Latest

ಶಿಷ್ಯವೇತನ ಹಗರಣ ಪ್ರಕರಣ: ಮಾಜಿ ಅಧ್ಯಕ್ಷ ಭೀಮಾಶಂಕರ್ ಬಿಲಗುಂದಿ ನಿವಾಸದಲ್ಲಿ ಇಡಿ ದಾಳಿ

ಕಲಬುರಗಿ: ಹೆಚ್ಕೆಇ ಸೊಸೈಟಿಯ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕ ಭೀಮಾಶಂಕರ್ ಬಿಲಗುಂದಿ ಅವರ ಮನೆ ಮೇಲೆ ಇಂದು ಇಡಿ (ಅವಕಾಸಿ ನಿರ್ದೇಶನಾಲಯ) ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಕಲಬುರಗಿಯ ರಿಂಗ್‌ ರೋಡ್ ಬಳಿ ಇರುವ ಅವರ ನಿವಾಸದಲ್ಲಿ ನಾಲ್ವರು ಸದಸ್ಯರಿರುವ ತಂಡ ಬೆಳಗ್ಗೆಯಿಂದಲೇ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ಈ ದಾಳಿಯ ಹಿನ್ನೆಲೆ ಎಂಆರ್‌ಎಂಸಿ ಮೆಡಿಕಲ್ ಕಾಲೇಜಿನ ಶಿಷ್ಯವೇತನದ ಹಗರಣಕ್ಕೆ ಸಂಬಂಧಪಟ್ಟಿರುವ ಸಾಧ್ಯತೆ ಇರುವುದಾಗಿ ಮೂಲಗಳಿಂದ ತಿಳಿದುಬಂದಿದೆ. 2018ರಿಂದ 2024ರ ಅವಧಿಯಲ್ಲಿ ಹೈದರಾಬಾದ್ ಮೂಲದ ಖಾಸಗಿ ಶಿಕ್ಷಣ ಸಂಸ್ಥೆಗೆ ಇಬ್ಬರು ಅವಧಿಗೆ ಅಧ್ಯಕ್ಷರಾಗಿದ್ದ ಭೀಮಾಶಂಕರ್ ಬಿಲಗುಂದಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.

ಮೂಲಗಳ ಪ್ರಕಾರ, ಸುಮಾರು 700 ಮಂದಿ ಎಂಬಿಬಿಎಸ್ ವಿದ್ಯಾರ್ಥಿಗಳ ಶಿಷ್ಯವೇತನವಾಗಿ ಅಂದಾಜು 80 ಕೋಟಿ ರೂಪಾಯಿ ಹಣವನ್ನು ಮಂಜೂರು ಮಾಡದೆ ವಂಚಿಸಿರುವ ಆರೋಪ ಭೀಮಾಶಂಕರ್ ಮೇಲೆ ಇದೆ. ಪಾಸ್ ಆದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಲಭ್ಯವಿದ್ದ ಸ್ಕಾಲರ್‌ಶಿಪ್ ಹಣವನ್ನು ಕೊಡದೆ, ಸಂಸ್ಥೆಯ ಖಾತೆಗೆ ಹರಿಸಿದ್ದಿರುವ ಅನುಮಾನವೂ ವ್ಯಕ್ತವಾಗಿದೆ.

2024ರಲ್ಲಿ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡದೆ ವಂಚನೆಯ ಆರೋಪ ಚರ್ಚೆಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಡಿಗೆ ಈ ಬಗ್ಗೆ ಮಾಹಿತಿ ತಲುಪಿದ್ದು, ಅದರ ಆಧಾರದಲ್ಲಿ ಇಂದು ದಾಳಿ ನಡೆದಿದೆ ಎನ್ನಲಾಗುತ್ತಿದೆ.

ಇಡಿಯ ಅಧಿಕಾರಿಗಳು ಈ ವೇಳೆ ಮನೆ ಹಾಗೂ ಕಚೇರಿಗಳ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದು, ಹಣದ ಹೂಡಿಕೆ, ಬ್ಯಾಂಕ್ ಖಾತೆಗಳ ವಿವರ ಹಾಗೂ ಭೂಸ್ವಾಮ್ಯದ ದಾಖಲೆಗಳನ್ನೂ ವಶಪಡಿಸಿಕೊಂಡಿದ್ದಾರೆ.

ಹಗರಣ ಕುರಿತು ತನಿಖೆ ಮುಂದುವರಿದಿದ್ದು, ಭವಿಷ್ಯದಲ್ಲಿ ಮತ್ತಷ್ಟು ಮಾಹಿತಿಗಳು ಹೊರಬರುವ ಸಾಧ್ಯತೆಯಿದೆ.

nazeer ahamad

Recent Posts

ಲಿವ್-ಇನ್ ಸಂಬಂಧದ ದುರಂತ ಅಂತ್ಯ: ಲವ್ ಜಿಹಾದ್ ಗೆ ಮತ್ತೊಂದು ಬಲಿ, ನಂದಿನಿ ಬೋಸ್ಮಿಯಾ ಸಾವಿನ ಪ್ರಕರಣ ಚರ್ಚೆಗೆ ಗ್ರಾಸ

ಗುಜರಾತಿನ ರಾಜ್‌ಕೋಟ್‌ನಲ್ಲಿ ಯುವತಿ ನಂದಿನಿ ಬೋಸ್ಮಿಯಾ ಸಾವಿನ ಪ್ರಕರಣವು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆಮ್ ಆದ್ಮಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ನಂದಿನಿ,…

5 hours ago

ಸದಾ ಶೀಲ ಶಂಕಿಸುತ್ತಿದ್ದವನು ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಂದ..!

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದ್ದು, ಪತ್ನಿಯ ಶೀಲವನ್ನು ಅನುಮಾನಿಸುತ್ತಿದ್ದ ಪತಿಯೊಬ್ಬ ಕೊನೆಗೆ ಆಕೆಯನ್ನು…

5 hours ago

ಮಕ್ಕಳ ನಿರ್ಲಕ್ಷ್ಯದಿಂದ ಮನನೊಂದ ನಿವೃತ್ತ ಸೈನಿಕ; ₹4 ಕೋಟಿ ಆಸ್ತಿಯನ್ನು ತಿರುಪತಿ ದೇವರಿಗೆ ದಾನ ಮಾಡಿದ ಹೃದಯವಿದ್ರಾವಕ ನಿರ್ಧಾರ

ದೇಶದ ಗಡಿಯಲ್ಲಿ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕರೊಬ್ಬರು, ಸ್ವಂತ ಮಕ್ಕಳ ನಿರ್ಲಕ್ಷ್ಯದಿಂದ ಮನನೊಂದು ತಮ್ಮ ಸುಮಾರು ₹4…

5 hours ago

ಬೇರೊಬ್ಬನೊಂದಿಗೆ ಓಡಿ ಹೋದ ತಾಯಿ: ಹಸಿದ ಕಂದಮ್ಮನನ್ನು ಮಡಿಲಲ್ಲಿ ಹಿಡಿದು ಮೆಡಿಕಲ್ಗೆ ಬಂದು ಕಣ್ಣೀರಿಟ್ಟ ತಂದೆ.

ಹಸಿದ ಕಂದಮ್ಮನ ಅಳುವನ್ನು ಸಮಾಧಾನಪಡಿಸಲಾಗದೆ ಅಸಹಾಯಕನಾಗಿ ನಿಂತ ತಂದೆಯೊಬ್ಬನ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರ ಮನಕಲಕಿದೆ. ಪತ್ನಿ ಮನೆಯನ್ನು ತೊರೆದು…

6 hours ago

ಕುಟುಂಬದ ಮೂವರ ಹತ್ಯೆ ಪ್ರಕರಣ: ಹೆತ್ತವರನ್ನು ಕೊಂದ ಬಳಿಕ ಪ್ರಿಯಕರನೊಂದಿಗೆ ಹೋಗಿ ಸಿಗರೇಟ್ ಸೇದಿದ್ದ ಸೈಕೋ ಮಗಳು..!

ತಂದೆ, ತಾಯಿ ಮತ್ತು ತಂಗಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತಳಾಗಿರುವ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಪ್ರಕರಣದಲ್ಲಿ ದಿನದಿಂದ…

6 hours ago

ನಾಲ್ಕು ತಿಂಗಳ ಗರ್ಭಿಣಿ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ: ಕಲಬುರಗಿಯಲ್ಲಿ ಮನಕಲುಕುವ ಘಟನೆ

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ್ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದ್ದು, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬರು ತಮ್ಮ ಒಂದೂವರೆ…

6 hours ago