Latest

ಬಸ್ ಗಾಗಿ ಪರದಾಟ; ಗ್ರಾಮಸ್ಥರಿಂದ ಬಸ್ ತಡೆದು ಆಕ್ರೋಶ..

ಕುಂದಗೋಳ; ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಬರದ ಕಾರಣ ಶಾಲಾ ಕಾಲೇಜು ವಿದ್ಯಾರ್ಥಿಗಳು, ಬಸ್ ತಡೆದು ತಮ್ಮ ಆಕ್ರೋಶವನ್ನ ಹೊರಹಾಕಿದರು.

ಪ್ರತಿನಿತ್ಯ ಶಾಲಾ – ಕಾಲೇಜಿನ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ವಯೋವೃದ್ಧರು ಹೀಗೆ ದಿನನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಅರಸಿ ಹುಬ್ಬಳ್ಳಿ ನಗರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ.

ಇದರ ಭಾಗವಾಗಿ ಪ್ರತಿದಿನ ಸಮಯಕ್ಕೆ ಸರಿಯಾಗಿ ಬಸ್ ಬರುವುದಿಲ್ಲ ಅಂತ ನೆನ್ನೆ ಯರಗುಪ್ಪಿ ಗ್ರಾಮದ ಬಸ್ ನಿಲ್ದಾಣ ಹತ್ತಿರ ಬಸ್ ತಡೆದು ಪ್ರಯಾಣಿಕರು ಪ್ರತಿಭಟಿಸಿದರು.

ಸಾರಿಗೆ ಬಸ್ ವೊಂದರಲ್ಲಿ ಸುಮಾರು 50 ರಿಂದ 55 ರಷ್ಟು ಕೂಡಲು ಆಸನಗಳ ವ್ಯವಸ್ಥೆ ಇದೆ. ಆದರೆ ಚಿಕ್ಕನರ್ತಿ ಗ್ರಾಮದಿಂದ ಯರಗುಪ್ಪಿ ಮಾರ್ಗವಾಗಿ ಸಂಚಾರಸಬೇಕಾದ ಬಸ್ ನಲ್ಲಿ ಸುಮಾರು ನೂರಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುವರು, ನಾವುಗಳು ಸಂಚಾರಸಬೇಕಾದ ಬಸ್ ಲ್ಲಿ ಟಿಕೆಟ್ ತಗಿಸದೆ ಪ್ರಯಾಣ ಬೆಳಸುತ್ತೇವಾ? ನಾವೇನು ದುಡ್ಡು ಕೊಡೋದಿಲ್ಲವಾ.!? ಎಂದು ಪ್ರಶ್ನೆಗಳ ಸುರಿಮಳೆಯೇ ಕೇಳಿ ಬಂತು.

ಇನ್ನೊಂದು ಬಸ್ ವ್ಯವಸ್ಥೆ ಕಲ್ಪಿಸಲು ಮೌಖಿಕ ವಾಗಿ ವಿದ್ಯಾರ್ಥಿಗಳು ಅಧಿಕಾರಿಗಳ ಬಳಿ ಚರ್ಚೆಸಿದರೆ ಮನಬಂದಂತೆ ಹಿಗ್ಗಾಮುಗ್ಗಾ ಮಾತಲ್ಲಿ ತಳಿಸಿದ್ದು ಉದಾಹರಣೆಗಳಿವೆ ಅಂತಾರೇ ಇಲ್ಲಿನ ಸಾರ್ವಜನಿಕರು.

ಹಾಗಾದರೆ ಇವರುಗಳಿಗೆ ಪ್ರಶ್ನೆ ಮಾಡೋದು, ಮೂಲ ಸೌಕರ್ಯ ಕೇಳೋದು ತಪ್ಪಾ.!? ಎನ್ನುವುದೇ ಒಂದು ಯಕ್ಷ ಪ್ರಶ್ನೆಯಾಗಿದೆ.

ಗ್ರಾಮಸ್ಥರು ಕೆಲವು ಗಂಟೆಗಳ ಕಾಲ ಬಸ್ ತಡೆದ ಪರಿಣಾಮ ಕುಂದಗೋಳ ಸಾರಿಗೆ ನಿಯಂತ್ರಣಧಿಕಾರಿಗಳು ಮತ್ತು ಪೋಲಿಸ್ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಸಿ, ಸಾರಿಗೆ ವಿಭಾಗ ಅಧಿಕಾರಿಗಳ ಜೊತೆಗೆ ದೂರವಾಣಿ ಮುಖಾಂತರ ಸಮಸ್ಯೆಗಳ ಬಗ್ಗೆ ವಿವರಿಸಿ, ನಂತರ ಪ್ರತಿಭಟನಾಕಾರರ ಮನವೋಲಿಸಿದರು,

ನಂತರ ಪ್ರಯಾಣಿಕರು ಪ್ರತಿಭಟನೆ ನಿಲ್ಲಿಸಿ ಬಸ್ ಹೋಗಲು ಅನುವು ಮಾಡಿಕೊಟ್ಟರು.

ವರದಿ; ಶಾನು ಯಲಿಗಾರ

ಭ್ರಷ್ಟರ ಬೇಟೆ

Recent Posts

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮಗನ ಹತ್ಯೆ: 60 ವರ್ಷದ ತಾಯಿ ಬಂಧನ

ಮೈಸೂರು ನಗರದ ನಜರಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ…

14 hours ago

ಖಾಸಗಿ ವಿಡಿಯೋ ಬೆದರಿಕೆ, ಕೋಟಿ ರೂ. ಬೇಡಿಕೆ: ಸಾಧನಾ ಶೆಟ್ಟಿ ವಿರುದ್ಧ ಎಫ್‌ಐಆರ್

ಬೆಂಗಳೂರಿನ ಜಯನಗರದಲ್ಲಿ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಬಳಸಿ ಹಣದ ಬೇಡಿಕೆ ಇಟ್ಟ ಆರೋಪದಡಿ ಸಾಧನಾ ಶೆಟ್ಟಿ ವಿರುದ್ಧ ಎಫ್‌ಐಆರ್…

14 hours ago

ಆಂಬ್ಯುಲೆನ್ಸ್‌ನಲ್ಲೇ ರೋಮ್ಯಾನ್ಸ್: 5 ಕಿಮೀ ಬೆನ್ನಟ್ಟಿದ ಸಾರ್ವಜನಿಕರು, ವಿಡಿಯೋ ವೈರಲ್

ಛತ್ತರ್‌ಪುರದಲ್ಲಿ ಗುರುವಾರ ನಡೆದ ಒಂದು ಅಚ್ಚರಿಯ ಘಟನೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಚಲಿಸುತ್ತಿದ್ದ ಆಂಬ್ಯುಲೆನ್ಸ್‌ನೊಳಗೆ ಯುವತಿ ಹಾಗೂ ಇಬ್ಬರು…

15 hours ago

ವಿಚ್ಛೇದಿತ ಐಐಟಿ ವರನ ವಿವಾದಾತ್ಮಕ ಬೇಡಿಕೆ: ‘ವರ್ಜಿನ್ ಬ್ರಾಹ್ಮಣ ವಧು ಬೇಕು’ ಹೇಳಿಕೆಗೆ ಚರ್ಚೆ

ಇತ್ತೀಚಿನ ದಿನಗಳಲ್ಲಿ ಮದುವೆ ವ್ಯವಸ್ಥೆಯು ಹಲವಾರು ಬದಲಾವಣೆಗಳನ್ನು ಕಂಡಿದೆ. ವಧು-ವರರ ಹುಡುಕಾಟ ಹೆಚ್ಚಾಗಿ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳ ಮೂಲಕ ನಡೆಯುತ್ತಿದ್ದು, ಕೆಲವೊಮ್ಮೆ…

19 hours ago

ಸಚಿವ ಡಿ. ಸುಧಾಕರ್ ಆರೋಗ್ಯ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ.!

ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ…

24 hours ago

ನಿಶ್ಚಿತಾರ್ಥದ ಬಳಿಕ ನಿಜ ಮುಖ ಬಯಲು: ಭಾವಿ ಪತಿಯ ಅವಮಾನಕ್ಕೆ ಮನನೊಂದು ಎಂ.ಎಸ್ಸಿ ಪದವೀಧರೆ ಆತ್ಮಹತ್ಯೆ

ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಮದುವೆಯ ಕನಸು ಕಂಡಿದ್ದ ಯುವತಿಯೊಬ್ಬಳು, ಭಾವಿ ಪತಿಯ ವರ್ತನೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ…

24 hours ago