Latest

ತುಂಗಭದ್ರ ನದಿಯ ಸೇತುವೆ ದುರಸ್ತಿ; ವಾಹನ ಸವಾರರೇ ಎಚ್ಚರ!

ಹಾವೇರಿ ಜಿಲ್ಲೆಯಿಂದ ಬಳ್ಳಾರಿ ಜಿಲ್ಲೆಗೆ ಸಂಪರ್ಕಿಸುವ ಹಾವೇರಿ ತಾಲೂಕಿನ ಗ್ರಾಮಗಳಿಂದ ಬಳ್ಳಾರಿ ಜಿಲ್ಲೆಯ ಮೈಲಾರ, ಕುರವತ್ತಿ, ದಾವಣಗೆರೆ, ಹೊಳಲು, ಹಿರೇ ಹಡಗಲಿ, ಹೂವಿನ ಹಡಗಲಿ, ಕೂಡ್ಲಗಿ, ಬಳ್ಳಾರಿ, ಮಂತ್ರಾಲಯ ರಾಯಚೂರು ಹಾಗೂ ಆಂಧ್ರ ಪ್ರದೇಶ ರಾಜ್ಯಗಳಿಗೆ ಸಂಚಾರ ಮಾರ್ಗ ಗುತ್ತಲ ಪಟ್ಟಣದಿಂದ ಮೈಲಾರ ಮಧ್ಯೆ ಇರುವ ತುಂಗಭದ್ರ ನದಿಯ ಸೇತುವೆ ಸುಮಾರು 500 ಮೀ (ಅರ್ಧ ಕಿ ಮೀ) ಇದೆ ಈ ಸೇತುವೆ ಸುಮಾರು 40 ರಿಂದ 45 ವರ್ಷ ಹಳೆಯದಾಗಿದ್ದು.

ಸೇತುವೆ ತಡೆಗೋಡೆಗಳ ಸ್ಥಿತಿ ನೋಡಿದರೆ ಭಯವಾಗುತ್ತದೆ ಅಲ್ಲಲ್ಲಿ ತಡೆಗೋಡೆ ಬಿರುಕು ಬಿಟ್ಟಿವೆ. ಯಾವುದಾದರೂ ವಾಹನ ಆಯಾ ತಪ್ಪಿ ತಡೆಗೋಡೆಗೆ ತಗುಲಿದರೆ ತಡೆಗೋಡೆ ಕುಸಿಯುವುದು ಖಚಿತ. ಅಪ್ಪಿ ತಪ್ಪಿಯೂ ಸೇತುವೆಯಿಂದ ಕೆಳಗೆ ಬಿದ್ದರೆ ಬಿದ್ದವರು ನದಿಯ ಪಾಲಾಗುವುದರಲ್ಲಿ ಎರಡನೇ ಮಾತಿಲ್ಲ. ಇನ್ನು ಸೇತುವೆ ಮೇಲೆ ಅಲ್ಲಲ್ಲಿ ತಗ್ಗು ಗುಂಡಿಗಳಿರುತ್ತವೆ ಮಳೆ ಬಂದಾಗ ಈ ಸೇತುವಯ ಮೇಲೆ ಕೈಯ್ಯಲ್ಲಿ ಜೀವ ಬಿಗಿಹಿಡಿದುಕೊಂಡು ಸಂಚರಿಸಬೇಕು.

ಗುತ್ತಲ ಪಟ್ಟಣದಿಂದ ಮೈಲಾರಕ್ಕೆ ತೆರಳುವಾಗ ಸೇತುವೆಯ ಕೊನೆಗೆ ಎಡ ಭಾಗದಲ್ಲಿ ಮಣ್ಣು ಕುಸಿದಿರುತ್ತದೆ ರಾತ್ರಿ ಸಮಯದಲ್ಲಿ ಗೊತ್ತಾಗದೆ ಬಂದರೇ ದ್ವಿಚಕ್ರ ವಾಹನ ಸವಾರರು ಭೂ ಕುಸಿದ ಸ್ಥಳದಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಇಷ್ಟೆಲ್ಲಾ ಸಮಸ್ಯೆಗಳಿರುವ ಸೇತುವೆಯ ಕಡೆ ಸಂಭಂಧ ಪಟ್ಟ ಅಧಿಕಾರಿಗಳು ಯಾಕೆ ನಿರ್ಲಕ್ಷ್ಯ ವಹಿಸುತ್ತಿದ್ದಾರೋ ತಿಳಿಯುತ್ತಿಲ್ಲ ಇನ್ನೂ ಸುಗಮ ಸಂಚಾರಕ್ಕೆ ಸಂಭಂದಪಟ್ಟ ಅಧಿಕಾರಿಗಳು ಯಾವಾಗ ಸರಿಪಡಿಸುತ್ತಾರೋ ಕಾದು ನೋಡಬೇಕಾಗಿದೆ.
ವರದಿ : ಶಿವರಾಜ್

ಭ್ರಷ್ಟರ ಬೇಟೆ

Recent Posts

ಲೋಕಾಯುಕ್ತ ಅಧಿಕಾರಿ ಎಂದು ಎಂಜಿನಿಯರ್‌ಗೆ ಹಣ ಬೇಡಿಕೆ ಇಟ್ಟ ಆರೋಪಿ ಬಂಧನ

ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿ ಎಂದು ಸುಳ್ಳು ಪರಿಚಯ ನೀಡಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ನಿಂದ ಹಣ ವಸೂಲಿ ಮಾಡಲು ಯತ್ನಿಸಿದ…

11 hours ago

ಉತಾರ ನೀಡಲು ₹1.5 ಲಕ್ಷ ಲಂಚ: ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಬಲೆಗೆ

ಜಮೀನಿನ ಖಾತಾ ಉತಾರ ನೀಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಿಜನಗೇರಾ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಅಧಿಕಾರಿಗಳ…

16 hours ago

‘ಉಗ್ರ ಎಂದು ಗೊತ್ತಿದ್ದರೆ ಮನೆ ಕೊಡುತ್ತಿರಲಿಲ್ಲ’; ಶಂಕಿತ ಸುಹೇಲ್ ಬಂಧನದಿಂದ ಬೆಚ್ಚಿಬಿದ್ದ ಮನೆ ಮಾಲೀಕರು

ಅಯೋಧ್ಯೆಯ ರಾಮಮಂದಿರವನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದಾನೆ ಎಂಬ ಆರೋಪದ ಮೇಲೆ ಬಂಧಿತನಾಗಿರುವ ಶಂಕಿತ ಉಗ್ರ ಸುಹೇಲ್ ಪ್ರಕರಣಕ್ಕೆ ಹೊಸ ತಿರುವು…

16 hours ago

17 ವರ್ಷದ ಸೋದರಳಿಯನ ಬ್ಲಾಕ್ ಮೇಲ್ ಮಾಡಿ ಸೆಕ್ಸ್ ಮಾಡುತ್ತಿದ್ದ 40 ವರ್ಷದ ಅತ್ತೆ..! ಪೋಕ್ಸೋ ಪ್ರಕರಣ ದಾಖಲು.

ಉತ್ತರ ಪ್ರದೇಶದ ಅಲಿಗಢ್‌ನಲ್ಲಿ ಅಪ್ರಾಪ್ತ ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನದೇ 17…

16 hours ago

ನಟಿ ಕೃಷಿ ತಾಪಾಂಡ ನಿವಾಸದಲ್ಲಿ ಉದ್ಯಮಿ ವೈಶಾಕ್ ಮೃತದೇಹ ಪತ್ತೆ; ಸಾವಿನ ಸುತ್ತ ಹಲವು ಪ್ರಶ್ನೆಗಳು

ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಉದ್ಯಮಿ ವೈಶಾಕ್ (45) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹಲವು ಅನುಮಾನಗಳಿಗೆ…

16 hours ago

ಇಡಿ ದಾಳಿ: ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿ ಮನೆಯಿಂದ ಯಮುನಾ ವಶಕ್ಕೆ

ಮೈಸೂರು ನಗರದ ದಟ್ಟಗಳ್ಳಿ ಪ್ರದೇಶದಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿ ವೈ. ಮಂಜುನಾಥ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ…

21 hours ago