Latest

ಮೂಢನಂಬಿಕೆಯ ಮಾಯಾಜಾಲ ಬಯಲು: ಭಕ್ತರಿಗೆ ಮೂತ್ರ ಕೂಡಿಸಿ ಹಲ್ಲೆ ನಡೆಸಿದ ನಕಲಿ ಬಾಬ.!

ಛತ್ರಪತಿ ಸಂಭಾಜಿನಗರ (ಮಹಾರಾಷ್ಟ್ರ), ಜುಲೈ 20: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ವೈಜಾಪುರ ತಹಸೀಲ್‌ನ ಶಿಯುರ್ ಗ್ರಾಮದಲ್ಲಿರುವ ಒಂದು ದೇವಸ್ಥಾನದಲ್ಲಿ ‘ಅಧ್ಯಾತ್ಮಿಕ ಚಿಕಿತ್ಸೆ’ ಹಾಗೂ ‘ಅಘೋರಿ ತಂತ್ರ’ದ ಹೆಸರಿನಲ್ಲಿ ಭಕ್ತರ ಮೇಲೆ ಅಮಾನವೀಯ ಕಿರುಕುಳ ನೀಡಿ, ನಕಲಿ ಬಾಬಾ ಸಾರ್ವಜನಿಕರ ಭಾವನೆಗಳನ್ನು ದುರ್ಬಳಕೆ ಮಾಡಿದ್ದ ಘಟನೆ ಬಯಲಾಗಿದ್ದು, ಈ ಬೆಳವಣಿಗೆ ರಾಜ್ಯದೆಲ್ಲೆಡೆ ಆಕ್ರೋಶ ಹುಟ್ಟುಹಾಕಿದೆ.

ಪುತ್ತಲಿಯಂತೆ ಶಾಂತವಾಗಿ ಬಾಬಾಗೆ ಭಕ್ತಿಯಿಂದ ನಮನ ಸಲ್ಲಿಸುತ್ತಿದ್ದ ಜನರು, ಈಗ ಆ ಬಾಬಾದ ಅಸಲಿ ಮುಖ ನೋಡಿ ಬೆಚ್ಚಿಬಿದ್ದಿದ್ದಾರೆ. ‘ನನಗೆ ಅಲೌಕಿಕ ಶಕ್ತಿಗಳಿವೆ’ ಎಂದು ಜನರ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದ ಸಂಜಯ್ ಪಗಾರೆ ಎಂಬ ಸ್ವಯಂ ಘೋಷಿತ ಬಾಬಾ, ಮಹಿಳೆಯರು ಹಾಗೂ ಪುರುಷರನ್ನು ‘ಪಾಪ ಶುದ್ಧಿ’ ಹೆಸರಿನಲ್ಲಿ ನಾನಾ ವಿಧದ ಹಿಂಸೆಗಳಿಗೆ ಒಳಪಡಿಸುತ್ತಿದ್ದ.

ಮೂತ್ರ ಕುಡಿಸುವ ವಿಕೃತಿ, ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯ ಆರೋಪ

ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ ಭಕ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಪಗಾರೆ, ಕೆಲವರ ಮುಖದ ಮೇಲೆ ಬೂಟು ಹಾಕಿ ತುಳಿಯುತ್ತಿದ್ದ. ಮೂತ್ರ ಕುಡಿಸುತ್ತಿದ್ದ, ದೇವದೂತರ ಅಶರೀರ ಶಕ್ತಿ ಸೇರಬೇಕೆಂದು ಹೇಳಿ ಕೋಲಿನಿಂದ ಹೊಡೆತ ನೀಡುತ್ತಿದ್ದ. ಕೆಲವೊಮ್ಮೆ ತಮ್ಮ ಬಾಯಿಗೆ ಬೂಟು ತುರುಕಿಸುವಂತೆ ಕೂಡ ಸೂಚಿಸುತ್ತಿದ್ದ. ಆತನ ಈ ಪೈಶಾಚಿಕ ವರ್ತನೆಗೆ ಅನೇಕರು ದಿಗ್ಭ್ರಮೆಗೊಂಡು ಸಹನೆ ತೀರದ ಸ್ಥಿತಿಗೆ ಬಿದ್ದಿದ್ದರು.

ಭಕ್ತರಲ್ಲಿ ಕೆಲವರಿಗೆ ‘ಮಕ್ಕಳಾಗದ ಸಮಸ್ಯೆ’, ‘ದೆವ್ವ ಹಿಡಿದಿದೆ’, ‘ವಿವಾಹವಾಗುವುದಿಲ್ಲ’ ಎಂಬ ಭಯ ಹುಟ್ಟಿಸಿ, ಅಘೋರಿ ತಂತ್ರ ಹೇಳಿಕೊಂಡು ಅವರನ್ನು ದೆವ್ವವಾಡಿಸಿದಂತೆ ಕಾಣಿಸುತ್ತಿದ್ದ. ಈ ವೇಳೆ ಕೆಲವು ಮಹಿಳೆಯರಿಗೂ ಗಂಭೀರ ಮಾನಸಿಕ ಹಾಗೂ ಶಾರೀರಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ.

ಗುಪ್ತ ಕ್ಯಾಮೆರಾದ ಸಹಾಯದಿಂದ ಕಳ್ಳಚಟಕೆ ಬಯಲು

ಈ ನಕಲಿ ಬಾಬಾದ ವರ್ತನೆಗಳ ಬಗ್ಗೆ ಅನುಮಾನಗೊಂಡ ಮುಕ್ತ ಚಿಂತಕರ ಹಾಗೂ ಮೂಢನಂಬಿಕೆ ವಿರೋಧಿ ಸಂಘಟನೆಯ ಕಾರ್ಯಕರ್ತರು ಗುಪ್ತ ಕ್ಯಾಮೆರಾ ಮೂಲಕ ಚಿತ್ರೀಕರಣ ನಡೆಸಿದರು. ವಿಡಿಯೋಗಳಲ್ಲಿ, ಭಕ್ತನೊಬ್ಬನನ್ನು ನೆಲದ ಮೇಲೆ ಮಲಗಿಸಿ ಮುಖದ ಮೇಲೆ ಹೆಜ್ಜೆ ಹಾಕಿದ ದೃಶ್ಯ, ಬೂಟಿನ ವಾಸನೆ ಕೊಡಿಸುವ ನಾಟಕಗಳು, ಡ್ರಮ್ ಬಾರಿಸುವ ಡ್ರಾಮಾ ಎಲ್ಲವೂ ದಾಖಲಾಗಿವೆ. ಈ ದೃಶ್ಯಗಳು ಇದೀಗ  ವೈರಲ್ ಆಗಿವೆ.

ಪೊಲೀಸರು ಕ್ರಮ ಕೈಗೊಂಡು ಬಂಧನ

ಸಂಜಯ್ ಪಗಾರೆ ವಿರುದ್ಧ ಈಗ ಭಾರತೀಯ ದಂಡ ಸಂಹಿತೆಯ ವಿವಿಧ ವಿಧಿಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹಲ್ಲೆ, ವಂಚನೆ, ಮಾನಸಿಕ ಪೀಡನೆ ಹಾಗೂ ಮೂಢನಂಬಿಕೆಗೆ ಉತ್ತೇಜನ ನೀಡಿರುವ ಆರೋಪಗಳನ್ನು ಪೊಲೀಸರು ದಾಖಲಿಸಿದ್ದಾರೆ. ಬಂಧನಕ್ಕೊಳಗಾದ ಬಾಬಾ ಈಗ ಪೊಲೀಸ್ ವಶದಲ್ಲಿದ್ದಾರೆ.

nazeer ahamad

Recent Posts

ಮುಖ್ಯಮಂತ್ರಿಗಳ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಿ: ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ

ಕಾರವಾರ: ಜಿಲ್ಲೆಯಲ್ಲಿ ಪಾರದರ್ಶಕ, ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಎಲ್ಲಾ ಸರ್ಕಾರಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಗಳು…

18 hours ago

ಬಸ್‌ನಲ್ಲಿ ಅಸಭ್ಯವಾಗಿ ಯುತಿಯ ಮೈ ಮುಟ್ಟಿ ಕಿರುಕುಳ; ಧೈರ್ಯವಾಗಿ ವಿಡಿಯೋ ಮಾಡಿದ ಯುವತಿ, ಆರೋಪಿಯನ್ನು ಕೆಳಗಿಳಿಸಿದ ಕಂಡಕ್ಟರ್!

ಮಾರುಕಟ್ಟೆಯಿಂದ ಮನೆಗೆ ತೆರಳಲು ಖಾಸಗಿ ಬಸ್ ಹತ್ತಿದ್ದ ಯುವತಿಗೆ ಮಾರ್ಗಮಧ್ಯೆ ಕಿರುಕುಳ ನೀಡಿದ ಘಟನೆ ನಡೆದಿದೆ. ಬಸ್ ಚಲಿಸಲು ಆರಂಭಿಸಿದ…

18 hours ago

₹65 ಸಾವಿರ ಸಂಬಳದ ಮುಖ್ಯೋಪಾಧ್ಯಾಯರಿಗೆ ಶಾಲೆಗೆ ಬರಲು ಸಮಯವಿಲ್ಲ; ₹4,500ಕ್ಕೆ ಯುವತಿಯನ್ನು ನೇಮಿಸಿ ಪಾಠ ಮಾಡಿಸಿದ ‘ಸರ್ಕಾರಿ ಶಾಲೆ’ ವಂಚನೆ!

ಮಧ್ಯಪ್ರದೇಶ: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಹ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಿಂಗಳಿಗೆ ₹65…

18 hours ago

ಇನ್‌ಸ್ಟಾಗ್ರಾಮ್ ಕ್ಯೂಟ್ ಕಪಲ್ ಕಥೆಗೆ ಬಿಗ್ ಟ್ವಿಸ್ಟ್: ಕೋಟ್ಯಾಧಿಪತಿ ಪತ್ನಿ ಕಂಡಕ್ಟರ್ ಜೊತೆ ಪರಾರಿ ಆರೋಪ!

ಸೋಷಿಯಲ್ ಮೀಡಿಯಾದಲ್ಲಿ ಸದಾ ನಗುನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಕೇರಳದ ಜನಪ್ರಿಯ ಜೋಡಿ ಅಖಿಲ್ (Akhil NRD) ಮತ್ತು ಮೇಘಾ ಅವರ ದಾಂಪತ್ಯ…

18 hours ago

ಟೊರೊಂಟೊದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ: 7 ತಿಂಗಳ ಬಳಿಕ ಆಪ್ತ ವ್ಯಕ್ತಿ ಅರೆಸ್ಟ್‌!

ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…

2 days ago

ಇನ್‌ಸ್ಟಾಗ್ರಾಂ ಪ್ರೇಮಿಗಾಗಿ 6 ತಿಂಗಳ ಕಂದಮ್ಮನನ್ನೇ ಕೊಲ್ಲಿಸಿದ ತಾಯಿ! ಮೀರಾಟ್‌ನಲ್ಲಿ ಬೆಚ್ಚಿಬೀಳಿಸಿದ ಘಟನೆ

ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…

2 days ago