ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಸಮೀಪದ ಮೇಲಿನದಿನಮಘಟ್ಟನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇಂದು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಅಂದಾಜು 12 ಮಕ್ಕಳಿಗೆ ಪಾಠ ನೀಡುತ್ತಿರುವ ಈ ಶಾಲೆಯ ಹಳೆ ಕಟ್ಟಡ ಇನ್ನು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಧರೆಗುರುಳುವ ಹಂತದಲ್ಲಿದೆ. ಮಳೆಗಾಲ ಆರಂಭವಾದಂತೇ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.
ಶಾಲೆಯೊಂದರಲ್ಲಿ ಒಟ್ಟು ಎರಡು ಕಟ್ಟಡಗಳಿದ್ದು, ಒಂದರ ಸ್ಥಿತಿ ಚಿಂತೆಗೀಡಾಗಿದೆ. ಸಂಪೂರ್ಣವಾಗಿ ಶಿಥಿಲಗೊಂಡಿರುವ ಮೊದಲ ಕಟ್ಟಡ ಉಪಯೋಗಕ್ಕೆ ಅನರ್ಹವಾಗಿದ್ದು, ಎರಡನೆಯ ಕಟ್ಟಡದ ಗೋಡೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಮಳೆಯಾದಾಗ ನೀರು ಓದುತ್ತಿರುವ ಕೋಣೆಯೊಳಗೆ ಹರಿದುಬರುತ್ತದೆ. ಮೇಲ್ಚಾವಣಿಯ ಸಿಮೆಂಟ್ ಏಕಾಏಕಿ ಕುಸಿಯುವ ಹಂತದಲ್ಲಿದ್ದು, ಕಬ್ಬಿಣದ ದಾರಗಳು ಹೊರ ಬೀಳುತ್ತಿರುವ ದೃಶ್ಯಗಳು ಆತಂಕ ಹುಟ್ಟಿಸುತ್ತಿವೆ.
ವಿದ್ಯಾರ್ಥಿಗಳಿಗೆ ಪಾಠ ಕಲಿಸುವ ಕೊಠಡಿಯೇ ಅಡುಗೆ ಮನೆ ಆಗಿದ್ದು, ಪಾಠ ಹಾಗೂ ಮಧ್ಯಾಹ್ನ ಭೋಜನ ಇಬ್ಬರೂ ಒಂದೇ ಕೋಣೆಯಲ್ಲಿ ನಡೆಯುತ್ತಿದೆ. ಈ ಸ್ಥಿತಿಯಲ್ಲಿ ಮಕ್ಕಳು ದಿನಂಪ್ರತಿ ಭಯದ ವಾತಾವರಣದಲ್ಲಿ ಪಾಠ ಕೇಳುತ್ತಿದ್ದಾರೆ.
ಸ್ಥಳಾಂತರದ ಬೇಡಿಕೆ ಸ್ಥಳೀಯರು, ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಶಿಕ್ಷಕರು ಅನೇಕ ಬಾರಿ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎನ್ನಲಾಗುತ್ತಿದೆ. ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಸಿದ್ದೇಶ್ ಮಾತನಾಡುತ್ತಾ, “ಈ ಕಟ್ಟಡ ಇನ್ನೇನು ಕುಸಿಯುವ ಹಂತದಲ್ಲಿದೆ. ಮಕ್ಕಳನ್ನು ತಕ್ಷಣವೇ ಬೇರೆ ಸ್ಥಳಕ್ಕೆ ಸ್ಥಳಾಂತರಿಸಿ ಹೊಸ ಕಟ್ಟಡ ನಿರ್ಮಿಸಬೇಕಿದೆ. ಗ್ರಾಮದಲ್ಲೇ ಇರುವ ಅಂಗನವಾಡಿ ಕಟ್ಟಡ ಪಕ್ಕದಲ್ಲಿ ಸರ್ಕಾರಿ ಭೂಮಿ ಇದೆ. ಅಲ್ಲಿ ಹೊಸ ಶಾಲಾ ಕಟ್ಟಡ ನಿರ್ಮಿಸಬೇಕೆಂಬುದೇ ನಮ್ಮ ಮನವಿ,” ಎಂದು ಹೇಳಿದ್ದಾರೆ.
ಗ್ರಾಮಸ್ಥರಾದ ಗೋಪಾಲ್ ಎಂಬವರು, “ಈ ವರ್ಷ ನನ್ನ ಮನೆಯನ್ನು ಶಾಲೆಗೆ ಬಿಟ್ಟು ನೀಡಿದ್ದೆ. ಮಕ್ಕಳ ಸುರಕ್ಷತೆ ನನಗೆ ಮುಖ್ಯ,” ಎಂದು ವಿಷಾದ ವ್ಯಕ್ತಪಡಿಸಿದರು.
ಮುಖ್ಯಶಿಕ್ಷಕಿಯ ಆತಂಕ ಶಾಲೆಯ ಮುಖ್ಯಶಿಕ್ಷಕಿ ಪದ್ಮಾವತಮ್ಮ ಮಾತಿನಲ್ಲಿ ಆತಂಕ ಸ್ಪಷ್ಟವಾಗಿ ತೋರಿಬಂದಿತು: “ಅಧಿಕಾರಿಗಳ ಗಮನಕ್ಕೆ ಈಗಾಗಲೇ ತಂದಿರುವರೂ, ಸಮಸ್ಯೆಗೆ ಶೀಘ್ರ ಪರಿಹಾರ ಬೇಕಾಗಿದೆ. ಮಕ್ಕಳ ಭವಿಷ್ಯ ಭದ್ರವಾಗಿರಬೇಕಾದರೆ, ಶಿಘ್ರದಲ್ಲೇ ಕ್ರಮ ಕೈಗೊಳ್ಳಬೇಕು,” ಎಂದರು.
ರಾಜಕೀಯ ನಿರ್ಲಕ್ಷ್ಯ? ಸ್ಥಳೀಯ ಶಾಸಕರು ಬೇರೆ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಕಾರಣ ಈ ವಿಷಯ ಕಡೆಗೆ ಅಗತ್ಯ ಗಮನ ನೀಡಲಾಗುತ್ತಿಲ್ಲ ಎನ್ನುವ ಆರೋಪ ಗ್ರಾಮಸ್ಥರಿಂದ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಖುದ್ದಾಗಿ ಈ ಶಿಥಿಲ ಶಾಲಾ ಕಟ್ಟಡದ ಪರಿಸ್ಥಿತಿಗೆ ಗಮನಹರಿಸಿ ತಕ್ಷಣದ ಪರಿಹಾರ ಕ್ರಮ ಕೈಗೊಳ್ಳಬೇಕು.
ಮಕ್ಕಳ ಬಾಳು ಹಂಚಿಕೊಳ್ಳುವ ಮೊದಲು.. ಒಂದು ಬಾಗಿಲು, ಒಂದು ಕೋಣೆ, ಸೋರುವ ಚಾವಣಿ – ಈ ಎಲ್ಲಾ ಭೀತಿಯಿಂದ ದಿನವಿಡೀ ಶಿಕ್ಷಕರೂ, ಮಕ್ಕಳೂ ಅಕ್ಕಪಕ್ಕ ಉಳಿಯುತ್ತಿದ್ದಾರೆ. ಅವರ ಬಾಳಿಗೆ ಬೆನ್ನು ನಿಲ್ಲಿಸುವ ಶಿಕ್ಷಣ ಈ ರೀತಿ ಮುಂದುವರಿಯಬೇಕೆ? ಕೇವಲ ಅನಾಹುತವಾದ ನಂತರವೇ ಆಡಳಿತದ ಮನ್ನಣೆ ಸಿಗಬೇಕೆ?
ಈ ಭದ್ರತಾ ಬಿಕ್ಕಟ್ಟುಗೆ ತಕ್ಷಣ ಪರಿಹಾರ ನೀಡದಿದ್ದರೆ, ಅದು ಕೇವಲ ಶಾಲೆಯವಲ್ಲ, ಸರ್ವಜನಿಕ ವ್ಯವಸ್ಥೆಯ ವಿಫಲತೆಯ ನಿದರ್ಶನವಾಗಲಿದೆ.
ಗುಜರಾತಿನ ರಾಜ್ಕೋಟ್ನಲ್ಲಿ ಯುವತಿ ನಂದಿನಿ ಬೋಸ್ಮಿಯಾ ಸಾವಿನ ಪ್ರಕರಣವು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆಮ್ ಆದ್ಮಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ನಂದಿನಿ,…
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದ್ದು, ಪತ್ನಿಯ ಶೀಲವನ್ನು ಅನುಮಾನಿಸುತ್ತಿದ್ದ ಪತಿಯೊಬ್ಬ ಕೊನೆಗೆ ಆಕೆಯನ್ನು…
ದೇಶದ ಗಡಿಯಲ್ಲಿ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕರೊಬ್ಬರು, ಸ್ವಂತ ಮಕ್ಕಳ ನಿರ್ಲಕ್ಷ್ಯದಿಂದ ಮನನೊಂದು ತಮ್ಮ ಸುಮಾರು ₹4…
ಹಸಿದ ಕಂದಮ್ಮನ ಅಳುವನ್ನು ಸಮಾಧಾನಪಡಿಸಲಾಗದೆ ಅಸಹಾಯಕನಾಗಿ ನಿಂತ ತಂದೆಯೊಬ್ಬನ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರ ಮನಕಲಕಿದೆ. ಪತ್ನಿ ಮನೆಯನ್ನು ತೊರೆದು…
ತಂದೆ, ತಾಯಿ ಮತ್ತು ತಂಗಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತಳಾಗಿರುವ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಪ್ರಕರಣದಲ್ಲಿ ದಿನದಿಂದ…
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ್ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದ್ದು, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬರು ತಮ್ಮ ಒಂದೂವರೆ…