Latest

ಅಟ್ಲಾಂಟಾ ವಿಮಾನ ನಿಲ್ದಾಣದಿಂದ ನಾಪತ್ತೆಯಾದ ಟಾಲಿವುಡ್ ನಟ ಶ್ರೀಧರ್ ರೆಡ್ಡಿಯ ಮಗ: ಪೋಷಕರಿಂದ ಸಹಾಯಕ್ಕೆ ಕೋರಿಕೆ

ಅಮೆರಿಕದ ಅಟ್ಲಾಂಟಾ ನಗರದ ವಿಮಾನ ನಿಲ್ದಾಣದಿಂದ ಟಾಲಿವುಡ್ ನಟ ಶ್ರೀಧರ್ ರೆಡ್ಡಿಯ ಪುತ್ರ ಮನೀಶ್ ರೆಡ್ಡಿ ನಾಪತ್ತೆಯಾಗಿರುವ ಘಟನೆ ಪೋಷಕರಿಗೆ ಭಾರೀ ಆತಂಕ ಉಂಟುಮಾಡಿದೆ. ಜೂನ್ 22ರಂದು ರಾತ್ರಿ 10 ಗಂಟೆಗೆ ಪುತ್ರನಿಂದ ವೀಡಿಯೊ ಕರೆ ಬಂದಿದ್ದಿದ್ದು, ಅದು ಅವರಿಬ್ಬರ ನಡುವಿನ ಕೊನೆಯ ಸಂಪರ್ಕವಾಗಿತ್ತು ಎಂದು ನಟ ಸ್ಪಷ್ಟಪಡಿಸಿದ್ದಾರೆ.

ಮನೀಶ್ ವಿಡಿಯೋ ಕಾಲ್ ಮಾಡಿದ ನಂತರ ಯಾವುದೇ ರೀತಿಯ ಕರೆ ಅಥವಾ ಸಂದೇಶ ಪೋಷಕರಿಗೆ ಬಂದಿಲ್ಲ. ಆತನ ಮೊಬೈಲ್ ಫೋನ್ ಅಟ್ಲಾಂಟಾ ವಿಮಾನ ನಿಲ್ದಾಣದಲ್ಲಿಯೇ ಪತ್ತೆಯಾಗಿದ್ದು, ಬಳಿಕ ಸಂಪರ್ಕ ಸಂಪೂರ್ಣವಾಗಿ ಕಡಿದಿದೆ. “ಅವನ ಫೋನ್ ಕಳೆದುಹೋಗಿದ್ರೆ, ಇತರ ಫೋನ್‌ ಮೂಲಕ ಕೈಚೆಲ್ಲಬಹುದು. ಆದರೆ ಅವನು ಹಾಗೆ ಮಾಡಿಲ್ಲ. ಇದರಿಂದ ನಮಗೆ ಆತಂಕ ಆಗುತ್ತಿದೆ,” ಎಂದು ಶ್ರೀಧರ್ ರೆಡ್ಡಿ ಕಣ್ಣೀರಿಟ್ಟಿದ್ದಾರೆ.

ಘಟನೆ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಜೊತೆಗೆ, ಅಮೆರಿಕದಲ್ಲಿ ಇರುವ ತಮ್ಮ ಸ್ನೇಹಿತನನ್ನು ವಿಮಾನ ನಿಲ್ದಾಣಕ್ಕೆ ಕಳುಹಿಸಿದ್ದ ಶ್ರೀಧರ್ ರೆಡ್ಡಿ, “ಫೋನ್ ಅಲ್ಲಿಯೇ ಇದೆ ಎಂದು ಅಧಿಕೃತ ಮಾಹಿತಿ ಸಿಕ್ಕಿದೆ. ಆದರೆ ಮನೀಶ್ ಎಲ್ಲಿ ಎನ್ನುವುದು ಇನ್ನೂ ಗೊತ್ತಿಲ್ಲ,” ಎಂದು ಹೇಳಿದ್ದಾರೆ.

ಮನೀಶ್‌ ಅಪಹರಣಕ್ಕೆ ಒಳಗಾಗಿರಬಹುದೆಂಬ ಅನುಮಾನವೂ ಪೋಷಕರಲ್ಲಿ ಹುಟ್ಟಿದ್ದು, ಹಣಕ್ಕಾಗಿ ಯಾರಾದರೂ ಈ ಕೃತ್ಯವೆಸಗಿರಬಹುದೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ, ಅವರು ಭಾರತೀಯ ರಾಯಭಾರಿ ಕಚೇರಿ, ಎನ್.ಆರ್.ಐ ಸಮುದಾಯ ಹಾಗೂ ಸಾರ್ವಜನಿಕರ ಸಹಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

“ದಯವಿಟ್ಟು ನಮ್ಮ ಮಗನ ಪತ್ತೆಗೆ ಸಹಕರಿಸಿ. ಅವನ ಬದುಕು ಸಂಕಟದಲ್ಲಿದೆ. ನಾವು ಆಶಾಕಿರಣವೊಂದನ್ನು ಹಿಡಿದುಕೊಂಡಿದ್ದೇವೆ,” ಎಂದು ಅವರು ಭಾವನಾತ್ಮಕವಾಗಿ ಕೋರಿದ್ದಾರೆ.

 

nazeer ahamad

Recent Posts

ಅಟ್ರಾಸಿಟಿ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಲಂಚ ಬೇಡಿಕೆ: ಸಿಪಿಐ ಲೋಕಾಯುಕ್ತ ಬಲೆಗೆ

ಅಟ್ರಾಸಿಟಿ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯ ಸಿಪಿಐ ವೀರಣ್ಣ…

3 hours ago

ಕರ್ಕಶ ಶಬ್ದದ ಬೈಕ್ ವಿಚಾರಕ್ಕೆ ಪೊಲೀಸರ ಮೇಲೆಯೇ ವಿದ್ಯಾರ್ಥಿಗಳ ಹಲ್ಲೆ

ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್‌ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…

10 hours ago

ಕ್ಯಾಂಟಿನ್‌ನಲ್ಲಿ ವೇಶ್ಯಾವಾಟಿಕೆ ದಂಧೆ: ಬೆಳ್ತಂಗಡಿಯಲ್ಲಿ ಪೊಲೀಸರ ದಾಳಿ, ಮೂವರು ಬಂಧನ

ಬೆಳ್ತಂಗಡಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ…

10 hours ago

ಒಂದು ವರ್ಷದ ನಿರೀಕ್ಷೆಗೆ ತೆರೆ: ಭಟ್ಕಳಕ್ಕೆ ಖಾಯಂ ಎಸಿ, ಜೆ. ಮಹೇಶ್ ಅಧಿಕಾರ ಸ್ವೀಕಾರ

ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು,…

1 day ago

ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ನಿಧನ; ರಾಜಕೀಯ ವಲಯದಲ್ಲಿ ಶೋಕದ ಛಾಯೆ

ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ…

1 day ago

ಆಂಟಿ ಹಿಂದೆ ಹೋದವನ ದುರಂತ ಅಂತ್ಯ: ಲಿವ್-ಇನ್ ಸಂಗಾತಿಯ ಕಿರುಕುಳಕ್ಕೆ ಯುವಕ ಆತ್ಮಹತ್ಯೆ!

ಸೋಶಿಯಲ್ ಮೀಡಿಯಾದಲ್ಲಿ ಆರಂಭವಾದ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ಲಿವ್-ಇನ್…

1 day ago