Latest

ಕುಂದಗೋಳ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮ

ಕುಂದಗೋಳ : ಇಂದಿನ ಆಧುನಿಕ ಭರಾಟೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನೃತ್ಯ, ಗಾಯನ, ವಿವಿಧ ಮನರಂ ಜನೆ ಕಾರ್ಯಕ್ರಮಗಳು ಕಣ್ಮರೆಯಾಗುತ್ತಿರುವುದು ಕಂಡು, ಇಲ್ಲೊಂದು ಗ್ರಾಮದಲ್ಲಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಅಂಗವಾಗಿ ದಿನಂ ಪ್ರತಿ ವಿವಿಧ ಮನರಂಜನೆ ಕಾರ್ಯಕ್ರಮಗಳು ಜರುಗುತ್ತಿವೆ.

ಹೌದು.! ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ 12 ನೇ ವರ್ಷದ ಗ್ರಾಮದೇವತೆ ಹಾಗೂ ಉಡಚಮ್ಮ ದೇವೆ ಜಾತ್ರೆ ಮಹೋತ್ಸವ ನಿಮಿತ್ತ, ಬರಗಾಲದ ಬಂಟ, ಬಂಜೆತನ ನಿವಾರಕ, ಎಂದೇ ಖ್ಯಾತಿ ಪಡೆದ ಮಹಾ ಪುರುಷ ಕಲಬುರಗಿ ಶ್ರೀ ಶರಣ ಬಸವೇಶ್ವರ ಪ್ರವಚನ, ವಿವಿಧ ಕಾರ್ಯಕ್ರಮಗಳಿಗೆ ಯರಗುಪ್ಪಿ ಗ್ರಾಮ ದೇವತೆ ದೇವಸ್ಥಾನದ ಆವರಣ ಸಾಕ್ಷಿಯಾಗಿತ್ತು.

ಒಂದು ತಿಂಗಳು ಪ್ರವಚನ ನಡೆಯುವುದರಿಂದ ಊರಿನ ಹಿರಿಯರ ಮಾರ್ಗದರ್ಶನದಂತೆ ಯುವಕರು ಒಂದಿಲ್ಲೊಂದು ಕಾರ್ಯಕ್ರಮ ಆಯೋಜಿಸಿ ಯುವಕರಿಗೆ ಪೋತ್ಸಾಹ, ಹುರಿದುಂಬಿಸಲು, ಪ್ರತಿನಿತ್ಯ ಮನೋಲ್ಲಾಸಕ್ಕಾಗಿ ಕಾರ್ಯಕ್ರಮಗಳು ನಡೆಸುತ್ತಾ ಇರುವುದು ಗಮನಾರ್ಹವಾಗಿದೆ.

ಪ್ರತಿದಿನ ಪ್ರವಚನ ಮಹಾಮಂಗಲ ಆಗಿದ ತಕ್ಷಣ ಮೂಸಿಕಲ್ ಚೇರ್, ಮಹಿಳೆ ಭಾವಚಿತ್ರಕ್ಕೆ ಸಿಂಧೂರ ಇಡುವುದು, ಕಪ್ಪೆ ಕುಣಿತ, ಹಿಂದೆ ಕೈಕಟ್ಟಿ ಬಾಳೆಹಣ್ಣು ತಿನ್ನುವುದು, ಹೀಗೆ ಸಾಕಷ್ಟು ಕಾರ್ಯಕ್ರಮಗಳು ಜೊತೆಗೆ ಮಹಿಳೆಯರು ನಾವೇನು ಕಡಿಮೆ ಇಲ್ಲದಂತೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮುಕ್ತವಾಗಿ ಭಾಗವಹಿಸುತ್ತಿದಾರೆ. ಇನ್ನೂ ಯುವಕರ ಕೇಕೆ, ಶಿಳ್ಳೆ, ಅತಿ ಉತ್ಸಾಹಕ್ಕೆ ಈ ವರ್ಷದ ಹಬ್ಬ ಸಾಕ್ಷಿಯಾಗಿದೆ.

ಒಟ್ಟಿನಲ್ಲಿ ಪ್ರತಿದಿನದ ಕಾರ್ಯಕ್ರಮಗಳು ನೋಡುಗರ ಮನ ಸೆಳೆಯಲು ಈ ಮನರಂಜನೆ ಕಾರ್ಯಕ್ರಮಗಳು ಸುಗ್ಗಿಯ ನಂತರ ಜನರನ್ನು ಒಂದೆಡೆ ಸೇರಿಸಿ ಸಂತೋಷದಿಂದ ಇರಲು ಸಾಕ್ಷಿಯಾಗಿದೆ.

ವರದಿ; ಶಾನು ಯಲಿಗಾರ

ಭ್ರಷ್ಟರ ಬೇಟೆ

Recent Posts

ಲೆನ್ಸ್ಕಾರ್ಟ್ ಡ್ರೆಸ್ ಕೋಡ್ ವಿವಾದ: ತಿಲಕ-ಕುಂಕುಮ ನಿಷೇಧ ಆರೋಪ, ನಾಯಕಿ ನಾಜಿಯಾ ಖಾನ್ ಪ್ರತಿಭಟನೆ

ನಾಸಿಕ್‌ನ Tata Consultancy Services ನಲ್ಲಿ ಬಲವಂತದ ಮತಾಂತರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ, Lenskart…

15 hours ago

ರೌಡಿಶೀಟರ್ ಸೈಲೆಂಟ್ ಸುನಿಲ್‌ಗೆ ಭರ್ಜರಿ ಸ್ವಾಗತ: ಹಾಸನದಲ್ಲಿ ವಿಡಿಯೋ ವೈರಲ್

ಹಾಸನ ತಾಲೂಕಿನ ಶಾಂತಿಗ್ರಾಮ ಟೋಲ್ ಬಳಿಯಲ್ಲಿ ನಟೋರಿಯಸ್ ರೌಡಿಶೀಟರ್ ಸೈಲೆಂಟ್ ಸುನಿಲ್ ಆಗಮಿಸುತ್ತಿದ್ದಂತೆಯೇ ಯುವಕರ ಗುಂಪೊಂದು ಅದ್ದೂರಿ ಸ್ವಾಗತ ಕೋರಿರುವ…

15 hours ago

ಲಂಚ ಸ್ವೀಕರಿಸುತ್ತಿದ್ದ ಪಿಎಸ್ಐ ಲೋಕಾಯುಕ್ತ ಬಲೆಗೆ: ಠಾಣೆ ಮುಂದೆ ಪಟಾಕಿ ಸಿಡಿಸಿ ಜನರ ಸಂಭ್ರಮ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ಭೀಮಪ್ಪ ರಬಕವಿ ಹಾಗೂ ಕಾನ್ಸ್ಟೇಬಲ್ ಸಂತೋಷ್…

16 hours ago

ಡಿಎನ್‌ಎ ಸತ್ಯ ಹೇಳಿತು: ಬಿಜೆಪಿ ಮುಖಂಡನ ಪುತ್ರನೇ ಮಗುವಿನ ತಂದೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸಂಚಲನ ಸೃಷ್ಟಿಸಿದ್ದ ಅತ್ಯಾಚಾರ ಮತ್ತು ವಂಚನೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪುತ್ತೂರು…

21 hours ago

ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯ: ಯುದ್ಧ ಪರಿಸ್ಥಿತಿಯಲ್ಲಿ ಸರ್ಕಾರದ ಮುನ್ನೆಚ್ಚರಿಕಾ ಕ್ರಮ

ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಸಂಘರ್ಷ ಹಾಗೂ ಯುದ್ಧದ ಪರಿಣಾಮವಾಗಿ ರಸಗೊಬ್ಬರ ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುಗಳ ಆಮದು ವ್ಯತ್ಯಯಗೊಳ್ಳುವ ಭೀತಿ…

21 hours ago

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ ಹತ್ಯೆಗೆ ಸಂಚು: ಪತ್ನಿ ಸೇರಿ ಐವರ ಬಂಧನ

ಆಂಧ್ರ ಪ್ರದೇಶದ ಪ್ರೊದ್ದಟೂರು ತಾಲ್ಲೂಕಿನ ಲಿಂಗಾಪುರಂ ಗ್ರಾಮದಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ತನ್ನ ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆಂದು ಭಾವಿಸಿದ…

21 hours ago