ಬೆಂಗಳೂರು, ಜುಲೈ 18: ಡಿಜಿಟಲ್ ಪಾವತಿಯ ಸುಲಭ ಮಾರ್ಗವೆನಿಸಿದ ಯುಪಿಐ (UPI) ಬಳಕೆ ಈಗ ಸಣ್ಣ ವ್ಯಾಪಾರಿಗಳಿಗೆ ಶಾಪವಾಯಿತೆ ಎಂಬ ಅನುಮಾನ ಹುಟ್ಟುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ವ್ಯಾಪಾರಿಗಳಿಗೆ ಈಗ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ಗಳು ಬರುತ್ತಿದ್ದು, ಇಡೀ ಚಿಲ್ಲರೆ ವ್ಯಾಪಾರ ವಲಯವೇ ಬೆಚ್ಚಿಬಿದ್ದಂತಾಗಿದೆ.
ತಾಜಾ ಉದಾಹರಣೆ – ಬೆಂಗಳೂರು ಉಳ್ಳಾಲದ ಹೂವಿನ ವ್ಯಾಪಾರಿ ಸೋಮೇಗೌಡ. ಕಳೆದ ದಶಕದಿಂದ ಹೂವಿನ ವ್ಯಾಪಾರದಲ್ಲಿ ತೊಡಗಿರುವ ಇವರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ₹52 ಲಕ್ಷ ಪಾವತಿಸಬೇಕೆಂದು ನೋಟಿಸ್ ಬಿದ್ದಿದೆ. ಈ ಕುರಿತು ಮಾತನಾಡಿದ ಸೋಮೇಗೌಡ, “ನಾನು ಸಣ್ಣ ಮಟ್ಟದ ವ್ಯಾಪಾರಿ. ಹೂವಿನ ವ್ಯಾಪಾರದ ಲಾಭವೇ ಕಡಿಮೆ. ಒಂದು ತಿಂಗಳ ಹಿಂದೆ ನೋಟಿಸ್ ಬಂದಿದೆ. ಇಷ್ಟು ಭಾರಿ ಮೊತ್ತ ಎಲ್ಲಿಂದ ಕೊಡಬೇಕು?” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದ ನಂತರ ಬೆಂಗಳೂರಿನ ಅನೇಕ ಚಿಲ್ಲರೆ ಅಂಗಡಿಗಳು ಯುಪಿಐ ಬಳಕೆಯನ್ನು ನಿಲ್ಲಿಸಲು ಆರಂಭಿಸಿದ್ದು, ‘ಕ್ಯಾಶ್ ಓನ್ಲಿ – ದಯವಿಟ್ಟು ನಗದು ನೀಡಿ’ ಎಂಬ ಪೋಸ್ಟರ್ಗಳು ಅಂಗಡಿಗಳ ಮುಂದೆ ತಾನೇ ಹೇಳಿಕೊಳ್ಳುತ್ತಿವೆ. ಈ ಬೆಳವಣಿಗೆ ಡಿಜಿಟಲ್ ಲೆನ್ದೆನ್ಗೆ ಓರೆಯಾಗುತ್ತಿರುವ ಚಿಕ್ಕ ವ್ಯಾಪಾರಿಗಳ ಆರ್ಥಿಕ ಅಸ್ಥಿರತೆಗೆ ಸಂಕೇತವೆಂಬಂತಾಗಿದೆ.
ಅಧಿಕಾರಿಗಳ ಪ್ರಕಾರ, ಯುಪಿಐ ಅಥವಾ ಇತರೆ ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೂಲಕ ದಾಖಲಾಗುತ್ತಿರುವ ಲೆನ್ದೆನ್ ಮಾಹಿತಿಯ ಆಧಾರದ ಮೇಲೆ ತೆರಿಗೆ ಲೆಕ್ಕಾಚಾರ ನಡೆಯುತ್ತಿದೆ. ಆದರೆ, ಕಡಿಮೆ ಆದಾಯದ ಮೇಲೆ ದುಡ್ಡು ಓಡಿಸುತ್ತಿರುವ ಸಣ್ಣ ವ್ಯಾಪಾರಿಗಳು ನಿಜಕ್ಕೂ ಬಿದ್ದಿರುವ ಸಮಸ್ಯೆಗೆ ಸ್ಪಂದನೆ ಬೇಕೆಂದು ವ್ಯಾಪಾರಿಗಳು ಆಗ್ರಹಿಸುತ್ತಿದ್ದಾರೆ.
ಅಟ್ರಾಸಿಟಿ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯ ಸಿಪಿಐ ವೀರಣ್ಣ…
ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…
ಬೆಳ್ತಂಗಡಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ…
ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು,…
ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ…
ಸೋಶಿಯಲ್ ಮೀಡಿಯಾದಲ್ಲಿ ಆರಂಭವಾದ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ಲಿವ್-ಇನ್…