Crime

ಅನೈತಿಕ ಸಂಬಂಧದ ರಹಸ್ಯ ಬಹಿರಂಗ: ನಾದಿನಿಯನ್ನು ಸುಟ್ಟು ಹಾಕಿದ ಅತ್ತಿಗೆ, ಪ್ರಿಯಕರ..!

ರಾಜಸ್ಥಾನದ ಬಿಕಾನೇರ್ ಪೊಲೀಸರು ಮನೀಷಾ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ದೊಡ್ಡ ಯಶಸ್ಸು ಸಾಧಿಸಿದ್ದಾರೆ. ಮಾರ್ಚ್ 7ರಂದು ಮುಕ್ತಾ ಪ್ರಸಾದ್ ಪ್ರದೇಶದಲ್ಲಿ ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮನೀಷಾ ಕೊಲೆಯ ಹಿಂದೆ ಆಕೆಯ ಅತ್ತಿಗೆ ಸುಮನ್ ಮತ್ತು ಆಕೆಯ ಪ್ರಿಯಕರ ಗೋಪಾಲ್ ಇರುವುದನ್ನು ಪೊಲೀಸರು ಪತ್ತೆಹಚ್ಚಿ, ಅವರನ್ನು ಬಂಧಿಸಿದ್ದಾರೆ.

ಅನೈತಿಕ ಸಂಬಂಧವೇ ಹತ್ಯೆಗೆ ಕಾರಣ

ಗೋಪಾಲ್ ಮೂಲತಃ ಚುರು ಜಿಲ್ಲೆಯವನಾಗಿದ್ದು, ಸುಮನ್ ಜೊತೆ ಒಂದು ವರ್ಷದಿಂದ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಈ ವಿಷಯ ಮನೀಷಾಗೆ ತಿಳಿದ ನಂತರ, ಆಕೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಳು. ಈ ಬಗ್ಗೆ ಮನೀಷಾ ಯಾರಿಗಾದರೂ ಮಾಹಿತಿ ನೀಡಬಹುದು ಎಂಬ ಭಯದಿಂದ, ಸುಮನ್ ಮತ್ತು ಗೋಪಾಲ್ ಕೊಲೆ ಮಾಡಲು ಸಂಚು ರೂಪಿಸಿದರು.

200ಕ್ಕೂ ಹೆಚ್ಚು ಪೊಲೀಸರ ತಂಡದಿಂದ ತನಿಖೆ

ಪೊಲೀಸರು ಈ ಪ್ರಕರಣದ ತನಿಖೆ ನಡೆಸಲು ವಿಶೇಷ ತಂಡ ರಚಿಸಿದ್ದು, 200ಕ್ಕೂ ಹೆಚ್ಚು ಪೊಲೀಸರು ಇದರ ಭಾಗವಾಗಿದ್ದರು. ತನಿಖೆ ವೇಳೆ, ಗೋಪಾಲ್ ಅನೇಕ ಕ್ರೈಮ್ ವೆಬ್ ಸೀರೀಸ್ ಮತ್ತು ಅಪರಾಧ ಸಂಬಂಧಿತ ವಿಡಿಯೋಗಳನ್ನು ನೋಡಿ, ಕೊಲೆಯನ್ನು ಪೂರ್ತಿಗೊಳಿಸಲು ಯೋಜನೆ ರೂಪಿಸಿದ್ದನು ಎಂಬುದು ಬಹಿರಂಗವಾಗಿದೆ.

ಮನೆಗೆ ಬಂದು ಹತ್ಯೆ

ಮಾರ್ಚ್ 7ರಂದು, ಗೋಪಾಲ್ ಮನೀಷಾಳ ಮನೆಗೆ ಬಂದು ಆಕೆಯೊಂದಿಗೆ ಚಹಾ ಕುಡಿದನು. ಬಳಿಕ ಮೋಸದಿಂದ ಆಕೆಯ ತಲೆಗೆ ಸುತ್ತಿಗೆಯಿಂದ ಬಲವಾಗಿ ಹೊಡೆದು ಹತ್ಯೆಗೈದನು. ಬಳಿಕ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಶವವನ್ನು ಸುಟ್ಟನು.

ಕೊಲೆಯ ಬಳಿಕ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಆರೋಪಿ

ಹತ್ಯೆಯ ನಂತರ, ಆಪ್ತ ಸಂಬಂಧಿಯಾಗಿರುವ ಸುಮನ್ ಅಂತ್ಯಕ್ರಿಯೆ ಸೇರಿದಂತೆ ಎಲ್ಲಾ ಕ್ರಿಯಾಕಾರ್ಯಗಳಲ್ಲಿ ಭಾಗವಹಿಸಿತು. ಇನ್ನೊಂದೆಡೆ, ಗೋಪಾಲ್ ಕೂಡ ಕುಟುಂಬಸ್ಥರು ಪೊಲೀಸರ ವಿರುದ್ಧ ಧರಣಿ ನಡೆಸುವ ವೇಳೆ, ಅನುಮಾನ ಹುಟ್ಟಿಸದೇ ಅವರೊಂದಿಗೆ ಭಾಗವಹಿಸಿದ್ದನು.

ಇದೀಗ, ಸಮಗ್ರ ತನಿಖೆಯ ನಂತರ, ಪೊಲೀಸರು ಇಬ್ಬರನ್ನೂ ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.

ಭ್ರಷ್ಟರ ಬೇಟೆ

Recent Posts

ಅಟ್ರಾಸಿಟಿ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಲಂಚ ಬೇಡಿಕೆ: ಸಿಪಿಐ ಲೋಕಾಯುಕ್ತ ಬಲೆಗೆ

ಅಟ್ರಾಸಿಟಿ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯ ಸಿಪಿಐ ವೀರಣ್ಣ…

4 hours ago

ಕರ್ಕಶ ಶಬ್ದದ ಬೈಕ್ ವಿಚಾರಕ್ಕೆ ಪೊಲೀಸರ ಮೇಲೆಯೇ ವಿದ್ಯಾರ್ಥಿಗಳ ಹಲ್ಲೆ

ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್‌ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…

11 hours ago

ಕ್ಯಾಂಟಿನ್‌ನಲ್ಲಿ ವೇಶ್ಯಾವಾಟಿಕೆ ದಂಧೆ: ಬೆಳ್ತಂಗಡಿಯಲ್ಲಿ ಪೊಲೀಸರ ದಾಳಿ, ಮೂವರು ಬಂಧನ

ಬೆಳ್ತಂಗಡಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ…

11 hours ago

ಒಂದು ವರ್ಷದ ನಿರೀಕ್ಷೆಗೆ ತೆರೆ: ಭಟ್ಕಳಕ್ಕೆ ಖಾಯಂ ಎಸಿ, ಜೆ. ಮಹೇಶ್ ಅಧಿಕಾರ ಸ್ವೀಕಾರ

ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು,…

1 day ago

ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ನಿಧನ; ರಾಜಕೀಯ ವಲಯದಲ್ಲಿ ಶೋಕದ ಛಾಯೆ

ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ…

1 day ago

ಆಂಟಿ ಹಿಂದೆ ಹೋದವನ ದುರಂತ ಅಂತ್ಯ: ಲಿವ್-ಇನ್ ಸಂಗಾತಿಯ ಕಿರುಕುಳಕ್ಕೆ ಯುವಕ ಆತ್ಮಹತ್ಯೆ!

ಸೋಶಿಯಲ್ ಮೀಡಿಯಾದಲ್ಲಿ ಆರಂಭವಾದ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ಲಿವ್-ಇನ್…

2 days ago