ಕುಂದಗೋಳ: ಜಾನುವಾರುಗಳಿಗೆ ಕಂಡು ಬರುವ ಕಾಲು ಬಾಯಿ ರೋಗದ ನಿಯಂತ್ರಣಕ್ಕಾಗಿ ಲಸಿಕೆ ಲಭ್ಯವಿದ್ದು, ಪಶುಪಾಲಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕಿ ಕುಸುಮಾವತಿ ಶಿವಳ್ಳಿ ಕರೆ ನೀಡಿದರು.
ಅವರು ಕುಂದಗೋಳ ಪಟ್ಟಣದ ಪಶುಪಾಲನಾ ಪಶುವೈದ್ಯಕೀಯ ಸೇವ ಇಲಾಖೆ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಇವರ ಸಹಯೋಗದಲ್ಲಿ ಕಾಲುಬಾಯಿ ಲಸಿಕಾ ಅಭಿಯಾನವನ್ನು ಎತ್ತುಗಳಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಎಲ್ಲೆಡೆ ಜಾನುವಾರುಗಳಿಗೆ ಕಾಲುಬಾಯಿ ರೋಗ ಬಾದಿಸಿದ್ದು ಅವುಗಳ ನಿಯಂತ್ರಣಕ್ಕೆ ಪಶುಪಾಲಕರು ಲಸಿಕೆ ಸದುಪಯೋಗ ಪಡೆದುಕೊಳ್ಳಬೇಕು. ಜಾನುವಾರಗಳು ರೈತರ ಜಿವಾಳಾಗಿದ್ದು ಅವುಗಳ ರಕ್ಷಣೆಗೆ ರೈತರು ಲಸಿಕೆ ಪಡೆಯಬೇಕೆಂದು ಸಲಹೆ ನೀಡಿದರು.
ನಂತರ ತಾಲೂಕಿನ ಪಶು ವೈದ್ಯಾಧಿಕಾರಿ ಮಾತನಾಡಿ ದಿನಾಂಕ 07/11/2022 ರಿಂದ 07/12/2022 ರವರಿಗೆ ಈ ಅಭಿಯಾನ ನಡೆಯಲಿದ್ದು, ಪ್ರತಿಯೊಂದು ಎತ್ತು, ಹೋರಿ, ಹಸು ಎಮ್ಮೆ ಜಾನುವಾರುಗಳಿಗೆ ಲಸಿಕೆ ನಿಡುತ್ತಿದ್ದೆವೆ. ಈಗಾಗಲೇ 19 ತಂಡಗಳೊಂದಿಗೆ 38 ಲಸಿಕಾದಾರರು ಇದ್ದು, ಇನ್ನೂ 6 ಜನ ಮೇಲ್ವಿಚಾರಕ ವೈದ್ಯಾಧಿಕಾರಿ ಇದ್ದು ಪ್ರತಿ ಮನೆ ಮನೆಗೂ ಲಸಿಕೆ ಅಭಿಯಾನ ಪ್ರಾರಂಭಗೂಳ್ಳಿಲಿದೆ ಎಂದು ಮಾಹಿತಿ ನೀಡಿದರು
ವರದಿ; ಶಾನು ಯಲಿಗಾರ
ಮೈಸೂರು ನಗರದ ನಜರಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ…
ಬೆಂಗಳೂರಿನ ಜಯನಗರದಲ್ಲಿ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಬಳಸಿ ಹಣದ ಬೇಡಿಕೆ ಇಟ್ಟ ಆರೋಪದಡಿ ಸಾಧನಾ ಶೆಟ್ಟಿ ವಿರುದ್ಧ ಎಫ್ಐಆರ್…
ಛತ್ತರ್ಪುರದಲ್ಲಿ ಗುರುವಾರ ನಡೆದ ಒಂದು ಅಚ್ಚರಿಯ ಘಟನೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಚಲಿಸುತ್ತಿದ್ದ ಆಂಬ್ಯುಲೆನ್ಸ್ನೊಳಗೆ ಯುವತಿ ಹಾಗೂ ಇಬ್ಬರು…
ಇತ್ತೀಚಿನ ದಿನಗಳಲ್ಲಿ ಮದುವೆ ವ್ಯವಸ್ಥೆಯು ಹಲವಾರು ಬದಲಾವಣೆಗಳನ್ನು ಕಂಡಿದೆ. ವಧು-ವರರ ಹುಡುಕಾಟ ಹೆಚ್ಚಾಗಿ ಮ್ಯಾಟ್ರಿಮೋನಿ ವೆಬ್ಸೈಟ್ಗಳ ಮೂಲಕ ನಡೆಯುತ್ತಿದ್ದು, ಕೆಲವೊಮ್ಮೆ…
ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ…
ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಮದುವೆಯ ಕನಸು ಕಂಡಿದ್ದ ಯುವತಿಯೊಬ್ಬಳು, ಭಾವಿ ಪತಿಯ ವರ್ತನೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ…