Latest

ಹೋಗಿದ್ದು ಪೊಲೀಸರ ಜೊತೆ; ಸಿಕ್ಕಿದ್ದು ಫುಟ್ಪಾತ್ ನಲ್ಲಿ ಹೆಣವಾಗಿ!

ಮಕ್ಕಳ ಕಳ್ಳರ ಬಗ್ಗೆ ಸಾಕಷ್ಟು ಜಿಲ್ಲೆಗಳಲ್ಲಿ ವದಂತಿ ಎದ್ದಿದ್ದು ಬೆಂಗಳೂರಿನಲ್ಲೂ ಸಹ ಇದು ಹಬ್ಬಿದೆ. ಕಳೆದ ತಿಂಗಳು ರಾಮ್ ಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಹೊತ್ತು ಓಡಾಡುತ್ತಿದ್ದ ಕುಡುಕನೋರವನಿಗೆ ಸ್ಥಳೀಯರೆಲ್ಲ ಸೇರಿ ಮಕ್ಕಳ ಕಳ್ಳನೆಂದು ಹಿಗ್ಗ ಮುಗ್ಗ ತಳಿಸಿರುತ್ತಾರೆ. ನಂತರ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿರುತ್ತಾರೆ.

ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ ಇದರ ಮುಂದುವರಿದ ಭಾಗವೇನೆಂದರೆ ಪೊಲೀಸರ ವಶಕ್ಕೆ ಒಪ್ಪಿಸಿದ ಮುಂದಿನ ದಿನ ಆತ ಫುಟ್ಬಾತ್ ನಲ್ಲಿ ಹೆಣವಾಗಿ ಪತ್ತೆಯಾಗಿದ್ದಾನೆ. ಸ್ಥಳೀಯರು ಆತನಿಗೆ ಹಿಗ್ಗ ಮುಗ್ಗ ತಳಿಸಿದ ನಂತರ ರಾಮ್ ಮೂರ್ತಿ ನಗರ ಪೊಲೀಸರ ಹೊಯ್ಸಳ ವಾಹನದೊಳಕ್ಕೆ ಹತ್ತಿಸಿರುವ ವಿಡಿಯೋ ಸ್ಥಳೀಯರು ಚಿತ್ರಿಸಿಕೊಂಡಿರುತ್ತಾರೆ. ಅಂದರೆ ಇಲ್ಲಿ ಸ್ಪಷ್ಟವಾಗುವುದೇನೆಂದರೆ ಆತನನ್ನು ಪೊಲೀಸರು ಕರೆದುಕೊಂಡು ಹೋಗಿರುತ್ತಾರೆ. ಪೊಲೀಸರ ವಾಹನದೊಳಕ್ಕೆ ಅವನೇ ನಡೆದುಕೊಂಡು ಹೋಗಿ ಹತ್ತಿರುತ್ತಾನೆ.

ಆಚಾರ್ಯ ವಿಚಾರವೇನೆಂದರೆ ಅವರು ಕರೆದುಕೊಂಡು ಹೋದ ಮುಂದಿನ ದಿನ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫುಟ್ ಬಾತ್ ಒಂದರ ಮೇಲೆ ಅನಾಮ ದೇಹ ವ್ಯಕ್ತಿಯ ಹೆಣ ಸಿಕ್ಕಿರುತ್ತದೆ ಎಂದು ಪ್ರಕಟಣೆ ನೀಡಿರುತ್ತಾರೆ. ಅ ಹೆಣವು ರಾಮಮೂರ್ತಿ ನಗರ ಪೊಲೀಸರು ಕರೆದುಕೊಂಡು ಹೋಗಿದ್ದಂತವನದ್ದೇ ಆಗಿರುತ್ತದೆ. ಪೊಲೀಸರು ಹೇಳುವ ಪ್ರಕಾರ ಅವನು ಮಕ್ಕಳ ಕಳ್ಳನಲ್ಲ ಕುಡಿದು ಓಡಾಡುತ್ತಿದ್ದ, ಸ್ಥಳೀಯರು ತಪ್ಪಾಗಿ ತಿಳಿದು ಹೊಡೆದಿದ್ದರೂ ಅದಕ್ಕಾಗಿ ಅವನನ್ನು ಬಿಟ್ಟು ಕಳುಹಿಸಿದ್ದೇವೆ ಎಂದು ಹೇಳಿರುತ್ತಾರೆ. ಯಾವುದಾದರೂ ಅನಾಮದೇಯ ಹೆಣ ಸಿಕ್ಕ ಬಳಿಕ ಪೊಲೀಸರು ಎಲ್ಲ ಪೊಲೀಸ್ ಠಾಣೆಗಳಿಗೂ ಮಾಹಿತಿ ನೀಡುತ್ತಾರೆ ಹಾಗೂ ಪ್ರಕಟಣೆಗಳನ್ನು ನೀಡುತ್ತಾರೆ.

ಹೀಗೆ ಮಾಹಿತಿ ನೀಡಿದ ನಂತರವೂ ಸಹ ಬೆಂಗಳೂರಿನಲ್ಲೇ ಇರುವಂತಹ ಮತ್ತೊಂದು ಠಾಣೆಯ ಪೊಲೀಸರಿಗೆ ತಲುಪಲಿಲ್ಲವ? ಅಥವಾ ಪೊಲೀಸರೇ ಈತನನ್ನು ಅನಾಮದೇಯ ವ್ಯಕ್ತಿಯ ಹೆಣವೆಂದು ಬಿಂಬಿಸಲು ಮುಂದಾದಾರ? ಈ ಎಲ್ಲಾ ಪ್ರಶ್ನೆಗಳು ಮೂಡಲು ಕಾರಣ ಒಂದಿದೆ ಅದೇನೆಂದರೆ ಇ ಘಟನೆ ನಡೆದು ಸುಮಾರು 14 ರಿಂದ 15 ದಿನಗಳು ಕಳೆದಿವೆ ಆದರೂ ಸಹ ಅಂದಿನ ದಿನ ಆತನನ್ನು ತಳಿಸಿದ ಸಾರ್ವಜನಿಕರನ್ನು ಸಹ ಪ್ರಶ್ನಿಸಿರುವುದಿಲ್ಲ ಹಾಗೂ ಕರೆದುಕೊಂಡ ಹೋದ ಪೊಲೀಸರ ವಿರುದ್ಧವು ಯಾವುದೇ ರೀತಿಯ ತನಿಖೆ ನಡೆದಿರುವುದಿಲ್ಲ. ಅಂದರೆ ಇಲ್ಲಿ ಪೊಲೀಸರು ಆತನದ್ದು ಅನಾಥ ಶವವೆಂದು ಬಿಂಬಿಸಲು ಮುಂದಾಗಿದ್ದಾರೆ ಎಂಬುದು ತಿಳಿಯುತ್ತದೆ.
ಕೆಲವು ದಿನಗಳ ಹಿಂದೆ ಸಾಮಾಜಿಕ ಹೋರಾಟಗಾರರು ಹಾಗೂ ಕೆಲವು ಸಂಘಟನೆಗಳು ಇದರ ವಿರುದ್ಧ ಧ್ವನಿ ಎತ್ತಿ ನ್ಯಾಯಕ್ಕಾಗಿ ಕೋರ್ಟಿನ ಮೊರೆ ಹೋದಂತಹ ಸಂದರ್ಭದಲ್ಲಿ ಪೊಲೀಸರು ಅಂದಿನ ದಿನ ಆತನಿಗೆ ತಳಿಸಿರುವಂತಹ ವ್ಯಕ್ತಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಇಷ್ಟು ದಿನ ಪೊಲೀಸರು ಸುಮ್ಮನಿದ್ದು ಈ ರೀತಿ ದಿಡೀರನೆ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು. ಆ ದಿನ ಪೊಲೀಸರು ಆತನನ್ನು ಕರೆದುಕೊಂಡ ಹೋದ ಮೇಲೆ ಮಾಡಿದ್ದಾದರೂ ಏನು? ನಿಜಕ್ಕೂ ಆ ದಿನ ಸಾಯುವ ಹಾಗೆ ಒದೆ ತಿಂದವನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದರಾ? ಸಾಯುವ ಸ್ಥಿತಿಯಲ್ಲಿ ಇದ್ದವನನ್ನು ಪೊಲೀಸರು ಆಸ್ಪತ್ರೆಗೆ ಏಕೆ ಸೇರಿಸಿರುವುದಿಲ್ಲ? ಪೊಲೀಸರಿಗೆ ಮನುಷ್ಯತ್ವ ಇಲ್ಲವಾ? ಅಥವಾ ಹಿಂದೆ ನಡೆದಿರುವ ಕಥೆಯೇ ಬೇರೆನಾ?
ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕರು ಸಿಗದಿದ್ದರೂ ಹೋದ ಅಮಾಯಕನ ಜೀವ ಹಿಂತಿರುಗಿ ಬರುವುದಿಲ್ಲ. ಸ್ಥಳೀಯ ಜನರ ಮುಂದೆ ತಮ್ಮ ಪೌರುಷವನ್ನು ತೋರಿಸಲು ಹೋಗಿ ಅಮಾಯಕನೋರವನಿಗೆ ತಳಿಸಿದ ಮೂವರು ಈಗ ಕೊಲೆಯ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದಾರೆ.
ನ್ಯಾಯಾಲಯದಲ್ಲಾದರೂ ಈ ಪ್ರಕರಣದ ಅಸಲಿ ಸತ್ಯ ಹೊರಬರುತ್ತದೆಯೋ ಅಥವಾ ಸಾಕಷ್ಟು ಪ್ರಕರಣಗಳಂತೆ ಇದು ಸಹ ಮೂಲೆಗುಂಪಾಗುತ್ತದೆಯೋ ಕಾದು ನೋಡಬೇಕು.

ಭ್ರಷ್ಟರ ಬೇಟೆ

Recent Posts

ಭ್ರೂಣಲಿಂಗ ಪತ್ತೆ–ಅಕ್ರಮ ಸ್ಕ್ಯಾನಿಂಗ್ ದಂಧೆ ಭಂಡಾಫೋಡ: ಕೆ.ಆರ್.ಪೇಟೆಯಲ್ಲಿ ಮೂವರು ವೈದ್ಯರು ಬಂಧನ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಅಕ್ರಮ ಸ್ಕ್ಯಾನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರನ್ನು ಬಂಧಿಸಿರುವ ಘಟನೆ…

15 hours ago

₹15 ಲಕ್ಷ ಲಂಚ ಸ್ವೀಕರಿಸುವ ವೇಳೆ ಕೆಎಎಸ್ ಅಧಿಕಾರಿ ಬಲೆಗೆ; ಚಾಲಕನೊಂದಿಗೆ ಬಂಧನ

ಭೂಸ್ವಾಧೀನ ಸಂಬಂಧಿತ ಬಾಕಿ ಕಂದಾಯ ಪ್ರಕರಣವನ್ನು ಪರಿಹರಿಸಲು ಲಂಚ ಪಡೆಯುತ್ತಿದ್ದ ವೇಳೆ ಕೆಎಎಸ್ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಘಟನೆ…

15 hours ago

ಪತ್ನಿಯ ದ್ರೋಹ ಗೊತ್ತಿದ್ದರೂ ಮಕ್ಕಳಿಗಾಗಿ ಸಹನೆ; ವಿಚ್ಛೇದನವೇ? ಹೊಸ ಬದುಕೇ? ಪತಿಯ ಪ್ರಶ್ನೆ ವೈರಲ್

ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಜೀವನ ಸಣ್ಣಪುಟ್ಟ ವಿಚಾರಗಳಿಗೂ ಕುಸಿಯುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಹೊಂದಾಣಿಕೆಯ ಕೊರತೆ, ಅಕ್ರಮ ಸಂಬಂಧಗಳು ಸೇರಿದಂತೆ ಹಲವು…

17 hours ago

31 ವರ್ಷ ಜೈಲು ಜೀವನದ ನಂತರ ಹೊಸ ಹಾದಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ದೋಷಿ ಪೆರಾರಿವಾಲನ್ ಇದೀಗ ವಕೀಲ

ಮಾಜಿ ಪ್ರಧಾನಿ Rajiv Gandhi ಹತ್ಯೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದ ಎ.ಜಿ. ಪೆರಾರಿವಾಲನ್ ಇದೀಗ ವಕೀಲರಾಗಿರುವುದು ಗಮನಸೆಳೆಯುವ ಬೆಳವಣಿಗೆಯಾಗಿದೆ. 2022ರಲ್ಲಿ…

17 hours ago

ಪತಿಯ ಅನೈತಿಕ ಸಂಬಂಧ, ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ; ಬಿಜೆಪಿ ಮುಖಂಡ ಬಂಧನ

ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ದುರಂತ ಘಟನೆ ಸಂಭವಿಸಿದೆ. ಪತಿಯ ಅನೈತಿಕ ಸಂಬಂಧ ಹಾಗೂ ನಿರಂತರ ದೈಹಿಕ-ಮಾನಸಿಕ…

18 hours ago

ಮದುವೆ ಹೆಸರಿನಲ್ಲಿ ₹10 ಕೋಟಿ ವಂಚನೆ ಆರೋಪ: ಬಿಗ್‌ಬಾಸ್ ಖ್ಯಾತಿಯ ಆಶು ರೆಡ್ಡಿ ವಿರುದ್ಧ ಪ್ರಕರಣ

ಹೈದರಾಬಾದ್: ಬಣ್ಣದ ಲೋಕದಲ್ಲಿ ಮತ್ತೆ ವಂಚನೆ ಆರೋಪ ಕೇಳಿಬಂದಿದ್ದು, ತೆಲುಗು ಬಿಗ್‌ಬಾಸ್ ಮೂಲಕ ಜನಪ್ರಿಯತೆ ಪಡೆದ ನಟಿ ಆಶು ರೆಡ್ಡಿ…

2 days ago