Latest

ಕ್ಯಾಪ್ಟನ್ ಕೂಲ್” ಎಂಬ ಹೆಸರು ಈಗ ಧೋನಿಗೆ ಮಾತ್ರ.! ಟ್ರೇಡ್‌ಮಾರ್ಕ್ ಮಂಜೂರು.

ಕ್ರಿಕೆಟ್ ಅಭಿಮಾನಿಗಳು “ಕ್ಯಾಪ್ಟನ್ ಕೂಲ್” ಎಂದು ಪ್ರೀತಿಯಿಂದ ಕರೆಯುವ ಮಹೇಂದ್ರ ಸಿಂಗ್ ಧೋನಿ, ಇದೀಗ ತಮ್ಮ ಈ ಪ್ರಸಿದ್ಧ ಅಡ್ಡಹೆಸರನ್ನು ಕಾನೂನು ಬದ್ಧವಾಗಿ ತನ್ನದಾಗಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಮೈದಾನದಲ್ಲಿ ತಾಳ್ಮೆ, ಶಾಂತಿ ಹಾಗೂ ಷಾಟ್ ತೀರ್ಮಾನಗಳಿಂದ ದಿಟ್ಟ ನಾಯಕತ್ವ ತೋರಿಸಿದ್ದ ಧೋನಿಗೆ ಈ ಬಿರುದು ತಮ್ಮದೇ ಆದ ವೈಯಕ್ತಿಕ ಗುರುತಾಗಿ ಪರಿಣಮಿಸಿದ್ದು, ಇದೀಗ ಅದನ್ನು ಅಧಿಕೃತವಾಗಿ ಟ್ರೇಡ್‌ಮಾರ್ಕ್ ಆಗಿ ನೋಂದಾಯಿಸಲು ಮೊದಲ ಹೆಜ್ಜೆ ಇಟ್ಟಿದ್ದಾರೆ.

ಜೂನ್ 16, 2025ರಂದು ಟ್ರೇಡ್‌ಮಾರ್ಕ್ ಜರ್ನಲ್‌ನಲ್ಲಿ ಧೋನಿಯ “ಕ್ಯಾಪ್ಟನ್ ಕೂಲ್” ಅರ್ಜಿಯ ಪ್ರಕಟಣೆ ನಡೆಯಿತು. ಟ್ರೇಡ್‌ಮಾರ್ಕ್ ಪೋರ್ಟಲ್ ಈ ಅರ್ಜಿಯನ್ನು ಮಂಜೂರಾಗಿಸಿದ್ದು, ಈ ಹೆಸರನ್ನು ಇನ್ನು ಮುಂದೆ ಧೋನಿ ಹೊರತುಪಡಿಸಿ ಯಾರು ಬಳಸಲು ಸಾಧ್ಯವಿಲ್ಲ.

ಆದರೆ ಈ ಅರ್ಜಿ ಮೊದಲ ಬಾರಿಗೆ ಸಲ್ಲಿಸಿದಾಗಲೇ, ಇದಕ್ಕೆ ವಿರೋಧದ ಧ್ವನಿ ಕೇಳಿಬಂದಿತ್ತು. ಟ್ರೇಡ್‌ಮಾರ್ಕ್ಸ್ ಕಾಯ್ದೆಯ ಸೆಕ್ಷನ್ 11(1) ಅಡಿಯಲ್ಲಿ ಈ ಹೆಸರಿನಂತೆ ಇದ್ದ ಗುರುತುಗಳು ಜನರಲ್ಲಿ ಗೊಂದಲ ಉಂಟುಮಾಡಬಹುದು ಎಂಬ ಆಕ್ಷೇಪಣೆ ವ್ಯಕ್ತವಾಗಿತ್ತು. ಆದರೆ ಧೋನಿ ಪರ ವಕೀಲರು ಮಂಡಿಸಿದ ಅರ್ಥಪೂರ್ಣ ವಾದಗಳು ನಿರ್ಣಾಯಕವಾದವು.

ವಕೀಲರ ಪ್ರಕಾರ, “ಕ್ಯಾಪ್ಟನ್ ಕೂಲ್” ಎಂಬ ಪದ ಧೋನಿಯ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದ ಅವಿಭಾಜ್ಯ ಭಾಗವಾಗಿದೆ. ಕ್ರಿಕೆಟ್ ಅಭಿಮಾನಿಗಳು, ಮಾಧ್ಯಮಗಳು ಈ ಪದವನ್ನು ವರ್ಷಗಳಿನಿಂದ ಧೋನಿಗೆ ಸಾಂಕೇತಿಕವಾಗಿ ಬಳಸುತ್ತಿದ್ದು, ಇದು ಇತರರಿಗಿಂತ ಧೋನಿಗೆ ವಿಶಿಷ್ಟವಾದ ಸಂಬಂಧವನ್ನು ಹೊಂದಿದೆ ಎಂದು ಸ್ಪಷ್ಟಪಡಿಸಿದರು.

ಈ ವಾದಗಳನ್ನು ಪರಿಗಣಿಸಿದ ಟ್ರೇಡ್‌ಮಾರ್ಕ್ ಅಧಿಕಾರಿಗಳು ಧೋನಿಗೆ ಈ ಹೆಸರನ್ನು ಟ್ರೇಡ್‌ಮಾರ್ಕ್ ರೂಪದಲ್ಲಿ ಮಂಜೂರು ಮಾಡಿದ್ದಾರೆ. ಇದೀಗ ಧೋನಿಗೆ ಮಾತ್ರ ಈ ಬಿರುದನ್ನು ಬಳಸುವ ಕಾನೂನು ಹಕ್ಕು ಲಭಿಸಿದೆ.

ಇದಾದ ಮೇಲೆ, ಧೋನಿಯ ಈ ಹೆಸರನ್ನು ಕಮರ್ಶಿಯಲ್ ಗಾಗಿ ಬಳಸಲು ಇತರರು ಮುಂದೆ ಬರುವುದು ಕಠಿಣ. ಅವರು ಅನಧಿಕೃತವಾಗಿ ಈ ಹೆಸರನ್ನು ಉಪಯೋಗಿಸಿದರೆ, ಕಾನೂನು ಕ್ರಮ ಎದುರಿಸಲು ಸಿದ್ಧರಾಗಬೇಕಾಗುತ್ತದೆ.

nazeer ahamad

Recent Posts

ಕರ್ಕಶ ಶಬ್ದದ ಬೈಕ್ ವಿಚಾರಕ್ಕೆ ಪೊಲೀಸರ ಮೇಲೆಯೇ ವಿದ್ಯಾರ್ಥಿಗಳ ಹಲ್ಲೆ

ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್‌ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…

5 hours ago

ಕ್ಯಾಂಟಿನ್‌ನಲ್ಲಿ ವೇಶ್ಯಾವಾಟಿಕೆ ದಂಧೆ: ಬೆಳ್ತಂಗಡಿಯಲ್ಲಿ ಪೊಲೀಸರ ದಾಳಿ, ಮೂವರು ಬಂಧನ

ಬೆಳ್ತಂಗಡಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ…

5 hours ago

ಒಂದು ವರ್ಷದ ನಿರೀಕ್ಷೆಗೆ ತೆರೆ: ಭಟ್ಕಳಕ್ಕೆ ಖಾಯಂ ಎಸಿ, ಜೆ. ಮಹೇಶ್ ಅಧಿಕಾರ ಸ್ವೀಕಾರ

ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು,…

1 day ago

ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ನಿಧನ; ರಾಜಕೀಯ ವಲಯದಲ್ಲಿ ಶೋಕದ ಛಾಯೆ

ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ…

1 day ago

ಆಂಟಿ ಹಿಂದೆ ಹೋದವನ ದುರಂತ ಅಂತ್ಯ: ಲಿವ್-ಇನ್ ಸಂಗಾತಿಯ ಕಿರುಕುಳಕ್ಕೆ ಯುವಕ ಆತ್ಮಹತ್ಯೆ!

ಸೋಶಿಯಲ್ ಮೀಡಿಯಾದಲ್ಲಿ ಆರಂಭವಾದ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ಲಿವ್-ಇನ್…

1 day ago

ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆಯ ಚಿನ್ನಾಭರಣ ಕಳವು: ಖಾಸಗಿ ಆಸ್ಪತ್ರೆ ಸಿಬ್ಬಂದಿ ವಶಕ್ಕೆ

ಬೆಂಗಳೂರು: ಶಸ್ತ್ರಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಚಿನ್ನಾಭರಣ ಕಳವು ಮಾಡಿದ್ದ ಆರೋಪದ ಮೇಲೆ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯನ್ನು ಹೆಣ್ಣೂರು…

2 days ago