Latest

ವಂಚಕ ಪ್ರೇಮಿಯ ಲವ್ ಡ್ರಾಮಾ ಕೊನೆಗೆ ದಾರುಣ ಅಂತ್ಯ: ನದಿಗೆ ಹಾರಿ ವಿವಾಹಿತೆ ಮಹಿಳೆ ಆತ್ಮಹತ್ಯೆ!

ವಿಜಯನಗರ: ಇನ್‌ಸ್ಟಾಗ್ರಾಂನಲ್ಲಿ ಶುರುವಾಯಿಸಿದ ಪರಿಚಯ ಪ್ರೀತಿಯಾಗಿ ಬೆಳೆದಿದ್ದು, ಕೊನೆಗೆ ಸಾವು ಎಂಬ ಕರಾಳ ಅಂತ್ಯಕ್ಕೆ ಕಾರಣ ಆಗಿದೆ. ವಿಜಯನಗರ ಜಿಲ್ಲೆಯ ಹಡಗಲಿ ತಾಲ್ಲೂಕಿನ ಮದಲಗಟ್ಟಿ ಗ್ರಾಮದ ಜ್ಯೋತಿ ಎಂಬ ವಿವಾಹಿತ ಮಹಿಳೆ, ಪ್ರೇಮಿ ಮದುವೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದ್ದು, ಇದನ್ನು ದೃಢಪಡಿಸುವ ಡೆತ್ ನೋಟ್ ಕೂಡ ಸಿಕ್ಕಿದೆ.

ಪ್ರೇಮದ ಆರಂಭ ಇನ್‌ಸ್ಟಾಗ್ರಾಂನಲ್ಲಿ:

ಅಕ್ಟೋಬರ್ 2024ರಲ್ಲಿ ಜ್ಯೋತಿ ಮತ್ತು ಶಿವಮೊಗ್ಗ ಜಿಲ್ಲೆಯ ಸುಗೂರು ಮೂಲದ ಬಸವರಾಜ್ ಎಂಬ ಯುವಕನಿಗೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದದ್ದು, ನಂತರ ಪ್ರೀತಿಯಾಗಿ ರೂಪಾಂತರಗೊಂಡಿತ್ತು. ಮೊದಲಿಗೆ ಬಸವರಾಜ್ ಸ್ವತಃ ಮೆಸೇಜ್ ಮೂಲಕ ಸಂಪರ್ಕ ಸಾಧಿಸಿದ್ದ. ಪ್ರಾರಂಭದಲ್ಲಿ ಜ್ಯೋತಿ ಆಸಕ್ತಿಯಿಲ್ಲದಿದ್ದರೂ, ಆಸಕ್ತಿಯಿಂದ ಮೆಸೇಜ್ ಮಾಡುವ ಮೂಲಕ ತನ್ನ ಹೃದಯ ಗೆದ್ದಿದ್ದ ಎಂದು ಡೆತ್ ನೋಟ್‌ನಲ್ಲಿ ಬರೆಯಲಾಗಿದೆ.

ವಿಶ್ವಾಸಘಾತ ಮತ್ತು ನೋವಿನ ನಿಜಕಥೆ:

ಬಸವರಾಜ್, ಜ್ಯೋತಿಯೊಂದಿಗೆ ಒಡನಾಟ ಮುಂದುವರೆಸಿದ್ದರೂ, ಇತರ ಯುವತಿಯರ ಜೊತೆಗೂ ಸಂಪರ್ಕದಲ್ಲಿದ್ದ ಎಂಬ ವಿಚಾರ ತಿಳಿದ ಜ್ಯೋತಿ, ಆತನ ವಾಟ್ಸಾಪ್, ಇನ್‌ಸ್ಟಾಗ್ರಾಂ, ಜಿಮೇಲ್ ಖಾತೆಗಳನ್ನು ಹ್ಯಾಕ್ ಮಾಡಿದ್ದಳು. ಈತನಿಗೆ ನಂಬಿ, ಲಾಡ್ಜ್‌ಗಳಿಗೆ ಹೋಗಿ ಪೋಟೋಸ್, ಸೆಕ್ಸ್ ಮಾಡಿದ್ದು ಕೂಡ ನನ್ನ ಪೋನ್ ನಲ್ಲಿ, ರೆಕಾರ್ಡಿಂಗ್‌ಗಳು ತನ್ನ ಮೊಬೈಲ್‌ನಲ್ಲಿ ಇವೆ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾಳೆ.

ಮದುವೆ ವಾಗ್ದಾನ ವಿಫಲ – ಆತ್ಮಹತ್ಯೆ:

ಬಸವರಾಜ್ ಮದುವೆಯಾಗುವುದಾಗಿ ಮಾತುಕತೆ ನಡೆಸಿದ್ದರೂ, ನಂತರ ಅವಳನ್ನು ದೂರ ಮಾಡುತ್ತಾ ಶುರುವಿಟ್ಟಿದ್ದ. ಇದರಿಂದ ತೀವ್ರ ಮನೋನೊಂದಿಗೊಳಗಾದ ಜ್ಯೋತಿ, ತನ್ನ ಬದುಕಿಗೆ ಅಂತ್ಯ ಹಾಕಿಕೊಳ್ಳಲು ನಿರ್ಧರಿಸಿದ್ದಳು. ಜುಲೈ 26ರಂದು ತುಂಗಭದ್ರಾ ನದಿಯ ಸೇತುವೆಯಿಂದ ಜಂಪ್ ಮಾಡಿದ ಘಟನೆಯನ್ನು ದೃಷ್ಟಿಪಥದಲ್ಲಿ ಕಂಡ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಶವವನ್ನೇ ದೋರಿ ಹೊರತೆಗೆಯಲಾಗಿದೆ.

ಡೆತ್ ನೋಟ್‌ನಲ್ಲಿರುವ ಭಾರಿ ಆರೋಪ:

ಡೆತ್ ನೋಟ್‌ನಲ್ಲಿ ಜ್ಯೋತಿ, “ನನ್ನ ಸಾವಿಗೆ ಸುಗೂರು ಶಿವಮೂರ್ತಿ ಗಾಣಿಗನ ಮಗ ಬಸವರಾಜ್ ಕಾರಣ. ಈತ ನನಗೆ ಮದುವೆ ಆಗ್ತೀನಿ ಅಂತ ಸುಳ್ಳು ಹೇಳಿ, ನನ್ನೊಂದಿಗೆ ಶಾರೀರಿಕ ಸಂಬಂಧ ಬೆಳೆಸಿದ. ನನ್ನ ಗಂಡನನ್ನೂ ಸಾಯಿಸಿ ನಿನ್ನ ಹೆಸರಿಗೆ ಆಸ್ತಿ ಮಾಡಿಸಿಕೊಳ್ಳೋಕೆ ತಯಾರಿ ತೋರಿಸಿದ್ದ. ಇವನಿಗೂ ಮರಣದಂಡನೆ ಆಗಬೇಕು,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಪೊಲೀಸರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ:

ಪೊಲೀಸರು ಈಗಾಗಲೇ ಡೆತ್ ನೋಟ್‌ ಮತ್ತು ಮೊಬೈಲ್‌ ಡೇಟಾವನ್ನು ವಶಪಡಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಸವರಾಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ತಯಾರಿ ನಡೆಯುತ್ತಿದೆ.

nazeer ahamad

Recent Posts

ಕೆಐಎಡಿಬಿ 16 ಕೋಟಿ ವಂಚನೆ: ಪ್ರಮುಖ ಆರೋಪಿ ಪೊಲೀಸರ ವಶಕ್ಕೆ

ಬಳ್ಳಾರಿಯ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಚೇರಿಯಲ್ಲಿ ನಡೆದಿದೆ ಎನ್ನಲಾದ 16 ಕೋಟಿಗೂ ಅಧಿಕ ವಂಚನೆ ಪ್ರಕರಣದಲ್ಲಿ ಪ್ರಮುಖ…

1 hour ago

ನಾಸಿಕ್ ಟಿಸಿಎಸ್ ಪ್ರಕರಣ: ಆರೋಪಿಗಳ ಪರ ನಿಂತಿದ್ದ ಎಚ್‌ಆರ್ ಮ್ಯಾನೇಜರ್ ನಿದಾ ಖಾನ್ ಪಾತ್ರ ಬಹಿರಂಗ

ನಾಸಿಕ್‌ನ ಟಿಸಿಎಸ್ ಸಂಬಂಧಿತ ಮತಾಂತರ ಮತ್ತು ಕಿರುಕುಳ ಪ್ರಕರಣದ ತನಿಖೆಯಲ್ಲಿ ಹೊಸದಾಗಿ ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿವೆ. ಬಿಪಿಒ ಘಟಕದಲ್ಲಿ ಎಚ್‌ಆರ್…

2 hours ago

ಗೃಹಲಕ್ಷ್ಮಿ ಹಣ ಕೂಡಿಟ್ಟು ಐಸ್ ಕ್ರೀಮ್ ಅಂಗಡಿ ತೆರೆದ ಮಹಿಳೆ!

ವಿಜಯನಗರ:- ಗೃಹಲಕ್ಷ್ಮಿ ಯೋಜನೆ ಹಣವನ್ನು ಕೂಡಿಟ್ಟು ಮಹಿಳೆಯೊಬ್ಬರು ಸಣ್ಣದಾಗಿ ಐಸ್ ಕ್ರೀಮ್ ಅಂಗಡಿ ತೆರೆದು ಬದುಕು ಕಟ್ಟಿಕೊಂಡಿದ್ದಾರೆ.ಕೊಟ್ಟೂರು ತಾಲ್ಲೂಕಿನ ಹರಾಳು…

2 hours ago

ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ತಕ್ಷಣ ಶಾಸಕ ಸ್ಥಾನ ರದ್ದು, ಮುಂದೇನು?

ಧಾರವಾಡ ಜಿಪಂ ಮಾಜಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್…

12 hours ago

ಪೆಟ್ರೋಲ್ ಬಂಕ್ ನಕಾಶೆ ಅಪ್ಲೋಡ್‌ಗೆ ಹಣ ಬೇಡಿಕೆ – ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ವಿಜಯಪುರ ಜಿಲ್ಲೆಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಸಿಲುಕಿರುವ ಘಟನೆ ನಡೆದಿದೆ. ಪೆಟ್ರೋಲ್ ಬಂಕ್ ಜಾಗದ…

12 hours ago

ಖಾತೆಗಾಗಿ ಲಂಚ ಬೇಡಿಕೆ: ನೆಲಮಂಗಲದ ಕಳಲುಘಟ್ಟ ಪಿಡಿಓ ಲೋಕಾಯುಕ್ತ ಬಲೆಗೆ

ನಿವೇಶನದ ಖಾತೆ ಮಾಡಿಕೊಡಲು ಲಂಚ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯಿತಿ ಪಿಡಿಓ ಲೋಕಾಯುಕ್ತ…

15 hours ago