Latest

ಪೊಲೀಸ್ ಜೀಪ್ ನೋಡಿ ಎಸ್ಕೇಪ್ ಆಗಲು ಹೋದ ಇಬ್ಬರು ಖದೀಮರು; 7,55,000/-ರೂ. ಮೌಲ್ಯದ 08 ದ್ವಿಚಕ್ರ ವಾಹನಗಳು ಪೊಲೀಸ್ ವಶಕ್ಕೆ.

ಮಾಲೂರು : ದಿನಾಂಕ:28-01-2025 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ಮಾಲೂರು ಠಾಣಾ ಪಿ.ಎಸ್.ಐ. ಶ್ರೀಮತಿ ಗೀತಮ್ಮ, ಮತ್ತು ಅವರ ತಂಡದವರದ ಕೋದಂಡಪಾಣಿ, ಅನಂತಮೂರ್ತಿ ರವರು ಮಾಲೂರು ಟೌನ್ ನ ಹೊಸೂರು ರಸ್ತೆಯ ಇಂದಿರಾನಗರದ ಕ್ರಾಸ್ ನ ಬಳಿ ಗಸ್ತಿನಲ್ಲಿದ್ದಾಗ ಯಾರೋ ಇಬ್ಬರು ಆಸಾಮಿಗಳು ಹೊಸೂರು ರಸ್ತೆಯಿಂದ ಮಾಲೂರು ಟೌನ್ ಕಡೆಗೆ ಒಂದು ಪಲ್ಸರ್ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದು ಪೊಲೀಸ್ ಜೀಪ್ ಅನ್ನು ನೋಡಿ ಪುನಃ ವಾಪಸ್ಸು ಹೋಗಲು ದ್ವಿಚಕ್ರ ವಾಹನವನ್ನು ತಿರುಗಿಸುತ್ತಿದ್ದಾಗ ಅನುಮಾನ ಬಂದು ಸದರಿ ಆಸಾಮಿಗಳಿಬ್ಬರನ್ನು ಮತ್ತು ಪಲ್ಸರ್ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಕೂಲಂಕುಶವಾಗಿ ಆಸಾಮಿಗಳನ್ನು ಅವರ ಹೆಸರು ಮತ್ತು ವಿಳಾಸದ ಬಗ್ಗೆ ಹಾಗೂ ಅವರ ವಶದಲ್ಲಿದ್ದ ಪಲ್ಸರ್ ದ್ವಿಚಕ್ರ ವಾಹನದ ಬಗ್ಗೆ ವಿಚಾರಣೆ ಮಾಡಲಾಗಿ

1) ಅಜಯ್ ಜಿ, ಬಿನ್. ಲೇಟ್ ಗೋಪಾಲ್, 21 ವರ್ಷ, ಟ್ರೋಲೇಕ್ಸ್ ಎಂಬ ಖಾಸಗಿ ಕಂಪನಿಯಲ್ಲಿಕೆಲಸ, ವಾಸ:2ನೇ ಮಹಡಿ, ಮಾರೆಮ್ಮ ದೇವಾಲಯದ ಬಳಿ, 2ನೇ ಬೀದಿ, ಪಾರ್ವತಿನಗರ, ಹೆಬ್ಬಗೋಡಿ, ಬೆಂಗಳೂರು ನಗರ.

2) ಕೊನೇಟಿ ಪೌಲು ರಾಜ್ @ ಪೌಲ್ ರಾಜ್ @ ರಾಜು ಬಿನ್. ಲೇಟ್ ನಾರಾಯಣ, 27 ವರ್ಷ, ಗಾರೆ ಕೆಲಸ, ಹಾಲಿ ವಾಸ: 5ನೇ ಮನೆ, 3ನೇ ಲೈನ್, ರೈಲ್ ಪೇಟೆ, ಕದಿರಿ ಟೌನ್, (ಶ್ರೀ ಸತ್ಯಸಾಯಿ)ಅನಂತಪುರ ಜಿಲ್ಲೆ,
ಆಂಧ್ರಪ್ರದೇಶ ರಾಜ್ಯ. ಸ್ವಂತ ವಿಳಾಸ:ನಂ-131, ರಾಮ್ ನಗರ್, ಪಿರಾಲಾ, ಚಿರಾಲಾ ಟೌನ್, ಪ್ರಕಾಶಂ ಜಿಲ್ಲೆ, ಆಂದ್ರಪ್ರದೇಶ. ಆಗಿದ್ದು ಆರೋಫಿತರು ನೀಡಿದ ಮಾಹಿತಿಯ ಮೇರೆಗೆ ಆರೋಪಿತರು ಮಾಲೂರು, ಬೆಂಗಳೂರು, ಬೇರಕಿ ಮತ್ತು ಇತರೆ ಕಡೆಗಳಲ್ಲಿ ಕಳ್ಳತನ ಮಾಡಿ ಅವರ ವಶದಲ್ಲಿದ್ದ ಒಟ್ಟು 8 ವಿವಿಧ ರೀತಿಯ

1) KA-08 Y-0616 ನೋಂದಣೆ ಸಂಖ್ಯೆಯ ಪಲ್ಸರ್ ಬೈಕ್
2) TN.-24 AB-7845 ನೋಂದಣೆ ಸಂಖ್ಯೆಯ ಪಲ್ಸರ್ ಬೈಕ್
3) ಯಾವುದೇ ನೋಂದಣೆ ಸಂಖ್ಯೆಯ ನಂಬರ್ ಪ್ಲೇಟ್ ಇಲ್ಲದ ಪಲ್ಸರ್ ಬೈಕ್
4) ಯಾವುದೇ ನೋಂದಣೆ ಸಂಖ್ಯೆಯ ನಂಬರ್ ಪ್ಲೇಟ್ ಇಲ್ಲದ ಆರ್.ಎಕ್ಸ್ .ಜಡ್ ಯಮಹಾ ಕಂಪನಿಯ ಬೈಕ್
5 )KA 51 EZ-1150 ಟಿ.ವಿ.ಎಸ್. ವಿಕ್ಟರ್ ದ್ವಿಚಕ್ರ ವಾಹನ
6) KA 05 EZ-4116 ಟಿ.ವಿ.ಎಸ್. ಎಕ್ಸ್. ಎಲ್. ದ್ವಿಚಕ್ರ ವಾಹನ
7) KA-51 JC-2883
8) KA – 08 V-7306 ಬಜಾಜ್ ಪಲ್ಸರ್ 150 ಡಿ.ಟಿ.ಎಸ್. ದ್ವಿಚಕ್ರ ವಾಹನ ಸೇರಿ ಒಟ್ಟು 755000/-ರೂಗಳ ಮೌಲ್ಯದ ಬೆಲೆ ಬಾಳುವ ಮೇಲ್ಕಂಡ ದ್ವಿಚಕ್ರ ವಾಹನಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

ಈ ಪ್ರಕರಣದ ಪತ್ತೆ ಕಾರ್ಯಕ್ಕೆ ಮಾನ್ಯ ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ಐ.ಪಿ.ಎಸ್. ಮತ್ತು ಅಪರ ಪೊಲೀಸ್ ಅಧೀಕ್ಷಕರಾದ ರವಿಶಂಕರ್, ಸಿ.ಆರ್. ಮತ್ತು ಹೆಚ್.ಸಿ. ಜಗದೀಶ್ ಹಾಗೂ ಎಂ. ಹೆಚ್. ನಾಗ್ಲೆ, ಪೊಲೀಸ್ ಉಪಾಧೀಕ್ಷಕರು, ಕೋಲಾರ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಮಾಲೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ವಸಂತ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೀತಮ್ಮ, ವರಲಕ್ಷ್ಮಮ್ಮ, ಮತ್ತು ಎ.ಎಸ್.ಐ. ಮುನೇಗೌಡ, ವೆಂಕಟೇಶ್, ಅಪರಾಧ ವಿಭಾಗದ ಸಿಬ್ಬಂದಿ ಕೋದಂಡಪಾಣಿ, ಅನಂತಮೂರ್ತಿ, ಅಶೋಕ್, ಅನಂತ್, ಕಾನ್ಸ್ ಟೇಬಲ್ ಮೋಹನ್, ವೆಂಕಟೇಶಪ್ಪ, ರಾಜೇಂದ್ರಪ್ರಸಾದ್, ಮಾಂತೇಶ್ ಮಡಿಕೇಶ್ವರ, ಮುನಿಕೃಷ್ಣಪ್ಪ, ನವೀನ್, ನವೀನ್ ಕುಮಾರ್ ಹಾಗೂ ಗೃಹರಕ್ಷಕ ಸಿಬ್ಬಂದಿಯವರಾದ ಕುಮಾರ್ ಹಾಗೂ ಹನುಮಂತಪ್ಪ ರವರ ತಂಡ ಭಾಗವಹಿಸಿದ್ದಾರೆ.

ಈ ಕಾರ್ಯಾಚರಣೆ ಮಾಡಿರುವ ಮೇಲ್ಕಂಡ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಮಾನ್ಯ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿರುತ್ತಾರೆ. ವರದಿ: ರೋಶನ್ ಜಮೀರ್

nazeer ahamad

Recent Posts

ಬಿಡದಿ ಟೌನ್‌ಶಿಪ್‌ ವಿರೋಧ ನಾಟಕ: ಅಲ್ಲಿ ಅನಿತಾ ಕುಮಾರಸ್ವಾಮಿ 100 ಎಕರೆ ಜಮೀನಿದೆ, ಕುಮಾರಸ್ವಾಮಿ ವಿರುದ್ಧ ಎಂ.ಬಿ. ಪಾಟೀಲ್ ವಾಗ್ದಾಳಿ

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸುತ್ತಿರುವ ವಿರೋಧ ರಾಜಕೀಯ ಪ್ರೇರಿತವಾಗಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

3 hours ago

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಆರ್‌ಡಿಪಿಆರ್ ಎಇಇ ತಿಪ್ಪೇಸ್ವಾಮಿ ಮನೆ ಮೇಲೆ ಲೋಕಾಯುಕ್ತ ದಾಳಿ

ಬಳ್ಳಾರಿ: ಆದಾಯಕ್ಕಿಂತ ಅಧಿಕ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್) ಇಲಾಖೆಯ ಸಹಾಯಕ…

3 hours ago

ಸಚಿವ ಸತೀಶ್ ಜಾರಕಿಹೊಳಿ ಅಳಿಯ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಮನೆ ಸೇರಿ 6 ಕಡೆ ಇಡಿ ದಾಳಿ

ಬೆಳಗಾವಿ: ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸ ಸೇರಿದಂತೆ ರಾಜ್ಯದ ವಿವಿಧ ಆರು ಸ್ಥಳಗಳಲ್ಲಿ ಜಾರಿ…

3 hours ago

ಮದುವೆಗೆ ಕೆಲವೇ ದಿನ ಬಾಕಿ… ಭಾವಿ ಪತ್ನಿಯಿಂದಲೇ 400 ಅಡಿ ಕಣಿವೆಗೆ ತಳ್ಳಿ ಹತ್ಯೆ!

ಪುಣೆಯಲ್ಲಿ ನಡೆದ ಭೀಕರ ಘಟನೆ ಒಂದು ದೇಶವನ್ನೇ ಬೆಚ್ಚಿಬೀಳಿಸಿದೆ. ಮದುವೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ, ತನ್ನನ್ನು ಮದುವೆಯಾಗಬೇಕಿದ್ದ ಯುವಕನನ್ನೇ…

3 hours ago

ಲಿವ್-ಇನ್ ಸಂಬಂಧಕ್ಕೆ ವಿರೋಧಿಸಿದ್ದ ತಂದೆ-ತಾಯಿ, ತಂಗಿಯನ್ನೇ ಕೊಂದ ಯುವತಿ! ಬೆಂಗಳೂರಿನಲ್ಲಿ ಬೆಚ್ಚಿಬೀಳಿಸಿದ ತ್ರಿವಳಿ ಹತ್ಯೆ

ಬೆಂಗಳೂರು ನಗರವನ್ನು ಬೆಚ್ಚಿಬೀಳಿಸುವಂತ ದಾರುಣ ಘಟನೆ ಪೂರ್ವ ಭಾಗದ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೇಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಲಿವ್-ಇನ್…

3 hours ago

ಸಿನಿಮಾ ಸ್ಟೈಲ್ ಲಾರಿ ದರೋಡೆ: 24 ಗಂಟೆಯಲ್ಲಿ ಆರೋಪಿಗಳ ಬಂಧನ

ಆನೇಕಲ್‌ನಲ್ಲಿ ಸಿನಿಮಾವನ್ನು ನೆನಪಿಸುವ ರೀತಿಯಲ್ಲಿ ನಡೆದ ಲಾರಿ ದರೋಡೆ ಪ್ರಕರಣವನ್ನು ಸೂರ್ಯನಗರ ಪೊಲೀಸರು ಕೇವಲ 24 ಗಂಟೆಗಳೊಳಗೆ ಭೇದಿಸಿ ಮೂವರು…

3 hours ago