ಮದ್ದೂರು: ಕಾಲೇಜಿಗೆ ಹಾಗೂ ತಮ್ಮ ಊರುಗಳಿಗೆ ಹೋಗಬೇಕಾದಂತಹ ವಿದ್ಯಾರ್ಥಿಗಳು ಸರಿಯಾದ ರೀತಿಯ ಬಸ್ ವ್ಯವಸ್ಥೆ ಇಲ್ಲದ ಕಾರಣ ಇರುವ ಕೆಲವು ಬಸ್ಸುಗಳಲ್ಲಿ ಕುರಿಗಳ ಹಾಗೆ ತುಂಬಿಕೊಂಡು ಬಾಗಿಲಲ್ಲಿ ನೇತಾಡಿಕೊಂಡು ಹರಸಾಹಸ ಪಡುತ್ತಾ ಹೋಗುತ್ತಾರೆ. ಸಾರಿಗೆ ಇಲಾಖೆ ಹೆಚ್ಚಿನ ಬಸ್ಸುಗಳ ವ್ಯವಸ್ಥೆ ಕಲ್ಪಿಸದೆ ಇರುವ ಕಾರಣವೇ ವಿದ್ಯಾರ್ಥಿಗಳು ಬಾಗಿಲಲ್ಲಿ ನೇತಾಡಿಕೊಂಡು ಹರಸಾಹಸ ಪಡುತ್ತಿರುವುದು. ಇದು ಮದ್ದೂರು ಬಸ್ ಸ್ಟಾಪ್ ನಲ್ಲಿ ಕಂಡು ಬಂದಂತಹ ದೃಶ್ಯ. ಚಿಕ್ಕವರು, ದೊಡ್ಡವರು, ಗಂಡು, ಹೆಣ್ಣು ಯಾವುದನ್ನೂ ಲೆಕ್ಕಿಸದೆ ಕುರಿಗಳನ್ನು ತುಂಬಿಕೊಳ್ಳುವ ಹಾಗೆ ಬಸ್ಸಿನ ತುಂಬಾ ತುಂಬಿಕೊಂಡು ಬಾಗಿಲಲ್ಲು ಸಹ ಜೋತಾಡಿಕೊಂಡು ಹೋಗುತ್ತಿರುವುದನ್ನು ಕೆಲ ಸ್ಥಳೀಯರು ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಆದರೂ ಸಹ ಸಾರಿಗೆ ಇಲಾಖೆ ಎಚ್ಚೆತ್ತುಕೊಳ್ಳದಿರುವುದು ನಾಚಿಕೆಗೇಡಿನ ಸಂಗತಿ. ಹೆಚ್ಚಿನ ಬಸ್ಸುಗಳ ಆವಶ್ಯಕತೆ ಇದ್ದರೂ ಸಾರಿಗೆ ಇಲಾಖೆ ಕಲ್ಪಿಸದಿರುವುದನ್ನು ವಿರೋಧಿಸಿ ದಿನವೂ ವಿದ್ಯಾರ್ಥಿಗಳು ಸಾರಿಗೆ ಇಲಾಖೆಗೆ ಬೈದುಕೊಂಡೆ ಇರುವ ಬಸ್ಸಿನಲ್ಲಿ ಹರಸಾಹಸ ಪಡುತ್ತಾ ಚಲಿಸುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…
ಮೈಸೂರು: ನಕಲಿ ದಾಖಲೆಗಳ ಆಧಾರದಲ್ಲಿ ನೋಂದಣಿ ಮಾಡಿಕೊಂಡು ತೆರಿಗೆ ವಂಚನೆ ಮಾಡುತ್ತಿದ್ದ ದುಬಾರಿ ಕಾರುಗಳ ಮೇಲೆ ಸಾರಿಗೆ ಇಲಾಖೆಯ ಅಧಿಕಾರಿಗಳು…
ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಶಿ ಮುರುಕನಹಳ್ಳಿಯಲ್ಲಿ ಗಾಂಜಾ ಬೆಳೆದಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜಮೀನಿನಲ್ಲಿ ಸುಮಾರು 17 ಕಿಲೋಗ್ರಾಂ…
ರಾಜ್ಯ ಸರ್ಕಾರ ಓಲಾ, ಉಬರ್ ಹಾಗೂ ರ್ಯಾಪಿಡೋ ಸೇರಿದಂತೆ ಎಲ್ಲ ಬೈಕ್ ಟ್ಯಾಕ್ಸಿ ಸೇವೆಗಳನ್ನು ಬೆಂಗಳೂರಿನಲ್ಲಿ ರ್ಯಾಪಿಡೋ ಚಾಲಕನಿಂದ ಮಹಿಳೆಯ…
ಪುತ್ತೂರು, ಜೂನ್ 16 – ಪುತ್ತೂರು ಹೊರವಲಯದ ಚಿಕ್ಕಪುತ್ತೂರಿನಲ್ಲಿ ಏಳು ತಿಂಗಳ ಗರ್ಭಿಣಿಯಾಗಿದ್ದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ…
ಕೋಲಾರ್ (ಜೂನ್ 16): ನಗರದ ಸಹಕಾರ ನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕೇಂದ್ರವೊಂದರಲ್ಲಿ ಭಾನುವಾರ ರಾತ್ರಿ ಸಂಭವಿಸಿದ…