Latest

ಜಲಪಾತ ವೀಕ್ಷಣೆಗೆ ತೆರಳಿದ ಇಬ್ಬರು ನೀರಿನಲ್ಲಿ ಬಿದ್ದು ಸಾವು

ಸಿದ್ದಾಪುರ-ಜಲಪಾತ ವೀಕ್ಷಣೆಗೆ ತೆರಳಿದ ಇಬ್ಬರು ನೀರಿನಲ್ಲಿ ಕಾಣೆಯಾಗಿದ್ದು, ರಾತ್ರಿ ವೇಳೆ ನೀರಿನ ಆಳದಲ್ಲಿ ಇಬ್ಬರ ಶವ ಸಿಕ್ಕಿದೆ.

ಶಿರಸಿಯ ಅಕ್ಷಯ ಭಟ್ಟ ಹಾಗೂ ಸುಹಾಸ ಶೆಟ್ಟಿ ಇನ್ನೂ ನಾಲ್ಕು ಜನ ಶುಕ್ರವಾರ ಸಿದ್ದಾಪುರಕ್ಕೆ ಬಂದಿದ್ದರು. ಸಂಜೆಯವರೆಗೂ ಸುತ್ತಾಟ ನಡೆಸಿದ ಅವರು ನಿಲ್ಕುಂದ ಬಳಿಯ ವಾಟೆಹೊಳೆ ಜಲಪಾತಕ್ಕೆ ಭೇಟಿ ನೀಡಿದ್ದರು. ಅಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿದ್ದಾಗ ಇಬ್ಬರು ನೀರುಪಾಲಾದರು.

ಜಲಪಾತದ ಬಳಿಯಿರುವ ಹೊಂಡದಲ್ಲಿ ಅಕ್ಷಯ ಭಟ್ಟ ಹಾಗೂ ಸುಹಾಸ ಶೆಟ್ಟಿ ಮುಳುಗಿರುವುದನ್ನು ಅವರ ಸ್ನೇಹಿತರು ನೋಡಿದ್ದಾರೆ. ಈ ಹಿನ್ನಲೆ ಅದೇ ಭಾಗದಲ್ಲಿ ಹುಡುಕಾಟ ನಡೆಸಲಾಯಿತು. ಮುಸ್ಸಂಜೆವರೆಗೂ ನಿರಂತರ ಶೋಧ ಕಾರ್ಯಾಚರಣೆ ನಡೆದಿದ್ದು, ನಂತರ ಕತ್ತಲು ಆವರಿಸಿರುವುದರಿಂದ ಹುಡುಕಾಟ ಕಷ್ಟವಾಯಿತು. ಅದಾಗಿಯೂ ನಿರಂತರ ಶೋಧ ನಡೆಸಿದಾಗ ಅಕ್ಷಯ ಭಟ್ಟ ಹಾಗೂ ಸುಹಾಸ ಶೆಟ್ಟಿ ಶವವಾಗಿ ಸಿಕ್ಕಿದ್ದಾರೆ.

ಡಿವೈಎಸ್‌ಪಿ ಕೆ ಎಲ್ ಗಣೇಶ, ಸಿದ್ದಾಪುರ ಪೊಲೀಸ್ ನಿರೀಕ್ಷಕ ಜೆಬಿ ಸೀತಾರಾಮ ಸಹ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಮಾರಿಕಾಂಬಾ ಲೈಫ್‌ಗಾರ್ಡ ತಂಡದವರು ಕಾರ್ಯಾಚರಣೆ ನಡೆಸಿದ್ದಾರೆ. ಮುಳುಗುತಜ್ಞ ಗೋಪಾಲ ಗೌಡ ರಕ್ಷಣಾ ಸಿಬ್ಬಂದಿಗೆ ಮಾರ್ಗದರ್ಶನ ನೀಡುತ್ತಿದ್ದು, ನೀರು ಪಾಲಾದವರ ಪಾಲಕರು ಹಾಗೂ ಕೆಲ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದಾರೆ.

nazeer ahamad

Recent Posts

400 ವರ್ಷ ಹಿಂದಿನ ರಾಜನೆಂದು ಹೇಳುತ್ತಿರುವ 10 ವರ್ಷದ ಬಾಲಕ: ಪುನರ್ಜನ್ಮದ ರಹಸ್ಯವೇ?

ಪುನರ್ಜನ್ಮ ಎಂಬುದು ಇಂದಿಗೂ ವಿಜ್ಞಾನಕ್ಕೆ ಸವಾಲಾಗಿರುವ ಒಂದು ಗೂಢ ವಿಷಯ. ಕೆಲವೊಮ್ಮೆ ಸಣ್ಣ ಮಕ್ಕಳು ತಮ್ಮ ಹಿಂದಿನ ಜನ್ಮದ ಬಗ್ಗೆ…

8 hours ago

ಅನೈತಿಕ ಸಂಬಂಧ: ಪವಿತ್ರಾಳನ್ನು ಪಡೆಯಲು ಆಕೆಯ ಗಂಡನನ್ನೇ ಕೊಂದ ಪ್ರಿಯಕರ..!

ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕಿನ ದಬ್ಬಗುಂಟನಹಳ್ಳಿಯಲ್ಲಿ ಅನೈತಿಕ ಸಂಬಂಧದ ಹಿನ್ನೆಲೆ ನಡೆದ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಿಯತಮೆಯ…

8 hours ago

ಪೂಲ್‌ನಲ್ಲಿ ಬಾಯ್ ಫ್ರೆಂಡ್ ನೊಂದಿಗೆ ಮಹಿಳೆ ರೋಮ್ಯಾನ್ಸ್: ದಿಡೀರನೆ ಬಂದ ಗಂಡ..! ವೈರಲ್ ವಿಡಿಯೋ

ಸ್ವಿಮ್ಮಿಂಗ್ ಪೂಲ್‌ನಲ್ಲಿ ಮಹಿಳೆ ತನ್ನ ಬಾಯ್‌ಫ್ರೆಂಡ್ ಜೊತೆಗೆ ಸಮಯ ಕಳೆಯುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೇಳೆ…

14 hours ago

ಕೆಐಎಡಿಬಿ 16 ಕೋಟಿ ವಂಚನೆ: ಪ್ರಮುಖ ಆರೋಪಿ ಪೊಲೀಸರ ವಶಕ್ಕೆ

ಬಳ್ಳಾರಿಯ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಚೇರಿಯಲ್ಲಿ ನಡೆದಿದೆ ಎನ್ನಲಾದ 16 ಕೋಟಿಗೂ ಅಧಿಕ ವಂಚನೆ ಪ್ರಕರಣದಲ್ಲಿ ಪ್ರಮುಖ…

19 hours ago

ನಾಸಿಕ್ ಟಿಸಿಎಸ್ ಪ್ರಕರಣ: ಆರೋಪಿಗಳ ಪರ ನಿಂತಿದ್ದ ಎಚ್‌ಆರ್ ಮ್ಯಾನೇಜರ್ ನಿದಾ ಖಾನ್ ಪಾತ್ರ ಬಹಿರಂಗ

ನಾಸಿಕ್‌ನ ಟಿಸಿಎಸ್ ಸಂಬಂಧಿತ ಮತಾಂತರ ಮತ್ತು ಕಿರುಕುಳ ಪ್ರಕರಣದ ತನಿಖೆಯಲ್ಲಿ ಹೊಸದಾಗಿ ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿವೆ. ಬಿಪಿಒ ಘಟಕದಲ್ಲಿ ಎಚ್‌ಆರ್…

19 hours ago

ಗೃಹಲಕ್ಷ್ಮಿ ಹಣ ಕೂಡಿಟ್ಟು ಐಸ್ ಕ್ರೀಮ್ ಅಂಗಡಿ ತೆರೆದ ಮಹಿಳೆ!

ವಿಜಯನಗರ:- ಗೃಹಲಕ್ಷ್ಮಿ ಯೋಜನೆ ಹಣವನ್ನು ಕೂಡಿಟ್ಟು ಮಹಿಳೆಯೊಬ್ಬರು ಸಣ್ಣದಾಗಿ ಐಸ್ ಕ್ರೀಮ್ ಅಂಗಡಿ ತೆರೆದು ಬದುಕು ಕಟ್ಟಿಕೊಂಡಿದ್ದಾರೆ.ಕೊಟ್ಟೂರು ತಾಲ್ಲೂಕಿನ ಹರಾಳು…

19 hours ago