Latest

ಆಧಾರ್ ಕಾರ್ಡ್ ಮಾಡಿಸಲು ಅಲೆದಾಟದಿಂದ ಬೇಸತ್ತು ಪ್ರಧಾನಿ ಮೋದಿಗೆ ಪತ್ರ ಬರೆದ ಅಜ್ಜಿ

ಯಲ್ಲಾಪುರ:-ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ ಮಾಡಿಸಲು ಅಲೆದಾಡುತ್ತಿರುವ ಯಲ್ಲಾಪುರ ಕಾನಗೋಡಿನ 80 ವರ್ಷದ ಸರಸ್ವತಿ ಹೆಗಡೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ತಾನು ಸಾಯುವುದರ ಒಳಗೆ ಆಧಾರ್ ಕಾರ್ಡ ಮಾಡಿಕೊಡಿ ಎಂದವರು ಅಳಲು ತೋಡಿಕೊಂಡಿದ್ದಾರೆ. ಈ ವಿಷಯ ಅರಿತ ಅಧಿಕಾರಿಗಳು ತ್ವರಿತವಾಗಿ ಅವರ ಮನೆಗೆ ದೌಡಾಯಿಸಿದ್ದು, ಆ ಪತ್ರ ಪ್ರಧಾನಿ ಕಚೇರಿಗೆ ತಲುಪುವುದರೊಳಗೆ ಆಧಾರ್ ಸೇವೆ ಒದಗಿಸುವ ಸಿದ್ಧತೆ ಮಾಡಿಕೊಂಡಿದ್ದಾರೆ.

ಯಲ್ಲಾಪುರ ಶಿರಸಿ ಗಡಿಭಾಗದಲ್ಲಿ ಕಾನಗೋಡು ಎಂಬ ಊರಿದೆ. ಅಲ್ಲಿನ ಸರಸ್ವತಿ ರಾಮ ಹೆಗಡೆ ಅವರು ಆಧಾ‌ರ್ ಕಾರ್ಡ ಮಾಡಿಸುವುದಕ್ಕಾಗಿ ಕಳೆದ 10 ವರ್ಷಗಳಿಂದ ಕಚೇರಿ ಅಲೆದಾಟ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲಾಡಳಿತ ವೃದ್ಧರ ಮನೆಗೆ ತೆರಳಿ ಆಧಾರ್ ಕಾರ್ಡ ಮಾಡಿಸುವ ಯೋಜನೆರೂಪಿಸಿದರೂ, ಹರಿಯುತ್ತಿರುವ ಹಳ್ಳ ದಾಟಿ ಅಧಿಕಾರಿಗಳು ಸರಸ್ವತಿ ಹೆಗಡೆ ಅವರ ಮನೆಗೆ ಬರಲು ಸಾಧ್ಯವಾಗಿರಲಿಲ್ಲ. ಅನಾರೋಗ್ಯ, ಕೊರೊನಾ ಕಾಲಘಟ್ಟ ಎಲ್ಲವನ್ನು ಮೀರಿ ಸರಸ್ವತಿ ಹೆಗಡೆ ಅವರು ಅಂಚೆ ಕಚೇರಿಗೆ ಅಲೆದಾಡಿದರೂ ಆಧಾ‌ರ್ ಕಾರ್ಡ ಸೇವೆ ಸಿಗಲಿಲ್ಲ.ಆಧಾರ್ ಕಾರ್ಡ ಬಗ್ಗೆ ವಿಚಾರಿಸುವುದಕ್ಕಾಗಿ ಸರಸ್ವತಿ ಹೆಗಡೆ ಅವರು ಆಧಾ‌ರ್ ಕೇಂದ್ರ, ನಾಡ ಕಚೇರಿ, ತಹಶೀಲ್ದಾರ್ ಕಚೇರಿ, ಅಂಚೆ ಕಚೇರಿ ಸೇರಿ ಎಲ್ಲಾ ಕಚೇರಿಗಳಿಗೂ ಸುತ್ತಾಡಿದರು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಶಾಲೆಯ ಪ್ರಮಾಣ ಪತ್ರ ತರಬೇಕು ಎಂದು ಅಧಿಕಾರಿಗಳು ಸೂಚಿಸಿದ ಕಾರಣ ಶಾಲೆಗೆ ಭೇಟಿ ನೀಡಿದರು. ಆದರೆ, ಅಲ್ಲಿಯೂ ಸರಸ್ವತಿ ಹೆಗಡೆ ಅವರ ವರ್ಗಾವಣೆ ಪ್ರಮಾಣ ಪತ್ರ ಸರಿಯಾಗಿರಲಿಲ್ಲ. ಶಿಕ್ಷಕರು ನೀಡಿದ ಪ್ರಮಾಣ ಪತ್ರವನ್ನು ಅಧಿಕಾರಿಗಳು ಒಪ್ಪಲಿಲ್ಲ. ಹೀಗಾಗಿ, ಕೊನೆ ಪ್ರಯತ್ನವಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದರು. ಅದರ ಪ್ರತಿಯನ್ನು ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಸಹ ರವಾನಿಸಿದರು.

ಈ ವಿಷಯ ಅರಿತ ಅಧಿಕಾರಿಗಳು ಸರಸ್ವತಿ ಹೆಗಡೆ ಅವರನ್ನು ಹುಡುಕಿ ಮನೆಗೆ ಬಂದರು. ಮಂಚಿಕೇರಿಯ ಉಪತಹಶೀಲ್ದಾರ್ ಎಚ್ ಎನ್ ರಾಘವೇಂದ್ರ ಅವರು ಸರಸ್ವತಿ ಹೆಗಡೆ ಅವರನ್ನು ಮಾತನಾಡಿಸಿ ಸಮಸ್ಯೆ ಆಲಿಸಿದರು. ಸರ್ಕಾರದ ಎಲ್ಲಾ ಸೌಲಭ್ಯಗಳಿಗೂ ಆಧಾರ್ ಕೇಳುತ್ತಾರೆ. ಆದರೆ, ಆಧಾರ್ ಕಾರ್ಡ ಮಾತ್ರ ಯಾರೂ ಮಾಡಿಕೊಡುತ್ತಿಲ್ಲ ಎಂದು ಸರಸ್ವತಿ ಹೆಗಡೆ ಸಮಸ್ಯೆ ವಿವರಿಸಿದರು. 70 ವರ್ಷ ಹಿಂದಿನ ಶಾಲಾ ದಾಖಲೆ, ಚುನಾವಣಾ ಚೀಟಿ ಹಿಡಿದು ಹೋದರೆ ಈ ದಾಖಲೆ ಸಾಲುವುದಿಲ್ಲ ಎನ್ನುತ್ತಾರೆ. ಉಳಿದ ಯಾವ ದಾಖಲೆಯೂ ನನ್ನಲ್ಲಿಲ್ಲ. ನನ್ನ ಮರಣ ನಂತರ ಮಕ್ಕಳಿಗೆ ಮರಣ ಪತ್ರ ಸಿಗುವುದಕ್ಕಾದರೂ ಆಧಾರ್ ಅಗತ್ಯವಿದೆ’ ಎಂದವರು ಕಣ್ಣೀರಾದರು. ಆಧಾರ್ ಜೋಡಣೆ ಮಾಡದ ಕಾರಣ ರೇಶನ್ ಕಾರ್ಡ ಸಹ ರದ್ದಾಗಿರುವ ಬಗ್ಗೆ ಅಳಲು ತೋಡಿಕೊಂಡರು.

ಅಜ್ಜಿಗೆ ಸಮಾಧಾನ ಮಾಡಿದ ಉಪತಹಶೀಲ್ದಾರ್ ಎಚ್.ಎನ್ ರಾಘವೇಂದ್ರ ಅವರು ಅಲ್ಲಿಂದಲೇ ಆಧಾರ್ ಸಂಯೋಜಕರಿಗೆ ಫೋನ್ ಮಾಡಿದರು. ಗ್ರಾಮ ಆಡಳಿತಾಧಿಕಾರಿ ಶರಣು ತುಂಬಗಿ ಜೊತೆ ಸೇರಿ ದಾಖಲೆಗಳನ್ನು ಪರಿಶೀಲಿಸಿದರು. ಕೊನೆಗೆ `ಎರಡು ದಿನ ಮುಂಚಿತವಾಗಿ ಫೋನ್ ಮಾಡಿಕೊಂಡು ಆಧಾ‌ರ್ ಕೇಂದ್ರಕ್ಕೆ ಬನ್ನಿ. ಆಧಾರ್ ಕಾರ್ಡ ಮಾಡಿಕೊಡಿಸುವೆ’ ಎಂದು ಎಚ್ ಎನ್ ರಾಘವೇಂದ್ರ ಅವರು ಭರವಸೆ ನೀಡಿದರು. ಆಧಾ‌ರ್ ಸಂಯೋಜನ ಮಹಾಬಲೇಶ್ವರ ದೇಸಾಯಿ ಅವರಿಗೂ ಪರಿಸ್ಥಿತಿಯ ಬಗ್ಗೆ ವಿವರಿಸಿ, ಶಿರಸಿ ಕೇಂದ್ರದಿಂದ ಆಧಾ‌ರ್ ಕಾರ್ಡ ಕೊಡಿಸುವ ಬಗ್ಗೆ ನಿರ್ಣಯಿಸಿದರು. ಸದ್ಯ ಮಾರ್ಚ 27ರಂದು ಶಿರಸಿಗೆ ತೆರಳಿ ಆಧಾರ್ ಕಾರ್ಡ ಮಾಡಿಸುವುದಾಗಿ ಸರಸ್ವತಿ ಹೆಗಡೆ ಅವರ ಪುತ್ರ ಪ್ರಸಾದ ಹೆಗಡೆ ಮಾಹಿತಿ ನೀಡಿದ್ದಾರೆ.

ಭ್ರಷ್ಟರ ಬೇಟೆ

Recent Posts

ಅಟ್ರಾಸಿಟಿ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಲಂಚ ಬೇಡಿಕೆ: ಸಿಪಿಐ ಲೋಕಾಯುಕ್ತ ಬಲೆಗೆ

ಅಟ್ರಾಸಿಟಿ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯ ಸಿಪಿಐ ವೀರಣ್ಣ…

7 hours ago

ಕರ್ಕಶ ಶಬ್ದದ ಬೈಕ್ ವಿಚಾರಕ್ಕೆ ಪೊಲೀಸರ ಮೇಲೆಯೇ ವಿದ್ಯಾರ್ಥಿಗಳ ಹಲ್ಲೆ

ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್‌ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…

13 hours ago

ಕ್ಯಾಂಟಿನ್‌ನಲ್ಲಿ ವೇಶ್ಯಾವಾಟಿಕೆ ದಂಧೆ: ಬೆಳ್ತಂಗಡಿಯಲ್ಲಿ ಪೊಲೀಸರ ದಾಳಿ, ಮೂವರು ಬಂಧನ

ಬೆಳ್ತಂಗಡಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ…

13 hours ago

ಒಂದು ವರ್ಷದ ನಿರೀಕ್ಷೆಗೆ ತೆರೆ: ಭಟ್ಕಳಕ್ಕೆ ಖಾಯಂ ಎಸಿ, ಜೆ. ಮಹೇಶ್ ಅಧಿಕಾರ ಸ್ವೀಕಾರ

ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು,…

1 day ago

ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ನಿಧನ; ರಾಜಕೀಯ ವಲಯದಲ್ಲಿ ಶೋಕದ ಛಾಯೆ

ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ…

2 days ago

ಆಂಟಿ ಹಿಂದೆ ಹೋದವನ ದುರಂತ ಅಂತ್ಯ: ಲಿವ್-ಇನ್ ಸಂಗಾತಿಯ ಕಿರುಕುಳಕ್ಕೆ ಯುವಕ ಆತ್ಮಹತ್ಯೆ!

ಸೋಶಿಯಲ್ ಮೀಡಿಯಾದಲ್ಲಿ ಆರಂಭವಾದ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ಲಿವ್-ಇನ್…

2 days ago