ಕಲಬುರಗಿ, ಜುಲೈ 27: ಸಾಮಾನ್ಯವಾಗಿ ಸರ್ಕಾರ ನೀಡುವ ಪ್ರಮಾಣಪತ್ರಗಳಲ್ಲಿ ಹೆಸರು, ವಿಳಾಸ ಅಥವಾ ಫೋಟೋ ತಪ್ಪಾಗಿ ಆಗುವುದು ಕೆಲವೊಮ್ಮೆ ಕಂಡುಬರುತ್ತದೆ. ಆದರೆ ಕಲಬುರಗಿಯಲ್ಲಿ ನಡೆದಿದೆ ಎಡವಟ್ಟು ಮಾತ್ರ ಅತಿಶಯ ಅಚ್ಚರಿಯ ಸಂಗತಿ. ಇಲ್ಲಿನ ತಹಶೀಲ್ದಾರ್ ಕಚೇರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಬ್ಬ ಹಿಂದು ವ್ಯಕ್ತಿಗೆ ಮುಸ್ಲಿಂ ಜಾತಿ ಎಂದು ಉಲ್ಲೇಖಗೊಂಡ ಪ್ರಮಾಣಪತ್ರ ನೀಡಲಾಗಿದೆ.
ರಾಮತೀರ್ಥನಗರದ ನಿವಾಸಿ ಮಹಾಂತಪ್ಪ ಕೊತ್ಲೆ ಎಂಬವರು ವೀರಶೈವ ಲಿಂಗಾಯತ ಸಮುದಾಯದವರಾಗಿದ್ದು, ತಮ್ಮ ಪುತ್ರನ ಜಾತಿ ಹಾಗೂ ಆದಾಯ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಸ್ಪಷ್ಟವಾಗಿ ತಮ್ಮ ಧರ್ಮ ಹಾಗೂ ಜಾತಿಯನ್ನು ಉಲ್ಲೇಖಿಸಿದ್ದರೂ, ಅಧಿಕಾರಿಗಳು ನೀಡಿದ ಪ್ರಮಾಣಪತ್ರದಲ್ಲಿ ‘ಮುಸ್ಲಿಂ’ ಎಂಬ ಜಾತಿ ಬರೆದು ನೀಡಿದ್ದಾರೆ.
ಇದರಿಂದಾಗಿ ಪ್ರಾಮಾಣಿಕವಾಗಿ ಶಿಕ್ಷಣ ಸಹಾಯಧನ ಮತ್ತು ಸೌಲಭ್ಯಗಳನ್ನು ಪಡೆಯಲು ಯತ್ನಿಸುತ್ತಿದ್ದ ಮಹಾಂತಪ್ಪ ಪುತ್ರನ ಭವಿಷ್ಯ ದಿಕ್ಕು ತಪ್ಪುವ ಸ್ಥಿತಿ ಉಂಟಾಗಿದೆ. ಈ ಭೂಲನ್ನು ತಕ್ಷಣ ಸರಿಪಡಿಸಲು ಅವರು ಸಂಬಂಧಿತ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂಬುದು ಕುಟುಂಬದ ಆಕ್ಷೇಪ.
ಮಹಾಂತಪ್ಪ ಕೊತ್ಲೆ ಅವರು ಈ ಸಂಬಂಧವಾಗಿ ಸ್ಪಷ್ಟನೆ ನೀಡಿ, “ನಾನು ಹಾಗೂ ನನ್ನ ಕುಟುಂಬವು ಪೂರ್ತಿಯಾಗಿ ಹಿಂದು ಧರ್ಮದವರಿಗೆ ಸೇರಿದವರಾಗಿದ್ದರೂ, ನಮ್ಮ ಮಗನಿಗೆ ಮುಸ್ಲಿಂ ಎಂದು ಪ್ರಮಾಣಪತ್ರ ನೀಡಿರುವುದು ಭಾರೀ ಆತಂಕದ ವಿಷಯವಾಗಿದೆ. ಈ ಪ್ರಮಾಣಪತ್ರದಿಂದ ಉಂಟಾಗುವ ಶೈಕ್ಷಣಿಕ ಸಮಸ್ಯೆಗಳಿಗೆ ಯಾರು ಹೊಣೆ?” ಎಂದು ಪ್ರಶ್ನಿಸಿದ್ದಾರೆ.
ಈ ಘಟನೆ ಸರಕಾರದ ಡಿಜಿಟಲ್ ವ್ಯವಸ್ಥೆಗಳಲ್ಲಿನ ದೋಷಗಳನ್ನೂ ತೋರಿಸುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಮಾಹಿತಿ ಪರಿಶೀಲನೆಗೆ ತ್ಯಜಿಸಿದ್ದ ಜವಾಬ್ದಾರಿ ಈ ರೀತಿಯ ಗಂಭೀರ ತಪ್ಪುಗಳಿಗೆ ಕಾರಣವಾಗುತ್ತಿದೆ.
ಸ್ಥಳೀಯರು ಈ ಘಟನೆಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದು, ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸುವಂತೆ ಹಾಗೂ ತಪ್ಪು ಪ್ರಮಾಣಪತ್ರವನ್ನು ತಕ್ಷಣ ಸರಿಪಡಿಸುವಂತೆ ಒತ್ತಾಯಿಸುತ್ತಿದ್ದಾರೆ.
ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…
ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…
ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…
ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…
ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…
ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…