ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಪೆದ್ದಕೋತಪಲ್ಲಿ ಗ್ರಾಮದಲ್ಲಿ ಮೂರೂ ಮಕ್ಕಳ ದುರ್ಘಟನಾತ್ಮಕ ಸಾವು ನಡೆಯಿದೆ. ಗ್ರಾಮದಲ್ಲಿಯೇ ಇರುವ ಪೋತಿನೇನಿ ಕೊಳದಲ್ಲಿ ಈಜಲು ಹೋದ ಮೂರು ಮಕ್ಕಳ ಜೀವ ಹಾರಿರುವ ಘಟನೆ ಹೃದಯವಿದ್ರಾವಕವಾಗಿ ಪರಿಣಮಿಸಿದೆ.
ಮೃತಪಟ್ಟವರನ್ನು ಗಣೇಶ್ ರೆಡ್ಡಿ (13), ರಕ್ಷಿತಾ (10) ಮತ್ತು ಶ್ರವಣ್ (7) ಎಂದು ಗುರುತಿಸಲಾಗಿದೆ. ಈ ಮೂರು ಮಕ್ಕಳೂ ಒಂದೇ ಕುಟುಂಬದವರಾಗಿದ್ದು, ಈ ಘಟನೆಯಿಂದಾಗಿ ಕುಟುಂಬದ ಮೇಲೆ ಆಘಾತದ ಮೋಡ ಕವಿದಿದ್ದು, ಪೆದ್ದಕೋತಪಲ್ಲಿ ಗ್ರಾಮದಲ್ಲೆಲ್ಲಾ ಶೋಕದ ವಾತಾವರಣ ಮರೆದಿದೆ.
ನಿನ್ನೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ಆರು ಮಕ್ಕಳು ಕೊಳದ ಬಳಿ ಆಟವಾಡುತ್ತಿದ್ದಾಗ, ಮೂರು ಮಕ್ಕಳು ಈಜಲು ಕೊಳಕ್ಕೆ ಇಳಿದಿದ್ದಾರೆ. ಆದರೆ ನೀರಿನ ಆಳದಲ್ಲಿ ಮುಳುಗಿದ ಅವರು ಮತ್ತೆ ಮೇಲೆ ಬರುತ್ತಿಲ್ಲ ಎಂಬುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ರಕ್ಷಣೆಗಾಗಿ ಧಾವಿಸಿದರು. ಆದರೆ ಆಪ್ರಯತ್ನ ವಿಫಲವಾದಾಗ, ಮರುಕ್ಷಣದಲ್ಲಿ ಅವರ ಶವಗಳು ಸಿಕ್ಕಿವೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೆದ್ದಕೋತಪಲ್ಲಿ ಠಾಣೆಯ ಸಬ್-ಇನ್ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ. ಈ ದುರ್ಘಟನೆ ಗ್ರಾಮದಲ್ಲಿ ಆಕ್ರಂದನ ಮೂಡಿಸಿದೆ.
ಕಾರವಾರ: ಜಿಲ್ಲೆಯಲ್ಲಿ ಪಾರದರ್ಶಕ, ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಎಲ್ಲಾ ಸರ್ಕಾರಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಗಳು…
ಮಾರುಕಟ್ಟೆಯಿಂದ ಮನೆಗೆ ತೆರಳಲು ಖಾಸಗಿ ಬಸ್ ಹತ್ತಿದ್ದ ಯುವತಿಗೆ ಮಾರ್ಗಮಧ್ಯೆ ಕಿರುಕುಳ ನೀಡಿದ ಘಟನೆ ನಡೆದಿದೆ. ಬಸ್ ಚಲಿಸಲು ಆರಂಭಿಸಿದ…
ಮಧ್ಯಪ್ರದೇಶ: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಹ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಿಂಗಳಿಗೆ ₹65…
ಸೋಷಿಯಲ್ ಮೀಡಿಯಾದಲ್ಲಿ ಸದಾ ನಗುನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಕೇರಳದ ಜನಪ್ರಿಯ ಜೋಡಿ ಅಖಿಲ್ (Akhil NRD) ಮತ್ತು ಮೇಘಾ ಅವರ ದಾಂಪತ್ಯ…
ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…
ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…