Crime

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಬೆಳ್ತಂಗಡಿಯಲ್ಲಿ 346 ಅಸಹಜ ಸಾವು- ನಟ ಚೇತನ ಅಹಿಂಸ

2012ರ ಅಕ್ಟೋಬರ್ 9ರಂದು ನಡೆದ ಕುಮಾರಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಈಗ 14 ವರ್ಷಗಳು ತುಂಬುತ್ತಿವೆ. ಈ ದುರಂತಕ್ಕೆ ಉತ್ತರದ ಹುಡುಕಾಟ ಇನ್ನೂ ಮುಂದುವರಿದಿದೆ. ಯಾರೂ ಬಂಧಿತರಾಗಿಲ್ಲ, ಪ್ರಕರಣಕ್ಕೆ ನ್ಯಾಯ ಸಿಕ್ಕಿಲ್ಲ, ಮತ್ತು ಸೌಜನ್ಯ ಅವರ ಕುಟುಂಬ ಇನ್ನೂ ನ್ಯಾಯಕ್ಕಾಗಿ ಹೋರಾಡುತ್ತಿದೆ.

YouTube ವಿಡಿಯೋದಿಂದ ಹೊಸ ಚರ್ಚೆ

ಇತ್ತೀಚೆಗೆ YouTuber ಸಮೀರ್ ಎಂಡಿ, ಧೂತ ಚಾನೆಲ್‌ನಲ್ಲಿ “ಊರಿಗೆ ದೊಡ್ಡವರೇ ಈ ಕೊಲೆ ಮಾಡಿದರಾ?” ಎಂಬ ಪ್ರಶ್ನೆ ಕೇಳುತ್ತಾ ಒಂದು ವಿಡಿಯೋ ಪ್ರಕಟಿಸಿದರು. ಹನ್ನೆರಡು ದಿನದಲ್ಲಿ 12 ಮಿಲಿಯನ್ ವೀಕ್ಷಣೆ ಪಡೆದ ಈ ವಿಡಿಯೋ, ಪ್ರಕರಣದ ಬಗ್ಗೆ ಪುನಃ ಚರ್ಚೆ ಶುರು ಮಾಡಿದೆ.

ನಟ ಚೇತನ್ ಅಹಿಂಸ ಪ್ರತಿಕ್ರಿಯೆ

ಈ ಕುರಿತು ನಟ ಚೇತನ್ ಅಹಿಂಸ ಮಾತನಾಡಿದ್ದಾರೆ.

  • ಸೌಜನ್ಯ ತಾಯಿಯೊಂದಿಗೆ ಮಾತನಾಡಿದ ಮಾಹಿತಿ ಹಂಚಿಕೊಂಡು, “ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ಅಸಹಜ ಸಾವುಗಳು ಬೆಳ್ತಂಗಡಿಯಲ್ಲಿ ಸಂಭವಿಸಿವೆ. 346 ಪ್ರಕರಣಗಳಿರುವ ಮಾಹಿತಿ ನನಗೆ ಸಿಕ್ಕಿದೆ. ಈ ಪ್ರಭಾವಿಗಳಿಗೆ ಹಣ, ರಾಜಕೀಯ, ಧರ್ಮ, ಜಾತಿ, ಮತ್ತು ಬಲವಂತದ ಬೆಂಬಲ ಇದೆ. ಜನಶಕ್ತಿ, ಸಂವಿಧಾನ ಶಕ್ತಿ, ಕಾನೂನು ಶಕ್ತಿ ಇಲ್ಲಿಗೆ ಸಾಕಾಗುತ್ತಿಲ್ಲ” ಎಂದು ತಿಳಿಸಿದ್ದಾರೆ.

YouTuber ವಿರುದ್ಧ ದೂರು – ಹೈಕೋರ್ಟ್ ತೀರ್ಪು

  • ಬಳ್ಳಾರಿ ಪೊಲೀಸರು ಯೂಟ್ಯೂಬರ್ ಸಮೀರ್ ವಿರುದ್ಧ ದೂರು ದಾಖಲಿಸಿದ್ದರೂ, ಹೈಕೋರ್ಟ್ ಈ ದೂರು ರದ್ದು ಮಾಡಿದೆ.
  • ಚೇತನ್, “Article 19 ಪ್ರಕಾರ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಆದರೆ ಪ್ರಭಾವಿಗಳಿಗೆ ಮುತ್ತಿನ ಹಾರ ಹಾಕಲಾಗುತ್ತದೆ, ಸಾಮಾನ್ಯರು ಸತ್ಯ ಹೇಳಿದರೆ ದಬ್ಬಾಳಿಕೆ ಎದುರಿಸಬೇಕಾಗುತ್ತದೆ. ಈ ಪ್ರಕರಣಕ್ಕೆ ನ್ಯಾಯ ದೊರಕಿಸಲು ನಾವು ಸಿದ್ಧರಾಗಬೇಕು, ಜೈಲಿಗೆ ಹೋಗಬೇಕಾದರೂ ಹಿಂತಿರುಗಬೇಡಿ” ಎಂದು ಹೇಳಿದರು.

ನ್ಯಾಯಕ್ಕಾಗಿ ಸರ್ಕಾರಕ್ಕೆ ಮನವಿ

ಚೇತನ್ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತ, “ನೀವು ಬಸವ ತತ್ವ, ಸಂವಿಧಾನ ಎಂದು ಮಾತನಾಡುತ್ತೀರಿ. ಆದರೆ Article 19ನ್ನು ಎತ್ತಿಹಿಡಿಯಿರಿ. ಪೊಲೀಸ್ ಇಲಾಖೆಯಲ್ಲಿ ಸುಧಾರಣೆ ಅಗತ್ಯ. ನ್ಯಾಯದ ಪರ ಕೆಲಸ ಮಾಡಬೇಕು” ಎಂದು ಒತ್ತಾಯಿಸಿದರು.

ಈ ಘಟನೆಗೆ ನ್ಯಾಯ ದೊರಕುವವರೆಗೂ ಹೋರಾಟ ಮುಂದುವರೆಯುವ ಸೂಚನೆ ಇದೆ. YouTuber ಸಮೀರ್ ಪರ ಜನರ ಬೆಂಬಲ ಹೆಚ್ಚಾಗುತ್ತಿದ್ದು, ಸಮಾಜದ ಹಲವು ವರ್ಗಗಳು ಒಕ್ಕೊರಲಿನಿಂದ ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಭ್ರಷ್ಟರ ಬೇಟೆ

Recent Posts

ಲೋಕಾಯುಕ್ತ ಅಧಿಕಾರಿ ಎಂದು ಎಂಜಿನಿಯರ್‌ಗೆ ಹಣ ಬೇಡಿಕೆ ಇಟ್ಟ ಆರೋಪಿ ಬಂಧನ

ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿ ಎಂದು ಸುಳ್ಳು ಪರಿಚಯ ನೀಡಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ನಿಂದ ಹಣ ವಸೂಲಿ ಮಾಡಲು ಯತ್ನಿಸಿದ…

11 hours ago

ಉತಾರ ನೀಡಲು ₹1.5 ಲಕ್ಷ ಲಂಚ: ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಬಲೆಗೆ

ಜಮೀನಿನ ಖಾತಾ ಉತಾರ ನೀಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಿಜನಗೇರಾ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಅಧಿಕಾರಿಗಳ…

16 hours ago

‘ಉಗ್ರ ಎಂದು ಗೊತ್ತಿದ್ದರೆ ಮನೆ ಕೊಡುತ್ತಿರಲಿಲ್ಲ’; ಶಂಕಿತ ಸುಹೇಲ್ ಬಂಧನದಿಂದ ಬೆಚ್ಚಿಬಿದ್ದ ಮನೆ ಮಾಲೀಕರು

ಅಯೋಧ್ಯೆಯ ರಾಮಮಂದಿರವನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದಾನೆ ಎಂಬ ಆರೋಪದ ಮೇಲೆ ಬಂಧಿತನಾಗಿರುವ ಶಂಕಿತ ಉಗ್ರ ಸುಹೇಲ್ ಪ್ರಕರಣಕ್ಕೆ ಹೊಸ ತಿರುವು…

16 hours ago

17 ವರ್ಷದ ಸೋದರಳಿಯನ ಬ್ಲಾಕ್ ಮೇಲ್ ಮಾಡಿ ಸೆಕ್ಸ್ ಮಾಡುತ್ತಿದ್ದ 40 ವರ್ಷದ ಅತ್ತೆ..! ಪೋಕ್ಸೋ ಪ್ರಕರಣ ದಾಖಲು.

ಉತ್ತರ ಪ್ರದೇಶದ ಅಲಿಗಢ್‌ನಲ್ಲಿ ಅಪ್ರಾಪ್ತ ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನದೇ 17…

16 hours ago

ನಟಿ ಕೃಷಿ ತಾಪಾಂಡ ನಿವಾಸದಲ್ಲಿ ಉದ್ಯಮಿ ವೈಶಾಕ್ ಮೃತದೇಹ ಪತ್ತೆ; ಸಾವಿನ ಸುತ್ತ ಹಲವು ಪ್ರಶ್ನೆಗಳು

ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಉದ್ಯಮಿ ವೈಶಾಕ್ (45) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹಲವು ಅನುಮಾನಗಳಿಗೆ…

16 hours ago

ಇಡಿ ದಾಳಿ: ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿ ಮನೆಯಿಂದ ಯಮುನಾ ವಶಕ್ಕೆ

ಮೈಸೂರು ನಗರದ ದಟ್ಟಗಳ್ಳಿ ಪ್ರದೇಶದಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿ ವೈ. ಮಂಜುನಾಥ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ…

21 hours ago