ಬೆಂಗಳೂರು ನಗರದ ವಿದ್ಯಾರಣ್ಯಪುರದ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಧನಂಜಯ್ ಸೇರಿದಂತೆ ಕೆಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪೊಲೀಸರ ಪ್ರಕಾರ, ಧನಂಜಯ್ ನೇತೃತ್ವದಲ್ಲಿ ಬಂದ ಗುಂಪೊಂದು ಶಾಲೆಯ ಆವರಣದಲ್ಲಿ ಧ್ವಂಸ ಕಾರ್ಯ ನಡೆಸಿದ್ದು, ಪ್ರಕರಣದ ತನಿಖೆ ಪ್ರಾರಂಭಿಸಲಾಗಿದೆ.
ಧಾಸರಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಧನಂಜಯ್ ಅವರಿಗೆ ಸೇರಿರುವ ಖಾಸಗಿ ಶಾಲೆ ಶಾರದಾ ವಿದ್ಯಾನಿಕೇತನದ ಪಕ್ಕದಲ್ಲಿದೆ. ಆದರೆ, ಈ ಭಾಗದಲ್ಲಿ ಎನ್ಪಿಎಸ್ ಶಾಲೆ ಆರಂಭಿಸಲು ಕಾನೂನು ತೊಂದರೆ ಉಂಟಾಗಿತ್ತು ಎನ್ನಲಾಗಿದೆ. ಶಾಲೆಯ ಆಸ್ತಿಯ ಕುರಿತು ವಿವಾದ ನಡೆಯುತ್ತಿದ್ದು, ನ್ಯಾಯಾಲಯದಿಂದ ತಡೆಯಾಜ್ಞೆ ಜಾರಿಯಲ್ಲಿದೆ.
ಆದರೂ ಮೇ 2ರಂದು ಧನಂಜಯ್ ಮತ್ತು ಅವರ ಗುಂಪು ಕೋರ್ಟ್ ಆದೇಶವನ್ನು ಲೆಕ್ಕಿಸದೇ ಶಾಲೆಯ ಆವರಣ ಪ್ರವೇಶಿಸಿ ಗಲಾಟೆ ನಡೆಸಿದ ಆರೋಪ ಕೇಳಿಬಂದಿದೆ. ಈ ವೇಳೆ ಶಾಲೆಯ ಕಿಟಕಿ, ಬಾಗಿಲು, ಸಿಸಿ ಕ್ಯಾಮೆರಾಗಳನ್ನು ನಾಶಮಾಡಲಾಗಿದ್ದು, ಮಕ್ಕಳ ದಾಖಲೆಗಳು ಮತ್ತು ನಗದು ಕಳ್ಳತನವಾಗಿದೆ ಎಂಬ ದೂರು ದಾಖಲಾಗಿದೆ.
ಶಾರದಾ ವಿದ್ಯಾನಿಕೇತನ ಸೊಸೈಟಿಗೆ ಈ ಜಾಗವನ್ನು ಸರ್ಕಾರ ಲೀಸ್ನಲ್ಲಿ ನೀಡಿತ್ತು. ಧನಂಜಯ್ ಈ ಸೊಸೈಟಿಯ ಮಾಜಿ ಅಧ್ಯಕ್ಷರಾಗಿದ್ದರು. ಲೀಸ್ ಅವಧಿ 2023ರಲ್ಲೇ ಮುಕ್ತಾಯಗೊಂಡಿದ್ದರೂ, ಶಾಲೆಯ ಆಸ್ತಿಯ ಮೇಲಿನ ಹಕ್ಕು ಪಡೆದರೆಂಬ ಉದ್ದೇಶದಿಂದ ದಾಳಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಶಾಲಾ ಆವರಣದಲ್ಲಿ ಭದ್ರತಾ ವ್ಯವಸ್ಥೆ ತೀವ್ರಗೊಳಿಸಲಾಗಿದ್ದು, ಪೋಷಕರು ಮತ್ತು ಸಾರ್ವಜನಿಕರಲ್ಲಿ ಈ ಘಟನೆ ಭಯವನ್ನುಂಟುಮಾಡಿದೆ.
ಬೆಂಗಳೂರು, ಜೂನ್ 4: ಐಪಿಎಲ್ 2025ರಲ್ಲಿ ಇತಿಹಾಸ ರಚಿಸಿ ಚೊಚ್ಚಲ ಪ್ರಶಸ್ತಿಯನ್ನು ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ…
ಕೋಲಾರ್: ರಾಜ್ಯದಾದ್ಯಂತ ಹತಾಶೆ ಮೂಡಿಸಿದ್ದ ಶ್ರೀನಿವಾಸಪುರ ವೃದ್ಧೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ತೀವ್ರ ತನಿಖೆ ನಡೆಸಿದ್ದ ಪೊಲೀಸರು ಇದೀಗ…
ಚಿಕ್ಕಬಳ್ಳಾಪುರದ ಬಿಬಿ ರಸ್ತೆಯ ಎಸ್ಬಿಐ ಬ್ಯಾಂಕ್ ಬಳಿಯಲ್ಲಿಂದು ಮುಂಜಾನೆ ಹೃದಯವಿದ್ರಾವಕ ಘಟನೆ ನಡೆಯಿದ್ದು, ದುಷ್ಕರ್ಮಿಗಳು ಕಲ್ಲಿನಿಂದ ಹೊಡೆದು ಯುವಕನನ್ನು ಹತ್ಯೆಗೈದಿದ್ದಾರೆ.…
ರಾಯಚೂರು: ಹೋಂ ಗಾರ್ಡ್ ನೇಮಕಾತಿಗೆ ಲಂಚ ಪಡೆಯುತ್ತಿದ್ದ ರಾಯಚೂರಿನ ಹೋಂ ಗಾರ್ಡ್ ಕಮಾಂಡೆಂಟ್ ಜಂಬಣ್ಣ ರಾಮಸ್ವಾಮಿ ಅವರು ಲೋಕಾಯುಕ್ತದ ಜಾಲಕ್ಕೆ…
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಮತ್ತೊಬ್ಬರನ್ನು ಬಂಧಿಸಿದ್ದಾರೆ. ಬಂಧಿತನನ್ನು ಬಜ್ಪೆ…
ತುಮಕೂರು: ಅನಾರೋಗ್ಯ ಹಾಗೂ ಪರೀಕ್ಷಾ ಫಲಿತಾಂಶದಿಂದ ಖಿನ್ನತೆಗೆ ಒಳಗಾಗಿದ್ದ 19 ವರ್ಷದ ಬಾಲಕನು ಆತ್ಮಹತ್ಯೆಗೆ ಶರಣಾದ ಮರುಮನಸ್ಸು ಮಾಡಬಲ್ಲ ದುರ್ಘಟನೆ…