Latest

ಸಾರಿಗೆ ಇಲಾಖೆಯ ಅಧಿಕಾರಿಗಳೇ ಎಲ್ಲಿದ್ದೀರಿ? ವಿದ್ಯಾರ್ಥಿಗಳ ಕಷ್ಟ ನಿಮಗೆ ಅರ್ಥಾನೇ ಆಗಲ್ವಾ? ಬಸ್ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ: ತಾಸುಗಟ್ಟಲೆ ಸಾಲಾಗಿ ನಿಂತ ವಾಹನಗಳು..!

ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಾವಲಕೊಪ್ಪ ಕ್ರಾಸ್ ನಲ್ಲಿ ಇಂದು ವಿದ್ಯಾರ್ಥಿಗಳು ಬೆಳಿಗ್ಗೆ 8.00 ಗಂಟೆಯಿಂದಲೇ ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ಘಟನೆ ಜರುಗಿತು.
ಸುಮಾರು 150 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಸೇರಿಕೊಂಡು ಕಾವಲಕೊಪ್ಪದ ಕ್ರಾಸ್ ನಲ್ಲಿ ಬೆಳಿಗ್ಗೆ 8.00 ಗಂಟೆಯಿಂದ ರಸ್ತೆ ಮೇಲೆ ಕುಳಿತುಕೊಂಡು ಪ್ರತಿಭಟನೆ ನಡೆಸಿ ಬಸ್ ನಿಲ್ಲಿಸುವಂತೆ ಆಗ್ರಹಿಸಿ ಆಕ್ರೋಶವನ್ನು ಹೊರ ಹಾಕಿದರು.ಇದರಿಂದ‌ ಸುಮಾರು ಒಂದುವರೆ ಗಂಟೆಗಳ ಕಾಲ ರಸ್ತೆಯ ಎರಡು ಬದಿಗಳಲ್ಲಿಬಸ್ಸುಗಳು ಸಾಲಾಗಿ ನಿಂತಿದ್ದವು.
ಈ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ಮುಂಡಗೋಡ ಪೊಲೀಸರು ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರು ಮೊದಲು ಸಮಸ್ಯೆ ಬಗೆಹರಿಯುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ನಂತರ ಹಿರಿಯ ಅಧಿಕಾರಿಗಳಿಗೆ ಫೋನ್ ಮೂಲಕ ಸಂಪರ್ಕಿಸಿದಾಗ ನಾಳೆಯಿಂದಲೇ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದರಿಂದ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.
ಹೌದು, ಈ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದು ಸರಿಯೇ ಇದೆ ಏಕೆಂದರೆ ಇದಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷವೇ ಕಾರಣ.ಅದೇನೆಂದರೆ ಈ ಕ್ರಾಸ್ ನಲ್ಲಿ ಪ್ರತಿದಿನ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ ಗಾಗಿ ಕಾಯ್ದು ಕಾಯ್ದು ಸುಸ್ತಾಗಿದ್ದಾರೆ ಮತ್ತು ಪ್ರತಿದಿನ ನಾಲ್ಕೈದು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಬಸ್ಸು ಸಿಗದೆ ಶಾಲಾ ಕಾಲೇಜುಗಳಿಗೆ ತೆರಳಲು ಆಗದೆ ಮರಳಿ ಮನೆಗೆ ತೆರಳಿದ ಉದಾಹರಣೆಗಳು ಇವೆ ಅದಕ್ಕಾಗಿಯೇ ಈ ವಿದ್ಯಾರ್ಥಿಗಳ ಸಹನೆಯ ಕಟ್ಟೆ ಇಂದು ಬೆಳಿಗ್ಗೆ ಒಡೆದು ಹೋಗಿ ಪ್ರತಿಭಟನೆಯ ಹಾದಿ ತುಳಿಯುವಂತೆ ಮಾಡಿದೆ.
ಈ ಸಮಸ್ಯೆ ಉದ್ಭವಿಸಲು ಸಾರಿಗೆ ಇಲಾಖೆಯ ಎಡವಟ್ಟು ಒಂದಿದೆ ಅದೇನೆಂದರೆ ಈ ಹಿಂದೆ ಈ ಮಾರ್ಗವಾಗಿ ತೆರಳುತ್ತಿದ್ದ ಶಿರಸಿ ಹುಬ್ಬಳ್ಳಿ ಬಸ್ ಗಳು ಎಲ್ಲಾ ನಿಲ್ದಾಣಗಳಲ್ಲಿ ನಿಲ್ಲುತ್ತಿದ್ದವು ಆದರೆ ಕೆಲವು ತಿಂಗಳುಗಳ ಹಿಂದೆ ಈ ಬಸ್ಸುಗಳನ್ನು “ನಿರ್ವಾಹಕ ರಹಿತ,ತಡೆರಹಿತ” ಎಂದು ಏಕಾಏಕಿ ತೀರ್ಮಾನ ಮಾಡಿದ್ದರಿಂದ ಈ ಸಮಸ್ಯೆ ಹೆಚ್ಚಾಗಲು ಪ್ರಾರಂಭವಾಯಿತು.ಈ ಸಮಸ್ಯೆ ಕೇವಲ ತಡೆರಹಿತ ಬಸ್ಸುಗಳಿಂದ ಮಾತ್ರ ಆಗುತ್ತಿಲ್ಲ, ಬೆಳಗ್ಗಿನ ಸಮಯದಲ್ಲಿ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳಿಗೆ ತೆರಳಲು ಬಸ್ಸುಗಳ ಕೊರತೆಯೂ ಸಹ ಕಾರಣವಾಗಿದೆ.ಈ ಕ್ರಾಸಿಗೆ ಬರುವಾಗಲೇ ಇರುವ ಕೆಲವೊಂದು ಬಸ್ಸುಗಳು ಸಂಪೂರ್ಣವಾಗಿ ತುಂಬಿಕೊಂಡು ಬಂದಿರುತ್ತವೆ ಹಾಗಾಗಿ ಈ ಸಮಸ್ಯೆ ಕಾತೂರಿನಿಂದಲೇ ಪ್ರಾರಂಭವಾಗುತ್ತದೆ .
ಏನ್ರೀ ಸಾರಿಗೆ ಅಧಿಕಾರಿಗಳೇ ನಿಮ್ಗೆ ಸ್ವಲ್ಪನಾದರೂ ಬುದ್ಧಿ ಬೇಡ್ವಾ?ಹೀಗೆ ಹೇಳುತ್ತಿರುವುದು ನಾವಲ್ಲ, ಸಾರ್ವಜನಿಕರು…ಏಕೆಂದರೆ ಸಾರಿಗೆ ಇಲಾಖೆಯವರು ಮಾಡಿರುವ ನಿರ್ವಾಹಕ ರಹಿತ,ತಡೆ ರಹಿತ ಎಂಬ ಬಸ್ಗಳಲ್ಲಿ ಶಿರಸಿಯಿಂದ ಬಿಡುವಾಗ ಕೇವಲ 25 ರಿಂದ 30 ಸೀಟುಗಳು ಮಾತ್ರ ತುಂಬಿರುತ್ತವೆ…ಪೂರ್ತಿ ತುಂಬದೆ ಬಸ್ಸನ್ನು ಓಡಿಸಿ ಉಳಿದ ಸೀಟಿನಿಂದ ಆದ ನಷ್ಟವನ್ನು ತುಂಬುವವರು ಯಾರು?
ಈ ಎಡವಟ್ಟಿನಿಂದ ಆದ ಸಮಸ್ಯೆ ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಶಿರಸಿಯಿಂದ ತಾಲೂಕಿನ ವಿವಿಧ ಶಾಲೆಗಳಿಗೆ ತೆರಳುವ ಶಿಕ್ಷಕ ಶಿಕ್ಷಕಿಯರಿಗೂ ತಟ್ಟಿದೆ.ಅದೇಗೆ ಅಂತೀರಾ ಬೆಳಿಗ್ಗೆ 9:30ಕ್ಕೆ ಪ್ರಾರ್ಥನಾ ಸಮಯಕ್ಕೆ ಹಾಜರಾಗುವ ಇವರುಗಳು ಬೆಳಿಗ್ಗೆ 5.30 ಅಥವಾ 6.00 ಗಂಟೆಗೆ ಮನೆ ಬಿಡುವ ಪರಿಸ್ಥಿತಿ ಎದುರಾಗಿದೆ.ಮತ್ತು ಮಹಿಳಾ ಶಿಕ್ಷಕಿಯರ ಪರಿಸ್ಥಿತಿ ಅಂತೂ ಹೇಳತಿರದಾಗಿದೆ ಏಕೆಂದರೆ ಇವರು ಬೆಳಿಗ್ಗೆ 6:00 ಒಳಗಾಗಿ ತಮ್ಮ ಮನೆಯ ಕುಟುಂಬದವರಿಗೆಲ್ಲ ತಿಂಡಿ, ಊಟ ತಯಾರಿಸಿಟ್ಟು ಬರಬೇಕು ಇದು ಮಾನಸಿಕವಾಗಿ ಶಿಕ್ಷಕಿಯರಿಗೆ ತೊಂದರೆಯನ್ನು ಮಾಡುತ್ತಿದೆ.
ಈ ಸಮಸ್ಯೆ ಬಗೆಹರಿಯಬೇಕಾದರೆ ತಡೆ ರಹಿತ ಬಸ್ಸುಗಳನ್ನು ನಿಲ್ಲಿಸುವುದರ ಜೊತೆಗೆ, ಹೆಚ್ಚುವರಿ ಬಸ್ಸುಗಳನ್ನು ಮುಂಡಗೋಡದಿಂದ ಪಾಳಾ ಕ್ರಾಸ್ ವರೆಗೆ ಹೋಗಿ ಬರುವಂತೆ ಬಿಡಬೇಕಾಗಿದೆ, ಇಲ್ಲವಾದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶಿರಸಿ ಹುಬ್ಬಳ್ಳಿ ಮಾರ್ಗವಾಗಿ ತೆರಳುವ ಕುಮಟಾ ಹುಬ್ಬಳ್ಳಿ, ಭಟ್ಕಳ ಹುಬ್ಬಳ್ಳಿ ಬಸ್ಗಳಂತಹ ಎಲ್ಲಾ ಬಸ್ ಗಳನ್ನು ನಿಲ್ಲಿಸುವ ವ್ಯವಸ್ಥೆ ಆಗಬೇಕಾಗಿದೆ…
ಇಷ್ಟೆಲ್ಲ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಿರುವ ಸಾರಿಗೆ ಇಲಾಖೆಯವರು ಇನ್ನಾದರೂ ಎಚ್ಚೆತ್ತುಕೊಂಡು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸೂಕ್ತ ಕ್ರಮವನ್ನು ಕೈಗೊಳ್ಳುತ್ತಾರೆಯೇ ಕಾದು ನೋಡಬೇಕಾಗಿದೆ..

ವರದಿ: ಮಂಜುನಾಥ ಹರಿಜನ

ಭ್ರಷ್ಟರ ಬೇಟೆ

Recent Posts

‍ರೀಲ್ಸ್ ಮಾಡುವ ಹುಚ್ಚು, ಕರೆದಾಗ ಬಂದು ಜೊತೆಗೆ ಮಲಗುತ್ತಿರಲಿಲ್ಲ ಎಂದು ಪತ್ನಿಯನ್ನು ಕೊಂದ ಪತಿ

ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…

2 days ago

ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27ರ ಯುವತಿ ಸಾವು; ಉಡುಪಿಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ, ತನಿಖೆ ಚುರುಕು

ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…

2 days ago

‘ಅಂದು ನನ್ನೊಂದಿಗೆ ಮಲಗಲು ಕೇಳಿದ್ದು ನೀವೇ ತಾನೇ?’ ನಿರ್ಮಾಪಕನಿಗೆ ನಟಿ ಚಾಂದಿನಿ ಚೌಧರಿ ಶಾಕ್!

ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…

2 days ago

ಮದುವೆಯಾಗಿ 4 ದಿನಕ್ಕೆ ಮಾಜಿ ಪ್ರೇಮಿಯೊಂದಿಗೆ ಹೋಟೆಲ್ ನಲ್ಲಿ ಪತ್ನಿ; ಪತಿಯ ಕೈಗೆ ವಿಡಿಯೋ…!

ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…

2 days ago

ಪತ್ನಿಯನ್ನು ಕೊಂದು ಶವ ವಿಲೇವಾರಿಗೆ ಸ್ನೇಹಿತನ ನೆರವು ಕೇಳಿದ ಪತಿ; ಜಾಣತನದಿಂದ ಪೊಲೀಸರಿಗೆ ಒಪ್ಪಿಸಿದ ಗೆಳೆಯ!

ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…

2 days ago

ಹಂಪಿಯಲ್ಲಿ ಅಕ್ರಮ ಹೋಂಸ್ಟೇ, ವಾಣಿಜ್ಯ ಚಟುವಟಿಕೆ ಆರೋಪ: 54 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸ್ವಯಂಪ್ರೇರಿತ ದೂರು

ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…

2 days ago