ಚಿಂತಾಮಣಿ: ಬರ್ತಡೆ ಪಾರ್ಟಿಗೆ ಎಂದು ಯುವಕ ನನ್ನು ಕರೆಸಿಕೊಂಡು ಕಂಟಪೂರ್ತಿ ಕುಡಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ.
ದುರ್ಗೇಶ್ ಅಲಿಯಾಸ್ ಚಿನ್ನಿ ಎಂಬ ಯುವಕ ಚಿಂತಾಮಣಿಯ ಅಂಜನಿ ಬಡಾವಣೆಯ ನಿವಾಸಿಯಾಗಿರುತ್ತಾನೆ. ಹೇಮಂತ್ ಎಂಬ ಯುವಕನ ಬರ್ತಡೇ ಪಾರ್ಟಿಯನ್ನು ಚಿಂತಾಮಣಿಯ ಕಣ್ಣಂಪಲ್ಲಿ ಬಳಿ ಇರುವ ನಿರ್ಜನ ಪ್ರದೇಶದಲ್ಲಿ ಆಯೋಜಿಸಿಕೊಂಡಿರುತ್ತಾರೆ ಆ ಸ್ಥಳಕ್ಕೆ ದುರ್ಗೇಶನನ್ನು ಕರೆದೊಗಿರುತ್ತಾರೆ.
ದುರ್ಗೇಶ್ ಮತ್ತು ಹೇಮಂತನಿಗೆ ಹಳೆಯ ವೈಶ್ಯಮ್ಯವಿರುತ್ತದೆ ಆದರೂ ಸಹ ಎಲ್ಲವನ್ನು ಮರೆತು ಬರ್ತಡೇ ಪಾರ್ಟಿಗೆ ಎಂದು ಹೋಗಿರುತ್ತಾರೆ ಆ ಸಂದರ್ಭದಲ್ಲಿ ಶರತ್ ಮಧು ಮಹೇಶ್ ಸೇರಿದಂತೆ ದುರ್ಗೇಶನು ಸಹ ಕಂಠಪೂರ್ತಿ ಕುಡಿದಿರುತ್ತಾರೆ.
ಗುರಾಯಿಸುತ್ತಿದ್ದಾನೆ ಎಂಬ ವಿಚಾರಕ್ಕೆ ಸ್ನೇಹಿತರ ಮಧ್ಯೆ ಜಗಳ ಉಂಟಾಗಿದೆ ಮೊದಲೇ ಹೇಮಂತ ಮತ್ತು ದುರ್ಗೇಶನ ಮಧ್ಯೆ ಹಳೆಯ ವೈಶ್ಯಮ್ಯ ಇದ್ದ ಕಾರಣ ಇದೇ ಸಂದರ್ಭವನ್ನು ಬಳಸಿಕೊಂಡ ಬರ್ತಡೆ ಬಾಯಿ ಹೇಮಂತ ಕೇಕ್ ಕತ್ತರಿಸಲು ತಂದಿದಂತಹ ಚಾಕುವಿನಿಂದ ದುರ್ಗೇಶನ ಕತ್ತು ಕೊಯ್ದಿದ್ದಾನೆ. ಈ ಸಂದರ್ಭದಲ್ಲಿ ಜೊತೆಗಿದ್ದ ಶರತ್, ಮಧು, ಮಹೇಶ್, ಹೇಮಂತನಿಗೆ ಸಾತ್ ನೀಡಿದ್ದಾರೆ.
ಘಟನೆ ನಡೆದ ಮುಂದಿನ ದಿನ ವಿಚಾರ ಬೆಳಕೆಗೆ ಬಂದಿದೆ.
ಕೊಲೆ ಮಾಡಿರುವಂತಹ ಆರೋಪಿಗಳು ತಮಗೇನು ತಿಳಿಯದಂತೆ ಅಮಾಯಕರ ರೀತಿ ವರ್ತಿಸಿದ್ದಾರೆ.
ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇವರನ್ನು ತನಿಖೆಗೆ ಒಳಪಡಿಸಿದ ನಂತರ ಈ ಎಲ್ಲಾ ವಿಚಾರಗಳು ಹೊರಬಂದಿವೆ.
ಬರ್ತಡೆಗೆ ಎಂದು ಕರೆಸಿಕೊಂಡು ಸ್ನೇಹಿತನ ಕತ್ತು ಕೊಯ್ದ ನಾಲ್ವರು ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…
ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…
ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…
ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…
ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…
ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…