Latest

ಹಣ ಡಬಲ್ ಮಾಡುವ ನೆಪದಲ್ಲಿ ಲಕ್ಷಾಂತರ ರೂ ಮೋಸ: ವಂಚಿಸಿದ ಶಬ್ಬೀರ ಬಂಧನ.

ಭಟ್ಕಳ: ಹಣವನ್ನು ಡಬಲ್ ಮಾಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣವೊಂದು ಮುರುಡೇಶ್ವರದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಭಟ್ಕಳದ ಗುಳ್ಮೆಯ ಬಿಲಾಲಖಂಡ ನಿವಾಸಿ ಮೊಹಮದ್ ಶಬ್ಬೀರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮುರಡೇಶ್ವರದ ಮಾವಳ್ಳಿ ಬಳಿ ವಾಸವಾಗಿರುವ ಮತ್ತು ಗುತ್ತಿಗೆ ಕೆಲಸ ಮಾಡಿಕೊಂಡಿರುವ ಮಂಜುನಾಥ ನಾಯ್ಕ ಎಂಬವರು ಈ ಮೋಸದ ಬಲಿಯಾದರು. ಪೇಂಟಿಂಗ್ ಕೆಲಸ ಮಾಡುತ್ತಿರುವ ಶಬ್ಬೀರ, ಮಂಜುನಾಥ ನಾಯ್ಕರಿಗೆ ಹಣ ಡಬಲ್ ಮಾಡುವ “ಸೌದಾ”ಯೊಂದನ್ನು ಪ್ರಸ್ತಾಪಿಸಿದ್ದರು. ಶಬ್ಬೀರನ ಮಾತಿಗೆ ನಂಬಿಕೆ ಇಟ್ಟುಕೊಂಡ ನಾಯ್ಕರು, ತಮ್ಮ ಹಗಲು-ರಾತ್ರಿ ದುಡಿದು ಸಂಪಾದಿಸಿದ 3.25 ಲಕ್ಷ ರೂಪಾಯಿಯನ್ನು ನೀಡಿದರು.

ಮೇ 27ರಂದು ಮೊದಲ ಹಂತದಲ್ಲಿ 2.10 ಲಕ್ಷ ಹಾಗೂ ಮೇ 29ರಂದು ಮತ್ತೊಮ್ಮೆ 1.15 ಲಕ್ಷ ರೂಪಾಯಿ ಹಣವನ್ನು ಶಬ್ಬೀರ ಸ್ವೀಕರಿಸಿದರು. ಆದರೆ ಹಣವನ್ನು ಡಬಲ್ ಮಾಡಿ ಹಿಂತಿರುಗಿಸುವುದರಲ್ಲಿ ವಿಫಲರಾದ ಮಾತ್ರವಲ್ಲದೆ, ನೀಡಿದ ಹಣವನ್ನೂ ಮರಳಿಸದೆ ಕಿರುಕುಳ ನೀಡಲು ಆರಂಭಿಸಿದರು. ಇದರಿಂದ ಮನನೊಂದು ಮಂಜುನಾಥ ನಾಯ್ಕ ಅವರು ಮುರುಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದರು.

ದೂರು ಸ್ವೀಕರಿಸಿದ ಪೊಲೀಸರು, ಆಂಜಿನೇಯ ದೇವಸ್ಥಾನ ಹತ್ತಿರ ಹಣ ಹಸ್ತಾಂತರದ ಬಗ್ಗೆ ದೊರೆತ ದಾಖಲೆಗಳ ಆಧಾರದ ಮೇಲೆ ತನಿಖೆ ಕೈಗೊಂಡರು. ಉತ್ತರ ಕನ್ನಡ ಜಿಲ್ಲಾ ಎಸ್‌ಪಿ ಎಂ. ನಾರಾಯಣ, ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ ಹಾಗೂ ಜಗದೀಶ ಎಂ ಅವರು ಡಿವೈಎಸ್‌ಪಿ ಮಹೇಶ್ ಎಂ ಅವರ ನೇತೃತ್ವದಲ್ಲಿ ಸಮೀಕ್ಷೆ ನಡೆಸಿದರು.

ಪಿಎಸ್‌ಐ ಹಣಮಂತ ಬೀರಾದರ್ ನೇತೃತ್ವದ ತಂಡ, ಶಬ್ಬೀರನನ್ನು ಪತ್ತೆಹಚ್ಚಿ ಬಂಧಿಸಲು ಯಶಸ್ವಿಯಾಯಿತು. ಬಂಧನದ ವೇಳೆ ಶಬ್ಬೀರನಿಂದ 50 ಸಾವಿರ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆಯಲ್ಲಿ ಮಂಜುನಾಥ ಲಕ್ಮಾಪುರ, ವಿಜಯ ನಾಯ್ಕ, ಮಂಜುನಾಥ ಮಡಿವಾಳ, ಸಿದ್ದಪ್ಪ ಕಾಂಬಳೆ, ಪರೀದ್ ಚಿಗರಳ್ಳಿ ಹಾಗೂ ಲೋಕಪ್ಪ ಕತ್ತಿ ಅವರು ಭಾಗವಹಿಸಿದ್ದರು. ವರದಿ: ಕುಮಾರ್ ನಾಯ್ಕ.

nazeer ahamad

Recent Posts

ಅಟ್ರಾಸಿಟಿ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಲಂಚ ಬೇಡಿಕೆ: ಸಿಪಿಐ ಲೋಕಾಯುಕ್ತ ಬಲೆಗೆ

ಅಟ್ರಾಸಿಟಿ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯ ಸಿಪಿಐ ವೀರಣ್ಣ…

13 hours ago

ಕರ್ಕಶ ಶಬ್ದದ ಬೈಕ್ ವಿಚಾರಕ್ಕೆ ಪೊಲೀಸರ ಮೇಲೆಯೇ ವಿದ್ಯಾರ್ಥಿಗಳ ಹಲ್ಲೆ

ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್‌ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…

20 hours ago

ಕ್ಯಾಂಟಿನ್‌ನಲ್ಲಿ ವೇಶ್ಯಾವಾಟಿಕೆ ದಂಧೆ: ಬೆಳ್ತಂಗಡಿಯಲ್ಲಿ ಪೊಲೀಸರ ದಾಳಿ, ಮೂವರು ಬಂಧನ

ಬೆಳ್ತಂಗಡಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ…

20 hours ago

ಒಂದು ವರ್ಷದ ನಿರೀಕ್ಷೆಗೆ ತೆರೆ: ಭಟ್ಕಳಕ್ಕೆ ಖಾಯಂ ಎಸಿ, ಜೆ. ಮಹೇಶ್ ಅಧಿಕಾರ ಸ್ವೀಕಾರ

ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು,…

2 days ago

ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ನಿಧನ; ರಾಜಕೀಯ ವಲಯದಲ್ಲಿ ಶೋಕದ ಛಾಯೆ

ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ…

2 days ago

ಆಂಟಿ ಹಿಂದೆ ಹೋದವನ ದುರಂತ ಅಂತ್ಯ: ಲಿವ್-ಇನ್ ಸಂಗಾತಿಯ ಕಿರುಕುಳಕ್ಕೆ ಯುವಕ ಆತ್ಮಹತ್ಯೆ!

ಸೋಶಿಯಲ್ ಮೀಡಿಯಾದಲ್ಲಿ ಆರಂಭವಾದ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ಲಿವ್-ಇನ್…

2 days ago