Latest

ನೀರು ಸರಬರಾಜು ಮಾಡುವು ಟ್ಯಾಂಕರ್ ಶಿಥಾಲವ್ಯಸ್ಥೆ ತಲುಪಿದರು ಅಧಿಕಾರಿಗಳು ಮಾತ್ರ ಮೌನ..!

ಕುಂದಗೋಳ; ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ಕಳೆದ ಹದಿನೈದು ವರ್ಷಗಳ ಹಿಂದೆ ನಿರ್ಮಿಸಿದ ನೀರು ಸರಬರಾಜು ಮಾಡುವ ಟ್ಯಾಂಕರ್ ಶಿಥಲಾವ್ಯವಸ್ಥೆ ತಲುಪಿದರು ದುರಸ್ಥಿ ಭಾಗ್ಯ ಕಂಡಿಲ್ಲ..

ರೊಟ್ಟಿಗವಾಡ ಗ್ರಾಮ ಪಂಚಾಯತಿಯ ಹತ್ತಿರ ಇರುವು ನೀರು ಸರಬರಾಜು ಮಾಡುವು ಟ್ಯಾಂಕರ್ ನಿರ್ಮಿಸಿದ್ದು, ದುರಸ್ಥಿ ಭಾಗ್ಯ ಒದಗಿಸುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಜಾನ ಮೌನ ವಹಿಸಿದ್ದಾರೆ.

ಯರಗುಪ್ಪಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ನೀರು ಸರಬರಾಜು ಮಾಡುವು ಟ್ಯಾಂಕರ್ ಇದೆ, ಇದರ ಪಕ್ಕದಲ್ಲಿ ಶುದ್ದ ನೀರಿನ ಘಟಕ ಇದ್ದು, ಗ್ರಾಮದ ಸಾರ್ವಜನಿಕರು ದಿನನಿತ್ಯ ಶುದ್ದ ನೀರು ತೆಗದಕೂಳ್ಳಲು ಬರುತ್ತಾರೆ. ಈ ಟ್ಯಾಂಕರ್ ಕಾಂಕ್ರೀಟ್ ಉದುರಿ ಕಬ್ಬಿಣದ ಬಾರ್ ಗಳು ಎದ್ದು ಬಿಳ್ಳುವು ಹಂತಕ್ಕೆ ತಲುಪಿದನ್ನ ನೋಡಿ ಇಲ್ಲಿನ ಜನ ಭಯಬೀತರಾಗಿದ್ದಾರೆ.

ಇನ್ನೂ ಈ ಗ್ರಾಮದಲ್ಲಿ 3000 ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಒಂದೇ ಟ್ಯಾಂಕರ್ ಇದ್ದು ನಿರ್ಮಾಣ ಕಾರ್ಯಕ್ಕೆ ಒಳ ಪಡಿಸಿದರೆ ಬೇರೆ ವ್ಯವಸ್ಥೆ ಇಲ್ಲದಂತೆ ಆಗುತ್ತದೆ. ನೂತನವಾಗಿ ನಿರ್ಮಿಸಬೇಕು ಎಂದು ಇಲ್ಲಿ ಜನರ ಆಗ್ರಹ ವಾಗಿದೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗ್ರಾಮ ಪಂಚಾಯತಿ ಅಧ್ಯಕ್ಷರು ಈಗಾಗಲೇ ಜಿಲ್ಲಾ ಪಂಚಾಯತಿ ಸಿಇಒ ಅವರಿಗೆ ಹೊಸದಾಗಿ ಟ್ಯಾಂಕರ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದವೆ. ಸ್ಥಳ ಪರಿಶೀಲನೆ ಮಾಡಿದ್ದಾರೆ. ಇನ್ನೇನು ನಿರ್ಮಾಣಗೊಳ್ಳವು ಹಂತಕ್ಕೆ ತಲುಪಬೇಕು ಎಂದು ಪ್ರತಿಕ್ರೀಯಸಿದರು.

ಈ ಬಗ್ಗೆ ದೂರವಾಣಿ ಮುಖಾಂತರ ಮಾತನಾಡಿದ ನಾವು ಎಲ್ ಆ್ಯಂಡ್ ಟಿ ಮತ್ತು ಜೆಜೆಎಮ್ ಎರಡು ಪ್ರಾಧಿಕಾರ ಇಲಾಖೆಯಿಂದ ಪ್ರಸ್ತಾವನೆ ಸಲ್ಲಸಿದವೆ, ಸದ್ಯ ಎಲ್ ಆ್ಯಂಡ್ ಟಿ ಯಿಂದ ಅನುಮೋದನೆ ಕೂಡ ದೊರಕಿದೆ. ಭೂಮಿ ಪೂಜೆ ಮುಗಿದ ತಕ್ಷಣವೇ ಕಾಮಗಾರಿ ಪ್ರಾರಂಭಗೊಳ್ಳುತೆ ಎಂದು ಮಾಹಿತಿ ನೀಡಿದರು ಗ್ರಾಮೀಣ ನೈರ್ಮಲ್ಯ ಇಲಾಖೆ ಅಧಿಕಾರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಆಕಾಶ ವಂದೇ,

ವರದಿ; ಶಾನು ಯಲಿಗಾರ

ಭ್ರಷ್ಟರ ಬೇಟೆ

Recent Posts

2025-26ನೇ ಸಾಲಿನ ಡಿಜಿ-ಐಜಿಪಿ ಪ್ರಶಂಸನಾ ಪದಕ ಘೋಷಣೆ: ರಾಜ್ಯದ 200 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಗೌರವ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 200 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ 2025-26ನೇ ಸಾಲಿನ ಪ್ರತಿಷ್ಠಿತ…

18 hours ago

ಗೆಳತಿಯ ಲವ್ ಮ್ಯಾರೇಜ್ ಎಡವಟ್ಟು: ಮಾಡದ ತಪ್ಪಿಗೆ ಯುವಕ ಆತ್ಮಹತ್ಯೆ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದ್ದು, ಸ್ನೇಹಿತೆಯೊಬ್ಬಳ ಪ್ರೇಮ ವಿವಾದದ ನಡುವೆ ಅಮಾಯಕ ಯುವಕನೊಬ್ಬ…

23 hours ago

ಮದುವೆಯಾಗಿ ನಾಲ್ಕೇ ತಿಂಗಳಲ್ಲಿ ನವವಿವಾಹಿತೆಯ ಸಾವು: ಪತಿ ವಿರುದ್ಧ ಕೊಲೆ, ವರದಕ್ಷಿಣೆ ಕಿರುಕುಳ ಆರೋಪ

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗುಳೇದಹಟ್ಟಿ ತಾಂಡದಲ್ಲಿ ನವವಿವಾಹಿತೆಯೊಬ್ಬರ ಅನುಮಾನಾಸ್ಪದ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮದುವೆಯಾಗಿ ಕೇವಲ ನಾಲ್ಕು…

23 hours ago

ಪೊಲೀಸರ ಎದುರೇ ರಂಪಾಟ ನಡೆಸಿದ್ದ ‘ಮಚ್ ಮಂಜ’ ಬಂಧನ; ಮಹಾರಾಷ್ಟ್ರದಲ್ಲಿ ಸೆರೆ, ನ್ಯಾಯಾಂಗ ಬಂಧನಕ್ಕೆ ಒಪ್ಪಿಗೆ

ಹಳಿಯಾಳ: ಪಟ್ಟಣದ ಮೌರ್ಯ ಹೋಟೆಲ್ ಸಮೀಪ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿ, ಕರ್ತವ್ಯ ನಿರ್ವಹಣೆಗೆ ಬಂದಿದ್ದ ಪೊಲೀಸರ ಎದುರೇ ರಂಪಾಟ ನಡೆಸಿ…

23 hours ago

ಕಾನಸೂರು ವಸತಿ ಶಾಲೆ ವಿದ್ಯಾರ್ಥಿ ಗೋಕುಲ ಗೌಡ ಸಾವು ಪ್ರಕರಣ: ಇಬ್ಬರು ಸಿಬ್ಬಂದಿ ಅಮಾನತು

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರಿನ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಗೋಕುಲ ಗೌಡ ಸಾವನ್ನಪ್ಪಿದ ಪ್ರಕರಣಕ್ಕೆ…

23 hours ago

ಮನೆಯಲ್ಲೇ ಸಂಗ್ರಹಿಸಿದ್ದ ನಾಡಬಾಂಬ್ ಸ್ಫೋಟ; ಹಳಿಯಾಳದ ಕಾಳಗಿನಕೊಪ್ಪ ಗ್ರಾಮದಲ್ಲಿ ಆತಂಕ

ಹಳಿಯಾಳ: ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ನಾಡಬಾಂಬ್‌ಗಳು ಸೋಮವಾರ ಮುಂಜಾನೆ ಭಾರೀ ಸ್ಫೋಟಗೊಂಡ ಪರಿಣಾಮ ಹಲವು ಮನೆಗಳಿಗೆ…

23 hours ago