ಬೆಂಗಳೂರು, ಜುಲೈ 18: ಡಿಜಿಟಲ್ ಪಾವತಿಯ ಸುಲಭ ಮಾರ್ಗವೆನಿಸಿದ ಯುಪಿಐ (UPI) ಬಳಕೆ ಈಗ ಸಣ್ಣ ವ್ಯಾಪಾರಿಗಳಿಗೆ ಶಾಪವಾಯಿತೆ ಎಂಬ ಅನುಮಾನ ಹುಟ್ಟುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ವ್ಯಾಪಾರಿಗಳಿಗೆ ಈಗ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ಗಳು ಬರುತ್ತಿದ್ದು, ಇಡೀ ಚಿಲ್ಲರೆ ವ್ಯಾಪಾರ ವಲಯವೇ ಬೆಚ್ಚಿಬಿದ್ದಂತಾಗಿದೆ.
ತಾಜಾ ಉದಾಹರಣೆ – ಬೆಂಗಳೂರು ಉಳ್ಳಾಲದ ಹೂವಿನ ವ್ಯಾಪಾರಿ ಸೋಮೇಗೌಡ. ಕಳೆದ ದಶಕದಿಂದ ಹೂವಿನ ವ್ಯಾಪಾರದಲ್ಲಿ ತೊಡಗಿರುವ ಇವರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ₹52 ಲಕ್ಷ ಪಾವತಿಸಬೇಕೆಂದು ನೋಟಿಸ್ ಬಿದ್ದಿದೆ. ಈ ಕುರಿತು ಮಾತನಾಡಿದ ಸೋಮೇಗೌಡ, “ನಾನು ಸಣ್ಣ ಮಟ್ಟದ ವ್ಯಾಪಾರಿ. ಹೂವಿನ ವ್ಯಾಪಾರದ ಲಾಭವೇ ಕಡಿಮೆ. ಒಂದು ತಿಂಗಳ ಹಿಂದೆ ನೋಟಿಸ್ ಬಂದಿದೆ. ಇಷ್ಟು ಭಾರಿ ಮೊತ್ತ ಎಲ್ಲಿಂದ ಕೊಡಬೇಕು?” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದ ನಂತರ ಬೆಂಗಳೂರಿನ ಅನೇಕ ಚಿಲ್ಲರೆ ಅಂಗಡಿಗಳು ಯುಪಿಐ ಬಳಕೆಯನ್ನು ನಿಲ್ಲಿಸಲು ಆರಂಭಿಸಿದ್ದು, ‘ಕ್ಯಾಶ್ ಓನ್ಲಿ – ದಯವಿಟ್ಟು ನಗದು ನೀಡಿ’ ಎಂಬ ಪೋಸ್ಟರ್ಗಳು ಅಂಗಡಿಗಳ ಮುಂದೆ ತಾನೇ ಹೇಳಿಕೊಳ್ಳುತ್ತಿವೆ. ಈ ಬೆಳವಣಿಗೆ ಡಿಜಿಟಲ್ ಲೆನ್ದೆನ್ಗೆ ಓರೆಯಾಗುತ್ತಿರುವ ಚಿಕ್ಕ ವ್ಯಾಪಾರಿಗಳ ಆರ್ಥಿಕ ಅಸ್ಥಿರತೆಗೆ ಸಂಕೇತವೆಂಬಂತಾಗಿದೆ.
ಅಧಿಕಾರಿಗಳ ಪ್ರಕಾರ, ಯುಪಿಐ ಅಥವಾ ಇತರೆ ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೂಲಕ ದಾಖಲಾಗುತ್ತಿರುವ ಲೆನ್ದೆನ್ ಮಾಹಿತಿಯ ಆಧಾರದ ಮೇಲೆ ತೆರಿಗೆ ಲೆಕ್ಕಾಚಾರ ನಡೆಯುತ್ತಿದೆ. ಆದರೆ, ಕಡಿಮೆ ಆದಾಯದ ಮೇಲೆ ದುಡ್ಡು ಓಡಿಸುತ್ತಿರುವ ಸಣ್ಣ ವ್ಯಾಪಾರಿಗಳು ನಿಜಕ್ಕೂ ಬಿದ್ದಿರುವ ಸಮಸ್ಯೆಗೆ ಸ್ಪಂದನೆ ಬೇಕೆಂದು ವ್ಯಾಪಾರಿಗಳು ಆಗ್ರಹಿಸುತ್ತಿದ್ದಾರೆ.
ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…
ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…
ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…
ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…
ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…
ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…