Categories: CorruptionLatest

₹5 ಸಾವಿರ ಲಂಚ ಸ್ವೀಕರಿಸುತ್ತಿದ್ದ ಸರ್ವೇ ಅಧಿಕಾರಿ ಲೋಕಾಯುಕ್ತ ಬಲೆಗೆ; ಪರವಾನಗಿ ಪಡೆದ ಸರ್ವೆಯರ್‌ ಸಹ ಬಂಧನ

ಹರಿಹರ: ರೈತ ಮಹಿಳೆಯ ಜಮೀನಿನ ಸರ್ವೇ ಸ್ಕೆಚ್ ತಯಾರಿಸಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿ ಹರಿಹರ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೇ ಸೂಪರ್‌ವೈಸರ್ ರಾಮಪ್ಪ ಅಡಿವೆಪ್ಪ ದಾಸರ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಲೆಗೆ ಬೀಳಿಸಿದ್ದಾರೆ. ಇದೇ ಪ್ರಕರಣದಲ್ಲಿ ಸರ್ಕಾರದ ಪರವಾನಗಿ ಪಡೆದ ಸರ್ವೆಯರ್ ಆನಂದಪ್ಪ ಅವರನ್ನೂ ಬಂಧಿಸಲಾಗಿದೆ.

ಹರಿಹರ ತಾಲ್ಲೂಕಿನ ಜಿಗಳಿ ಗ್ರಾಮದ ರೈತ ಮಹಿಳೆ ಶೋಭಾ ಅವರು, ಸರ್ವೇ ನಂ. 68/3ರಲ್ಲಿ ಇರುವ ಜಮೀನಿನ 11ಇ ಸರ್ವೇ ಸ್ಕೆಚ್ ಸಿದ್ಧಪಡಿಸಿ ನೀಡುವಂತೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸಕ್ಕಾಗಿ ಸರ್ವೇ ಸೂಪರ್‌ವೈಸರ್ ರಾಮಪ್ಪ ದಾಸರ್ ₹6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಲಂಚ ನೀಡಲು ನಿರಾಕರಿಸಿದ ಶೋಭಾ ಅವರು ತಮ್ಮ ಸಂಬಂಧಿ ಕೆ.ಪಿ. ರುದ್ರೇಶ್ ಅವರಿಗೆ ವಿಷಯ ತಿಳಿಸಿದ್ದು, ಅವರು ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದರು. ದೂರಿನ ಮೇರೆಗೆ ಲೋಕಾಯುಕ್ತ ಎಸ್ಪಿ ಕೌಲಪುರೆ ನೇತೃತ್ವದ ತಂಡ ಬಲೆ ಬೀಸಿ, ಶನಿವಾರ ಬೆಳಿಗ್ಗೆ ತಹಸೀಲ್ದಾರ್ ಕಚೇರಿ ಆವರಣದಲ್ಲಿ ರಾಮಪ್ಪ ದಾಸರ್ ₹5 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಬಂಧಿಸಿದೆ.

ತನಿಖೆ ವೇಳೆ ಸರ್ಕಾರದ ಪರವಾನಗಿ ಪಡೆದ ಸರ್ವೆಯರ್ ಆನಂದಪ್ಪ ಅವರು ತಮ್ಮ ಪತ್ನಿ ಸುನಿತಾ ಅವರ ಫೋನ್‌ಪೇ ಖಾತೆಗೆ ₹7 ಸಾವಿರ ವರ್ಗಾಯಿಸಿಕೊಳ್ಳುವ ಮೂಲಕ ಲಂಚ ಸ್ವೀಕರಿಸಿರುವುದು ಬೆಳಕಿಗೆ ಬಂದಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಲಂಚ ಸ್ವೀಕರಿಸಿದ ಆರೋಪದಡಿ ರಾಮಪ್ಪ ದಾಸರ್ ಹಾಗೂ ಆನಂದಪ್ಪ ಇಬ್ಬರನ್ನೂ ಬಂಧಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ದಾಳಿಯಲ್ಲಿ ಡಿವೈಎಸ್ಪಿ ಮೃತ್ಯುಂಜಯ, ಸಿಪಿಐ ಗುರುಬಸವರಾಜ ಹಾಗೂ ಪಿಎಸ್‌ಐ ಸರಳಾ ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳು ಭಾಗವಹಿಸಿದ್ದರು.

ಭ್ರಷ್ಟರ ಬೇಟೆ

Recent Posts

ದ್ವೇಷದ ಹಿನ್ನೆಲೆ ಕಾರಿಗೆ ಉದ್ದೇಶಪೂರ್ವಕ ಡಿಕ್ಕಿ; ಯುವಕ ಬಂಧನ

ಮುರ್ಡೇಶ್ವರ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕಾರಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಜೀವಕ್ಕೆ ಅಪಾಯ ಉಂಟುಮಾಡಲು ಯತ್ನಿಸಿದ ಆರೋಪದಡಿ ಮುರ್ಡೇಶ್ವರ ಪೊಲೀಸರು…

2 hours ago

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ: ಮಂಕಿ ಠಾಣೆಯ ಪಿಎಸ್‌ಐ ಬಂಧನ, ಪೋಕ್ಸೋ ಕಾಯ್ದೆಯಡಿ ಪ್ರಕರಣ

ಭಟ್ಕಳ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಂಕಿ ಪೊಲೀಸ್ ಠಾಣೆಯ ಪೊಲೀಸ್…

11 hours ago

₹80 ಸಾವಿರ ಸಂಬಳ… ಆದರೆ ₹100 ಕೋಟಿ ಆಸ್ತಿ! ತೆಲಂಗಾಣ ವಾಟರ್ ಬೋರ್ಡ್ ಜಿಎಂ ವಿರುದ್ಧ ಭ್ರಷ್ಟಾಚಾರದ ಸ್ಫೋಟಕ ಆರೋಪ

ತೆಲಂಗಾಣ ರಾಜ್ಯದ ವಾಟರ್ ಬೋರ್ಡ್‌ನ ಜನರಲ್ ಮ್ಯಾನೇಜರ್‌ ಆಗಿದ್ದ ಒಬ್ಬ ಸರ್ಕಾರಿ ಅಧಿಕಾರಿ ವಿರುದ್ಧ ಭಾರೀ ಪ್ರಮಾಣದ ಅಕ್ರಮ ಆಸ್ತಿ…

11 hours ago

ಹತ್ತು ಸಾವಿರ ರೂಪಾಯಿ ಶಾಪಿಂಗ್ ಮಾಡಿಸಿಕೊಟ್ಟರೆ ನನ್ನ ಜೊತೆ ಮಲಗುತ್ತೇನೆ ಎಂದು ಇವಳು ಹೇಳಿದ್ದಳು; ವೈರಲ್ ವಿಡಿಯೋಗೆ ನೆಟ್ಟಿಗರ ಆಕ್ರೋಶ

ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಿಕ ಜನಪ್ರಿಯತೆ, ಲೈಕ್ಸ್ ಮತ್ತು ಫಾಲೋವರ್ಸ್ ಗಳಿಸುವ ಹುಚ್ಚು ಇಂದಿನ ಯುವಪೀಳಿಗೆಯನ್ನು ಯಾವ ಮಟ್ಟಿಗೆ ಕೊಂಡೊಯ್ಯುತ್ತಿದೆ ಎಂಬುದಕ್ಕೆ…

11 hours ago

ಪೋಕ್ಸೊ ಆರೋಪಿ ಪರಾರಿ ಪ್ರಕರಣ: ಅಫಜಲಪುರ ಠಾಣೆ PSI ಸೋಮಲಿಂಗ ಒಡೆಯರ್ ಅಮಾನತು

ಪೋಕ್ಸೊ ಪ್ರಕರಣದ ಆರೋಪಿಯೊಬ್ಬ ಪೊಲೀಸ್ ಠಾಣೆಯಿಂದಲೇ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲೆಯ ಅಫಜಲಪುರ ಪೊಲೀಸ್ ಠಾಣೆಯ PSI ಸೋಮಲಿಂಗ…

11 hours ago

ಅಕ್ರಮ ಸಂಬಂಧ ಬಯಲಾದ ಬಳಿಕ ಗಂಡನ ಕೊಲೆ: ಅಪಘಾತದ ನಾಟಕವಾಡಿ ಕಾಲುವೆಗೆ ಶವ ಎಸೆದ ಪತ್ನಿ ಮತ್ತು ಪ್ರೇಮಿ!

ಹರಿಯಾಣದ ರೇವಾರಿ ಜಿಲ್ಲೆಯಲ್ಲಿ ನಡೆದ ಭೀಕರ ಕೊಲೆ ಪ್ರಕರಣವೊಂದು 23 ದಿನಗಳ ಬಳಿಕ ಬಯಲಾಗಿದ್ದು, ಆರಂಭದಲ್ಲಿ ಆತ್ಮಹತ್ಯೆ ಅಥವಾ ಅಪಘಾತವೆಂದು…

11 hours ago