ಕಲಬುರಗಿ, ಜುಲೈ 27: ಸಾಮಾನ್ಯವಾಗಿ ಸರ್ಕಾರ ನೀಡುವ ಪ್ರಮಾಣಪತ್ರಗಳಲ್ಲಿ ಹೆಸರು, ವಿಳಾಸ ಅಥವಾ ಫೋಟೋ ತಪ್ಪಾಗಿ ಆಗುವುದು ಕೆಲವೊಮ್ಮೆ ಕಂಡುಬರುತ್ತದೆ. ಆದರೆ ಕಲಬುರಗಿಯಲ್ಲಿ ನಡೆದಿದೆ ಎಡವಟ್ಟು ಮಾತ್ರ ಅತಿಶಯ ಅಚ್ಚರಿಯ ಸಂಗತಿ. ಇಲ್ಲಿನ ತಹಶೀಲ್ದಾರ್ ಕಚೇರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಬ್ಬ ಹಿಂದು ವ್ಯಕ್ತಿಗೆ ಮುಸ್ಲಿಂ ಜಾತಿ ಎಂದು ಉಲ್ಲೇಖಗೊಂಡ ಪ್ರಮಾಣಪತ್ರ ನೀಡಲಾಗಿದೆ.
ರಾಮತೀರ್ಥನಗರದ ನಿವಾಸಿ ಮಹಾಂತಪ್ಪ ಕೊತ್ಲೆ ಎಂಬವರು ವೀರಶೈವ ಲಿಂಗಾಯತ ಸಮುದಾಯದವರಾಗಿದ್ದು, ತಮ್ಮ ಪುತ್ರನ ಜಾತಿ ಹಾಗೂ ಆದಾಯ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಸ್ಪಷ್ಟವಾಗಿ ತಮ್ಮ ಧರ್ಮ ಹಾಗೂ ಜಾತಿಯನ್ನು ಉಲ್ಲೇಖಿಸಿದ್ದರೂ, ಅಧಿಕಾರಿಗಳು ನೀಡಿದ ಪ್ರಮಾಣಪತ್ರದಲ್ಲಿ ‘ಮುಸ್ಲಿಂ’ ಎಂಬ ಜಾತಿ ಬರೆದು ನೀಡಿದ್ದಾರೆ.
ಇದರಿಂದಾಗಿ ಪ್ರಾಮಾಣಿಕವಾಗಿ ಶಿಕ್ಷಣ ಸಹಾಯಧನ ಮತ್ತು ಸೌಲಭ್ಯಗಳನ್ನು ಪಡೆಯಲು ಯತ್ನಿಸುತ್ತಿದ್ದ ಮಹಾಂತಪ್ಪ ಪುತ್ರನ ಭವಿಷ್ಯ ದಿಕ್ಕು ತಪ್ಪುವ ಸ್ಥಿತಿ ಉಂಟಾಗಿದೆ. ಈ ಭೂಲನ್ನು ತಕ್ಷಣ ಸರಿಪಡಿಸಲು ಅವರು ಸಂಬಂಧಿತ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂಬುದು ಕುಟುಂಬದ ಆಕ್ಷೇಪ.
ಮಹಾಂತಪ್ಪ ಕೊತ್ಲೆ ಅವರು ಈ ಸಂಬಂಧವಾಗಿ ಸ್ಪಷ್ಟನೆ ನೀಡಿ, “ನಾನು ಹಾಗೂ ನನ್ನ ಕುಟುಂಬವು ಪೂರ್ತಿಯಾಗಿ ಹಿಂದು ಧರ್ಮದವರಿಗೆ ಸೇರಿದವರಾಗಿದ್ದರೂ, ನಮ್ಮ ಮಗನಿಗೆ ಮುಸ್ಲಿಂ ಎಂದು ಪ್ರಮಾಣಪತ್ರ ನೀಡಿರುವುದು ಭಾರೀ ಆತಂಕದ ವಿಷಯವಾಗಿದೆ. ಈ ಪ್ರಮಾಣಪತ್ರದಿಂದ ಉಂಟಾಗುವ ಶೈಕ್ಷಣಿಕ ಸಮಸ್ಯೆಗಳಿಗೆ ಯಾರು ಹೊಣೆ?” ಎಂದು ಪ್ರಶ್ನಿಸಿದ್ದಾರೆ.
ಈ ಘಟನೆ ಸರಕಾರದ ಡಿಜಿಟಲ್ ವ್ಯವಸ್ಥೆಗಳಲ್ಲಿನ ದೋಷಗಳನ್ನೂ ತೋರಿಸುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಮಾಹಿತಿ ಪರಿಶೀಲನೆಗೆ ತ್ಯಜಿಸಿದ್ದ ಜವಾಬ್ದಾರಿ ಈ ರೀತಿಯ ಗಂಭೀರ ತಪ್ಪುಗಳಿಗೆ ಕಾರಣವಾಗುತ್ತಿದೆ.
ಸ್ಥಳೀಯರು ಈ ಘಟನೆಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದು, ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸುವಂತೆ ಹಾಗೂ ತಪ್ಪು ಪ್ರಮಾಣಪತ್ರವನ್ನು ತಕ್ಷಣ ಸರಿಪಡಿಸುವಂತೆ ಒತ್ತಾಯಿಸುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಅಕ್ರಮ ಸ್ಕ್ಯಾನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರನ್ನು ಬಂಧಿಸಿರುವ ಘಟನೆ…
ಭೂಸ್ವಾಧೀನ ಸಂಬಂಧಿತ ಬಾಕಿ ಕಂದಾಯ ಪ್ರಕರಣವನ್ನು ಪರಿಹರಿಸಲು ಲಂಚ ಪಡೆಯುತ್ತಿದ್ದ ವೇಳೆ ಕೆಎಎಸ್ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಘಟನೆ…
ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಜೀವನ ಸಣ್ಣಪುಟ್ಟ ವಿಚಾರಗಳಿಗೂ ಕುಸಿಯುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಹೊಂದಾಣಿಕೆಯ ಕೊರತೆ, ಅಕ್ರಮ ಸಂಬಂಧಗಳು ಸೇರಿದಂತೆ ಹಲವು…
ಮಾಜಿ ಪ್ರಧಾನಿ Rajiv Gandhi ಹತ್ಯೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದ ಎ.ಜಿ. ಪೆರಾರಿವಾಲನ್ ಇದೀಗ ವಕೀಲರಾಗಿರುವುದು ಗಮನಸೆಳೆಯುವ ಬೆಳವಣಿಗೆಯಾಗಿದೆ. 2022ರಲ್ಲಿ…
ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ದುರಂತ ಘಟನೆ ಸಂಭವಿಸಿದೆ. ಪತಿಯ ಅನೈತಿಕ ಸಂಬಂಧ ಹಾಗೂ ನಿರಂತರ ದೈಹಿಕ-ಮಾನಸಿಕ…
ಹೈದರಾಬಾದ್: ಬಣ್ಣದ ಲೋಕದಲ್ಲಿ ಮತ್ತೆ ವಂಚನೆ ಆರೋಪ ಕೇಳಿಬಂದಿದ್ದು, ತೆಲುಗು ಬಿಗ್ಬಾಸ್ ಮೂಲಕ ಜನಪ್ರಿಯತೆ ಪಡೆದ ನಟಿ ಆಶು ರೆಡ್ಡಿ…