Latest

ಪೊಲೀಸ್ ಜೀಪ್ ನೋಡಿ ಎಸ್ಕೇಪ್ ಆಗಲು ಹೋದ ಇಬ್ಬರು ಖದೀಮರು; 7,55,000/-ರೂ. ಮೌಲ್ಯದ 08 ದ್ವಿಚಕ್ರ ವಾಹನಗಳು ಪೊಲೀಸ್ ವಶಕ್ಕೆ.

ಮಾಲೂರು : ದಿನಾಂಕ:28-01-2025 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ಮಾಲೂರು ಠಾಣಾ ಪಿ.ಎಸ್.ಐ. ಶ್ರೀಮತಿ ಗೀತಮ್ಮ, ಮತ್ತು ಅವರ ತಂಡದವರದ ಕೋದಂಡಪಾಣಿ, ಅನಂತಮೂರ್ತಿ ರವರು ಮಾಲೂರು ಟೌನ್ ನ ಹೊಸೂರು ರಸ್ತೆಯ ಇಂದಿರಾನಗರದ ಕ್ರಾಸ್ ನ ಬಳಿ ಗಸ್ತಿನಲ್ಲಿದ್ದಾಗ ಯಾರೋ ಇಬ್ಬರು ಆಸಾಮಿಗಳು ಹೊಸೂರು ರಸ್ತೆಯಿಂದ ಮಾಲೂರು ಟೌನ್ ಕಡೆಗೆ ಒಂದು ಪಲ್ಸರ್ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದು ಪೊಲೀಸ್ ಜೀಪ್ ಅನ್ನು ನೋಡಿ ಪುನಃ ವಾಪಸ್ಸು ಹೋಗಲು ದ್ವಿಚಕ್ರ ವಾಹನವನ್ನು ತಿರುಗಿಸುತ್ತಿದ್ದಾಗ ಅನುಮಾನ ಬಂದು ಸದರಿ ಆಸಾಮಿಗಳಿಬ್ಬರನ್ನು ಮತ್ತು ಪಲ್ಸರ್ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಕೂಲಂಕುಶವಾಗಿ ಆಸಾಮಿಗಳನ್ನು ಅವರ ಹೆಸರು ಮತ್ತು ವಿಳಾಸದ ಬಗ್ಗೆ ಹಾಗೂ ಅವರ ವಶದಲ್ಲಿದ್ದ ಪಲ್ಸರ್ ದ್ವಿಚಕ್ರ ವಾಹನದ ಬಗ್ಗೆ ವಿಚಾರಣೆ ಮಾಡಲಾಗಿ

1) ಅಜಯ್ ಜಿ, ಬಿನ್. ಲೇಟ್ ಗೋಪಾಲ್, 21 ವರ್ಷ, ಟ್ರೋಲೇಕ್ಸ್ ಎಂಬ ಖಾಸಗಿ ಕಂಪನಿಯಲ್ಲಿಕೆಲಸ, ವಾಸ:2ನೇ ಮಹಡಿ, ಮಾರೆಮ್ಮ ದೇವಾಲಯದ ಬಳಿ, 2ನೇ ಬೀದಿ, ಪಾರ್ವತಿನಗರ, ಹೆಬ್ಬಗೋಡಿ, ಬೆಂಗಳೂರು ನಗರ.

2) ಕೊನೇಟಿ ಪೌಲು ರಾಜ್ @ ಪೌಲ್ ರಾಜ್ @ ರಾಜು ಬಿನ್. ಲೇಟ್ ನಾರಾಯಣ, 27 ವರ್ಷ, ಗಾರೆ ಕೆಲಸ, ಹಾಲಿ ವಾಸ: 5ನೇ ಮನೆ, 3ನೇ ಲೈನ್, ರೈಲ್ ಪೇಟೆ, ಕದಿರಿ ಟೌನ್, (ಶ್ರೀ ಸತ್ಯಸಾಯಿ)ಅನಂತಪುರ ಜಿಲ್ಲೆ,
ಆಂಧ್ರಪ್ರದೇಶ ರಾಜ್ಯ. ಸ್ವಂತ ವಿಳಾಸ:ನಂ-131, ರಾಮ್ ನಗರ್, ಪಿರಾಲಾ, ಚಿರಾಲಾ ಟೌನ್, ಪ್ರಕಾಶಂ ಜಿಲ್ಲೆ, ಆಂದ್ರಪ್ರದೇಶ. ಆಗಿದ್ದು ಆರೋಫಿತರು ನೀಡಿದ ಮಾಹಿತಿಯ ಮೇರೆಗೆ ಆರೋಪಿತರು ಮಾಲೂರು, ಬೆಂಗಳೂರು, ಬೇರಕಿ ಮತ್ತು ಇತರೆ ಕಡೆಗಳಲ್ಲಿ ಕಳ್ಳತನ ಮಾಡಿ ಅವರ ವಶದಲ್ಲಿದ್ದ ಒಟ್ಟು 8 ವಿವಿಧ ರೀತಿಯ

1) KA-08 Y-0616 ನೋಂದಣೆ ಸಂಖ್ಯೆಯ ಪಲ್ಸರ್ ಬೈಕ್
2) TN.-24 AB-7845 ನೋಂದಣೆ ಸಂಖ್ಯೆಯ ಪಲ್ಸರ್ ಬೈಕ್
3) ಯಾವುದೇ ನೋಂದಣೆ ಸಂಖ್ಯೆಯ ನಂಬರ್ ಪ್ಲೇಟ್ ಇಲ್ಲದ ಪಲ್ಸರ್ ಬೈಕ್
4) ಯಾವುದೇ ನೋಂದಣೆ ಸಂಖ್ಯೆಯ ನಂಬರ್ ಪ್ಲೇಟ್ ಇಲ್ಲದ ಆರ್.ಎಕ್ಸ್ .ಜಡ್ ಯಮಹಾ ಕಂಪನಿಯ ಬೈಕ್
5 )KA 51 EZ-1150 ಟಿ.ವಿ.ಎಸ್. ವಿಕ್ಟರ್ ದ್ವಿಚಕ್ರ ವಾಹನ
6) KA 05 EZ-4116 ಟಿ.ವಿ.ಎಸ್. ಎಕ್ಸ್. ಎಲ್. ದ್ವಿಚಕ್ರ ವಾಹನ
7) KA-51 JC-2883
8) KA – 08 V-7306 ಬಜಾಜ್ ಪಲ್ಸರ್ 150 ಡಿ.ಟಿ.ಎಸ್. ದ್ವಿಚಕ್ರ ವಾಹನ ಸೇರಿ ಒಟ್ಟು 755000/-ರೂಗಳ ಮೌಲ್ಯದ ಬೆಲೆ ಬಾಳುವ ಮೇಲ್ಕಂಡ ದ್ವಿಚಕ್ರ ವಾಹನಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

ಈ ಪ್ರಕರಣದ ಪತ್ತೆ ಕಾರ್ಯಕ್ಕೆ ಮಾನ್ಯ ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ಐ.ಪಿ.ಎಸ್. ಮತ್ತು ಅಪರ ಪೊಲೀಸ್ ಅಧೀಕ್ಷಕರಾದ ರವಿಶಂಕರ್, ಸಿ.ಆರ್. ಮತ್ತು ಹೆಚ್.ಸಿ. ಜಗದೀಶ್ ಹಾಗೂ ಎಂ. ಹೆಚ್. ನಾಗ್ಲೆ, ಪೊಲೀಸ್ ಉಪಾಧೀಕ್ಷಕರು, ಕೋಲಾರ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಮಾಲೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ವಸಂತ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೀತಮ್ಮ, ವರಲಕ್ಷ್ಮಮ್ಮ, ಮತ್ತು ಎ.ಎಸ್.ಐ. ಮುನೇಗೌಡ, ವೆಂಕಟೇಶ್, ಅಪರಾಧ ವಿಭಾಗದ ಸಿಬ್ಬಂದಿ ಕೋದಂಡಪಾಣಿ, ಅನಂತಮೂರ್ತಿ, ಅಶೋಕ್, ಅನಂತ್, ಕಾನ್ಸ್ ಟೇಬಲ್ ಮೋಹನ್, ವೆಂಕಟೇಶಪ್ಪ, ರಾಜೇಂದ್ರಪ್ರಸಾದ್, ಮಾಂತೇಶ್ ಮಡಿಕೇಶ್ವರ, ಮುನಿಕೃಷ್ಣಪ್ಪ, ನವೀನ್, ನವೀನ್ ಕುಮಾರ್ ಹಾಗೂ ಗೃಹರಕ್ಷಕ ಸಿಬ್ಬಂದಿಯವರಾದ ಕುಮಾರ್ ಹಾಗೂ ಹನುಮಂತಪ್ಪ ರವರ ತಂಡ ಭಾಗವಹಿಸಿದ್ದಾರೆ.

ಈ ಕಾರ್ಯಾಚರಣೆ ಮಾಡಿರುವ ಮೇಲ್ಕಂಡ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಮಾನ್ಯ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿರುತ್ತಾರೆ. ವರದಿ: ರೋಶನ್ ಜಮೀರ್

nazeer ahamad

Recent Posts

‍ರೀಲ್ಸ್ ಮಾಡುವ ಹುಚ್ಚು, ಕರೆದಾಗ ಬಂದು ಜೊತೆಗೆ ಮಲಗುತ್ತಿರಲಿಲ್ಲ ಎಂದು ಪತ್ನಿಯನ್ನು ಕೊಂದ ಪತಿ

ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…

8 hours ago

ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27ರ ಯುವತಿ ಸಾವು; ಉಡುಪಿಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ, ತನಿಖೆ ಚುರುಕು

ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…

8 hours ago

‘ಅಂದು ನನ್ನೊಂದಿಗೆ ಮಲಗಲು ಕೇಳಿದ್ದು ನೀವೇ ತಾನೇ?’ ನಿರ್ಮಾಪಕನಿಗೆ ನಟಿ ಚಾಂದಿನಿ ಚೌಧರಿ ಶಾಕ್!

ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…

8 hours ago

ಮದುವೆಯಾಗಿ 4 ದಿನಕ್ಕೆ ಮಾಜಿ ಪ್ರೇಮಿಯೊಂದಿಗೆ ಹೋಟೆಲ್ ನಲ್ಲಿ ಪತ್ನಿ; ಪತಿಯ ಕೈಗೆ ವಿಡಿಯೋ…!

ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…

8 hours ago

ಪತ್ನಿಯನ್ನು ಕೊಂದು ಶವ ವಿಲೇವಾರಿಗೆ ಸ್ನೇಹಿತನ ನೆರವು ಕೇಳಿದ ಪತಿ; ಜಾಣತನದಿಂದ ಪೊಲೀಸರಿಗೆ ಒಪ್ಪಿಸಿದ ಗೆಳೆಯ!

ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…

8 hours ago

ಹಂಪಿಯಲ್ಲಿ ಅಕ್ರಮ ಹೋಂಸ್ಟೇ, ವಾಣಿಜ್ಯ ಚಟುವಟಿಕೆ ಆರೋಪ: 54 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸ್ವಯಂಪ್ರೇರಿತ ದೂರು

ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…

8 hours ago