Latest

“ಐಟಿಐ ಕಾಲೇಜಿನಲ್ಲಿ ನಿರ್ಲಕ್ಷ್ಯದ ಛಾಯೆ: ವಿದ್ಯಾರ್ಥಿಗಳಿಗೆ ತಲುಪದೆ ಗೋದಾಮಿನಲ್ಲಿ ಹಾಳಾಗುತ್ತಿರುವ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳು”

ಗೌರಿಬಿದನೂರು: ಸರ್ಕಾರ ಎಸ್‌ಸಿ, ಎಸ್‌ಟಿ ಹಾಗೂ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸಮವಸ್ತ್ರ, ಶೂ, ಬ್ಯಾಗ್, ಪುಸ್ತಕಗಳು ಮತ್ತು ತರಬೇತಿ ಪರಿಕರಗಳನ್ನು ಒದಗಿಸುತ್ತಿದೆ. ಆದರೆ ಈ ಉಪಕರಣಗಳು ವಿದ್ಯಾರ್ಥಿಗಳಿಗೆ ತಲುಪುವುದಕ್ಕೆ ಮುನ್ನವೇ ಗೋದಾಮಿನಲ್ಲಿ ಹಾಳಾಗಿ ಬಿದ್ದಿದ್ದರಿಂದ ತುಕ್ಕು ಹಿಡಿದು ನಾಶವಾಗುತ್ತಿವೆ. ಈ ಶೋಚನೀಯ ದೃಶ್ಯವು ಗೌರಿಬಿದನೂರು ನಗರದ ಸರ್ಕಾರಿ ಕೈಗಾರಿಕೆ ಮತ್ತು ತರಬೇತಿ ಸಂಸ್ಥೆಯಲ್ಲಿ ಕಾಣಿಸಿಕೊಳ್ಳುತ್ತಿದೆ.

ಕೋಟೆ ಪ್ರದೇಶದಲ್ಲಿರುವ ಈ ಐಟಿಐ ಕಾಲೇಜಿನಲ್ಲಿ ಫಿಟ್ಟರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಕಟಿಂಗ್ & ಸೊಯಿಂಗ್ ಕೋರ್ಸ್‌ಗಳಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಅವರ ಕಲಿಕೆಗೆ ಬೇಕಾದ ಮೂಲಭೂತವಾದ ಸಾಮಗ್ರಿಗಳೇ ಹಾಗೆ ಬಿದ್ದಿರುವುದು ಈ ಶಿಕ್ಷಣ ವ್ಯವಸ್ಥೆಯ ಅಡಚಣೆಗೇನು ಎಂಬ ಪ್ರಶ್ನೆ ಮೂಡಿಸುತ್ತಿದೆ.

ಕಾಲೇಜಿಗೆ ಕೆಲವು ವರ್ಷಗಳ ಹಿಂದೆ ನಿರ್ಮಿಸಲಾದ ನೂತನ ಕಟ್ಟಡದಲ್ಲಿ ತರಬೇತಿ ನಡೆಯುತ್ತಿದ್ದರೂ, ಹಳೆಯ ಕಟ್ಟಡವನ್ನು ಕಚೇರಿ ಕಾರ್ಯಗಳಿಗೆ ಬಳಸಲಾಗುತ್ತಿದೆ. ಇದೇ ಕಟ್ಟಡದ ಕೊಠಡಿಗಳಲ್ಲಿ ಸರ್ಕಾರದಿಂದ ಬಂದ ಸಮವಸ್ತ್ರಗಳು, ಶೂಗಳು, ಬ್ಯಾಗ್‌ಗಳು, ತರಬೇತಿ ಉಪಕರಣಗಳು, ಬುಕ್ಸ್ ಹಾಗೂ ಸಿಬ್ಬಂದಿಗೆ ಬೇಕಾದ ಮೇಜು-ಕುರ್ಚಿಗಳು ವರ್ಷಗಳಿಂದ ಬೀಗ ಹಾಕಿದ ಕೊಠಡಿಗಳಲ್ಲೇ ಧೂಳು ಹಿಡಿದು ಬಿದ್ದಿವೆ.

ಸ್ಥಳೀಯರ ಆಕ್ರೋಶವನ್ನೂ ಇದರತ್ತ ಸೆಳೆಯುತ್ತಿದೆ. “ಇವೆಲ್ಲವನ್ನೂ ವಿದ್ಯಾರ್ಥಿಗಳಿಗೆ ನೀಡಬೇಕಾದ್ದಾಗಿತ್ತು. ಆದರೆ ಇವು ದೊರೆಯದೆ ವಿದ್ಯಾರ್ಥಿಗಳು ಹಳೆಯವನ್ನೇ ಬಳಕೆ ಮಾಡುತ್ತಿದ್ದಾರೆ. ಹೀಗಿರುವಾಗ ರೂಪಾಯಿಗಳ ಸರಕಸರು ಗೋದಾಮಿನಲ್ಲಿ ಹಾಳಾಗುತ್ತಿರುವುದು ದುಃಖಕರ.

ಹಳೆಯ ಕಟ್ಟಡದ ಇತರ ಭಾಗಗಳ ಸ್ಥಿತಿಯೂ ನೋವಿಗೆ ಕಾರಣವಾಗಿದ್ದು, ಕೊಠಡಿಗಳು ಪಾಳು ಬಿದ್ದಂತಾಗಿವೆ, ಶೌಚಾಲಯಗಳು ನಿರ್ಲಕ್ಷ್ಯದಿಂದ ಕೆಸರುವಣಿಯಾಗಿ ಮಾರ್ಪಟ್ಟಿವೆ. ಗೋಡೆಗಳಲ್ಲಿ ಗುಟ್ಕಾ ಕಲೆಗಳು ಕಣ್ಣಿಗೆ ಬೀಳುತ್ತವೆ. ಕಿಟಕಿಗಳಿಗೆ ಕೋತಿಗಳಿಂದ ರಕ್ಷಣೆಗಾಗಿ ಮುಳ್ಳಿನ ಕಡ್ಡಿಗಳು ಅಳವಡಿಸಲಾಗಿದೆ. ಕೆಲವರು ಈ ಕಟ್ಟಡ ಅಕ್ರಮ ಚಟುವಟಿಕೆಗಳಿಗೆ ಸ್ಥಳವಾಗಿರಬಹುದೆಂಬ ಅನುಮಾನವೂ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪ್ರಾಂಶುಪಾಲ ಚಂದ್ರು ಅವರು, “ಇತ್ತೀಚೆಗೆ ಸರ್ಕಾರದಿಂದ ವಿತರಣೆಗೆ ಅನುಮತಿ ಲಭ್ಯವಾಗಿದೆ. ತಾಲ್ಲೂಕಿನ ಇತರ ಐಟಿಐಗಳಿಗೆ ಸಹ ಇವು ವಿತರಿಸಲಾಗಬೇಕು. ಶೀಘ್ರದಲ್ಲೇ ಈ ಸಾಮಗ್ರಿಗಳ ವಿತರಣೆಯನ್ನು ಆರಂಭಿಸುತ್ತೇವೆ,” ಎಂದು ಹೇಳಿದ್ದಾರೆ.

ಆದರೆ ಇಲ್ಲಿ ಎತ್ತಲಾಗುತ್ತಿರುವ ಪ್ರಶ್ನೆ ಏನಂದರೆ — ಈ ಸಾಮಗ್ರಿಗಳು ವರ್ಷಗಳ ಕಾಲ ವಿದ್ಯಾರ್ಥಿಗಳಿಂದ ದೂರವಿದ್ದೇನು? ಅದನ್ನು ನೋಡಿಕೊಳ್ಳಬೇಕಾದ ಅಧಿಕಾರಿಗಳ ಜವಾಬ್ದಾರಿಯೇನು? ಸರಕಾರದ ಯೋಜನೆಗಳು ಜಾರಿಗೆ ಬರದೆ ಕಾಗದದಲ್ಲೇ ಉಳಿದರೆ, ವಿದ್ಯಾರ್ಥಿಗಳ ಗುರಿ ಹೇಗೆ ಸಾದ್ಯ?

ಸಮಯಕ್ಕೆ ಮುನ್ನ ನೆರವಿನ ವಸ್ತುಗಳು ತಲುಪದಿದ್ದರೆ, ಸಹಾಯವೀಗ ಸಾಧ್ಯವಲ್ಲ. ಈ ಪ್ರಕರಣ ಸಂಬಂಧಿತ ಇಲಾಖೆಯು ತಕ್ಷಣವೇ ಸೂಕ್ತ ಕ್ರಮ ಕೈಗೊಂಡು, ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂಬುದು ಎಲ್ಲರ ಆಶಯ. ವರದಿ:ಅವಿನಾಶ್

nazeer ahamad

Recent Posts

ಮುಖ್ಯಮಂತ್ರಿಗಳ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಿ: ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ

ಕಾರವಾರ: ಜಿಲ್ಲೆಯಲ್ಲಿ ಪಾರದರ್ಶಕ, ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಎಲ್ಲಾ ಸರ್ಕಾರಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಗಳು…

10 hours ago

ಬಸ್‌ನಲ್ಲಿ ಅಸಭ್ಯವಾಗಿ ಯುತಿಯ ಮೈ ಮುಟ್ಟಿ ಕಿರುಕುಳ; ಧೈರ್ಯವಾಗಿ ವಿಡಿಯೋ ಮಾಡಿದ ಯುವತಿ, ಆರೋಪಿಯನ್ನು ಕೆಳಗಿಳಿಸಿದ ಕಂಡಕ್ಟರ್!

ಮಾರುಕಟ್ಟೆಯಿಂದ ಮನೆಗೆ ತೆರಳಲು ಖಾಸಗಿ ಬಸ್ ಹತ್ತಿದ್ದ ಯುವತಿಗೆ ಮಾರ್ಗಮಧ್ಯೆ ಕಿರುಕುಳ ನೀಡಿದ ಘಟನೆ ನಡೆದಿದೆ. ಬಸ್ ಚಲಿಸಲು ಆರಂಭಿಸಿದ…

10 hours ago

₹65 ಸಾವಿರ ಸಂಬಳದ ಮುಖ್ಯೋಪಾಧ್ಯಾಯರಿಗೆ ಶಾಲೆಗೆ ಬರಲು ಸಮಯವಿಲ್ಲ; ₹4,500ಕ್ಕೆ ಯುವತಿಯನ್ನು ನೇಮಿಸಿ ಪಾಠ ಮಾಡಿಸಿದ ‘ಸರ್ಕಾರಿ ಶಾಲೆ’ ವಂಚನೆ!

ಮಧ್ಯಪ್ರದೇಶ: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಹ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಿಂಗಳಿಗೆ ₹65…

10 hours ago

ಇನ್‌ಸ್ಟಾಗ್ರಾಮ್ ಕ್ಯೂಟ್ ಕಪಲ್ ಕಥೆಗೆ ಬಿಗ್ ಟ್ವಿಸ್ಟ್: ಕೋಟ್ಯಾಧಿಪತಿ ಪತ್ನಿ ಕಂಡಕ್ಟರ್ ಜೊತೆ ಪರಾರಿ ಆರೋಪ!

ಸೋಷಿಯಲ್ ಮೀಡಿಯಾದಲ್ಲಿ ಸದಾ ನಗುನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಕೇರಳದ ಜನಪ್ರಿಯ ಜೋಡಿ ಅಖಿಲ್ (Akhil NRD) ಮತ್ತು ಮೇಘಾ ಅವರ ದಾಂಪತ್ಯ…

10 hours ago

ಟೊರೊಂಟೊದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ: 7 ತಿಂಗಳ ಬಳಿಕ ಆಪ್ತ ವ್ಯಕ್ತಿ ಅರೆಸ್ಟ್‌!

ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…

1 day ago

ಇನ್‌ಸ್ಟಾಗ್ರಾಂ ಪ್ರೇಮಿಗಾಗಿ 6 ತಿಂಗಳ ಕಂದಮ್ಮನನ್ನೇ ಕೊಲ್ಲಿಸಿದ ತಾಯಿ! ಮೀರಾಟ್‌ನಲ್ಲಿ ಬೆಚ್ಚಿಬೀಳಿಸಿದ ಘಟನೆ

ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…

1 day ago