ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ, ಶಮಾ ರಿಯಾಜ್ ಪಠಾಣ್ (25) ಎಂಬ ಮೊದಲ ಹೆಂಡತಿಯನ್ನು ಪತಿ ರಿಯಾಜ್ ಪಠಾಣ್ (30) ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.
ಘಟನೆ ವಿವರ:
ರಿಯಾಜ್, ಒಂದೂವರೆ ವರ್ಷಗಳ ಹಿಂದೆ ಫರ್ಜಾನಾ ಪಠಾಣ್ ಎಂಬ ಮಹಿಳೆಯನ್ನು ಗುಟ್ಟಾಗಿ ಮದುವೆಯಾಗಿದ್ದ. ಈ ಬಗ್ಗೆ ಗೊತ್ತಾದ ಶಮಾ, ಗಂಡನಿಂದ ತನ್ನೊಂದಿಗೆ ಇರಲು ಒತ್ತಾಯಿಸುತ್ತಿದ್ದಳು. ಕೆಲ ದಿನಗಳ ಹಿಂದೆ ಶಮಾ, ಎರಡನೇ ಹೆಂಡತಿಯನ್ನು ತ್ಯಜಿಸುವಂತೆ ಹೇಳಿದಾಗ, ಕೋಪಗೊಂಡ ರಿಯಾಜ್, ಈ ವಿಷಯವನ್ನು ಫರ್ಜಾನಾ ಮುಂದೆ ಹೇಳಿಕೊಂಡಿದ್ದನು. ಫರ್ಜಾನಾ, ಶಮಾಳನ್ನು ಕೊಲೆ ಮಾಡುವಂತೆ ಸಲಹೆ ನೀಡಿದ್ದಾಳೆ.
ಕೌಟುಂಬಿಕ ಸಂಘರ್ಷದ ನಡುವೆ, ಶಮಾ ಮಲಗಿದ್ದ ವೇಳೆ ರಿಯಾಜ್ ಕಲ್ಲು ಎತ್ತಿಹಾಕಿ ಬರ್ಬರವಾಗಿ ಆಕೆಯ ಹತ್ಯೆಗೈದಿದ್ದಾನೆ. ನಂತರ ತನ್ನ ಗಂಡು ಮಗನನ್ನು ತೆಗೆದುಕೊಂಡು, ಎರಡನೇ ಹೆಂಡತಿಯೊಂದಿಗೆ ಊರು ಬಿಟ್ಟು ಪರಾರಿಯಾಗಿದ್ದಾನೆ.
ಪೊಲೀಸರು ಮತ್ತು ಮುಂದಿನ ಕ್ರಮ:
ಮುರಗೋಡ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ರಿಯಾಜ್ ಮತ್ತು ಫರ್ಜಾನಾಳಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಈ ನಡುವೆ, ಶಮಾಳ ಶವವನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಕ್ಕೆ ಹಸ್ತಾಂತರಿಸಿ, ಬೆಳಗಾವಿಯ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ.
ಈ ದಾರುಣ ಘಟನೆಯಲ್ಲಿ, ಮೂರು ಮಕ್ಕಳ ಪೈಕಿ ಎರಡು ಹೆಣ್ಣು ಮಕ್ಕಳು ಅನಾಥರಾಗಿದ್ದು, ಪಾಪಿ ತಂದೆ ಕೇವಲ ಗಂಡು ಮಗನನ್ನು ಮಾತ್ರ ಕರೆದುಕೊಂಡು ಹೋಗಿದ್ದಾನೆ.
ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿ ಎಂದು ಸುಳ್ಳು ಪರಿಚಯ ನೀಡಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ನಿಂದ ಹಣ ವಸೂಲಿ ಮಾಡಲು ಯತ್ನಿಸಿದ…
ಜಮೀನಿನ ಖಾತಾ ಉತಾರ ನೀಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಿಜನಗೇರಾ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಅಧಿಕಾರಿಗಳ…
ಅಯೋಧ್ಯೆಯ ರಾಮಮಂದಿರವನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದಾನೆ ಎಂಬ ಆರೋಪದ ಮೇಲೆ ಬಂಧಿತನಾಗಿರುವ ಶಂಕಿತ ಉಗ್ರ ಸುಹೇಲ್ ಪ್ರಕರಣಕ್ಕೆ ಹೊಸ ತಿರುವು…
ಉತ್ತರ ಪ್ರದೇಶದ ಅಲಿಗಢ್ನಲ್ಲಿ ಅಪ್ರಾಪ್ತ ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನದೇ 17…
ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಷಾರಾಮಿ ಅಪಾರ್ಟ್ಮೆಂಟ್ನಲ್ಲಿ ಉದ್ಯಮಿ ವೈಶಾಕ್ (45) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹಲವು ಅನುಮಾನಗಳಿಗೆ…
ಮೈಸೂರು ನಗರದ ದಟ್ಟಗಳ್ಳಿ ಪ್ರದೇಶದಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿ ವೈ. ಮಂಜುನಾಥ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ…