Latest

ವಿದ್ಯಾರ್ಥಿನಿಯಿಂದ ಉಪನ್ಯಾಸಕಿಗೆ ಹಲ್ಲೆ: ಗುರು ಗೌರವ ಮರೆಯುತ್ತಿರುವ ನವಪೀಳಿಗೆಗೆ ನೆಟ್ಟಿಗರ ಕಿಡಿ

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ಜನಪದ ನುಡಿಯ ಅರ್ಥವನ್ನು ನವಪೀಳಿಗೆಯ ಕೆಲವರು ಮರೆತಂತಾಗಿದೆ. ಹಳೆಯದಿನಗಳಲ್ಲಿ ಗುರುಗಳಿಗೆ ಭಯವೂ ಇತ್ತು, ಭಕ್ತಿಯೂ ಇತ್ತು. ಆದರೆ ಈಗ ಕೆಲವೊಂದು ಸಂದರ್ಭಗಳಲ್ಲಿ ಶಿಕ್ಷಕರ ವಿರುದ್ಧವೇ ಕೈಕೈ ಹಾಕುವ ಸ್ಥಿತಿಗೆ ವಿದ್ಯಾರ್ಥಿಗಳು ಇಳಿಯುತ್ತಿದ್ದಾರೆ. ಆಂಧ್ರ ಪ್ರದೇಶದಲ್ಲಿ ನಡೆದ ಇತ್ತೀಚಿನ ಘಟನೆ ಈ ಮಾತಿಗೆ ಸಜೀವ ಉದಾಹರಣೆ.

ವಿಜಯನಗರ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಘಟನೆ ನಡೆದಿದೆ. ಕಾಲೇಜು ಆವರಣದಲ್ಲಿ ಓರ್ವ ವಿದ್ಯಾರ್ಥಿನಿ ತನ್ನ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಇದೇ ವೇಳೆ, ಆಕೆಯ ವರ್ತನೆ ಗಮನಿಸಿದ ಮಹಿಳಾ ಉಪನ್ಯಾಸಕಿ ಶಿಸ್ತಿಗೆ ಕರೆತಂದು, ಆಕೆಯಿಂದ ಫೋನ್‌ನ್ನು ಕಸಿದುಕೊಂಡರು. ಈ ಘಟನೆಗೆ ಕೋಪಗೊಂಡ ವಿದ್ಯಾರ್ಥಿನಿ, ಉಪನ್ಯಾಸಕಿಗೆ ಬಾಯಿಗೆ ಬಂದಂತೆ ನಿಂದನೆ ಮಾಡಲು ಆರಂಭಿಸಿದಳು.

ವಿವಾದ ಮುಂದುವರೆದಂತೆಯೇ, ವಿದ್ಯಾರ್ಥಿನಿ ತನ್ನ ಕಾಲಿನಲ್ಲಿದ್ದ ಚಪ್ಪಲಿಯನ್ನು ತೆಗೆದು ಉಪನ್ಯಾಸಕಿಯ ಮೇಲೆ ಹಲ್ಲೆ ನಡೆಸಿದಳು. ತಕ್ಷಣವೇ ಉಪನ್ಯಾಸಕಿಯು ಕೂಡ ತಾಳ್ಮೆ ಕಳೆದುಕೊಂಡು ವಿದ್ಯಾರ್ಥಿನಿಗೆ ಪ್ರತಿದಾಳಿ ಮಾಡಿದರು. ಈ ಗಲಾಟೆಯಲ್ಲಿ ಮತ್ತೊಬ್ಬ ವಿದ್ಯಾರ್ಥಿ ಮಧ್ಯ ಪ್ರವೇಶಿಸಿ ಜಗಳ ನಿಲ್ಲಿಸಿದರು.

ಈ ಘಟನೆ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ಹೊರಬಿದ್ದ ಬಳಿಕ ವಿದ್ಯಾರ್ಥಿನಿಯ ವರ್ತನೆಗೆ ನೆಟ್ಟಿಗರು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಈವರೆಗೆ ಕಾಲೇಜು ಆಡಳಿತ ಮಂಡಳಿಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

ಈ ಘಟನೆ, ಗುರು-ಶಿಷ್ಯರ ನಡುವಿನ ಪರಸ್ಪರ ಗೌರವದ ಬಾಳದಂಟು ಕ್ಷೀಣಿಸುತ್ತಿರುವುದನ್ನು ತೋರಿಸುತ್ತಿದೆ. ವಿದ್ಯಾರ್ಥಿಗಳ ಶಿಸ್ತಿನ ಕುಸಿತ ಮತ್ತು ಶಿಕ್ಷಕರ ಮೇಲಿನ ವಿಶ್ವಾಸದ ಕೊರತೆ ಹೇಗೆ ಭವಿಷ್ಯವನ್ನು ಹಾನಿಗೊಳಿಸಬಹುದು ಎಂಬುದಕ್ಕೆ ಇದು ಎಚ್ಚರಿಕೆ  ಪರಿಣಮಿಸಿದೆ.

nazeer ahamad

Recent Posts

ಬೆಂಗಳೂರು ಡ್ರಗ್ಸ್ ಜಾಲದ ಮೇಲೆ ಭಾರೀ ದಾಳಿ: ₹36 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ, 16 ಮಂದಿ ಬಂಧನ

ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸರು ಭರ್ಜರಿ ಕಾರ್ಯಾಚರಣೆ ಮುಂದುವರೆಸಿದ್ದು, ನಾಲ್ವರು ವಿದೇಶಿಯರು ಸೇರಿದಂತೆ ಒಟ್ಟು 16 ಮಂದಿಯನ್ನು…

3 hours ago

ಕೊಡಗು ಜೈಲಿನಲ್ಲಿ ವಿಚಾರಣಾಧೀನ ಕೈದಿಯ ಸಾವು: ‘ಹನಿಟ್ರ್ಯಾಪ್‌, ಸುಳ್ಳು ಪ್ರಕರಣ’ ಆರೋಪಗಳಿಂದ ಪ್ರಕರಣಕ್ಕೆ ಹೊಸ ತಿರುವು

ಕೊಡಗು ಜಿಲ್ಲಾ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ 68 ವರ್ಷದ ಚೆಂಗಪ್ಪ ಅವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸುಮಾರು 20…

3 hours ago

ಶಿವಾಜಿನಗರ ಬೌರಿಂಗ್ ಆಸ್ಪತ್ರೆ ದುರಂತ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಿಎಂ ಸಿದ್ದರಾಮಯ್ಯ ಕಿಡಿ, ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ

ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆ ಆವರಣದ ಗೋಡೆ ಕುಸಿತದಿಂದ ಸಂಭವಿಸಿದ ಭೀಕರ ದುರಂತದ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,…

3 hours ago

ಭ್ರೂಣಲಿಂಗ ಪತ್ತೆ–ಅಕ್ರಮ ಸ್ಕ್ಯಾನಿಂಗ್ ದಂಧೆ ಭಂಡಾಫೋಡ: ಕೆ.ಆರ್.ಪೇಟೆಯಲ್ಲಿ ಮೂವರು ವೈದ್ಯರು ಬಂಧನ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಅಕ್ರಮ ಸ್ಕ್ಯಾನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರನ್ನು ಬಂಧಿಸಿರುವ ಘಟನೆ…

18 hours ago

₹15 ಲಕ್ಷ ಲಂಚ ಸ್ವೀಕರಿಸುವ ವೇಳೆ ಕೆಎಎಸ್ ಅಧಿಕಾರಿ ಬಲೆಗೆ; ಚಾಲಕನೊಂದಿಗೆ ಬಂಧನ

ಭೂಸ್ವಾಧೀನ ಸಂಬಂಧಿತ ಬಾಕಿ ಕಂದಾಯ ಪ್ರಕರಣವನ್ನು ಪರಿಹರಿಸಲು ಲಂಚ ಪಡೆಯುತ್ತಿದ್ದ ವೇಳೆ ಕೆಎಎಸ್ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಘಟನೆ…

19 hours ago

ಪತ್ನಿಯ ದ್ರೋಹ ಗೊತ್ತಿದ್ದರೂ ಮಕ್ಕಳಿಗಾಗಿ ಸಹನೆ; ವಿಚ್ಛೇದನವೇ? ಹೊಸ ಬದುಕೇ? ಪತಿಯ ಪ್ರಶ್ನೆ ವೈರಲ್

ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಜೀವನ ಸಣ್ಣಪುಟ್ಟ ವಿಚಾರಗಳಿಗೂ ಕುಸಿಯುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಹೊಂದಾಣಿಕೆಯ ಕೊರತೆ, ಅಕ್ರಮ ಸಂಬಂಧಗಳು ಸೇರಿದಂತೆ ಹಲವು…

20 hours ago