Categories: Latest

ರೇಣುಕಾಸ್ವಾಮಿ ಹತ್ಯೆ: ಕಣ್ಣೀರಲ್ಲಿ ಮುಳುಗಿದ ಕುಟುಂಬ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಿಂದಾಗಿ ಅವರ ಕುಟುಂಬ ದಿಕ್ಕೆಟ್ಟು ಹೋಗಿದೆ. ದರ್ಶನ್ ಹಾಗೂ ಗ್ಯಾಂಗ್‌ನಿಂದ ನರಹತ್ಯೆಗೆ ಒಳಗಾದ ಯುವಕನ ಸಾವಿನ ಸುದ್ದಿ ಪತ್ನಿ, ತಾಯಿ, ತಂದೆಗೆ ತಲುಪಿದಾಗ ಉಂಟಾದ ಆಘಾತ ಅಳತೆಗಟ್ಟದಂತಿತ್ತು.

ಹಿಂಸಾಚಾರದ ತೀವ್ರತೆಯಿಂದ ಶವವನ್ನು ಗುರುತಿಸುವುದೇ ಕಷ್ಟವಾಗಿತ್ತು. ‘ಅವನನ್ನು ಬದುಕಿದ್ದರೂ, ಕೈಕಾಲು ಕುಂಟಾದರೂ ತರುವಿರಿ. ನಾನು ನೋಡಿಕೊಳ್ಳುತ್ತೇನೆ’ ಎಂದು ಕಣ್ಣೀರು ಹಾಕಿದ್ದ ಪತ್ನಿ ಸಹನಾ, ಆಗ ಐದು ತಿಂಗಳ ಗರ್ಭಿಣಿಯಾಗಿದ್ದರು. ಆದರೆ ಆಕೆಗೆ ಆಘಾತಕರ ಸತ್ಯವನ್ನು ಮೊದಲೇ ತಿಳಿಸಲಾಗಿರಲಿಲ್ಲ. ಕೇವಲ ಜಗಳವಾಗಿದೆ ಎಂದು ಹೇಳಿ ವಿಷಯವನ್ನು ಕುಟುಂಬ ಮುಚ್ಚಿಟ್ಟಿತ್ತು.

“ಮಗನನ್ನು ಬದುಕಾಗಿ ತರುವೆವೆಂದಿದ್ದೆವು, ಆದರೆ ಹೆಣವಾಗಿ ತರುವಂತಾಯಿತು”

ಆ ದಿನದ ನೋವನ್ನು ನೆನಪಿಸಿಕೊಂಡ ರೇಣುಕಾಸ್ವಾಮಿಯ ತಂದೆ-ತಾಯಿ ಹೇಳುವುದೇ ಹೃದಯ ಬಡಿದಿಡುವಂತಿದೆ.
“ಸೊಸೆಗೆ ನಾವು ಅವನನ್ನು ಕರೆದುಕೊಂಡು ಬರುತ್ತೇವೆ ಎಂದಿದ್ದೆವು. ಆದರೆ ಹೆಣವಾಗಿ ತರುತ್ತೇವೆ ಎನ್ನುವಂತಿರಲಿಲ್ಲ. ನಂತರ ಪೊಲೀಸರ ಮೂಲಕ ಸತ್ಯ ಗೊತ್ತಾಯಿತು. ಆಸ್ಪತ್ರೆಗೆ ಕರೆದೊಯ್ದು ಶವದ ಮೇಲೆ ಸಹಿ ಮಾಡಿಸಿಕೊಂಡರು. ಮೊದಲಿಗೆ ಗುರುತು ಹಿಡಿಯಲು ಆಗಲಿಲ್ಲ. ಬಾಯಿ, ತುಟಿಯನ್ನು ನಾಯಿಗಳು ಕಚ್ಚಿದ್ದವು. ಮುಖ, ದೇಹದ ತುಂಬಾ ಗುರುತು ಮಾಡಿದ್ದರು. ದೇಹವೇ ಊದಿಕೊಂಡಿತ್ತು. ಕೊನೆಗೆ ಧರಿಸಿದ್ದ ಬಟ್ಟೆ ನೋಡಿ ಅವನೇ ನಮ್ಮ ಮಗನೆಂದು ತಿಳಿಯಬೇಕಾಯಿತು” ಎಂದು ಕಣ್ಣೀರು ಹಾಕಿದ್ದಾರೆ.

“ತಪ್ಪು ಮಾಡಿದ್ರೆ ಶಿಕ್ಷೆ ಕೊಡಬಹುದಿತ್ತು, ಪ್ರಾಣ ಕಸಿಯಬೇಕಿತ್ತಾ?”

ಮಗನ ತಪ್ಪನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಹೇಳಿದ ತಂದೆ ಕಾಶಿನಾಥಯ್ಯ, ದರ್ಶನ್ ಮತ್ತು ಪವಿತ್ರಾ ಗೌಡನ ಕ್ರೌರ್ಯವನ್ನು ಪ್ರಶ್ನಿಸಿದ್ದಾರೆ.
“ಅವನ ತಪ್ಪಿಗೆ ತಕ್ಕ ಶಿಕ್ಷೆ ಕೊಡಬಹುದಿತ್ತು. ಪವಿತ್ರಾ ಬ್ಲಾಕ್ ಮಾಡಬಹುದಿತ್ತು, ಪೊಲೀಸರಿಗೆ ಮಾಹಿತಿ ಕೊಡಬಹುದಿತ್ತು. ಆದರೆ ಅಷ್ಟು ಕ್ರೂರವಾಗಿ ಕೊಲ್ಲಬೇಕಿತ್ತಾ? 8-10 ಜನರು ಸೇರಿಕೊಂಡು ಮಗನನ್ನು ಕೊಲ್ಲಲು ಏನು ಅಗತ್ಯವಿತ್ತು?” ಎಂದು ಕಣ್ಣೀರಲ್ಲಿ ಮುಳುಗಿದ್ದಾರೆ.

ಇತ್ತೀಚೆಗೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಆರೋಪಿಗಳ ಜಾಮೀನು ರದ್ದುಗೊಂಡಿದ್ದು, ಅವರನ್ನು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಆದರೆ ರೇಣುಕಾಸ್ವಾಮಿ ಕುಟುಂಬಕ್ಕೆ ಈ ನಿರ್ಧಾರ ತಾತ್ಕಾಲಿಕ ನೆಮ್ಮದಿಯನ್ನು ನೀಡಿದರೂ, ಕಳೆದುಕೊಂಡ ಮಗನ ನೋವು ಶಾಶ್ವತವಾಗಿ ಉಳಿದಿದೆ.

nazeer ahamad

Recent Posts

ಅಲಿಗಢದಲ್ಲಿ ವರದಕ್ಷಿಣೆ ಕಿರುಕುಳ ದುರಂತ: ಅತ್ತೆ-ಮಾವ ಒತ್ತಾಯಕ್ಕೆ ತತ್ತರಿಸಿದ ಸೊಸೆ ಟೆರೇಸ್ ಯಿಂದ ಹಾರಾಟ.!

ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…

1 day ago

4 ಕೋಟಿ ವರದಕ್ಷಿಣೆಗಾಗಿ ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡಿದ ಪತಿ!!

ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…

1 day ago

ವಿದ್ಯಾರ್ಥಿಗಳಿಂದ ಕಾಲು ಒತ್ತಿಸಿಕೊಂಡ ಮುಖ್ಯೋಪಾಧ್ಯಾಯಿನಿ.!!

ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…

1 day ago

ಪ್ರೇಯಸಿ ಫೋನ್‌ ಎತ್ತಿಲ್ಲ: ಕೋಪದಲ್ಲಿ ಯುವಕ ಇಡೀ ಹಳ್ಳಿಯ ಕರೆಂಟ್ ಕಟ್!

ಪ್ರೇಯಸಿ ಫೋನ್‌ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…

1 day ago

ಸಾಧುಗಳ ವೇಷ ತಾಳಿ ರೈತನ ಚಿನ್ನದ ಉಂಗುರ ದೋಚಿದ ಐವರ ಗ್ಯಾಂಗ್‌ ಬಂಧನ”

ಚಿತ್ರದುರ್ಗ: ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಗ್ರಾಮದ ಹತ್ತಿರ ನಡೆದ ವಿಶಿಷ್ಟ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸಾಧುಗಳ ವೇಷ ತಾಳಿ ರೈತರ…

1 day ago

ಶಿಕ್ಷಕಿಯ ಪ್ರೀತಿ ನಿರಾಕರಣೆ: ವಿದ್ಯಾರ್ಥಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದಾರುಣ ಘಟನೆ

ಭೋಪಾಲ್ : ಪ್ರೀತಿಯನ್ನು ನಿರಾಕರಿಸಿದ ಶಿಕ್ಷಕಿಯ ಮೇಲೆ ಹದಿಹರೆಯದ ವಿದ್ಯಾರ್ಥಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ ನರಸಿಂಹಪುರದಲ್ಲಿ…

2 weeks ago