Latest

ಪೊಲೀಸ್ ಜೀಪ್ ನೋಡಿ ಎಸ್ಕೇಪ್ ಆಗಲು ಹೋದ ಇಬ್ಬರು ಖದೀಮರು; 7,55,000/-ರೂ. ಮೌಲ್ಯದ 08 ದ್ವಿಚಕ್ರ ವಾಹನಗಳು ಪೊಲೀಸ್ ವಶಕ್ಕೆ.

ಮಾಲೂರು : ದಿನಾಂಕ:28-01-2025 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ಮಾಲೂರು ಠಾಣಾ ಪಿ.ಎಸ್.ಐ. ಶ್ರೀಮತಿ ಗೀತಮ್ಮ, ಮತ್ತು ಅವರ ತಂಡದವರದ ಕೋದಂಡಪಾಣಿ, ಅನಂತಮೂರ್ತಿ ರವರು ಮಾಲೂರು ಟೌನ್ ನ ಹೊಸೂರು ರಸ್ತೆಯ ಇಂದಿರಾನಗರದ ಕ್ರಾಸ್ ನ ಬಳಿ ಗಸ್ತಿನಲ್ಲಿದ್ದಾಗ ಯಾರೋ ಇಬ್ಬರು ಆಸಾಮಿಗಳು ಹೊಸೂರು ರಸ್ತೆಯಿಂದ ಮಾಲೂರು ಟೌನ್ ಕಡೆಗೆ ಒಂದು ಪಲ್ಸರ್ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದು ಪೊಲೀಸ್ ಜೀಪ್ ಅನ್ನು ನೋಡಿ ಪುನಃ ವಾಪಸ್ಸು ಹೋಗಲು ದ್ವಿಚಕ್ರ ವಾಹನವನ್ನು ತಿರುಗಿಸುತ್ತಿದ್ದಾಗ ಅನುಮಾನ ಬಂದು ಸದರಿ ಆಸಾಮಿಗಳಿಬ್ಬರನ್ನು ಮತ್ತು ಪಲ್ಸರ್ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಕೂಲಂಕುಶವಾಗಿ ಆಸಾಮಿಗಳನ್ನು ಅವರ ಹೆಸರು ಮತ್ತು ವಿಳಾಸದ ಬಗ್ಗೆ ಹಾಗೂ ಅವರ ವಶದಲ್ಲಿದ್ದ ಪಲ್ಸರ್ ದ್ವಿಚಕ್ರ ವಾಹನದ ಬಗ್ಗೆ ವಿಚಾರಣೆ ಮಾಡಲಾಗಿ

1) ಅಜಯ್ ಜಿ, ಬಿನ್. ಲೇಟ್ ಗೋಪಾಲ್, 21 ವರ್ಷ, ಟ್ರೋಲೇಕ್ಸ್ ಎಂಬ ಖಾಸಗಿ ಕಂಪನಿಯಲ್ಲಿಕೆಲಸ, ವಾಸ:2ನೇ ಮಹಡಿ, ಮಾರೆಮ್ಮ ದೇವಾಲಯದ ಬಳಿ, 2ನೇ ಬೀದಿ, ಪಾರ್ವತಿನಗರ, ಹೆಬ್ಬಗೋಡಿ, ಬೆಂಗಳೂರು ನಗರ.

2) ಕೊನೇಟಿ ಪೌಲು ರಾಜ್ @ ಪೌಲ್ ರಾಜ್ @ ರಾಜು ಬಿನ್. ಲೇಟ್ ನಾರಾಯಣ, 27 ವರ್ಷ, ಗಾರೆ ಕೆಲಸ, ಹಾಲಿ ವಾಸ: 5ನೇ ಮನೆ, 3ನೇ ಲೈನ್, ರೈಲ್ ಪೇಟೆ, ಕದಿರಿ ಟೌನ್, (ಶ್ರೀ ಸತ್ಯಸಾಯಿ)ಅನಂತಪುರ ಜಿಲ್ಲೆ,
ಆಂಧ್ರಪ್ರದೇಶ ರಾಜ್ಯ. ಸ್ವಂತ ವಿಳಾಸ:ನಂ-131, ರಾಮ್ ನಗರ್, ಪಿರಾಲಾ, ಚಿರಾಲಾ ಟೌನ್, ಪ್ರಕಾಶಂ ಜಿಲ್ಲೆ, ಆಂದ್ರಪ್ರದೇಶ. ಆಗಿದ್ದು ಆರೋಫಿತರು ನೀಡಿದ ಮಾಹಿತಿಯ ಮೇರೆಗೆ ಆರೋಪಿತರು ಮಾಲೂರು, ಬೆಂಗಳೂರು, ಬೇರಕಿ ಮತ್ತು ಇತರೆ ಕಡೆಗಳಲ್ಲಿ ಕಳ್ಳತನ ಮಾಡಿ ಅವರ ವಶದಲ್ಲಿದ್ದ ಒಟ್ಟು 8 ವಿವಿಧ ರೀತಿಯ

1) KA-08 Y-0616 ನೋಂದಣೆ ಸಂಖ್ಯೆಯ ಪಲ್ಸರ್ ಬೈಕ್
2) TN.-24 AB-7845 ನೋಂದಣೆ ಸಂಖ್ಯೆಯ ಪಲ್ಸರ್ ಬೈಕ್
3) ಯಾವುದೇ ನೋಂದಣೆ ಸಂಖ್ಯೆಯ ನಂಬರ್ ಪ್ಲೇಟ್ ಇಲ್ಲದ ಪಲ್ಸರ್ ಬೈಕ್
4) ಯಾವುದೇ ನೋಂದಣೆ ಸಂಖ್ಯೆಯ ನಂಬರ್ ಪ್ಲೇಟ್ ಇಲ್ಲದ ಆರ್.ಎಕ್ಸ್ .ಜಡ್ ಯಮಹಾ ಕಂಪನಿಯ ಬೈಕ್
5 )KA 51 EZ-1150 ಟಿ.ವಿ.ಎಸ್. ವಿಕ್ಟರ್ ದ್ವಿಚಕ್ರ ವಾಹನ
6) KA 05 EZ-4116 ಟಿ.ವಿ.ಎಸ್. ಎಕ್ಸ್. ಎಲ್. ದ್ವಿಚಕ್ರ ವಾಹನ
7) KA-51 JC-2883
8) KA – 08 V-7306 ಬಜಾಜ್ ಪಲ್ಸರ್ 150 ಡಿ.ಟಿ.ಎಸ್. ದ್ವಿಚಕ್ರ ವಾಹನ ಸೇರಿ ಒಟ್ಟು 755000/-ರೂಗಳ ಮೌಲ್ಯದ ಬೆಲೆ ಬಾಳುವ ಮೇಲ್ಕಂಡ ದ್ವಿಚಕ್ರ ವಾಹನಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

ಈ ಪ್ರಕರಣದ ಪತ್ತೆ ಕಾರ್ಯಕ್ಕೆ ಮಾನ್ಯ ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ಐ.ಪಿ.ಎಸ್. ಮತ್ತು ಅಪರ ಪೊಲೀಸ್ ಅಧೀಕ್ಷಕರಾದ ರವಿಶಂಕರ್, ಸಿ.ಆರ್. ಮತ್ತು ಹೆಚ್.ಸಿ. ಜಗದೀಶ್ ಹಾಗೂ ಎಂ. ಹೆಚ್. ನಾಗ್ಲೆ, ಪೊಲೀಸ್ ಉಪಾಧೀಕ್ಷಕರು, ಕೋಲಾರ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಮಾಲೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ವಸಂತ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೀತಮ್ಮ, ವರಲಕ್ಷ್ಮಮ್ಮ, ಮತ್ತು ಎ.ಎಸ್.ಐ. ಮುನೇಗೌಡ, ವೆಂಕಟೇಶ್, ಅಪರಾಧ ವಿಭಾಗದ ಸಿಬ್ಬಂದಿ ಕೋದಂಡಪಾಣಿ, ಅನಂತಮೂರ್ತಿ, ಅಶೋಕ್, ಅನಂತ್, ಕಾನ್ಸ್ ಟೇಬಲ್ ಮೋಹನ್, ವೆಂಕಟೇಶಪ್ಪ, ರಾಜೇಂದ್ರಪ್ರಸಾದ್, ಮಾಂತೇಶ್ ಮಡಿಕೇಶ್ವರ, ಮುನಿಕೃಷ್ಣಪ್ಪ, ನವೀನ್, ನವೀನ್ ಕುಮಾರ್ ಹಾಗೂ ಗೃಹರಕ್ಷಕ ಸಿಬ್ಬಂದಿಯವರಾದ ಕುಮಾರ್ ಹಾಗೂ ಹನುಮಂತಪ್ಪ ರವರ ತಂಡ ಭಾಗವಹಿಸಿದ್ದಾರೆ.

ಈ ಕಾರ್ಯಾಚರಣೆ ಮಾಡಿರುವ ಮೇಲ್ಕಂಡ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಮಾನ್ಯ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿರುತ್ತಾರೆ. ವರದಿ: ರೋಶನ್ ಜಮೀರ್

nazeer ahamad

Recent Posts

ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ತಕ್ಷಣ ಶಾಸಕ ಸ್ಥಾನ ರದ್ದು, ಮುಂದೇನು?

ಧಾರವಾಡ ಜಿಪಂ ಮಾಜಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್…

8 hours ago

ಪೆಟ್ರೋಲ್ ಬಂಕ್ ನಕಾಶೆ ಅಪ್ಲೋಡ್‌ಗೆ ಹಣ ಬೇಡಿಕೆ – ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ವಿಜಯಪುರ ಜಿಲ್ಲೆಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಸಿಲುಕಿರುವ ಘಟನೆ ನಡೆದಿದೆ. ಪೆಟ್ರೋಲ್ ಬಂಕ್ ಜಾಗದ…

8 hours ago

ಖಾತೆಗಾಗಿ ಲಂಚ ಬೇಡಿಕೆ: ನೆಲಮಂಗಲದ ಕಳಲುಘಟ್ಟ ಪಿಡಿಓ ಲೋಕಾಯುಕ್ತ ಬಲೆಗೆ

ನಿವೇಶನದ ಖಾತೆ ಮಾಡಿಕೊಡಲು ಲಂಚ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯಿತಿ ಪಿಡಿಓ ಲೋಕಾಯುಕ್ತ…

11 hours ago

ವಿಷು ಪೋಸ್ಟರ್ ವಿವಾದ: ಶ್ರೀಕೃಷ್ಣನ ಪಕ್ಕದಲ್ಲಿ ಚಿಕನ್ ಚಿತ್ರ – ರೆಸ್ಟೋರೆಂಟ್ ಮಾಲೀಕ ಆರೆಸ್ಟ್.!!!

ಕೇರಳದ ಅಲೆಪ್ಪಿ ಜಿಲ್ಲೆಯ ಚೆರ್ತಲಾದಲ್ಲಿ ವಿಷು ಹಬ್ಬದ ಶುಭಾಶಯ ಪೋಸ್ಟರ್ ಒಂದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಪೋಸ್ಟರ್‌ನಲ್ಲಿ ಶ್ರೀಕೃಷ್ಣನ…

12 hours ago

ಹಾರ್ಮುಝ್ ಜಲಸಂಧಿ ಮತ್ತೆ ತೆರೆಯಿತು: ಯುದ್ಧ ವಿರಾಮದ ಬಳಿಕ ಜಾಗತಿಕ ತೈಲ ಮಾರುಕಟ್ಟೆಗೆ ನೆಮ್ಮದಿ

ಇರಾನ್ ಮತ್ತು ಲೆಬನಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಶಮನವಾಗುತ್ತಿರುವ ಹಿನ್ನೆಲೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹಾರ್ಮುಝ್ ಜಲಸಂಧಿಯನ್ನು ಮತ್ತೆ ಎಲ್ಲಾ…

12 hours ago

ಇನ್‌ಸ್ಟಾಗ್ರಾಮ್ ಹನಿಟ್ರ್ಯಾಪ್: 14 ವರ್ಷದ ಬಾಲಕ ಅಪಹರಣ – 1 ಕೋಟಿ ಸುಲಿಗೆ ಯತ್ನ, ಸಂಬಂಧಿಯೇ ಮಾಸ್ಟರ್ ಮೈಂಡ್!

ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕನನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮೂಲಕ ನಡೆದ ಅಪಹರಣ ಪ್ರಕರಣ ಭಾರೀ ಸಂಚಲನ ಮೂಡಿಸಿದೆ. 14…

13 hours ago