Latest

ಥೀಮ್ ಪಾರ್ಕ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಪಿಕ್ ಜಾಮ್!?

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಚಿಟಗಿನಕೊಪ್ಪ ಗ್ರಾಮದ ಹತ್ತಿರ ಇರುವ ರಾಷ್ಟ್ರೀಯ ಹೆದ್ದಾರಿ 50 ರ ಬಳಿ ಕಳೆದ ಎರಡು ವಾರಗಳಿಂದ ಪ್ರಾರಂಭವಾದ ಆರೂಢ ವೈಭವ ಕ್ರಿಯೇಷನ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಆರೂಢ ವೈಭವ ಥೀಮ್ ಪಾರ್ಕ್ ನಲ್ಲಿ ಸರಿಯಾಗಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ, ಇವತ್ತು ಮಕರ ಸಂಕ್ರಾಂತಿ ಹಬ್ಬ ಪ್ರಯುಕ್ತ ಬಹಳಷ್ಟು ಜನರು ಥೀಮ್ ಪಾರ್ಕ್ ನೋಡಲು ಆಗಮಿಸಿದ್ದರು. ಗಾಡಿಗಳು ಹೆಚ್ಚಾಗಿ ಬಂದು, ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿ ಇಲ್ಲದ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಮೇಲೆಯೇ ಗಾಡಿಗಳು ನಿಂತಿರುವುದು ಕಂಡುಬಂದಿತು. ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿಯಾಗಿದ್ದು ಈ ರಸ್ತೆಯಲ್ಲಿಯೇ ಸಾಕಷ್ಟು ಗಾಡಿಗಳು ದಿನನಿತ್ಯ ಓಡಾಡುತ್ತಾವೆ. ಆರಂಭವಾಗಿ ಎರಡು ವಾರದಲ್ಲಿಯೇ ದಿನಕ್ಕೆ ಸುಮಾರು ಸಾವಿರಾರು ಜನ ಪಾರ್ಕ್ ನೋಡಲು ಆಗಮಿಸುತ್ತಿದ್ದಾರೆ. ಸುತ್ತ ಮುತ್ತಲಿನ ಗ್ರಾಮಗಳ ಜನರ ಆಕರ್ಷಣೀಯ ಸ್ಥಳವಾಗಿ ಮಾರ್ಪಟ್ಟಿದೆ. ಈ ರೀತಿಯಾಗಿ ಇರುವ ಕಾರಣ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಆಗಮನ ಹೆಚ್ಚಾಗುವದರಲ್ಲಿ ಸಂದೇಹವಿಲ್ಲ. ಪಾರ್ಕಿಂಗ್ ಸಮಸ್ಯೆ ಇನ್ನೂ ಹೆಚ್ಚಿನದಾಗುತ್ತದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು. ಇದೇ ರೀತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಪಿಂಗ್ ಜಾಮ್ ಆಗ್ತಾ ಹೋದರೆ ಮುಂದೆ ಸಾರ್ವಜನಿಕರಿಗೆ ಸಮಸ್ಯೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

ವರದಿ: ಸಂಗಪ್ಪ ಚಲವಾದಿ

ಭ್ರಷ್ಟರ ಬೇಟೆ

Recent Posts

‍ರೀಲ್ಸ್ ಮಾಡುವ ಹುಚ್ಚು, ಕರೆದಾಗ ಬಂದು ಜೊತೆಗೆ ಮಲಗುತ್ತಿರಲಿಲ್ಲ ಎಂದು ಪತ್ನಿಯನ್ನು ಕೊಂದ ಪತಿ

ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…

2 days ago

ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27ರ ಯುವತಿ ಸಾವು; ಉಡುಪಿಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ, ತನಿಖೆ ಚುರುಕು

ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…

2 days ago

‘ಅಂದು ನನ್ನೊಂದಿಗೆ ಮಲಗಲು ಕೇಳಿದ್ದು ನೀವೇ ತಾನೇ?’ ನಿರ್ಮಾಪಕನಿಗೆ ನಟಿ ಚಾಂದಿನಿ ಚೌಧರಿ ಶಾಕ್!

ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…

2 days ago

ಮದುವೆಯಾಗಿ 4 ದಿನಕ್ಕೆ ಮಾಜಿ ಪ್ರೇಮಿಯೊಂದಿಗೆ ಹೋಟೆಲ್ ನಲ್ಲಿ ಪತ್ನಿ; ಪತಿಯ ಕೈಗೆ ವಿಡಿಯೋ…!

ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…

2 days ago

ಪತ್ನಿಯನ್ನು ಕೊಂದು ಶವ ವಿಲೇವಾರಿಗೆ ಸ್ನೇಹಿತನ ನೆರವು ಕೇಳಿದ ಪತಿ; ಜಾಣತನದಿಂದ ಪೊಲೀಸರಿಗೆ ಒಪ್ಪಿಸಿದ ಗೆಳೆಯ!

ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…

2 days ago

ಹಂಪಿಯಲ್ಲಿ ಅಕ್ರಮ ಹೋಂಸ್ಟೇ, ವಾಣಿಜ್ಯ ಚಟುವಟಿಕೆ ಆರೋಪ: 54 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸ್ವಯಂಪ್ರೇರಿತ ದೂರು

ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…

2 days ago