ಪತಿ; ಜಾಣತನದಿಂದ ಪೊಲೀಸರಿಗೆ ಒಪ್ಪಿಸಿದ ಗೆಳೆಯ!

ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…

2 days ago

ಹಂಪಿಯಲ್ಲಿ ಅಕ್ರಮ ಹೋಂಸ್ಟೇ, ವಾಣಿಜ್ಯ ಚಟುವಟಿಕೆ ಆರೋಪ: 54 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸ್ವಯಂಪ್ರೇರಿತ ದೂರು

ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…

2 days ago